ವ್ಯಾಸಂಗ ಮುಗಿಯಿತು. ನಾಳೆಯಿಂದ Times Of India ಬಳ್ಳಾರಿ ಜಿಲ್ಲಾ ವರದಿಗಾರನಾಗಿ ಕೆಲಸ!

ನಮಸ್ಕಾರ, 

ಹೀಗೆ ಮಾತಾಡಿ ತುಂಬಾ ದಿನಗಳಾದವು. ಈಗ ಮತ್ತೆ ಅಂಥ ಸಂದರ್ಭ ಬಂದಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯುನ್ಮಾನ ಮಾಧ್ಯಮ ವಿಷಯವಾಗಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದೆ. ಜೊತೆಜೊತೆಗೆ ಪತ್ರಿಕೋದ್ಯಮವೂ ನಡೆದಿತ್ತು. ಈಗ ವ್ಯಾಸಂಗ ಮುಗಿದಿದೆ. ಕೆಲಸವೂ ಸಿಕ್ಕಿದೆ. ಓದಿದ್ದು ವಿದ್ಯುನ್ಮಾನ ಮಾಧ್ಯಮ ಆದರೆ ಕೆಲಸ ಪ್ರಿಂಟಿನದು! ಇದುವರೆಗೂ ಬರೆದುದೆಲ್ಲವೂ ಕನ್ನಡದಲ್ಲಿ, ಆದರೆ ಕೆಲಸ ಇಂಗ್ಲೀಷ್ ಮಾಧ್ಯಮದಲ್ಲಿ! ಟೈಂಸ್ ಆಫ್ ಇಂಡಿಯಾ ಪತ್ರಿಕೆಯ ಬಳ್ಳಾರಿ ಜಿಲ್ಲಾ ವರದಿಗಾರನಾಗಿ ನಿಯುಕ್ತನಾಗಿದ್ದೇನೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಈಗ ಬಳ್ಳ್ಳಾರಿ ರಾಷ್ಟ್ರೀಯ ಸುದ್ದಿ. ಲೋಕಾಯುಕ್ತರು ಅದನ್ನು `republic of bellary' ಎಂದು ಬಣ್ಣಿಸಿದ್ದಾರೆ. is it a broken republic today? i think its too early to judge. ಅದು ಗಣಿ ಧಣಿ-ಧೂಳಿನ ನಾಡು. ಆದರೆ ಅಲ್ಲಿನ ಜನತೆ ಸಂತ್ರಸ್ತರು ಅನ್ನುವುದರಲ್ಲಿ ಅನುಮಾನವೇ ಇಲ್ಲ. ಇಂಥ ಸಂಧಿಗ್ಧ ಕಾಲದಲ್ಲಿ ನಾನು ಬಳ್ಳಾರಿಗೆ ಹೊರಟಿದ್ದೇನೆ. ಅನೇಕರು ಹೆದರಿಸಿದರು. many advised me against it. ಆದರೆ ಒಳ್ಳೆಯ ಕೆಲಸ ಮಾಡಲು ಅವಕಾಶವಿದೆಯೆನಿಸಿದ್ದರಿಂದ ಹೊರಟಿದ್ದೇನೆ. ಆತ್ಮಸಾಕ್ಷಿಗೆ ಅಲ್ಲಿ ಮಾರುಕಟ್ಟೆಯೂ ಹೆಚ್ಚು. ಆದರೆ ಅಲ್ಲಿ ನಿಲ್ಲದೆ ಜನಪರ ಪತ್ರಿಕೋದ್ಯಮದೆಡೆಗೆ ಲಕ್ಷ್ಯವಹಿಸುತ್ತೇನೆನ್ನುವುದು ಭರವಸೆ.

ಇನ್ನು ಇದು ನನ್ನ ಮೊದಲ ಕೆಲಸ. ಮನೆಯಿಂದ ದೂರ ಇರುತ್ತಿರುವುದೂ ಇದೇ ಮೊದಲು. ಸಹಜವಾಗಿ ಒಂದು ಆತಂಕ ಇದ್ದೇ ಇದೆ. ಜೊತೆಗೆ ಮನೆಯ ಸೆಳೆತ. ಆದರೆ ಜೀವನ ಹರಿವ ನದಿ, ಅನಿವಾರ್ಯ. ಅಲ್ಲಿ ಒಂದು ಪುಟ್ಟ ಮನೆಯನ್ನೂ ಮಾಡಿದ್ದೇನೆ. ಇಂದು ರಾತ್ರಿಯೇ ಪಯಣ. ನಾಳೆಯ ಬೆಳಗು ಬಳ್ಳಾರಿಯಲ್ಲಿ. ಹೊಸ ಕೆಲಸ, ಹೊಸ ಜೀವನ.

ನಿಮ್ಮೆಲ್ಲರ ಹಾರೈಕೆ ಹೀಗೆ ಮುಂದುವರಿಯಲಿ.

2 thoughts on “ವ್ಯಾಸಂಗ ಮುಗಿಯಿತು. ನಾಳೆಯಿಂದ Times Of India ಬಳ್ಳಾರಿ ಜಿಲ್ಲಾ ವರದಿಗಾರನಾಗಿ ಕೆಲಸ!

Ajay said...

Ballariyalli gaNi suddi, rAjakeeya suddi biTTu bere jagattoo ide embudannu nenapittukondu adara kaDeyoo gamana koDi. All the best.

Siddu Yapalaparavi said...

all the best Ballary teaches lot of new things.you started your career from an interesting place.

Proudly powered by Blogger
Theme: Esquire by Matthew Buchanan.
Converted by LiteThemes.com.