ಅರಸೊತ್ತಿಗೆಯ ಮದುವೆ ದಿಬ್ಬಣ: ಅಂದು ಜಗತ್ತಿನಲ್ಲಿ ಬೇರೇನೂ ನಡೆಯಲೇ ಇಲ್ಲ!


ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ, ಅವನಿಗೆ ಮೂವರು ಮಕ್ಕಳು...ಅಂತ ನಮ್ಮ ಅಜ್ಜಿಯರು ನಮಗೆ ಕತೆ ಹೆಳಿದ್ದು, ಈಗ ಮುಂದಿನ ತಲೆಮಾರಿಗೂ ಅದೇ ಕಥೆಗಳು ಹರಿದು ಬರುತ್ತಿರುವುದನ್ನು ನೋಡುತ್ತಿದ್ದೇವೆ. ನಮ್ಮಲ್ಲಿ ರಾಜರು ಅಂದರೆ, ಅವರು ಒಂದಾನೊಂದು ಕಾಲದಲ್ಲಿದ್ದವರೇ! ಆದರೆ ವೈಚಿತ್ರ ನೋಡಿ. ಇಂಗ್ಲೇಂಡಿನಲ್ಲಿ ಮೊನ್ನೆ ನಡೆದ ರಾಜವಂಶದ ಅದ್ಧೂರಿ ಮದುವೆ ದಿಬ್ಬಣ ಇಡಿಯ ಜಗತ್ತಿನ ಗಮನವನ್ನು ಸೂಜಿಗಲ್ಲಿನಂತೆ ಸೆಳೆಯಿತು. ಅವತ್ತು ವಿಶ್ವದಲ್ಲಿ ಬೇರೇನೂ ನಡೆಯಲಿಲ್ಲ! ಪ್ರಿನ್ಸ್ ಚಾರ್ಲ್ಸ್  ಮತ್ತು ಡಯಾನಾ ಅವರ ಪುತ್ರ ವಿಲಿಯಮ್ಸ್ ಮತ್ತು ಆತನ ಪ್ರೇಯಸಿ ಕೇಥರೀನ್ಳ ಮದುವೆ ಒಂದು ವಿಶ್ವವಿದ್ಯಮಾನವೇ ಆಗಿತ್ತು. ಆ ಅರಸೊತ್ತಿಗೆಯ ವೈಭವ, ವಿಜೃಂಭಣೆ ನೋಡಲು ಎರಡು ಕಣ್ಣು ಸಾಲದಾಗಿತ್ತು. ಈ ಮದುವೆಗೆ ಒಟ್ಟು 20 ಮಿಲಿಯನ್ ಪೌಂಡುಗಳು ಖರ್ಚಾಗಿದೆಯೆಂದು ಅಂದಾಜು! ಅಷ್ಟೂ ವೆಚ್ಚವನ್ನು ಬ್ರಿಟನ್ನ ಅರಮನೆಯೇ ಭರಿಸಿದೆ. ಇನ್ನು ನಮ್ಮ ಮಾಧ್ಯಮಗಳು ಹೋದಂತೆ ಅಲ್ಲಿ ಕಸ ಗುಡಿಸಲೆಷ್ಟು ಖರ್ಚಾಯಿತು, ಹೌದು ಮದುವಣಗಿತ್ತಿಯ ಬಟ್ಟೆ ಡಿಸೈನರ್ ಯಾರು? ಇಂಥ ಅನೇಕ ಪ್ರಶ್ನೆಗಳ ಅರಸಿ ಹೊರಡುವುದು ವ್ಯರ್ಥ ಪ್ರಲಾಪವೇ ಸರಿ. 

ಆದರೆ ಒಂದು: ಯಾಕೆ ನಮ್ಮ ಮಾಧ್ಯಮಗಳು ಈ ದಿಬ್ಬಣಕ್ಕೆ ಈ ಮಟ್ಟದ ಪ್ರಾಮುಖ್ಯತೆಯನ್ನು ನೀಡುತ್ತವೆ? ಮಾಧ್ಯಮದ ಪ್ರಶ್ನೆಯೆನ್ನು ಹಿಡಿದರೆ, ಮೊನ್ನೆಯ ಕವರೇಜು ಇಂದಿನ ಮಾಧ್ಯಮದ ಒಂದು ಪ್ರಮುಖ ನ್ಯೂನತೆಯನ್ನು ಎತ್ತಿ ತೋರಿಸುತ್ತದೆ. ಇದು ವಿದ್ಯುನ್ಮಾನ ಮಾಧ್ಯಮಗಳ ಯುಗ. ವಿದ್ಯುನ್ಮಾನ ಮಾಧ್ಯಮ ಈ ಕ್ಷಣದ ಲೈವ್ ಮಾಧ್ಯಮ. ಇದು ಇದರ ಪ್ರಮುಖ ಬಲವೂ ಹಾಗೆಯೇ ಬಲಹೀನತೆಯೂ ಹೌದು. ಡ್ರಾಮಾಗಾಗಿ ಅರಸುತ್ತಾ ಹೋಗುವ ಈ ಮಾಧ್ಯಮ ಅಯಾಚಿತವಾಗಿ ಘಟನಾಧಾರಿತ ಪತ್ರಿಕೋದ್ಯಮವಾಗಿ ಮಾರ್ಪಾಟಾಗಿಬಿಡುತ್ತದೆ. ಇವತ್ತು ಅಲ್ಲೊಂದು ಅರಸೊತ್ತಿಗೆಯ ವಿಜೃಂಭಣೆ. ಮಾಧ್ಯಮಗಳಿಗೆ ಸುಗ್ಗಿ. ಅಂದು ವಿಶ್ವದಲ್ಲಿ ಬೇರೇನೂ ನಡೆಯುವುದೇ ಇಲ್ಲ. ಇದರ ನಂತರ ಮತ್ತೊಂದು ನಾಟಕಕೆ ಮಾಧ್ಯಮ ನಡೆದುಬಿಡುತ್ತದೆ. ಇನ್ನು ಇವತ್ತಿನ ಯುಗದಲ್ಲಿ ವಿದ್ಯುನ್ಮಾನ ಮಾಧ್ಯಮವೇ ಮುದ್ರಣ ಮಾಧ್ಯಮದ ಅಜೆಂಡಾವನ್ನೂ ನಿರ್ಧರಿಸುತ್ತಿರುವುದರಿಂದ ಮುದ್ರಣವೂ ಅನಿವಾರ್ಯವಾಗಿ ದಾರಿ ತಪ್ಪುತ್ತಿದೆ.

ಅದು ಹೇಗೆ ಒಂದು ಅರಸೊತ್ತಿಗೆಯ ಮದುವೆ ವಿಶ್ವದಲ್ಲಿ ಸಂಭ್ರಮಾಚರಣೆಯನ್ನು ಬಿತ್ತುತ್ತದೆ? ಪ್ರಜಾಪ್ರಭುತ್ವದ ಸ್ಲೋಗನ್ನೊಂದಿಗೆ ಮುನ್ನಡೆಯುತ್ತಿರುವ ನಮ್ಮ ನವ ನಾಗರೀಕತೆಯ ಈ ಆಸಕ್ತಿ ಸೋಜಿಗವೇ ಸರಿ. ಈ ಬೆಳಕಿನಲ್ಲಿ ನಮ್ಮನ್ನು ನಾವು ಕನ್ನಡಿಯಲ್ಲಿ ನೋಡಿಕೊಂಡರೆ? :

ಕಳೆದ ಶತಮಾನದಲ್ಲಿ ಮನುಷ್ಯನ ಮೂಲ ಸೆಲೆ ನೆಲೆಗಳನ್ನು ಅರಸುವುದು ಒಂದು ಪ್ರಮುಖ ವಿಷಯವೇ ಆಗಿತ್ತು. ಹೀಗಿರಲು ಅನೇಕ ತತ್ವಗಳು ಹುಟ್ಟಿಕೊಂಡವು. ಮೀಮಾಂಸೆಗಳು ನಡೆದವು. ಈ ವಿಚಾರ ಕುಲುಮೆಯಿಂದ ಮನುಷ್ಯನ ಪ್ರತಿ ನಡವಳಿಕೆಯ ಹಿಂದಿನ ಪ್ರೇರಣೆ ಯಾವುದು ಎಂಬುದನ್ನು ವಿವರಿಸುವ ಮೂರು ಥಿಯರಿಗಳು ಹುಟ್ಟಿಕೊಂಡವು. ಈ ಮೂಲ ಸೆಲೆ ಮತ್ತು ನೆಲೆ ಯಾವುದು? ಕಾರ್ಲ್ ಮಾರ್ಕ್ಸ್ನ ಪ್ರಕಾರ ಅದು ಹಸಿವು. ಈ ಹಸಿವು ಮಾನವನಲ್ಲಿ ಒಂದು ನಿರಂತರ ಅನ್ವೇಷಣೆಯನ್ನು ಹುಟ್ಟುಹಾಕುತ್ತದೆ. ಅದೇ ಜೀವನ. ಸಿಗ್ಮಂಡ್ ಫ್ರಾಯ್ಡ್ ಇದನ್ನು ನೊಡಿದ ಬಗೆಯೇ ಬೇರೆ. ಆತ ಮನಶಾಸ್ತ್ರದ ಲೆನ್ಸ್ನಲ್ಲಿ ಇದನ್ನು ನೋಡಿದ. ಆತನ ಪ್ರಕಾರ ಮನುಷ್ಯನ ಮೂಲ ಪ್ರೇರಕ ಶಕ್ತಿ ಕಾಮ. ಒಂದು ಅನಿಮಲ್ ಇನ್ಸ್ಟಿಂಕ್ಟ್. ಇವರಿಬ್ಬರಿಗಿಂತಲೂ ಭಿನ್ನವಾಗಿ ಯೋಚಿಸಿದವನು ಬರ್ತೆಂಡ್  ರಸೆಲ್. ಆತನ ಪ್ರಕಾರ ಮಾನವನನ್ನು ಸದಾ ಕಾಲ ಮುನ್ನಡೆಸುವುದು ಅಧಿಕಾರ  ಮತ್ತು ಅಧಿಕಾರ ದಾಹ. ಇದು ಆತನನ್ನು ಸದಾ ಕ್ರಿಯಾಶೀಲವಾಗಿರುಸುತ್ತದೆ ಎನ್ನುತ್ತಾನಾತ. ಸಮಾಜದಲ್ಲಿ ಹೆಸರು, ಸ್ಥಾನಮಾನ, ಅಷ್ಟೇಕೆ ಹಣವಾದರೂ ಏಕೆ ಬೇಕು? `ಅಧಿಕಾರಕ್ಕೇ' ತಾನೆ? ಇದೇ ಮನುಷ್ಯನನ್ನು ಮುನ್ನಡೆಸುವುದು ಎಂಬುದು ರಸೆಲ್ ಪ್ರತಿಪಾದನೆ. ಹಾಗೆ ನೋಡಿದರೆ ಇಲ್ಲಿ ಮೂರೂ ನಿಜವೇ. ಅಧಿಕಾರದಾಹವೂ ಒಂದು ಹಸಿವೆಯೇ, ಕಾಮವೂ ಒಂದು ಬಗೆಯ ಅಧಿಕಾರವೇ. ಮನುಷ್ಯನ ಈ ಅಧಿಕಾರ ದಾಹವೇ ಆತನನ್ನು ಆಳದಲ್ಲಿ ಅದಿಕಾರದ ಆರಾಧಕನನ್ನಾಗಿಯೂ ಮಾಡಿರುತ್ತದೆ. ಇದು ಮಾನವನ ಮೂಲ ಗುಣಗಳಲ್ಲೊಂದು. ಹಾಗಾಗಿಯೇ ಆತ ಅಧಿಕಾರಕ್ಕೆ ಒಳಗಾಗುತ್ತಾನೆ, ಇದರಿಂದಲೇ ಸರ್ಕಾರ, ವ್ಯವಸ್ಥೆ ಎಲ್ಲವೂ. ಕಾಲಕಾಲಕ್ಕೆ ಸರ್ಕಾರದ ಮಾದರಿ ಬದಲಾಗಿರಬಹುದು - ರಾಜರಿಂದ ಪ್ರಜಾಪ್ರಭುತ್ವದವರೆಗೆ, ಆದರೆ ಆಳದಲ್ಲಿ ಆಳುವುದು ಮತ್ತು ಆಳಲ್ಪಡುವುದು ಎಂಬುದು ಮೂಲ. ಇದರಿಂದಲೇ ವ್ಯವಸ್ಥೆ. ಅರಸೊತ್ತಿಗೆಯ ಮದುವೆ ದಿಬ್ಬಣ ನಮ್ಮ ಆಸಕ್ತಿಯನ್ನು ಕೆರಳಿಸುವುದು ಇದೇ ಕಾರಣಕ್ಕೆ. ಅದು ಅಧಿಕಾರದ ಆರಾಧನೆ.

ಅಧಿಕಾರ ನಾನಾ ರೂಪಗಲಲ್ಲಿ ತನ್ನನ್ನು ತಾನು ಪ್ರಚುರ ಪಡಿಸಿಕೊಳ್ಳುತ್ತದೆ. ಮೊದಲಿಗೆ ಗುರುತಿಸಬಹುದಿದ್ದ ಅಧಿಕಾರ ಜ್ಞಾನದಿಮದ ಬಂದದ್ದು. . ಅದು ವ್ಯದ್ಯನಲ್ಲಿತ್ತು. ನಂತರ ಅದೇ ಪುರೋಹಿತಶಾಹಿಯಾಯಿತು. ನಂತರ ಬಂದದ್ದು ರಾಜಪ್ರಭುತ್ವ. ನಂತರ ಸವರ್ಾಧಿಕಾರ, ಪ್ರಜಾಪ್ರಭುತ್ವ. ಇಂದು ನಮ್ಮ ವಿಶ್ವದಲ್ಲಿ ಅನೇಕ ಕಡೆ ಇರುವುದು ಸವರ್ಾಧಿಕಾರ ಮತ್ತು ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವ ಸದ್ಯದ ಆದರ್ಶ. ಅರಸೊತ್ತಿಗೆ ಸಾಧಾರಣ ಇಲ್ಲ ಎಂತಲೇ ಹೇಳಬಹುದು. ಸೌದಿಯಲ್ಲಿ ಬಿಟ್ಟರೆ. ಅರಸೊತ್ತಿಗೆ ಇನ್ನೂ ಜೀವಂತ ಇರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಬ್ರಿಟನ್ ಪ್ರಮುಖ. ಇಲ್ಲಿಯೂ ಪ್ರಜಾಪ್ರಭುತ್ವವೇ ಇದೆಯಾದರೂ ಅರಸೊತ್ತಿಗೆಯನ್ನು ಸಂಪೂರ್ಣ ಬಿಟ್ಟು ಕೊಟ್ಟೂ ಇಲ್ಲ. ಇದೊಂದು ವಿಚಿತ್ರ. ಬ್ರಿಟನ್ನಲ್ಲಿ ವೆಸ್ಟ್ಮಿನಿಸ್ಟರ್ ಮಾದರಿಯ ಚುನಾಯಿತ ಸಕರ್ಾರ ಅಸ್ತಿತ್ವದಲ್ಲಿದ್ದು, ರಾಷ್ಟ್ರದ ಸಂಪೂರ್ಣ ಆಡಳಿತ ಜವಾಬ್ದಾರಿ ಮತ್ತು ಹಕ್ಕು ಈ ಚುನಾಯಿತ ಸಕರ್ಾರದ್ದೇ ಆಗಿದ್ದರೂ, ಅರಸೊತ್ತಿಗೆ ಇಂದಿಗೂ ಒಂದು ಅಧಿಕಾರ ಕೇಂದ್ರವೇ ಆಗಿದೆ. ಇದೇ ಮಾದರಿಯ ವ್ಯವಸ್ಥೆಯನ್ನು ನಮ್ಮ ಭಾರತದಲ್ಲೂ ಅಳವಡಿಸಿಕೊಳ್ಳಲಾಗಿದೆ. ಇಲ್ಲಿ ಅರಸೊತ್ತಿಗೆಯ ಸ್ಥಾನದಲ್ಲಿ ಚುನಾಯಿತ ರಾಷ್ಟ್ರಪತಿಗಳನ್ನು ಕೂರಿಸಲಾಗಿದೆಯಷ್ಟೆ. ನಮ್ಮಲ್ಲಿನ ರಾಷ್ಟ್ರಪತಿಗಳು ಮತ್ತು ಬ್ರಿಟನ್ನ ಅರಸೊತ್ತಿಗೆಯ ಅಧಿಕಾರ, ಜವಾಬ್ದಾರಿಗಳು ಬಹುಪಾಲು ಒಂಧೇ ತೆರನಾಗಿವೆ. ಇಲ್ಲಿ ಮತ್ತೊಂದು ವಿಶೇಷವನ್ನು ಗಮನಿಸಬೇಕು. ಬ್ರಿಟನ್ನಿನ ಅರಸೊತ್ತಿಗೆ ಜಗತ್ತಿನ ನಮ್ಮ ಭಾಗದಲ್ಲಿ ಅತ್ಯಂತ ಜನಪ್ರಿಯ. ಅಲ್ಲಿನ ಪ್ರತಿ ಕದಲಿಕೆಯನ್ನೂ ನಾವು ಉತ್ಸುಕತೆಯಿಂದ ತಿಳಿಯಲು ಬಯಸುತ್ತೇವೆ. ಅದೇ ಸೌದಿ ದೊರೆಗಳ ಬಗ್ಗೆ ನಮಗಷ್ಟು ಆಸಕ್ತಿಯಿರುವುದಿಲ್ಲ. ಸೂರ್ಯ ಮುಳುಗದ ಸಾಮ್ರಾಜ್ಯ ಕಟ್ಟಿದ್ದ ಬ್ರಿಟನ್ನ ಅಧಿಕಾರಕ್ಕೆ ಒಳಗಾಗಿದ್ದವರು ನಾವೂನೂ. ಸುಮಾರು 200 ವರ್ಷಗಳ ಕಾಲ ಇದೇ ಅರಸೊತ್ತಿಗೆಯಡಿ ಬದುಕಿದವರು. ಹಾಗಾಗಿ ನಮಗೀಗಲೂ ಬ್ರಿಟನ್ ಅರಸೊತ್ತಿಗೆಯ ಬಗೆಗೊಂದು ಆರಾಧನೆ. ಕಾಮನ್ವೆಲ್ತ್ ಕೂಟದ ಸುಮಾರು 53 ದೇಶಗಳಲ್ಲಿ ಈ ಆರಾಧನೆ ಇಂದಿಗೂ ಜೀವಂತ. ಇದರಲ್ಲಿ ಇಂದಿಗೂ ಕೆನಡಾ, ಆಸ್ಟರೇಲಿಯಾ, ನ್ಯೂಜೀಲ್ಯಾಂಡ್ ಸೇರಿದಂತೆ ಒಟ್ಟು 16 ದೇಶಗಳು ಬ್ರಿಟನ್ ಅರಸೊತ್ತಿಗೆಗೆ ಮಯರ್ಾದೆ ಕೊಟ್ಟು ಅದಕ್ಕೆ ನಡೆದುಕೊಳ್ಳುತ್ತಿದೆ. ಬ್ರಿಟನ್ನಿನ ರಾಜಮನೆತನವೂ ಅಷ್ಟೆ, ಗೊಡ್ಡಾಗಿ ಉಳಿಯದೆ, ಕಾಲಕ್ಕೆ ತಕ್ಕಂತೆ ಬದಲಾಗುತ್ತಾ, ಒಂದು ಫಂಕ್ಷನಲ್ ಪ್ರರಜಾಪ್ರಭುತ್ವಕ್ಕೆ ದಾರಿ ಮಾಡಿಕೊಟ್ಟು ತಾನು ನೇರ ಅಧಿಕಾರದಿಂದ ಹಿಂದೆ ಸರಿದಿದೆ. ಇದರಿಂದಲೇ ಈ ವಿಂಡ್ಸರ್ ರಾಜಮನೆತನ ಇಂದಿಗೂ ತನ್ನ ಪ್ರಸ್ತುತತೆ ಮತ್ತು ಅಸ್ತಿತ್ವವನ್ನು ಉಳಿಸಿಕೊಂಡಿದೆ.

ಈ ಮಂಥನ ಒತ್ತಟ್ಟಿಗಿರಲಿ. ಬ್ರಿಟನ್ನಿನ ಅರಮನೆಯ ಪಂಜರದೊಳಗೆ ಸಿಲುಕಲಾರದ ಹಕ್ಕಿ ಡಯಾನಾ ಮತ್ತು ಪ್ರಿನ್ಸ್ ಚಾರ್ಲ್ಸ್ ಮಗ ವಿಲಿಯಮ್ಸ್, ತಂದೆ ತಾಯಿ ಪ್ರೀತಿಯನರಿಯದೆ ಬೆಳೆದ ಕೂಸು. ಆತ ಚಿಕ್ಕ ವಯಸ್ಸಿನಲ್ಲೇ ಹಾದಿ ಬಿಟ್ಟಿದ್ದನೆಂಬ ಗುಸಗುಸು ಬಹುಹಿಂದಿನಿಂದಲೇ ಕೇಳಿಬರುತ್ತಿತ್ತು. ಆದರೆ ಕಳೆದ ಕೆಲ ವರ್ಷಗಳಲ್ಲಿ ಆತ ಬದಲಾದ. ಬ್ರಿಟನ್ನಿನ ವಾಯುದಳಕ್ಕೆ ಸೇರ್ಪಡೆಯಾದ. ಫೈಟರ್ ಪೈಲೆಟ್ ಆದ. ಅಪಘಾನಿಸ್ಥನದ ಯುದ್ಧಕ್ಕೂ ಹೋಗಿ ಬಂದ. ಇಂದು Royal AirForce ನ  ಪೈಲಟ್ ಆಗಿದ್ದಾನೆ. ಈತ ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಾಂಗ ಮಾಡುತ್ತಿರುವಾಗ ಈತನಿಗೆ ಪರಿಚಯವಾದಾಕೆ ಕ್ಯಾಥರೀನ್. ನಂತರ ಇದು ಪ್ರೇಮಕ್ಕೆ ತಿರುಗಿತು. ಇದು 9 ವರ್ಷಗಳ ಮಾತು. ಮಧ್ಯೆ ಕೆಲ ವರ್ಷ ದೂರಾಗಿದ್ದ ಇವರ ಪ್ರೇಮವೇ ಇವರನ್ನು ಮತ್ತೆ ಒಂದಾಗಿಸಿತು. ಈಗ 9 ವರ್ಷಗಳ ಪ್ರೇಮಾಯಣದ ನಂತರ ಇಬ್ಬರೂ ಮದುವೆಯಾಗಿದ್ದಾರೆ. ಅವರ ವೈವಾಹಿಕ ಜೀವನಕ್ಕೊಂದು ಶುಭಾಷಯ ಹೇಳುವುದಷ್ಟೆ ನಮ್ಮ ಕೆಲಸ. 

Proudly powered by Blogger
Theme: Esquire by Matthew Buchanan.
Converted by LiteThemes.com.