ಮಾರ್ಚ್ 5ರಿಂದ ಬೆಂಗಳೂರಿನಲ್ಲಿ ಹೊಸ ಕೆಲಸ. ಡೆಕ್ಕನ ಹೆರಾಲ್ಡ್!


ಕಳೆದ ಏಳು ತಿಂಗಳ ಹಿಂದೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಡಿಗ್ರಿ ಮುಗಿಸಿ, ಯಾವುದೇ ಕಾರಣಕ್ಕೂ ನ್ಯೂಸ್ ಛಾನೆಲ್ಲುಗಳಿಗೆ ಹೋಗುವುದು ಬೇಡವೆಂದು ನಿರ್ಧರಿಸಿ ಮುದ್ರಣ ಮಾಧ್ಯಮದ ಕಡೆ ಹೊರಳಿದೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಬಳ್ಳಾರಿಯ ಜಿಲ್ಲಾ ವರದಿಗಾರನಾಗಿ ಬಂದೆ. ರೆಡ್ಡಿ ರಿಪಬ್ಲಿಕ್ ಆಫ್ ಬಳ್ಳಾರಿಯ ಅವಸಾನಕ್ಕೆ ಸಾಕ್ಷಿಯಾದೆ. ಅಪೂರ್ವ ಅನುಭವ ಮತ್ತು ಈ ಜನ್ಮಕ್ಕಾಗುವ ಒಳ್ಳೆಯ ಸ್ನೇಹ ಸಂಬಂಧಗಳಿಗೆ ಭಾಜನನಾದೆ.

ನದಿ ಹರಿಯುತ್ತಲೇ ಇರಬೇಕು. ಅಧಿಕೃತವಾಗಿ ಟೈಮ್ಸ್ಗೆ ರಾಜೀನಾಮೆ ಸಲ್ಲಿಸಿಯಾಗಿದೆ. ಮತ್ತೆ ಮನೆಯತ್ತ ಪಯಣ. ಮಾರ್ಚ್ 5ರಿಂದ ಬೆಂಗಳೂರಿನಲ್ಲಿ ಹೊಸ ಕೆಲಸ. ಡೆಕ್ಕನ ಹೆರಾಲ್ಡ್! ಪ್ರತಿ ಮನುಷ್ಯನಿಗೂ ತನ್ನ ಮೊದಲ ಕೆಲಸ, ಊರು ಯಾವತ್ತಿಗೂ ಸ್ಪೆಷಲ್. ಹಾಗೆ ಟೈಮ್ಸ್ ಆಫ್ ಇಂಡಿಯಾ ಮತ್ತು ಬಳ್ಳಾರಿ ನನ್ನ ಮನದಲ್ಲಿ ಯಾವತ್ತಿದ್ದರೂ ಸ್ಪೆಷಲ್ ಸ್ಪೆಷಲ್!! ಇನ್ನು ಬಳ್ಳಾರಿಯೇನೂ ಸಾಮಾನ್ಯವಲ್ಲ, ನನಗೆ ಸ್ವತಂತ್ರವಾಗಿ ಬದುಕಲು, ನೆಚ್ಚಿದಂತೆ ಅಡುಗೆ ಮಾಡಿಕೊಳ್ಳಲು ಕಲಿಸಿದೂರು..ಭೀಮಸೇನ ನಳ ಮಹಾರಾಜರು ಗಂಡಸರಲ್ಲವೆ....ಮತ್ತೆ ಮನೆಯತ್ತ, ನನ್ನ ಊರು ಬೆಂಗಳೂರಿನತ್ತ...ನಮ್ಮ ಊರು ಬೆಂಗಳೂರು...

ತಮ್ಮ ವಿಶ್ವಾಸ ಹೀಗೇ ಮುಂದುವರಿಯಲಿ.

Proudly powered by Blogger
Theme: Esquire by Matthew Buchanan.
Converted by LiteThemes.com.