ಕಾರ್ಗಿಲ್ ಆ ದಿನಗಳು

ಕಾರ್ಗಿಲ್ - ಆ ಪದವೇ ಭಾರತೀಯರೆದೆಯಲ್ಲಿ ರೋಮಾಂಚನ ಮೂಡಿಸುತ್ತದೆ. ಇಂದಿಗೆ ಕಾರ್ಗಿಲ್ಲ್ನ ದಿಗ್ವಿಜಯಕ್ಕೆ ದಶಕದ ಸಂಭ್ರಮ. ಅಂದು ದೇಶಭಕ್ತಿಯ ಅಲೆಯೊಂದು ಭಾರತದಾದ್ಯಂತ ವ್ಯಾಪಿಸಿತ್ತು. ದೇಶಕ್ಕೆ ದೇಶವೇ ಒಂದಾಯಿತು - ಜಾತಿ, ಮತ, ವರ್ಣ, ಪ್ರಾಂತ್ಯಗಳನ್ನು ಮೀರಿ. ಆದರೆ ಈ ದೇಶಪ್ರೇಮ ತೀರ ಅಲ್ಪಕಾಲದ ಅಫೇರ್ ಆಯಿತೆಂಬುದು ವಿಷಾದನೀಯ.

ಭಾರತಾಂಬೆಯ ರಕ್ಷಣೆಗೆ ನಿಂತು ಪ್ರಾಣಾರ್ಪಣಗೈದ ವೀರಪುತ್ರರನ್ನು ಅಂದು ಸೆಲಿಬ್ರೇಟ್ ಮಾಡಿದ ನಾವೇ ಇಂದು ಅವರೆಲ್ಲರನೂ ಮರೆತಿದ್ದೇವೆ. ಅಜಯ್ ಅಹುಜಾ, ವಿಜಯ್ ಕುಮಾರ್, ಸೌರಭ್ ಕಾಲಿಯಾ..... ಎನ್ಡಿಎ ಆಡಳಿತಾವಧಿಯಲ್ಲಿ ನಡೆದ ಕಾರ್ಗಿಲ್ವರ್ಷಾಚರಣೆ ಎಲ್ಲಿ ಬಿಜೆಪಿಯನ್ನು ಹಿಗ್ಗಿಸಿಬಿಡುತ್ತದೋ ಎಂದು ಇಂದಿನ ಕಾಂಗ್ರೆಸ್ ಸರ್ಕಾರ ಕಾರ್ಗಿಲ್ಲ್ನ ದಶಮಾನೋತ್ಸವವನ್ನು ಆಚರಿಸುತ್ತಿಲ್ಲ! ಛೇ ನಾಚ್ಚಿಗ್ಗೇಡು! ಕಾರ್ಗಿಲ್ಲ್ನ ಕಲಿಗಳ ತ್ಯಾಗ ಬಲಿದಾನಗಳನ್ನು ನಾವು ಅವಮಾನಿ
ಸುತ್ತಿದ್ದೇವೆಂಬ ಭಾವ ಕಿತ್ತು ತಿನ್ನಬೇಕು ಇವರನ್ನು. ನಾವೂ ಈ ಕೃತಘ್ನರ ಸಾಲಿನಲ್ಲಿ ನಿಲ್ಲುವುದು ತರವಲ್ಲ. ಕಾರ್ಗಿಲ್ಲ್ನ ಆ ದಿನಗಳ ಒಂದು ಮೆಲುಕು ನಾವು ಈ ಸಂದರ್ಭದಲ್ಲಿ ಆ
ವೀರಪುತ್ರರ ನೆನಪಿಗೆ ಸಲ್ಲಿಸಬಹುದಾದ ಕನಿಷ್ಠ ಗೌರವ. ಆ ನಿಟ್ಟಿನಲ್ಲಿ ಇದೊಂದು ಕಿರು
ಲೇಖನ.
99ರಲ್ಲಿ ಭಾರತ ಶಾಂತಿಯ ಭ್ರಮೆಯಲ್ಲಿ ಮೈಮರೆತಿತ್ತು. 98ರಲ್ಲಿ ಪೋಖ್ರಾನ್ ಅಣು ಪರೀಕ್ಷೆ ನಡೆಸಿದ ಸರ್ಕಾರ ಪಾಕಿಸ್ತಾನದ ಮಿಲಿಟರಿಯ ಮೇಲೆ ನಾವು ಶಾಶ್ವತ ಮೇಲ್ಗೈ ಸಾಧಿಸಿದ್ದೇವೆಂದು ಬೀಗಿತು. ಆದರೆ ಕೂಡಲೆ ಪಾಕಿಸ್ತಾನ ಕೂಡ ಅಣು ಪರೀಕ್ಷೆ ನಡೆಸಿ ಭಾರತಕ್ಕೆ ಸವಾಲೆಸೆಯಿತು. ಪರಿಸ್ಥಿತಿ ಕೈಮಿರುತ್ತಿರುವುದನ್ನು ಮನಗಂಡ ವಾಜಪೇಯಿಯವರು ಶಾಂತಿ ಪ್ರತಿಪಾದಕರಾಗಿ ಲಾಹೋರ್ ಬಸ್ ಯಾತ್ರೆ ಕೈಗೊಂಡರು. ಇತಿಹಾಸ ಬಾಧಿತ ಭಾರತ-ಪಾಕಿಸ್ತಾನ ಸಂಬಂಧಗಳನು ಸರಿದೂಗಿಸಲು ಒಂದು ಯಾತ್ರೆ ಸಾಕಾಗುವುದಿಲ್ಲವೆನ್ನುವುದನ್ನು ಭಾರತ ಮರೆತಂತಿತ್ತು. ಶಾಂತಿಯಾಕಾಂಕ್ಷಿಯಾಗಿ ಪಾಕಿಸ್ತಾನ ನೀಡಿದ ಪೋಸನ್ನು ಎಲ್ಲರೂ ನಿಜವೆಂದೇ ನಂಬಿದ್ದರು, ಸೈನ್ಯವೂ ಸೇರಿ. ಪಾಕಿಸ್ತಾನದ ದೋಖಾದ ವಾಸನೆ ಯಾರ ಮೂಗಿಗೂ ಬಡಿಯಲೇ ಇಲ್ಲ. ಆಗ ಮಾಡಿತ್ತು ಪಾಕಿಸ್ತಾನ ಭಾರತಕ್ಕೆ ಕಪಾಳ ಮೋಕ್ಷ. ನಂತರ ನಿದ್ದೆಯಿಂದೆಚ್ಚೆತ್ತ ಭಾರತ ಪಾಕಿಸ್ತಾನದ ಎ
ರಡೂ ಕೆನ್ನೆಗಳಿಗೆ ಬಾರಿಸಿದ್ದು ಬೇರೆಯ ಮಾತಾದರೂ ಅದಕ್ಕೆ ತೆ
ತ್ತ ಬೆಲೆ ಅಪಾರ. ರಾಷ್ಟ್ರೀಯ ಬಧ್ರತಾ ಸಲಹೆಗಾರರ ತಂಡವು ವಿವಿಧ ಶತ್ರು ರಾಷ್ಟ್ರಗಳಿಂದ ಎದು
ರಾಗಬಹುದಾದ ಸದ್ಯ, ಮಧ್ಯಮ ಮತ್ತು ದೀರ್ಘಕಾಲೀನ ಅಪಾಯಗಳನ್ನು ಅಸೆಸ್ ಮಾಡಿ ಅವುಗಳನ್ನು ಎದುರಿಸಲು ಕಾರ್ಯವ್ಯೂಹವೊಂದನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಲಾಹೋರದ ಕಲರವದಲ್ಲಿ ಕಳೆದು ಹೋಗಿದ್ದ ವ್ಯವಸ್ಥೆ ಇದ್ಯಾವುದನ್ನೂ ಮಾಡಿರಲಿಲ್ಲ. ವಾಜಪೇಯಿಯರ ಕಾಲದಲ್ಲಿದದ್ದು ಪಾರ್ಟ್ಟೈಂ ರಾಷ್ಟ್ರೀಯ ಬಧ್ರತಾ ಸಲಹೆಗಾರ!
ಅತ್ತ ಪಾಕಿಸ್ತಾನದಲ್ಲಿ ನೂತನ ನೇಮಿತ ಸೇನಾ ಮುಖ್ಯಸ್ಥ ಮುಷರಫ್ ತಮ್ಮ ಕಾಲಾವಧಿಯಲ್ಲಿ ಏನಾದರೂ `ಸಾಧಿಸಬೇಕೆಂಬ' ಹು
ಮ್ಮಸ್ಸಿನಲ್ಲಿದ್ದಾಗ ಅವರಿಗೆ ಸಿಕ್ಕಿದ್ದು ಸೈನ್ಯ ಹಿಂದೆ ಭಾರತದ ವಿರುದ್ಧ ದಾಳಿಗೆ ರೂಪಿಸಿದ್ದ ಒಂದು ಮಾಸ್ಟರ್ಪ್ಲಾನ್. ಅದನ್ನವರು ತಕ್ಷಣವೇ ಅಮಲು ಮಾಡಿಬಿಟ್ಟರು. ಅದರಂತೆ ಪಾಕಿಸ್ತಾನವು ಭಾರತ ಚಳಿಗಾಲದಲ್ಲಿ ತೆರವುಗೊಳಿಸಿದ್ದ ಪೊಸಿಷನ್ಗಳನ್ನು ಮತ್ತು ಕಾರ್ಗಿಲ್ಲ್ನ ದುರ್ಗಮ ಹಿಮಶಿಖರಗಳನ್ನು ವಶಪಡಿಸಿಕೊಂಡು ಕೂತರು. ಆ ಬೆಟ್ಟಸಾಲುಗಳ ಮೇಲೆ ಕುಂತು ಕಾಶ್ಮೀರ ಲ್ಹೇದ ಎನ್ಎಚ್ 1 ಹೈವೇಯನ್ನು ನಿಯಂತ್ರಿಸಬಹುದಿತ್ತು. ಇದರಿಂದಾಗಿ ಸಿಯಾಚಿನ್ ಮತ್ತು ಕಾಶ್ಮೀರದ ಬಹುತೇಕ ಭಾಗವನ್ನು ಭಾರತದ ಸಂಪರ್ಕದಿಂದ ಕಡಿತಗೊಳಿಸಬಹುದಿತ್ತು. ಹೀಗೇನಾದರೂ

ಆಗಿದ್ದಲ್ಲಿ ಪಿಒಕೆ
ಗೆ ಇನ್ನರ್ಧ ಕಾಶ್ಮೀರ ಸೇರಿ
ಹೋಗುತ್ತಿತ್ತು. ಪಾಕ್ನ ಯೋಜನೆ ಬಲಿಷ್ಠವಾಗೇ ಇತ್ತಾದರೂ ನಮ್ಮವರು ಅದನ್ನು ಆಗಗೊಡಿಸಲಿಲ್ಲ.
ಹೀಗೆ ಬಂದು ಬೆಚ್ಚಗೆ ಕುಂತ ಪಾಕಿಸ್ತಾನೀಯರು, ಬೆಟ್ಟ ಸಾಲಿನ ಆ ಬದಿಯಲ್ಲಿ ಸಪ್ಲೈಲೈನ್ಗಳನ್ನು ನಿರ್ಮಿಸಿದರು, ಸ್ಕರ್ದುವಿನಲ್ಲಿ ಹೆಲಿಪ್ಯಾಡೊಂದನ್ನು ಕಟ್ಟಿಕೊಂಡಿದ್ದರು, ಕಮ್ಯೂನಿಕೇಷನ್ ಸಾಧನಗಳಿಗಾಗಿ ಲೈನ್ಗಳನ್ನೆಳದಿದ್ದರು. ಈ ಎಲ್ಲ ಸಿದ್ಧತೆಗಳಿಗೆ ಪಾಕಿಸ್ತಾನ ಏಳು ತಿಂಗಳು ತೆಗೆದುಕೊಂಡಿತ್ತು ಇವ್ಯಾವುವೂ ಭಾರತೀಯರಿಗೆ ತಿಳಿದಿರಲಿಲ್ಲ. ಹಾಗಿತ್ತು ನಮ್ಮ ಇಂಟೆಲಿಜೆನ್ಸ್! ಮೊದಲ ಬಾರಿಗೆ ಕಾರ್ಗಿಲ್ ಸೆಕ್ಟರ್ನಲ್ಲಿ ಪಾಕಿಗಳ ಇರುವಿಕೆಯನ್ನು ಗುರುತಿಸಿದ್ದು ಒಬ್ಬ ಕುರಿ ಕಾಯುವವನು! ದಾಳಿ ಶುರುವಾದಾಗ ಶತ್ರು ಶಕ್ತಿಯ ಒಂದು ಅಂದಾಜಿರಲಿಲ್ಲ ಭಾರತದ ಸೈನಿಕನಿಗೆ. ಅದು ಅವನ ಮೊದಲ ಹಿನ್ನಡೆಯಾಗಿತ್ತು. ಅಲ್ಲಿ ಶತ್ರು ಸೈನಿಕರು ಅಸಲಿಗೆ ನಮ್ಮವರಿಗೆ ಕಾಣಿಸುತ್ತಲೇ ಇರಲಿಲ್ಲ. ಆದರೆ ಅವರಿಗೆ ಇವರು ಸುಸ್ಪಷ್ಟ. ಅದಕ್ಕಾಗಿ ನಮ್ಮವರು ರಾತ್ರಿಗಳಲಿ ಮಾತ್ರ ಸಂಚರಿಸುತ್ತಿದ್ದರು! ಇದು ಭಾರತದ ಕಡೆ ಸಾವು ನೋವನ್ನು ನೂರ್ಮಡಿಸಿತು. ಕಾರ್ಗಿಲ್ಲ್ನ ದುರಂತವಿದು. ಶತ್ರು ಪಡೆಗಳು ಸ್ಟ್ರಾಟಜಿಕ್ ಪೊಸಿಷನ್ಗಳನ್ನು ತೆಗೆದುಕೊಂಡ ನಂತರ ಅವರನ್ನು ಸೆದೆಬಡಿಯುವುದು ದುಪ್ಪಟ್ಟು ಕಷ್ಟವಾಗುತ್ತಿತ್ತು. ನೆನಪಿರಲಿ ಇದೆಲ್ಲವೂ ನಡೆಯುತ್ತಿದದ್ದು 15-18 ಸಾವಿರ ಅಡಿ ಎತ್ತರದ ಪ್ರದೇಶಗಳಲ್ಲಿ. ಹೋರಾಡುತ್ತಿದ್ದವರು

ಸಾಮಾನ್ಯ ಫೌಜಿಗಳು! ಇಂತಹ ವಿಷಮ ಪರಿಸ್ಥಿತಿಗಳಲ್ಲಿಯೂ ದೇಶದ ಸಮಗ್ರತೆಯ ರಕ್ಷಣೆಗೆ ಕಾಲೂರಿ ನಿಂತು ಬಡಿದಾಡಿದ ಆ ಭರತಮಾತೆಯ ವೀರಪುತ್ರನಿಗೆ ನಾವು ಒಂದು ಮನಃಪೂರ್ವಕ ಸಲಾಂ ಬಿಟ್ಟರೆ ಬೇರೇನನ್ನು ಕೊಡಲಾಗುವುದಿಲ್ಲ. ಸಲಾಂ!
ಅತ್ತ ಕಾರ್ಗಿಲ್ಲ್ನಲ್ಲಿ ಯುದ್ಧ ನಡೆಯುತ್ತಿದ್ದರೆ, ಇತ್ತ ಹಸ್ತಿನೆಯಲ್ಲಿದದ್ದು ವಾಜಪೇಯಿಯವರ ಹಂಗಾಮಿ ಸರ್ಕಾರ. ಲೋಕಸಭೆ ವಿಸರ್ಜಿತವಾಗಿತ್ತು. ಮೊದಲ ಕೆಲ ದಿನಗಳಲ್ಲಿ ಇದು ಬಿಂಬಿತವೂ ಆಯಿತು. ಪರಿಸ್ಥಿತಿಯ ಅಗಾಧತೆಯ ಅರಿವಿಲ್ಲದೆ, ಕೆಲವು ಬಾಲಿಶ ನಡವಳಿಕೆಗಳು ಕಂಡುಬಂದವಾದರೂ, ಸ್ವಲ್ಪದರಲ್ಲೇ ಎಚ್ಚೆತ್ತಿತು ಸರ್ಕಾರ. ಭಾರತದ ನೆಲದ ಮೇಲೆ ಕಟ್ಟಕಡೆಯ ಪಾಕಿ ಇರುವವರೆಗೂ ಸೈನಿಕ ಕಾರ್ಯಾಚರಣೆ ನಿಲ್ಲುಸುವುದಿಲ್ಲವೆಂಬ ದಿಟ್ಟ ನಿಲುವು ತಾಳಿದ ಸರ್ಕಾರ ಎಲ್ಲೂ ಬಾಗಲೇ ಇಲ್ಲ. ದೇಶದ ರಾಜಕೀಯವೇ ಈ ನಿಲುವಿಗೆ ಬದ್ಧವಾಗಿತ್ತು. (ಆ ಕೆಚ್ಚು, ಒಗ್ಗಟ್ಟು ಈಗೆಲ್ಲಿ ಹೋಯಿತೋ?) ಮೊದಲಿಗೆ ಭಾರತದ ಸೈನ್ಯಕ್ಕೆ ಹೇಳಿಕೊಳ್ಳುವಂತಹ ಜಯಗಳಾವೂ ಸಿಗಲಿಲ್ಲ. ಬದಲಿಗೆ ಯೋಧರ ಅಸಂಖ್ಯ ಮೃತದೇಹಗಳು ಯುದ್ಧಭೂಮಿಯಿಂದ ತಿರುಗಿ ಬರುತ್ತಿದ್ದವು. ಆದರೆ ಮೇ 26ರಂದು ವಾಯುದಳ ರಂಗಕ್ಕಿಳಿಯಿತು. ಪಾಕಿಸ್ತಾನೀಯರು ಅಡಗಿ ಕುಳಿತಿದ್ದ ಬೆಟ್ಟಗಳ ಮೇಲೆ ವೈಮಾನಿಕ ದಾಳಿ ನಡೆಸಲಾರಂಭಿಸಿತು. ಭಾರತ ನಿಧಾನವಾಗಿ ಯುದ್ಧರಂಗದಲ್ಲಿ ಮೇಲ್ಗೈ ಸ್ಥಾಪಿಸಲಾರಂಭಿಸಿತು. ಜೂನ್ ಹನ್ನೆರಡರಂದು ಟೊಲೊಲಿಂಗ್ ಭಾರತದ ಕೈವಶವಾಗುವುದರೊಂದಿಗೆ ಯುದ್ಧದ ಚಿತ್ರಣವೇ ಬದಲಾಗಿ ಹೋಯಿತು. ನಂತರದಲ್ಲೆವೂ ಭಾರತ ಸೈನ್ಯದ ವರಸೆ ದಿಗ್ವಿಜಯಗಳು. ಪಾಯಿಂಟ್ 5140, 4590, ತ್ರೀ ಪಿಂಪಲ್ಸ್, ಟೈಗರ್ ಹಿಲ್...ಎಲ್ಲವೂ ಸುಲಭವಾಗಿ ಭಾರತದ ಕೈವಶವಾಗುತ್ತಾ ಹೋದಂತೆ ಪಾಕಿಗಳು ದಿಕ್ಕಾಪಾಲಾಗಿ ಓಡತೊಡಗಿದರು.
ಇತ್ತ ಸರ್ಕಾರ ರಾಜತಾಂತ್ರಿಕ ದಾಳಿಗೆ ಮುಂದಾಯಿತು. 98ರ ಅಣು ಪರೀಕ್ಷೆಯ ನಂತರ ಹಳಸಿದ್ದ ಸಂಬಂಧಗಳೆಲ್ಲವನ್ನೂ ಸರಿದೂಗಿಸಿಕೊಂಡು, ವಿಶ್ವದ ಮುಂದೆ ಪಾಕಿಸ್ತಾನವನ್ನು ನಗ್ನಗೊಳಿಸಿತು. ಮೊದಲಿಗೆ ಪಾಕಿಸ್ತಾನ ಇದರೊಂದಿಗೆ ಯಾವುದೇ ಸಂಬಂಧವಿಲ್ಲವೆಂದೂ ಕಾರ್ಗಿಲ್ನಲ್ಲಿರುವುದು ಮುಜಾಹಿದ್ದೀನರೆಂದೂ ಪುಂಗಿ ಊದಲಾರಂಭಿಸಿತಾದರೂ ಭಾರತ ಸಾಕ್ಷಿ ಸಮೇತ ಪಾಕ್ನ ಸುಳ್ಳನ್ನು ಜಗಜ್ಜಾಹೀರುಗೊಳಿಸಿತು. ಶಾಂತಿಯ ಮರುಸ್ಥಾಪನೆಗೆ ಅಮೆರಿಕಾ ಮತ್ತಿತರ ಪಶ್ಚಿಮದ ದೇಶಗಳು ಮುಂದೆ ಬಂದು ರಾಜಿ ಮಡಿಸುತ್ತವೆ. ಆಗ ತಾವು ಆಕ್ರಮಿಸಿಕೊಂಡಿದ್ದಷ್ಟು ತಮಗೆ ಬಿಟ್ಟುಕೊಡುವಂತೆ ರಾಜಿ ಮಾಡಿಸಿಕೊಂಡು ಕಾಶ್ಮೀರದ ಇನ್ನಷ್ಟು ಭಾಗ ಮತ್ತು ಸಿಯಾಚಿನ್ ಅನ್ನು ಕಬಳಿಸಿ ಭಾರತಕ್ಕೆ ಮುಖಭಂಗ ಮಾಡಬಹುದೆಂದೆಣಿಸಿದ್ದ ಪಾಕಿಸ್ತಾನದ ಆಟವನ್ನು ಭಾರತ ಆಗಗೊಳಿಸಲಿಲ್ಲ. ಪಶ್ಚಿಮದ ಮಧ್ಯಸ್ಥಿಕೆಯನ್ನು ಜರೂರಾಗಿಸಲು ಪಾಕಿಸ್ತಾನ ಅಣು ದಾಳಿಯ ಬೆದರಿಕೆಯನ್ನೂಡ್ಡಿತಾದರೂ, ಅದೂ ಕೆಲಸಕ್ಕೆ ಬರಲಿಲ್ಲ. ಸೈನಿಕ ದೃಷ್ಟಿಯಿಂದ ಎಲ್ಓಸಿ ದಾಟುವುದು ಸರಿದೋರಿತ್ತು. ಆದರೆ ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಾದವನ್ನು ಟೊಳ್ಳಾಗಿಸುತ್ತಿತ್ತಾದ್ದರಿಂದ ಅದನ್ನು ತಡೆಹಿಡಿಯಲಾಯಿತು. ಪಾಕಿಸ್ತಾನ ತನ್ನ ಪರವಾಗಿ ನೆಚ್ಚಿಕೊಂಡಿದ್ದ ಅಮೆರಿಕಾ ಮತ್ತು ಚೈನಾ ದೇಶಗಳು ಭಾರತದ ಪರ ನಿಂತವು. ಇನ್ನು ರಷಿಯಾ, ಫ್ರಾನ್ಸ್, ಜಪಾನ್ ಹೀಗೆ ಎಲ್ಲರೂ ಭಾರತದ ಪರವಾಗಿ ನಿಂತರು. ಇದು ಪಾಕಿಸ್ತಾನದ ಮೇಲೆ ಇನ್ನಿಲ್ಲದ ಒತ್ತಡ ಹೇರಿತು. ಅವರು ಮುಖಭಂಗದಿಂದ ಪಾರಾಗಲು ಒಂದು ಹುಲ್ಲುಕಡ್ಡಿಯ ಆಸರೆ ಬೇಕಾಗಿತ್ತು. ಅಮೆರಿಕಾ ಅದನ್ನು ನೀಗಿಸಿತು. ಅಮೆರಿಕಾದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮದ ಘೋಷಣೆಯೊಂದಿಗೆ ಯುದ್ಧ ಅಂತ್ಯವಾಯಿತಾದರೂ, ಭಾರತವೇನೂ ರಾಜಿಯಾಗಿರಲಿಲ್ಲ. ಅಷ್ಟರಲ್ಲಿ ಭಾರತ ತನ್ನ ನೆಲದ ಮೇಲಿನ ಕಡೆಯ ಪಾಕಿಯನ್ನು ಓಡಿಸಿಯಾಗಿತ್ತು. ಹಾಗಾಗಿ ಕಾರ್ಗಿಲ್ ನಮ್ಮ ಸೈನ್ಯಕ್ಕೆ ಸಂದ ದಿಗ್ವಿಜಯ.
ದೇಶಭಕ್ತಿಯ, ದಿಗ್ವಿಜಯದ ಆಡಂಬರದಲ್ಲಿ ಒಂದು ಮಾತು ಕೇಳದೆಯೇ ಉಳಿಯಿತು. ಅಸಲಿಗೆ ಕಾರ್ಗಿಲ್ ಅನ್ನು ತಪ್ಪಿಸಬಹುದಿತ್ತಾ? ಸಂಶಯವೇ ಬೇಡ - ಕಾರ್ಗಿಲ್ ಅನ್ನು ಖಂಡಿತವಾಗಿಯೂ ತಪ್ಪಿಸಬಹುದಿತ್ತು! ಕಾರ್ಗಿಲ್ಲ್ನ ಪೋಸ್ಟ್ಮಾರ್ಟಮ್ ನಡೆಯಬೇಕಿತ್ತು, ಆದರೆ ಅಂತಹುದಕ್ಕೆ ಅವಕಾಶವಾಗಲಿಲ್ಲ. ಸರ್ಕಾರ ಸುಬ್ರಮಣ್ಯಮ್ ಕಮಿಟಿಯನ್ನು ನೇಮಿಸಿತಾದರೂ ಅದು ಹೆಕ್ಕಿದ್ದಕ್ಕಿಂತ ಮುಚ್ಚಿದ್ದೇ ಹೆಚ್ಚು. ಕಾರ್ಗಿಲ್ಲ್ನ ವಿಷಯದಲ್ಲಿ ಕರ್ತವ್ಯಲೋಪವೆಸಗಿದವರಾರ ತಲೆಗಳೂ ಉರುಳಲಿಲ್ಲ. ಕಾಗರ್ಿಲ್ನ ಪ್ರಮುಖ ದೋಷ ಗುಪ್ತಚರ ವಿಫಲತೆ. ಆದರೆ ಅಂದಿನ ಗುಪ್ತಚರ ಮುಖ್ಯಸ್ಥನನ್ನು ಅರುಣಾಚಲದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ಕಾರ್ಗಿಲ್ಲ್ನಲ್ಲಿ ಪಾಠ ಕಲಿತಿದ್ದರೆ 26/11ನನ್ನು ತಪ್ಪಿಸಬಹುದಿತ್ತು.ದುರ್ದೈವವೆಂದರೆ ಇಂತಹ ಸಂದರ್ಭಗಳಲ್ಲಿ ದೇಶಭಕ್ತಿಯ ಅಮಲು ಭಾವನಾತ್ಮಕವಲ್ಲದ ತುಲನೆಗೆ ಅವಕಾಶವನ್ನೀಯುವುದಿಲ್ಲ. ಆದರೆ ಇತಿಹಾಸದಿಂದ ಪಾಠ ಕಲಿಯದ ಹೊರತಾಗಿ ಇಂತಹ ಭೀಭತ್ಸ ಘಟನಾವಳಿಗಳು ಪುನರಾವರ್ತನೆಯಾಗುತ್ತಲೇ ಇರುತ್ತದೆ.
ಏನೇ ಆಗಲಿ 18 ಸಾವಿರ ಅಡಿ ಎತ್ತರದ ಹಿಮಶಿಕರಗಳ ಮೇಲೆ ನಿಂತು ಭಾರತಾಂಬೆಯ ಮಡಿಲ ರಕ್ಷಿಸಲು ರಕ್ತ ಚೆಲ್ಲಿದ ಆ ವೀರ ಯೋಧರೆಲ್ಲರಿಗೂ ಇದುವೇ ನಮ್ಮ ನಮನ!
(ಈ ಭಾನುವಾರ ಪತ್ರಿಕೆಯಲ್ಲಿ ಪ್ರಕಟಿತ)





One thoughts on “ಕಾರ್ಗಿಲ್ ಆ ದಿನಗಳು

Proudly powered by Blogger
Theme: Esquire by Matthew Buchanan.
Converted by LiteThemes.com.