ಭಾರತದ ಆಟದ ಅಂಗಳದಲ್ಲಿ ಅಬ್ಬರದ ವೀಕೆಂಡ್ ದೀಪಾವಳಿ


ಬಾಕ್ಸಿಂಗ್ನಲ್ಲಿ ವಿಜೇಂದರ್ ವಿಕ್ರಮ
ವಿಜೇಂದರ್ ಸಿಂಗ್ ಮತ್ತೆ ಸುದ್ದಿ ಮಾಡುತ್ತಿದ್ದಾರೆ. ಸದ್ಯ ವಿಜೇಂದರ್ ಸಿಂಗ್ ವಿಶ್ವ ಬಾಕ್ಸಿಂಗ್ ರ್ಯಾಕಿಂಗ್ನಲ್ಲಿ ಎರಡನೇ ಶ್ರೇಯಾಂಕಿತರಾಗಿದ್ದಾರೆ. ಇಟಲಿಯ ಮಿಲಾನ್ನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಛಾಂಪಿಯನ್ಶಿಪ್ನಲ್ಲಿ ಮೊದಲಿಂದಲೂ ಅತ್ಯುತ್ತಮ ಸಾಧನೆ ಮಾಡುತ್ತಾ ಬಂದ ವಿಜೇಂದರ್ ಸಿಂಗ್ ಸೆಮಿಫೈನಲ್ ಪ್ರವೇಶಿಸುವಲ್ಲಿ ಸಫಲರಾದರು. ಸೆಮಿಫೈನಲ್ನಲ್ಲಿ ಕೂಡ ಅತ್ಯುತ್ತಮ ಪ್ರದರ್ಶನ ತೋರಿದರಾದರೂ ಗೆಲುವು ಕೈಗೂಡಲಿಲ್ಲ. ಆದರೇನಂತೆ ವಿಶ್ವ ಬಾಕ್ಸಿಂಗ್
ಛಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ತಲುಪಿ ಕಂಚಿನ ಪದಕ ಪಡೆದ ಮೊದಲ ಭಾರತೀಯನೆನಿಸಿಕೊಂಡಿದ್ದಾರೆ. ಯಾರು ಈ ವಿಜೇಂದರ್ ಸಿಂಗ್ ಅಂದಿರಾ? ಮೊನ್ನೆಯ ಚೈನಾ ಒಲಂಪಿಕ್ಸ್ನಲ್ಲಿ ಬೆಳಕಿಗೆ ಬಂದ ಬಾಕ್ಸಿಂಗ್ ಪ್ರತಿಭೆ ಇವರು. ಚೀನಾ ಒಲಂಪಿಕ್ಸ್ನಲ್ಲೂ ಕೂಡ ಕಂಚಿನ ಪದಕ ಗೆದ್ದು ಭಾರತದ ವಿಜಯ ಪತಾಕೆಯನ್ನೆಗರು ಹಾಕಿದ ಧೀಮಂತ ಅಪ್ಪಟ ದೇಸೀ ಕ್ರೀಡಾ ಪ್ರತಿಭೆಯಿವರು.

ವಿಜೇಂದರ್ ಸಿಂಗ್ ಅತ್ಯಂತ ಕೆಳ ಮಧ್ಯಮ ವರ್ಗದಿಂದ ಬಂದವರು. ತಂದೆ ಒಬ್ಬ ಬಸ್ ಚಾಲಕ. ಮಗನ ಬಾಕ್ಸಿಂಗ್ ತರಬೇತಿಗೆ ದುಡ್ಡು ಹೊಂಚಲು ಒಂದೇ ದಿನ ಎರಡೂ ಷಿಫ್ಟುಗಳಲ್ಲಿ ದುಡಿಯುತ್ತಿದ್ದವರು. ವಿಜೇಂದರ್ ಹುಟ್ಟಿ ಬೆಳೆದದ್ದೆಲ್ಲವೂ ಹರ್ಯಾಣದ ಭಿವಾನಿ ಬಳಿಯ ಕಲುವಾಸ್ ಹಳ್ಳಿಯಲ್ಲಿ. ಇದ್ದದ್ದು ಒಂದು ಸೈಕಲ್ಲು, ಅಣ್ಣನೊಂದಿಗೆ ಅದನ್ನು ಹಂಚಿಕೊಳ್ಳುತ್ತಾ ಬೆಳೆದವ ಇಂದು ಬಾಕ್ಸಿಂಗ್ನಲ್ಲಿ ವಿಶ್ವದಲ್ಲೇ ಎರಡನೇ ಶ್ರೇಯಾಂಕಿತರಾಗುವವರೆಗೆ ಬೆಳೆದಿದ್ದಾರೆ. ಆದರೆ ನಮ್ಮ ವ್ಯವಸ್ಥೆ ಇಂತಹ ಅಪ್ಪಟ ಪ್ರತಿಭೆಯನ್ನು ಹೇಗೆ ನಡೆಸಿಕೊಂಡಿದೆ? ಅದು ಹೇಳದಿರುವುದೇ ಉತ್ತಮವೇನೋ. ಒಲಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಸಿರಿ ಶ್ರೀಮಂತ ಅಭಿನವ ಭಿಂಧ್ರಾನೆಡೆಗೆ ಎಲ್ಲರ ಗಮನವೂ ಕೇಂದ್ರೀಕರಿಸಿತ್ತೇ ವಿನಃ ಕಂಚಿನ ಪದಕ ಗೆದ್ದು ತಂದ ವಿಜೇಂದರ್ ಸಿಂಗ್ ಮತ್ತು ಸುಶೀಲ್ ಕುಮಾರ್ರನ್ನು ನಮ್ಮ ಮೀಡಿಯಾ ಆಗಲೀ ಸರ್ಕಾರವಾಗಲೀ ಗುರುತಿಸಿದ್ದು ಕಡಿಮೆಯೇ. ಒಲಂಪಿಕ್ಸ್ನಿಂದ ಮರಳಿದಾಗ ಅಭಿನವ ಭಿಂಧ್ರಾಗೆ ಭವ್ಯ ಸ್ವಾಗತ ದೊರೆಯಿತು, ಮಿಕ್ಕವರಿವರಿಬ್ಬರೂ ಆಟೋ ರಿಕ್ಷಾಗಳಲ್ಲಿ ಮನೆ ಸೇರಿದರು. ನಂತರ ಗಣರಾಜ್ಯ ದಿನದ ಸಂದರ್ಭದಲ್ಲಿ ಅಭಿನವ ಭಿಂಧೃಆಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಶೀಲ್ ಕುಮಾರ್ ಮತ್ತು ವಿಜೇಂದರ್ ಸಿಂಗ್ರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲಾಗುವುದೆಂದು ತಿಳಿಸಿ ನಂತರ ಕಡೇಕ್ಷಣದಲ್ಲಿ ನಿರಾಕರಿಸಲಾಯಿತು. ಒಟ್ಟಿನಲ್ಲಿ ಇವರೆಡೆಗೆ ಒಂದು ಮಲತಾಯಿ ಧೋರಣೆಯೆನ್ನುವುದಿದ್ದೇ ಇದೆ. ಇದೆಲ್ಲದರ ನಡುವೆ ಸ್ಪೆನ್ಸರ್ಸ್ ಕಂಪೆನಿಯವರು ಮುಂದೆ ಬಂದು ವಿಜೇಂದರ್ ಸಿಂಗ್ರನ್ನು ಜಾಹೀರಾತೊಂದಕ್ಕೆ ಬುಕ್ ಮಾಡಿರುವುದರಿಂದ ಸದ್ಯ ಒಂದಷ್ಟು ದುಡ್ಡು ನೋಡುವಂತಾಗಿದೆ. ವಿಜೇಂದರ್ ಸಿಂಗ್, ಸುಶೀಲ್ ಕುಮಾರ್, ಸೈನಾ ನೆಹ್ವಾಲ್ರಂಥ ದೇಸೀ ಪ್ರತಿಭೆಗಳನ್ನು ಬೆಳೆಸುವುದು ವ್ಯವಸ್ಥೆಯ ಬಾಧ್ಯತೆಯಾಗುತ್ತದೆ. ಅವರಿಗೆ ಬೇಕಾದ ಪ್ರೋತ್ಸಾಹ ನೀಡದೆ, ಒಲಂಪಿಕ್ಸ್ ಆದಾಗಲೆಲ್ಲಾ ನೂರಾಹದಿನೈದು ಕೋಟಿ ಭಾರತಕ್ಕೆ ಮೆಡಲುಗಳೇ ಇಲ್ಲವಾ, ನೋಡ್ರೀ ಕ್ಯೂಬಾ, ಇಥಿಯೋಪಿಯಾನ ನೋಡಿ ಕಲೀಬೇಕು.....ಎಂಬಂತೆ ಗೊಣಗುವುದರಲ್ಲಿ ಅರ್ಥವಿಲ್ಲ.

ಟೆನಿಸ್ - ಉಭಯ ಪ್ರಶಸ್ತಿಯೂ, ಉಭಯ ಸಂಕಟವೂ........
ಮೊನ್ನೆ ಭಾನುವಾರದ ಯುಎಎಸ್ ಒಪನ್ ಟೆನಿಸ್ ಟೂರ್ನಿಯ ಮೆನ್ಸ್ ಡಬಲ್ ಫೈನಲ್ ಪಂದ್ಯವು ಅತ್ಯಂತ ರೋಚಕವೂ, ತೃಪ್ತಿಕರವೂ, ಅಷ್ಟೇ ಸಂಕಟಕರವೂ ಆಗಿತ್ತು. ಅಲ್ಲ ಒಂದೇ ಪಂದ್ಯ ಏಕಕಾಲದಲ್ಲಿ ಇಷ್ಟೆಲ್ಲಾ ಆಗಿರಲು ಹೇಗೆ ಸಾಧ್ಯ ಅಂತೀರಾ? ಈ ಪಂದ್ಯದ ವಿಶೇಷತೆಯೇ ಅದು. ಯುಎಸ್ ಓಪನ್ ಮೆನ್ಸ್ ಡಬಲ್ ಫೈನಲ್ಸ್ನಲ್ಲಿ ಈ ಬಾರಿ ಎದುರಾಗಿದ್ದು ನಮ್ಮ ಲಿಯಾಂಡರ್ ಪೇಸ್ ಮತ್ತು ಜೆಕ್ ಗಣರಾಜ್ಯದ ಲೂಕಾಸ್ ಡ್ಲೂಹಿ ತಂಡ ಒಂದೆಡೆಯಾದರೆ ಮತ್ತೊಂದು ಕಡೆ ನಮ್ಮ ಮಹೇಶ್ ಭೂಪತಿ ಮತ್ತು ಬಹಮಾಸ್ನ ಮಾರ್ಕ್ ನೋಲ್ಸ್ ಜೋಡಿ. ಮೊಟ್ಟಮೊದಲ ಬಾರಿಗೆ ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ಜೋಡಿ ಗ್ರಂಡ್ಸ್ಲಾಮ್ ಫೈನಲ್ಲಿನಲ್ಲಿ ಎದುರಾಗಿದ್ದರು.ಮೊದಲ ಸೆಟ್ಟಿನ್ನು ಭೂಪತಿ ಜೋಡಿ ಗೆದ್ದು ಒಳ್ಳೆ ಆರಂಭ ಪಡೆಯಿತು. ಇದರಿಂದ ಛಲಕ್ಕೆ ಬಿದ್ದ ಲಿಯಾಂಡರ್ ಪೇಸ್ ಜೋಡಿ ಎರಡನೇ ಸೆಟ್ಟನ್ನು ಜಿದ್ದಿಗೆ ಬಿದ್ದು ತಮ್ಮದಾಗಿಸಿಕೊಂಡು ಸಮಬಲ ಸಾಧಿಸಿದರು. ಮೂರನೇ ಸೆಟ್ಗೆ ರೋಚಕತೆ ಬೆಳೆದು ಬೆಟ್ಟವಾಗಿತ್ತು. ಅತ್ಯಂತ ರೋಚಕವಾಗಿ ನಡೆದ ಮೂರನೇ ಸೆಟ್ಟನ್ನು ಲಿಯಾಂಡರ್ ಪೇಸ್ ಜೋಡಿ 6-2 ಬೃಹತ್ ಅಂತರದಿಂದ ತನ್ನದಾಗಿಸಿಕೊಂಡಿತು. ಇದರೊಂದಿಗೆ ಪೇಸ್ ತನ್ನ 10ನೇ ಗ್ರಾಂಡ್ಸ್ಲಾಮ್ ಟೈಟಲ್ಲನ್ನು ಪಡೆದು ಬೀಗಿದರು. ಮಹೇಶ್
ಭೂಪತಿ ಜೋಡಿ ಉತ್ತಮ ಪ್ರದರ್ಶನ ತೋರಿದರಾದರೂ ನಿರಾಶರಾಗುಳಿಯಬೇಕಾಯಿತು.
ಪಂದ್ಯ ಶುರುವಾಗುವ ಮೊದಲೇ ಒಂದು ಸಮಾಧಾನವಿತ್ತು. ಯಾವ ಜೋಡಿ ಗೆದ್ದರೂ ಮೆನ್ಸ್ ಡಬಲ್ಸ್ ಟೈಟಲ್ ಅನ್ನು ಗೆಲ್ಲುವುದು ಭಾರತದ ತಂಡವೇ. ಆ ಸಮಾಧಾನವಿತ್ತಾದರೂ ಮಾಜಿ ಶ್ರೇಷ್ಠ ಡಬಲ್ಸ್ ಜೊತೆಗಾರರು, ಸ್ನೇಹಕ್ಕೆ ಮತ್ತೊಂದು ಹೆಸರಿನಂತಿದ್ದವರು ಗ್ರಾಂಡ್ಸ್ಲಾಮ್ ಫೈನಲ್ನಲ್ಲಿ ಎದುರಾಬದುರಾಗಿ ನಿಂತು ಬಡಿದಾಡಿದಾಗ ಯಾರು ಗೆಲ್ಲುವರೋ ಎಂಬ ರೋಚಕತೆ ಸಹಜವೇ ಸರಿ, ಹಾಗೆ ಕಳೆದುಹೋದ ಸಂಬಂಧವೊಂದರ ಸಂಕಟವನ್ನೂ ಭಾರತೀಯರು ಅಂದು ಅನುಭವಿಸಿದರು. ಟೆನಿಸ್ನಲ್ಲಿ ಭಾರತದ ವಿಜಯಪತಾಕೆಯನ್ನು ಎಗರಿಹಾಕಿದ ಮೊದಲಿಗರು ಈ ಇಬ್ಬರು. ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿಯವರ ಡಬಲ್ಸ್ ಜೋಡಿಯೆಂದರೆ ಒಂದು ಕಾಲದಲ್ಲಿ ಅಜೇಯರು ಎಂಬ ಮಾತು ಚಾಲ್ತಿಯಲ್ಲಿತ್ತು. ಅವರಿಬ್ಬರೂ ಸೇರಿ ಮೊಟ್ಟಮೊದಲ ಬಾರಿಗೆ ವಿಶ್ವ ಟೆನಿಸ್ ಲಾನ್ನಲ್ಲಿ ಭಾರತಕ್ಕೊಂದು ಗೌರವಯುತ ಸ್ಥಾನ ದೊರಕಿಸಿಕೊಟ್ಟರು. ಅವರಿಬ್ಬರ ಸ್ನೇಹವೂ ಅಷ್ಟೇ ಸುಮುಧರವೂ ಆಗಿತ್ತು, ಮನೆಮಾತಾಗಿತ್ತು ಕೂಡ. ಅವರು ಹಲವಾರು ಯುವಕರಿಗೆ ಆದರ್ಶವಾಗಿದ್ದರು. 5ನೇ ಕ್ಲಾಸಿನ ಪಠ್ಯ ಪುಸ್ತಕಗಳಲ್ಲಿ ಇವರ ಜೀವನ-ವಿಕ್ರಮಗಳ ಬಗ್ಗೆ ಪಾಠ ಸೇರಿಸಲಾಗಿತ್ತು. ಹಾಗಿದ್ದವರು ಅವರು.

ಆದರೆ,....ಅದೇನಾಯಿತೋ ಬರಬರುತ್ತಾ ಅವರಿಬ್ಬರ ನಡುವೆ ಬಿರುಕು ಕಾಣಿಸಿಕೊಳ್ಳಲಾರಂಭಿಸಿತು. ಅದ್ಯಾಕೋ ಗೊತ್ತಿಲ್ಲ ಆ ಡಬಲ್ಸ್ ಜೋಡಿಯಲ್ಲಿ ಮೊದಲಿನ ಮ್ಯಾಜಿಕ್ ಇರಲಿಲ್ಲ, ಕೆಮಿಸ್ಟ್ರಿ ಮೋದಲೇ ಇರಲಿಲ್ಲ. ಅಸಲಿಗೆ ಇವರಿಬ್ಬರ ನಡುವೆ ಬಿರುಕು ಕಾಣಿಸಿಕೊಂಡಿತಾದರೂ ಯಾಕೆ? ಇಬ್ಬರಲ್ಲಿ ಯಾರು ಉತ್ತಮ ಆಟಗಾರ, ಜೊತೆಯಾಗಿ ಸಾಧಿಸಿಸದ ವಿಕ್ರಮಗಳಲ್ಲಿ ಯಾರ ಪಾಲು ಹೆಚ್ಚು, ಹೀಗೆ ಶುರುವಾಯಿತು ನೋಡಿ ಜಗಳ......ಲಿಯಾಂಡರ್ ಪೇಸ್ ಮೊದಲಿಂದಲೂ ಮೀಡಿಯಾ ಫ್ರೆಂಡ್ಲಿ, ಮೀಡಿಯಾದಲ್ಲಿ ಮಿಚುತ್ತಿದ್ದ ಪೇಸ್ ಈ ಎಲ್ಲ ವಿಕ್ರಮಗಳೂ ತನ್ನೊಬ್ಬನದೇನೇನೋ ಎನ್ನುವಂತೆ ವರ್ತಿಸತೊಡಗಿದ, ಮಹೇಶ್ ಕುಂಗಿ ಹೋದ. ಬರಬರುತ್ತಾ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿಯರ ನಡುವೆ ಮಾತು ಕಡಿಮೆಯಾಯಿತು. ಮಧ್ಯವತರ್ಿಗಳ ಮೂಲಕ ಮಾತನಾಡತೊಡಗಿದರು. ಅಲ್ಲಿಗಾಯಿತು, ಜಗಳ ಊರಗಳವಾಗಿ ಮಧ್ಯೆ ಗೋಡೆಯೊಮದು ಎದ್ದು ಕೂತಿತ್ತು. ಬಹಿರಂಗವಾಗಿ ಒಬ್ಬರಿಗೊಬ್ಬರು ಬೈದುಕೊಂಡರು. ಮಿಡಿಯಾ ಅದನ್ನು ಇನ್ನೂ ದೊಡ್ಡದು ಮಾಡಿತು. ಕಡೆಗೊಂದು ದಿನ ಇಬ್ಬರೂ ಇನ್ನು ಮುಂದೆ ತಾವಿಬ್ಬರೂ ಒಟ್ಟಿಗಾಡುವುದಿಲ್ಲವೆಂದು ಘೋಷಿಸಿಬಿಟ್ಟರು. ಇದನ್ನು ದೊಡ್ಡ ಸುದ್ದಿ ಮಡಿ ಆಡಿಕೊಂಡು ನಕ್ಕಿತ್ತು ಮಿಡಿಯಾ! ಆದರೆ ಇವೆಲ್ಲವುಗಳಲ್ಲಿ ನಷ್ಟವಾಗಿದ್ದು ಮಾತ್ರ ಭಾರತದ ಟೆನಿಸ್ ಕ್ಷೇತ್ರಕ್ಕೆ. ಈ ಭಲೇ ಜೋಡಿಯ ಮ್ಯಾಜಿಕ್ ಇಲ್ಲದೇ ಸದ್ಯ ಇದು ಕಳೆಗುಂದಿದೆ.

ಕ್ರಿಕೆಟ್ - ವಾಮನನ ತ್ರಿವಿಕ್ರ
ಭಾರತದ ಕ್ರಿಕೆಟ್ ಜೈತ್ರಯಾತ್ರೆ ಅಭಾಧಿತವಾಗಿ ಮುಂದುವರಿಯುತ್ತಿದೆ. ಲಂಕಾದಲ್ಲಿ ಕಾಂಪಾಕ್ ಸೀರೀಸ್ ಅನ್ನು ತನ್ನದಾಗಿಸಿಕೊಳ್ಳುವುದರೊಂದಿಗೆ ಭಾರತ ಸದ್ಯ ಏಕದಿನ ರ್ಯಾಕಿಂಗ್ಗಳಲ್ಲಿ ಎರಡನೇ ಸ್ಥಾನಕ್ಕೇರಿದೆ. ಸರಣಿ ಮಧ್ಯೆ ಒಮ್ಮೆ ಭಾರತ ವಿಶ್ವದ ಅತ್ಯುತ್ತಮ ಏಕದಿನ ತಂಡದ ಗೌರವಕ್ಕೆ ಪಾತ್ರವಾಗಿತ್ತು. ಆದರೆ ಮರುದಿನವೇ ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಹೀನಾಯವಾಗಿ ಸೋಲುವುದರೊಂದಿಗೆ ಈ ಕಿರೀಟ ಕೇವಲ 24 ಘಂಟೆಗಳಲ್ಲಿ ಉರುಳಿ ಬಿತ್ತು. ಲಂಕಾದಲ್ಲಿ ನಡೆದ ಕಾಂಪಾಕ್ ತ್ರಿಕೋನ ಸರಣಿಯಲ್ಲಿ ಭಾರತ, ಶ್ರೀಲಂಕಾ ಮತ್ತು ನ್ಯೂಜೀಲ್ಯಾಂಡ್ ಭಾಗವಹಿಸಿದ್ದವು. ಈ ಸರಣಿಯಲ್ಲಿ ಅಚ್ಚರಿಯೆಂಬಂತೆ ಅತ್ಯಂತ ಸಮರ್ಥ ತಂಡವಾದ ನ್ಯೂಜೀ ಲ್ಯಾಂಡ್ ತೀರ ಕಳಪೆ ಪ್ರದರ್ಶನ ನೀಡಿಬಿಟ್ಟಿತು. ಹಾಗಾಗಿ ಸರಣಿಯ ಆರಂಭದಿಂದಲೇ ಈ ಸರಣಿ ಬರಿಯ ಭಾರತ ಮತ್ತು ಶ್ರೀಲಂಕಾ ನಡುವಿನ ದ್ವೈಪಾಕ್ಷಿಕ ಸರಣಿಯಂತೆ ಭಾಸವಾಗುತ್ತಾ ಹೋಯಿತು. ಭಾರತ ಅತ್ಯುತ್ತಮ ಪ್ರದರ್ಶನ ಪ್ರದಶರ್ಿಸುತ್ತಾ ಬಂದು ವಿಶ್ವ ರ್ಯಾಂಕಿಂಗ್ನಲ್ಲಿ ಮೊದಲನೇ ಸ್ಥಾನಕ್ಕೂ ಏರಿಬಿಡ್ತು. ಆದರೆ ಮಾರನೆಯ ದಿನವೇ ಭಾರತ ಶ್ರೀಲಂಕಾ ಎದುರು 160ಕ್ಕೂ ಹೆಚ್ಚು ರನ್ಗಳ ಭಾರೀ ಅಂತರದಿಂದ ಹೀನಾಯ ಸೋಲು ಕಂಡು ಗರ್ವಭಂಗ ಮಾಡಿಸಕೊಂಡಿತು, ಇದೊಂದು ರೀತಿಯಲ್ಲಿ ಒಳ್ಲೆಯದೇ ಆಯಿತೆನ್ನಿ. ಮೊನ್ನೆ ಭಾನುವಾರ ನಡೆದ ಫೈನಲ್ ಪಂದ್ಯವನ್ನು ಭಾರತೀಯ ತಂಡ ಯಾವುದೇ ಅಹಂಕಾರ, ಹಮ್ಮ-ಬಿಮ್ಮುಗಳಿಲ್ಲದೇ ಸೀರಿಯಸ್ ಆಗಿ ತೆಗೆದುಕೊಂಡಿತ್ತು.
ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ದೊರೆತಾಗ ಓಪನರ್ಸ್ ಆಗಿ ಫೀಲ್ಡಿಗಿಳಿದದ್ದು ಭಾರತದ ವಾಮನ ಸಚಿನ್ ತೆಂಡೂಲ್ಕರ್ ಮತ್ತು ಗೋಡೆ ರಾಹುಲ್ ದ್ರಾವಿಡ್. ಎಲ್ಲರಿಗೂ ಆಶ್ಚರ್ಯ. ಕೆಲವರು ಮೂಗು ಮುರಿದರಾದರೂ ಸುಮಾರು 6-7 ವರ್ಷಗಳ ಹಿಂದಿನ ಟೈಟನ್ಸ್ ಆಟವನ್ನು ಹಾಗೇ ಮತ್ತೆ ಸವಿಯುವ ಸದಾವಕಾಶ ಅಭಿಮಾನಿಗಳಿಗೆ. ..ಶ್ರೀಲಂಕಾದ ಅರಿ-ಭಯಂಕರ ಬೌಲರ್ಗಳೆನಿಸಿಕೊಂಡವರೆಲ್ಲಾ ಅತ್ತ ಸಚಿನ್ ಇತ್ತ ದ್ರಾವಿಡ್ ನಿಂತು ಆಡುತ್ತಿದ್ದರೆ ಉತ್ತರವಿಲ್ಲದೆ ಅಂಡಲೆಯುತ್ತಿದ್ದು, ಅವರ ಅರೆಬೆಂದ `ಮಿಸ್ಟರಿ ಟೆಕ್ನಿಕ್ಕುಗಳಿಗೆ' ಉತ್ತರದಂತಿತ್ತು ಮೊದಲ ಬಾಲಿನಿಂದಲೇ ಆಕ್ರಮಣಕಾರಿ ದಾಳಿಗಿಳಿದ ಈ ಜೋಡಿ ಅತ್ಯುತ್ತಮ ಆಟ ಪ್ರದರ್ಶಿಸಿದರು. ಆದರೆ ಅತ್ಯಂತ ನಿರ್ಣಾಯಕ ಹಂತದಲ್ಲಿ ದ್ರಾವಿಡ್ 38 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಮುಂದೆ ಸಚಿನ್ಗೆ ಜೊತೆಯಾದವರು ಧೋನಿ. ಅಷ್ಟರಲ್ಲಾಗಲೇ ಸಚಿನ್ ಪಟಾಕಿ ಸಿಡಿಸಲಾರಂಭಿಸಿದ್ದರು. ಧೋನಿ ಆ ಎಂಡಿನಲ್ಲಿ ನಿಂತು ಸಚಿನ್ ಆಟಕ್ಕೆ ಸಾಥ್ ನೀಡುತ್ತಾ ಸಾಗಿದರು. ಅಷ್ಟೇ ನೋಡನೋಡುತ್ತಲೇ ಸಚಿನ್ ಏಕದಿನ ಪಂದ್ಯಗಳಲ್ಲಿ ತಮ್ಮ ಅಖಂಡ 44ನೇ ಸೆಂಚುರಿಯನ್ನು ಪೂರ್ಯಸಿ ಹಬ್ಬ ಮಾಡಿದರುರಿತ್ತ ಧೋನೀದು ಕೂಡ ಅರ್ಧಶತಕ ಪೂರ್ಣವಾಗಿತ್ತು. ಇನ್ನು ಆಯ್ತು ಲಂಕಾದ ಕಥೆ ಮುಗಿಯಿತು ಎನ್ನುವಷ್ಟರಲ್ಲಿ ಧೋನಿ ಔಟಾಗಿ ಹೋದರು. ಆದರೂ ನಂತರ ಬಂದವರೆಲ್ಲರು ಸೇರಿ ಲಂಕಾ ವಿರುದ್ಧ ಛಾಲೆಂಜಿಂಗ್ ಎನ್ನಬಹುದಾದ 315 ರನ್ಗಳ ಮೊತ್ತವನ್ನು ಗುಡ್ಡೆ ಹಾಕಿದರು. ಸಚಿನ್ 138 ರನ್ ಗಳಿಸಿ ಔಟಾದರು.

ಲಂಕಾ ಸಿಂಹಳೀಯರು ಬ್ಯಾಟಿಂಗ್ಗೆ ಬಂದಾಗ ಅದರ ಹಿಂದಿನ ಮ್ಯಾಚಿನಲ್ಲಿ 370 ರನ್ ಹೊಡೆದು ಭಾರತವನ್ನು ಮಣಿಸಿದ್ದೆವು ಅಂತಲೋ ಏನೋ ಅವರಲ್ಲಿ ಒಮದು ಕಾನ್ಫಿಡೆನ್ಸ್ ಇತ್ತು. ಆದರೆ ಶುರುವಿನಲ್ಲೇ ಯಾರನ್ನೂ ಸೆಟ್ಲ್ ಆಗಲು ಬಿಡದೆ ಒಂದರ ಹಿಂದೊಂದರಂತೆ ಇಬ್ಬರು ಓಪನರ್ಸ್ ವಿಕೆಟ್ಗಳನ್ನೂ ಹರ್ಭಜನ್ ಸಿಂಗ್ ಕಿತ್ತುಬಿಟ್ಟರು. ಅಲ್ಲಿಗೆ ಲಂಕಾಧಿಪತಿಗಳು ದಿಕ್ಕು ತಪ್ಪಿಬಿಟ್ಟರು. ಇನ್ನು ಅವರಿಗೆ ಈ ಮ್ಯಾಚ್ ಗೆಲ್ಲಲು ಇದ್ದ ಒಂದೇ ಆಸರೆಯೆಂದರೆ ಸನತ್ ಜಯಸೂರ್ಯ. ಅವರು ಬಂದದ್ದೇ ನಮ್ಮ ಬೌಲರ್ಗಳನ್ನು ಯದ್ವಾತದ್ವಾ ಓಡಿಸಲಾರಂಭಿಸಿದರು. ಇನ್ನು ಇವರು ಹೀಗೆ ಕಚ್ಚಿಕೊಂಡರೆ ಮ್ಯಾಚ್ ಕೈತಪ್ಪಿಹೋಗುತ್ತದೆ ಎಂದು ಚಿಂತಿಸುತ್ತಿರುವಷ್ಟರಲ್ಲೇ ಜಯಸೂರ್ಯ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ತೆರಳಿದರು. ಇನ್ನು ಅಲ್ಲಿಂದ ಮುಂದಕ್ಕೆ ಲಂಕಾ ತಂಡ ಗೌರವಯುತ ಪ್ರದರ್ಶನವನ್ನೇ ತೋರಲಿಲ್ಲ, ಮಿಕ್ಕೆಲ್ಲರೂ ಹೋದ ಪುಟ್ಟ, ಬಂದ ಪುಟ್ಟ ಅಂತ ತೊಪತೊಪ ವಿಕೆಟ್ ಒಪ್ಪಿಸಿದರು. ಹರ್ಭಜನ್ ಸಿಂಗ್ 5 ವಿಕೆಟ್ ಪಡೆದು ಅತ್ಯುತ್ತಮ ಪ್ರದರ್ಶನ ತೋರಿದರು. 68 ರನ್ಗಳಿಂದ ಜಯ ದಾಖಲಿಸಿ ದಿಗ್ವಿಜಯದ ನಗೆ ಬೀರಿತು. ಸಚಿನ್ ಮ್ಯಾನ್ ಆಫ್ ದಿ ಸೀರೀಸ್ ಆಗಿ ರಾರಾಜಿಸಿದರು.

ಸಚಿನ್ಗೀಗ 36 ವರ್ಷ, ಇನ್ನೂ ಅವರಲ್ಲಿ ಎಷ್ಟು ವರ್ಷಗಳ ಕ್ರಿಕೆಟ್ ಇದೆಯೋ ಬಲ್ಲವರಿಲ್ಲ. ಆದರೆ ಈ ವಯಸ್ಸಿನಲ್ಲೂ ಆ ಕ್ಲಾಸಿಕ್ ಎನ್ನುವಂತಹ ಬ್ಯಾಟಿಂಗ್, ಆ ಸ್ಟ್ರೋಕ್ಗಳು, 44ನೇ ಏಕದಿನ ಶತಕ ಇವೆಲ್ಲವೂ ಕೇವಲ ನಮ್ಮ ಸಚಿನ್ ತೆಂಡೂಲ್ಕರ್ ಕೈಯಿಂದ ಮಾತ್ರ ಸಾಧ್ಯ. 16 ವರ್ಷಗಳ ಹಿಂದೆ ಮೊದಲ ಬಾರಿಗೆ ಕ್ರೀಸಿಗೆ ಬಂದಾಗ ಹೇಗೆ ಆಡುತ್ತಿದ್ದರೋ ಈಗಲೂ ಅದೇ ಮೊನಚು, ಅದೇ ಸ್ಟೈಲು, ಅದೇ ಬೀಸು, ಅದೇ ನಮ್ರತೆ. ನಮಗಿನ್ನೇನೂ ಅಂತ ಆಸೆಯಿಲ್ಲ ಕಣ್ರೀ - ಸಚಿನ್ 2011ರಲ್ಲಿ ಬಾರತ ಉಪಖಂಡದಲ್ಲಿ ನಡೆಯುವ ಕ್ರಿಕೆಟ್ ವಿಶ್ವಕಪ್ನಲ್ಲೂ ಇದ್ದು ಹೀಗೇ ಆಡಿ, ಬೌಲರ್ಗಳಿಗೆ ಬೆವರಿಳಿಸಿ ಭಾರತಕ್ಕೇ ಆ ವಿಶ್ವಕಪ್ ಅನ್ನು ಜಯಿಸಿ ತಂದುಕೊಟ್ಟುಬಿಡಲಿ, ಆಮೇಲೆ ಅವರು ರಿಟೈರ್ ಆಗಲಿಕ್ಕೆ ನಮಗೇನೂ ಅಭ್ಯಂತರವಿಲ್ಲ...ಏನಂತೀರಾ.

Proudly powered by Blogger
Theme: Esquire by Matthew Buchanan.
Converted by LiteThemes.com.