ಗಣಿ ರೆಡ್ಡಿ - ಇತ್ತ ನ್ಯಾಯಾಲಯದಲ್ಲಿ ಖುಲಾಸೆ, ಅತ್ತ ಜನತಾ ನ್ಯಾಯಾಲಯದಲ್ಲಿ ಆರೋಪ ದಾಖಲು

ಕಳೆದೊಂದೆರಡು ತಿಂಗಳುಗಳಿಂದ ಸೈಲೆಂಟಾಗಿದ್ದ ಬಳ್ಳಾರಿಯ ಅಕ್ರಮ ಗಣಿಗಾರಿಕೆಯ ವಿಷಯ ಮತ್ತೆ ಗದ್ದಲ ಮಾಡಲು ಶುರುವಿಟ್ಟುಕೊಂಡಿದೆ. ಒಬ್ಬ ಸಾಧಾರಣ ಪೋಲೀಸ್ ಪೇದೆಯ ಮಕ್ಕಳಾದ ರೆಡ್ಡಿ ಸಹೋದರರು ಹೇಗೆ ಕೇವಲ 10 ವರ್ಷಗಳ ಹಿಂದೆ ಬಳ್ಳಾರಿಯ ಬೀದಿಗಳಲ್ಲಿ ದ್ವಿಚಕ್ರ ವಾಹನಗಳ ಮೇಲೆ ಓಡಾಡುತ್ತಿದ್ದರು, ಹೇಗೆ ಈವತ್ತು ಹೆಲಿಕಾಪ್ಟರ್ಗಳಲ್ಲೇ ಹಾರಾಡುತ್ತಾರೆ, ಹೇಗೆ ಎನ್ನೋಬಲ್ ಚಿಟ್ಸ್ ಎಂಬ ಗೋಲ್ಮಾಲ್ ಕಂಪೆನಿಯ ಮೂಲಕ ರೆಡ್ಡಿ 200 ಕೋಟಿಗಳಿಗೆ ಕೈ ಎತ್ತಿದ್ದರು, ಹೇಗೆ ಆ 200 ಕೋಟಿಗಳನ್ನು ಗಣಿಯ ಧೂಳಿನಲ್ಲಿ ತಂದು ಸುರಿದದ್ದು, ಕುಬೇರರಾದದ್ದು, 1999ರ ಸೋನಿಯಾ ಮತ್ತು ಸುಷ್ಮಾ ಮೇಡಂನವರ ಚುನಾವಣೆ, ಅದು ರೆಡ್ಡಿ ರಾಮುಲು ಜೋಡಿಗೆ ರಾಜಕೀಯವಾಗಿ ತಿರುವು ನೀಡಿದ್ದು, ಬಿಜೆಪಿ ಸರ್ಕಾರ ಸ್ಥಾಪನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು, ಅದನ್ನೇ ಹಿಡಿದು ಯಡಿಯೂರಪ್ಪನವರನ್ನು ಪಪ್ಪೆಟ್ ರೀತಿ ಆಡಿಸುತ್ತಿರುವುದು ಎಲ್ಲವೂ ಎಲ್ಲರೂ ಬಲ್ಲ ವಿಚಾರವೇ.

ಅತ್ತ ಆಂಧ್ರದ ದೊರೆ ವೈ.ಎಸ್.ರಾಜಶೇಖರ ರೆಡ್ಡಿಯವರು ಅಪಘಾತದಲ್ಲಿ ಕಣ್ಮರೆಯಾಗಿ, ಅವರ ಮಗ ಜಗನ್ಮೋಹನ ರೆಡ್ಡಿಯನ್ನು ಮೂಖ್ಯಮಂತ್ರಿ ಮಾಡುವ ಪ್ರಯತ್ನ ಕೈಗೂಡದೇ ಹೋಗುತ್ತಿದ್ದಂತೆಯೇ ರೆಡ್ಡಿಗಳು ಕೊಂಚ ಮೆತುವಾದರು. ಇದೇ ಸರಿಯಾದ ಸಮಯ ಎಂಬಂತೆ ಆತುರಗೆಟ್ಟ ಆಂಜನೇಯನಂತೆ ಇಲ್ಲಿ ಯಡಿಯೂರಪ್ಪನವರು ರೆಡ್ಡಿಗಳನ್ನು ಹಣಿಯಲು ಹೊರಡುತ್ತಿದ್ದಂತೆಯೇ ಅಪಾಯವನ್ನರಿತ ರೆಡ್ಡಿಗಳು ಸೆಟೆದು ನಿಂತು ಯಡಿಯೂರಪ್ಪನವರ ಕೈಲೇ ಮೊಳಕಾಲೂರಿಸಿಬಿಟ್ಟರು.

ನಂತರ ರೆಡ್ಡಿಗಳು ತಮ್ಮ ಅಕ್ರಮ ಗಣಿಗಾರಿಕೆಗಾಗಿ ರಾಜ್ಯದ ಫಲವತ್ತಾದ ಭೂಮಿಯನ್ನೇ ಆಂಧ್ರ ಕರ್ನಾಟಕದ ಗಡಿಗಂಟಿಕೊಂಡಂತಿರುವ ತಮ್ಮ ಗಣಿ ಲೀಸ್ ಏರಿಯಾಗಳೊಂದಿಗೆ ಸೇರಿಸಿಬಿಟ್ಟಿದ್ದಾರೆ, ರಾಜ್ಯದ ಗಡಿಯನ್ನೇ ರೆಡ್ಡಿಗಳು ಬದಲಿಸಿಬಿಟ್ಟಿದ್ದಾರೆ, ಎಂದು ತೀವ್ರತರ ಆರೋಪಗಳು ಕೇಳಿ ಬಂದವು. ಅಂದಿಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕರಾಗಿದ್ದ ವಿ.ಎಸ್.ಉಗ್ರಪ್ಪನವರು ಸತ್ಯಶೋಧನಾ ಸಮಿತಿಯೊಂದನ್ನು ಮುನ್ನಡೆಸಿ, ವರದಿ ನೀಡಿದ್ದರು. ಅದರಲ್ಲಿ ರೆಡ್ಡಿಗಳು ಗಡಿಯಲ್ಲಿನ ಬಾಂದಾ ಕಲ್ಲುಗಳು ಮತ್ತು ಟ್ರೈಜಂಕ್ಷನ್ ಪಾಯಿಂಟ್ ಅನ್ನು ಹೊಡೆದು ಹಾಕಿದ್ದಾರೆಂದೂ ಇದರಿಂದ 32 ಕಿಮಿ. ಉದ್ದ ಮತ್ತು ಅರ್ಧ ಕಿಮಿ. ಅಗಲದ ಕರ್ನಾಟಕದ ಖನಿಜ ಸಂಪದ್ಭರಿತ ಭೂಮಿ ಆಂಧ್ರದ ಪಾಲಾಗಿದೆ ಎಂದು ವರದಿ ನೀಡಿತು. ಇದು ಇತರ ಆರೋಪಗಳಂತೆ ಅಲ್ಲ. ಕರ್ನಾಟಕದ ಸರ್ಕಾರದಲ್ಲಿ ಮಂತ್ರಿಯಾದವ ಕರ್ನಾಟಕದ ಸಂಪದ್ಭರಿತ ಭೂಮಿಯನ್ನು ಆಂಧ್ರಕ್ಕೆ ಸೇರಿಸಿಬಿಟ್ಟಿದ್ದಾನೆಂದರೆ ರಾಜಕೀಯವಾಗಿ ಅದೊಂದು ಟೈಂ ಬಾಂಬ್ ಅಲ್ಲದೆ ಮತ್ತೇನು? ಆದರೆ ಇದನ್ನು ಸಮರ್ಥವಾಗಿ ಬಳಸಿಕೋಳ್ಳುವಲ್ಲಿ ವಿರೋಧ ಪಕ್ಷಗಳು ವಿಫಲವಾದವು. ಯಡಿಯೂರಪ್ಪನವರಂತೂ ಎಲ್ಲಿ ತಮ್ಮ ಖುರ್ಚಿಗೆ ಅಪಾಯ ಬಂದೊದಗಬಹುದೆಂಬ ಭೀತಿಯಲ್ಲಿ ಅಸಲಿಗೆ ಇದೊಂದು ಇಶ್ಯೂ ಅಸ್ತಿತ್ವದಲ್ಲೇ ಇಲ್ಲ ಎಂಬಂತೆ ಮುಗುಮ್ಮಾಗಿ ಇದ್ದು ಬಿಟ್ಟರು.

ಅಸಲಿಗೆ ರೆಡ್ಡಿಗಳ ಸಕಲೆಂಟು ವ್ಯವಹಾರಗಳೂ ಇರುವುದು ಆಂಧ್ರದಲ್ಲೇ ಹೊರತು, ಅವರ ಚಿಕ್ಕಾಸು ವ್ಯವಹಾರವೂ ಕರ್ನಾಟಕದಲ್ಲಿಲ್ಲ. ಅವರು 4 ಲೀಸ್ ಲೈಸೆನ್ಸುಗಳಲ್ಲಿ ಗಣಿಗಾರಿಕೆ ನಡೆಸುತ್ತಾರೆ, ಓಬಳಾಪುರಂ ಮೈನಿಂಗ್ ಕಂಪೆನಿಯ ಹೆಸರಿನಲ್ಲಿ. ಈ ಓಬಳಾಠಪುರಂ ಕರ್ನಾಟಕ  ಮತ್ತು ಆಂಧ್ರದ ಗಡಿಯ ಗುಂಟ ಇದೆಯಾದರೂ, ಅದು ಇರುವುದು ಆಂಧ್ರದಲ್ಲಿ. ಆದರೆ ಆಂಧ್ರದಲ್ಲಿ ರಾಜಕೀಯ ಪರಿಸ್ಥಿತಿ ಬದಲಾಗಿ ಹೋಗಿತ್ತು. ರೆಡ್ಡಿಗಳ ಗಾಡ್ಫಾದರ್ನಂತಿದ್ದ ವೈ.ಎಸ್.ಆರ್. ಸಾವಿನೊಂದಿಗೆ ಅವರಿಗೆ ಆಂಧ್ರ ಸರ್ಕಾರದಿಂದ ದೊರಕುತ್ತಿದ್ದ ಬ್ಲಾಂಕೆಟ್ ಕವರ್ ರಕ್ಷಣೆ ತಪ್ಪಿ ಹೋಗಿ ಬಯಲಿನಲ್ಲಿ ನಿಂತು ಬಿಟ್ಟಿದ್ದರು. ಅದರ ಜೊತೆಗೆ ವೈ.ಎಸ್.ಆರ್. ಮಗ ಜಗನ್ಮೋಹನ ರೆಡ್ಡಿಯನ್ನು ಮುಖ್ಯಮಂತ್ರಿ ಮಾಡಿಬಿಡುವ ರೆಡ್ಡಿಗಳ ಪ್ರಯತ್ನವೂ ಕೈಗೂಡದೇ ಹೋಗಿ ರೋಶಯ್ಯ ಮುಖ್ಯಮಂತ್ರಿಯಾಗಿ ಬಂದು ಕೂತರು. ಆಂಧ್ರ ಕಾಂಗ್ರೆಸ್ನ ಮುದೀ ಹುಲಿ ರೋಶಯ್ಯನವರ ಖುರ್ಚಿಗೆ ಅಲ್ಲಿ ಸವಾಲೊಡ್ಡಬಲ್ಲವ ಒಬ್ಬ ಜಗನ್ಮೋಹನ ರೆಡ್ಡಿ ಮಾತ್ರ. ಇದನ್ನರಿತ ರೋಶಯ್ಯಗಾರು ಅತ್ಯಂತ ವ್ಯವಸ್ಥಿತವಾಗಿ ವೈ.ಎಸ್.ಆರ್. ಕುಟುಂಬದ ಸಾಮ್ರಾಜ್ಯವನ್ನು ಭೂಸ್ಥಾಪವಾಗಿಸುವ ಕೆಲಸಕ್ಕೆ ಕೈ ಹಾಕಿ ಕೂತರು. ಅವರ ಮೊದಲ ಟಾರ್ಗೆಟ್ ಆದವರೇ ಜನಾರ್ಧನ ರೆಡ್ಡಿ! ಸೀದಾ ಜನಾರ್ಧನ ರೆಡ್ಡಿಯವರ ಮೇಲಿರುವ ಎಲ್ಲ ಆರೋಪಗಳ ಕುರಿತೂ ತನಿಖೆ ಮಾಡುವಂತೆ ಸಿಬಿಐಗೆ ಒಪ್ಪಿಸಿಬಿಟ್ಟರು ರೋಶಯ್ಯ! ರೆಡ್ಡಿಗಳ ಕಾಲ ಕೆಳಗೆ ಭೂಕಂಪವಾದ ಅನುಭವವಾಗಿತ್ತು. ಆದರೆ ಅವರು ಈ ಸಿಬಿಐ ತನಿಖೆಗೆ ಆಂಧ್ರ ಹೈಕೋರ್ಟ್ನಿಂದ ತಡೆಯಾಜ್ಞೆ ತಂದು, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರು.

ಸುಪ್ರೀಂ ಕೋರ್ಟ್ನಲ್ಲಿ ಟಪಾಲ್ ಗಣೇಶ್ ಸಲ್ಲಿಸಿದ್ದ ಲೀವ್ ಪಿಟೀಷನ್ನ ಆಧಾರದ ಮೇಲೆ, ಕೇಂದ್ರ ಪರಿಸರ ಇಲಾಖೆ ಓಬಳಾಪುರಂ ಮೈನಿಂಗ್ ಕಂಪೆನಿಯ ಅಕ್ರಮಗಳ ತನಿಖೆಗೆ ಅಂತಲೇ ಒಂದು ಕೇಂದ್ರ ಉನ್ನತಾಧಿಕಾರ ಸಮಿತಿಯೊಂದನ್ನು ರಚಿಸಿತು. ನವೆಂಬರ್ 19, 2009ರಂದು ಈ ಸಮಿತಿ ತನ್ನ ವರದಿಯನ್ನು ಸಲ್ಲಿಸಿತು. ಈ ವರದಿ ಒಬಳಾಪುರಂ ಹಳ್ಳಿಯಲ್ಲಿನ ಎಲ್ಲಾ ಮೈನಿಂಗ್ ಲೀಸ್ಗಳ ಸರ್ವೇ ನಡೆಸಿತ್ತು. ರೆಡ್ಡಿಯವರ ಒಬಳಾಪುರಂ ಮೈನಿಂಗ್ ಕಂಪೆನಿ ತನ್ನ ಡಿಫೆನ್ಸಿಗೆ ನೀಡುವ ಮ್ಯಾಪುಗಳು 1896 ಸೇರಿದ್ದವಾಗಿದ್ದು, ಅದರ ಮತ್ತು ಇತ್ತೀಚಿನ ಮ್ಯಾಪುಗಳಲ್ಲಿನ ಗಡಿಗಳು ಒಂದಕ್ಕೊಂದು ತಾಳೆಯೇ ಆಗುವುದಿಲ್ಲ. ಇದಲ್ಲದೆ ಸಂರಕ್ಷಿತ ಅರಣ್ಯ ಪ್ರದೇಶದ ಒತ್ತುವರಿಯ ಗುಮಾನಿಗಳೂ ಇವೆ. ಅದಲ್ಲದೆ ಆಂಧ್ರ ಸರ್ಕಾರದ ಕ್ರಮಗಳು ಸಂದೇಹಾಸ್ಪದವಾಗಿವೆಯೆಂದೂ ಷರಾ ಬರೆಯಿತು. ಇದರ ಆಧಾರದ ಮೇಲೆ ಕೇಂದ್ರ ಪರಿಸರ ಇಲಾಖೆ ಎಲ್ಲಾ ಆರೂ ಮೈನಿಂಗ್ ಲೀಸುಗಳನ್ನೂ ರದ್ದು ಪಡಿಸಿತ್ತು. ಆದರೆ ಇದೆಲ್ಲವನ್ನೂ ಅಲ್ಲಗಳೆದ ವೈ.ಎಸ್.ಆರ್. ಸರ್ಕಾರ ಮೈನಿಂಗ್ಗೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಈ ವರದಿಯ ಮುಂದುವರೆದ ಭಾಗದಂತೆಯೇ ಸುಪ್ರೀಂ ಕೋರ್ಟ್ ಕೇಂದ್ರ ಸರ್ವೇ ಇಲಾಖೆಗೆ ಆರೂ ಮೈನಿಂಗ್ ಲೀಸುಗಳ ಮತ್ತು ವಿವಾದಿತ ಕರ್ನಾಟಕ ಆಂಧ್ರ ಗಡಿಯ ಸರ್ವೇ ಕೈಗೊಂಡು ವರದಿ ನೀಡುವಂತೆ ಆದೇಶಿಸಿತ್ತು.

ತೀರಾ ಇತ್ತೀಚೆಗೆ ಈ ಸರ್ವೇ ತಂಡ ತನ್ನ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ. ಆಶ್ಚರ್ಯ, ಈ ತಂಡ ಅದೆಲ್ಲಿ ಸರ್ವೇ ನಡೆಸಿತೋ? ಅದೇನು ಹಕೀಕತ್ ಮಾಡಿತೋ? ಆ ದೇವರೇ ಬಲ್ಲ! ಸರ್ವೇ ಇಲಾಖೆಯ ವರದಿಯನ್ನು ಓದಿದವರಿಗಾರಿಗಾದರೂ ಹೀಗನ್ನಿಸದೇ ಇರದು. ಈ ವರದಿಯಲ್ಲಿ ಜನಾರ್ಧನ ರೆಡ್ಡಿ ಮತ್ತು ಅವರ ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿಯನ್ನು ಖಡಾಖಂಡಿತವಾಗಿ ನಿರ್ದೋಷಿಯೆಂದು  ಘೋಷಿಸಲಾಗಿದೆ. ಇವರು ನಿರ್ವಹಿಸುತ್ತಿರುವ 4 ಮೈನಿಂಗ್ ಲೀಸ್ಗಳಲ್ಲಿ ಒಂದೇ ಒಂದು ಇಂಚಿನಷ್ಟೂ ಒತ್ತುವರಿಯಾಗಿಲ್ಲವೆಂದೂ, ಬದಲಿಗೆ ಇವರಿಗೆ ಲೈಸೆನ್ಸ್ ದೊರಕಿರುವ 39.5 ಹೆಕ್ಟೇರ್ಸ್ ಬದಲಿಗೆ 38.5 ಹೆಕ್ಟೇರ್ಸ್, 6.5 ಹೆಕ್ಟೇರ್ಸ್ ಬದಲಿಗೆ 6.3 ಹೆಕ್ಟೇರ್ಸ್, 68.5 ಹೆಕ್ಟೇರ್ಸ್ ಬದಲಿಗೆ 68.4 ಹೆಕ್ಟೇರ್ಸ್, ಮತ್ತು 25.98 ಹೆಕ್ಟೇರ್ಗಳ ಬದಲಿಗೆ 25 ಹೆಕ್ಟೇರ್ಗಳಲ್ಲಿ ರೆಡ್ಡಿ ಮೈನಿಂಗ್ ನಡೆಸುತ್ತಿದ್ದಾರೆ ಎಂದು ಹೇಳಿ ಎಲ್ಲರನ್ನೂ ದಂಗು ಬಡಿಸಿದೆ. ಈ ವರದಿಯನ್ನು ಅಂಗೀಕರಿಸಿರುವ ಸುಪ್ರೀಂ ಕೋರ್ಟ್, ಲೈಸೆನ್ಸ್ ಇರುವ ಜಾಗದಲ್ಲಿ ಮೈನಿಂಗ್ ನಡೆಸಲು ಯಾವುದೇ ಅಡ್ಡಿಯಿಲ್ಲ ಎಂದು ತೀರ್ಪು ನೀಡಿದೆ.

ಇದು ಒಂದು ಮಧ್ಯಂತರ ಆದೇಶ ಅಷ್ಟೆ. ಆದರೆ ಇದರಿಂದ ಉಲ್ಲಸಿತರಾದ ಜನಾರ್ಧನ ರೆಡ್ಡಿ, ಮೊನ್ನೆ ತಾಜ್ ವೆಸ್ಟ್ ಎಂಡ್ನಲ್ಲಿ ಒಂದು ಮಾಧ್ಯಮ ಸಮಾವೇಶವನ್ನು ನಿರ್ವಹಿಸಿ, ತಮ್ಮ ಖುಷಿ ಹಂಚಿಕೊಂಡರು. ತಾವು ಪುಣ್ಯಕೋಟಿಯ ಹಾಡಿನಂತೆ ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ ಎಂದು ಬದಕುತ್ತಿರುವವರೆಂದೂ, ರಾಹುಲ್ ಬಲ್ಡೋಟಾರನ್ನು ಮೈನ್ಸ್ ವೀರಪ್ಪನ್ ಎಂದು ಕರೆದದ್ದೇ ದೇವೇಗೌಡ, ಸಿದ್ಧರಾಮಯ್ಯ ಮತ್ತು ಚಂದ್ರಬಾಬು ನಾಯ್ಡುರನ್ನು ನಿರುದ್ಯೋಗಿ ರಾಜಕಾರಣಿಗಳೆಂದು ಜರೆದದ್ದೇ ಜರೆದದ್ದು. ಆದರೆ ಅನೇಕ ಪ್ರಶ್ನೆಗಳು ಉತ್ತರವಿಲ್ಲದೇ ಹಾಗೆಯೇ ಉಳಿದುಹೋಗಿವೆ ರೆಡ್ಡಿಗಾರೂ...

ಕೇಂದ್ರ ಉನ್ನತಾಧಿಕಾರ ಸಮಿತಿ ಮತ್ತು ಸರ್ವೇ ಇಲಾಖೆ ಒಂದೇ ಜಾಗದ ಸರ್ವೇ ನಡೆಸಿದ್ದು ಅಲ್ಲವೇ? ಹಾಗಾದರೆ 2009ರ ನವೆಂಬರ್ 19 ರಂದು ಕೇಂದ್ರ ಉನ್ನತಾಧಿಕಾರ ಸಮಿತಿ ಒತ್ತುವರಿ ನಡೆದಿರುವ ಬಗ್ಗೆ ಮಾತನಾಡಿದರೆ, ಸರ್ವೇ ಇಲಾಖೆ ತಮ್ಮಷ್ಟು ಲಾ ಅಬೈಡಿಂಗ್ ಸಿಟಿಜನ್ ಮತ್ತೊಬ್ಬರಿಲ್ಲ ಎನ್ನುತ್ತದೆ. ಇದರಲ್ಲಿ ಯಾವುದಾದರೂ ಒಂದು ವರದಿ ಮಾತ್ರ ವಾಸ್ತವಾಂಶಕ್ಕೆ ಹತ್ತಿರವಿರುವ ಸಾಧ್ಯತೆಯಿದೆ. ಅದು ಯಾವುದು? ನೀವು ಈಗಿನ ಸರ್ವೇ ಇಲಾಖೆಯ ವರದಿ ಎನ್ನುವಿರಿ ತಿಳಿದಿದೆ, ಹಾಗಾದರೆ ಕೇಂದ್ರ ಉನ್ನತಾಧಿಕಾರ ಸಮಿತಿಯ ವರದಿ? ಅಲ್ಲಿ ಏನೂ ಇಲ್ಲದಿದ್ದರೆ ಆ ರೀತಿ ವರದಿ ನೀಡಲು ಅವರಿಗೇನು ಹುಚ್ಚೇ? ಇನ್ನು ಸಿಬಿಐ ತನಿಖೆಯ ವಿಚಾರ. ಸತ್ಯವೇ ನಮ್ಮ ತಾಯಿ ತಂದೆ ಎಂದು ಗೊಣಗುವ ನೀವು ಆಂಧ್ರ ಸರ್ಕಾರ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೊಪ್ಪಿಸಿದ ಕೂಡಲೇ ಅದ್ಯಾಕೆ ದಾವಾಗ್ನಿ ಬಿದ್ದವರಂತೆ ಓಡೋಗಿ ಹೈಕೋರ್ಟ್ನಿಂದ ತಡೆಯಾಜ್ಞೆ ತಂದು ಕೂತಿರುವಿರಿ? ತಮ್ಮ ಸತ್ಯಸಂಧತೆಯ ಬಗ್ಗೆ ತಮಗೆ ಅಷ್ಟು ನಂಬಿಕೆಯಿರುವಾಗ ಅದೂ ನಡೆದು ಹೋಗಲಿ ಬಿಡಿ. ಇನ್ನು ಗಡಿ ಒತ್ತುವರಿಯ ವಿಷಯ. ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ತೀರ್ಪಿನಲ್ಲಿ ಗಣಿ ಲೈಸೆನ್ಸುಗಳ ಬಗ್ಗೆ ಎಲ್ಲವನ್ನೂ ಹೇಳಿಯಾಗಿದೆ. ಇನ್ನು ಅಂತರಾಜ್ಯ ಗಡಿ ಗಲಾಟೆ ನಾನು ಹುಟ್ಟುವ ಮೊದಲಿಂದಲೂ ಇದೆ, ಅದಕ್ಕೂ ನನಗೂ ಸಂಬಂಧವೇ ಇಲ್ಲ ಅನ್ನುವಿರಲ್ಲ, ತಮ್ಮ ಓಬಳಾಪುರಂ ಮೈನಿಂಗ್ ಕಂಪೆನಿಯ ಮಾಜಿ ಮ್ಯಾನೇಜರ್ ಆಂಜನೇಯ ರೆಡ್ಡಿಯ ಹೇಳಿಕೆಗಳನ್ನು ಗಮನಿಸಿಯೇ ಇಲ್ಲವೇ? ತಮ್ಮದೇ ಗಣಿ ಕಂಪೆನಿಯಲ್ಲಿ ಮ್ಯಾನೇಜರ್ ಆಗಿದ್ದ ಆಂಜನೇಯ ರೆಡ್ಡಿಗಾರು, ಸಿಬಿಐ ತನಿಖೆ ನಡೆದಾಗ ಹೆದರಿ ಬೆವರುತ್ತಿದ್ದಾಗ ತಲೆಮರೆಸಿಕೊಂಡವರು, ಈಗ ಬೆಂಗಳೂರಿನ ಅಜ್ಞಾತ ಸ್ಥಳವೊಂದರಲ್ಲಿ ಕೂತು, ಅಪ್ರೂವರ್ ರೀತಿ ತಮ್ಮ ಪೌರುಷದ ಕತೆಗಳ ಪಾರಾಯಣ ಮಾಡುತ್ತಿದ್ದಾರೆ. ಹೇಗೆ ತಮ್ಮ ಅಣತಿಯ ಮೇಲೆ ಅವರೇ ನಿಂತು ಆಂಧ್ರ - ಕರ್ನಾಟಕ ಗಡಿಯ ಬಾಂದಾ ಕಲ್ಲುಗಳು ಮತ್ತು ಟ್ರೈಜಂಕ್ಷನ್ ಪಾಯಿಂಟ್ ಅನ್ನು ನಾಶಪಡಿಸುದುದಾಗಿ ಹೇಳಿಕೊಂಡಿದ್ದಾರೆ. ಉಗ್ರಪ್ಪನವರ ಸತ್ಯ ಶೋಧನಾ ಸಮಿತಿಯ ವರದಿ ಹೇಳುವುದೂ ಇದನ್ನೇ. ಇದಕ್ಕೆ ತಮ್ಮ ಉತ್ತರವೇನು ರೆಡ್ಡಿಗಾರೂ....

ಪೃಥ್ವಿ - ಗಣಿಗಳ ಮೇಲೆ ಪುನೀತ್ ಮಣ್ಣು 

ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಸಂಚಲನ. ಪುನೀತ್ ರಾಜ್ಕುಮಾರ್ ನಾಯಕ ನಟರಾಗಿರುವ `ಪೃಥ್ವಿ' ಸಿನಿಮಾ, ಒಂದು ಸಿನಿಮಾವಾಗಿಯಲ್ಲದೆ ರಾಜಕೀಯವಾಗಿಯೂ ಸುದ್ದಿ ಮಾಡುತ್ತಿದೆ. ಇಡೀ ಸಿನೆಮಾ ಬಳ್ಳಾರಿ ಅಕ್ರಮ ಗಣಿಗಾರಿಕೆಯ ಸುತ್ತಲೂ ಹೆಣೆಯಲ್ಪಟ್ಟಿದೆ. ಸಿನೆಮಾದಲ್ಲಿ ನಾಯಕನಟನಿಗೆ ಐಎಎಸ್ ಪಾಸು ಮಾಡಿ ಸಿವಿಲ್ ಸರ್ವೆಂಟ್ ಆಗಬೇಕೆಂಬುದೇ ಗುರಿ. ಸಿನಿಮಾ ಶುರುವಾಗಿ ಕಾಲು ಘಂಟೆಗೆಲ್ಲಾ ನಾಯಕ ಐಎಎಸ್ ಪಾಸು ಮಾಡಿ, ನಾಯಕಿಯನ್ನು ಮದುವೆಯೂ ಆಗಿ ಬಳ್ಳಾರಿಗೆ ಡಿಸಿ ಆಗಿ ಬರುತ್ತಾನೆ. ಅಲ್ಲಿಂದ ಮಿಕ್ಕ ಸಿನಿಮಾ ಪೂರಾ ಬಳ್ಳಾರಿಯೇ. ಇಂದಿನ ಬಳ್ಳಾರಿಯನ್ನು ವಾಸ್ತವಿಕತೆಗೆ ಅತ್ಯಂತ ಹತ್ತಿರವಾಗಿರುವಂತೆ ಚಿತ್ರಿಸಲಾಗಿದೆ. ಬಳ್ಳಾರಿಯ ಧೂಳು, ಅಲ್ಲಿನ ಗಣಿಗಳು ಮತ್ತು ಕಾರ್ಖಾನೆಗಳು ಕಲುಷಿತಗೊಳಿಸುತ್ತಿರುವ ಕುಡಿಯುವ ನೀರು, ಅದರಿಂದ ಬಳಲುತ್ತಿರುವ ಜನ, ಅಲ್ಲಿ ಸ್ಥಾಪಿತವಾಗಿರುವ ರೌಡಿ ರಾಜ್, ಗಡಿ ಒತ್ತುವರಿ, ಎಲ್ಲವನ್ನೂ ಸೂಚ್ಯವಾಗಿಯಲ್ಲದೇ ನೇರವಾಗಿಯೇ ತೋರಿಸಿದ್ದಾರೆ. ಕಡೆಯಲ್ಲಿ ಗಣಿ ಉದ್ಯಮಿಯನ್ನು ನಾಯಕನಟ ಗಣಿ ಮಣ್ಣಿನಲ್ಲೇ ಹೂತುಬಿಡುವಂತೆ ತೊರಿಸಿರುವುದು ಕೂಡ, ಗಣಿ ಉದ್ಯಮಿಗಳನ್ನು ಗಣಿಗಳಲ್ಲೇ ಭೂ ಸ್ಥಾಪಿತಗೊಳಿಸಿಬಿಡಬೇಕೆಂಬಂತೆ ಸೂಚ್ಯವಾಗಿ ಹೇಳಲಾಗಿದೆ.

ಒಟ್ಟಾರೆಯಾಗಿ ದಿನಬೆಳಗಾದರೆ ಮಾಧ್ಯಮಗಳಲ್ಲಿ ಅಕ್ರಮ ಗಣಿಗಾರಿಕೆ, ಗಡಿ ಒತ್ತುವರಿ ಅಂತ ಏನೇ ರೀಮುಗಟ್ಟಲೆ ಬರೆದರೂ, ಒಂದು ಸಿನೆಮಾ ಮೂಡಿಸುವ ಜಾಗೃತಿ ಮತ್ತು ಅದರ ಇಂಪ್ಯಾಕ್ಟ್ ಮುಂದೆ ಮಂಕೇ! ಪೃಥ್ವಿ ಸಿನೆಮಾದ ಬಗ್ಗೆ ಮೊದಲ ವಾರಗಳಲ್ಲಿ ಸಿನೆಮಾ ಒಂದು ಚೂರೂ ಚೆನ್ನಾಗಿಲ್ಲ ಎಂಬುದಾಗಿ ಅಪಪ್ರಚಾರ ಮಾಡಲಾಯಿತು. ಆದರೆ ನಿಜ ಹೇಳಬೇಕು, ಇತ್ತೀಚೆಗೆ ಕನ್ನಡದಲ್ಲಿ ಬಂದ ಅತ್ಯುತ್ತಮ ಚಿತ್ರಗಳಲ್ಲಿ ಇದೂ ಒಂದು. ಇಶ್ಯೂವನ್ನು ಪಕ್ಕಕ್ಕೆ ಸರಿಸಿ ನೋಡಿದರೂ ಸಹ, ಒಂದು ಸ್ವತಂತ್ರ ಸಿನೆಮಾ ಆಗಿ ಕೂಡ `ಪೃಥ್ವಿ' ಒಂದು ಅತ್ಯುತ್ತಮ ಸಿನೆಮಾನೇ ಸರಿ. ಈಗೀಗ ಬಾಯಿ ಮಾತಿನಿಂದಲೇ ಚಿತ್ರ ಕುದುರಿಕೊಳ್ಳುತ್ತಿದೆ. ಇಡೀ ಚಿತ್ರಮಂದಿರ ಹೌಸ್ಫುಲ್. ಗಾಂಧೀ ಕ್ಲಾಸು ಪಡೆದು ಬಂದ ಪಡ್ಡೆ ಹುಡುಗರಿಗೂ ಸಹ, ನಮ್ಮ ರಾಜ್ಯವನ್ನು ಪೀಡಿಸುತ್ತಿರುವ ಒಂದು ಪ್ರಮುಖ ಇಶ್ಯೂ ಬಗ್ಗೆ ರಾಜಕೀಯವಾಗಿ ಎಜುಕೇಟ್ ಮಾಡುವಂತಿದೆ. ಈ ಸಿನೆಮಾ ಮಣಿರತ್ನಂ ಸಿನೆಮಾಗಳ ಶೈಲಿಯನ್ನು ನೆನಪಿಸುತ್ತದೆ. ಮಣಿರತ್ನಂ ತಮ್ಮ ರೋಜಾ, ಬಾಂಬೆ, ಕಣ್ಣತ್ತಿಲ್ ಮುತ್ತುಮಿಟ್ಟಾಳ್, ದಿಲ್ ಸೇ, ಯುವ ಮುಂತಾದ ಚಿತ್ರಗಳಲ್ಲಿ ಯಾವುದೋ ತೊಳಲಾಟದಲ್ಲಿ ಸಿಕ್ಕು ನಲುಗುತ್ತಿರುವ ನಾಯಕ, ನಾಯಕಿಯ ಕಥೆಯನ್ನೇ ಹೇಳುತ್ತಾ ಹೋಗುತ್ತಾರಾದರೂ ಹಿಂದೆ ಬ್ಯಾಕ್ಡ್ರಾಪ್ನಲ್ಲಿ ಅಂದಿನ ಪ್ರಮುಖ ರಾಷ್ಟ್ರೀಯ ಇಶ್ಯೂವೊಂದನ್ನು ಬಿಂಬಿಸಿರುತ್ತಾರೆ. ಅದೇ ಟೆಕ್ನಿಕ್ ಅನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಸಿನೆಮಾದ ಕಥೆ ಪೃಥ್ವಿ ಎಂಬ ಐಎಎಸ್ ಅಧಿಕಾರಿಯ ಕುರಿತೇ ಆಗಿದ್ದರೂ ಬ್ಯಾಪ್ಡ್ರಾಪ್ನಲ್ಲಿ ಅತ್ಯಂತ ಸಮರ್ಥವಾಗಿ ಮೂಡಿ ಬಂದಿರುವುದು ಬಳ್ಳಾರಿಯ ಅಕ್ರಮ ಗಣಿಗಾರಿಕೆ. ಹಿಂದೆ ರಾಜಕುಮಾರ್ ಇಂತಹ ಸಿನೆಮಾಗಳನ್ನು ಮಾಡುತ್ತಿದ್ದರು. ಅದಕ್ಕೆ ಅವರು ಇಂದಿಗೂ ಕನ್ನಡದ ಜನಮಾನಸದಲ್ಲಿ ಉಳಿದುಕೊಂಡಿರುವುದು. ಅಂತಹ ಕೆಲಸಕ್ಕೆ ಈಗ ಪುನೀತ್ ರಾಜ್ಕುಮಾರ್ ಕೈ ಹಾಕಿರುವುದು ಶ್ಲಾಘನೀಯವೇ ಸರಿ.

ಅತ್ತ ಸರ್ವೋಚ್ಚ ನ್ಯಾಯಾಲಯದಲ್ಲಿ ರೆಡ್ಡಿಗಳನ್ನು ಕೊಂಚ ಮಟ್ಟಿಗೆ ಖುಲಾಸೆಗೊಳಿಸಿದ್ದರೆ, ಇತ್ತ ಪೃಥ್ವಿ ಸಿನೆಮಾ ಅವರನ್ನು ಮತ್ತೆ ಜನತಾ ನ್ಯಾಯಾಲಯದಲ್ಲಿ ತಂದು ನಿಲ್ಲಿಸಿ ಆರೋಪ ಪಟ್ಟಿ ದಾಖಲಿಸಿದೆ.

ನೈಸ್ ಪುರಾಣ - 8 - ರೈತರ ಭೂಮಿಯ ನುಂಗುತ್ತಿರುವ ಹೆಬ್ಬಾವು ನೈಸ್

ಮೂಲ ಒಪ್ಪಂದದ ಆಧಾರದ ಮೇಲೆ 20-11-1995ರಂದು ಅಂದಿನ ಮುಖ್ಯಮಂತ್ರಿ ದೇವೇಗೌಡರ ಅಧ್ಯಕ್ಷತೆಯಲ್ಲಿ ಸೇರಿದ್ದ ಹೈಲೆವೆಲ್ ಕಮಿಟಿಯು 7 ಟೌನ್ಷಿಪ್ಗಳನ್ನು 5ಕ್ಕೆ ಮಿತಿಗೊಳಿಸಿ, ಮಿಕ್ಕಂತೆ ಇನ್ನುಳಿದ ಎಲ್ಲ ಪ್ರಸ್ತಾಪಗಳನ್ನು ಅನುಮೋದಿಸಿ, ಅದಕ್ಕೆ ಸಂಬಂಧ ಪಟ್ಟ ಹಾಗೆ, ಭೂಮಿಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಇಲಾಖೆಗೆ ಆದೇಶಿಸಿದ್ದ, ಜಿ.ಒ. ಪಿಡಬ್ಲ್ಯೂ 32 ಸಿಎಸ್ಆರ್ 95 ರ ಪ್ರಕಾರ ನೈಸ್ ಕಾಮಗಾರಿಗೆ ಅಗತ್ಯ ಬೇಕಾದ ಭೂಮಿಯ ವಿವರಗಳನ್ನು ಕೋರಿ 8-02-1996ರಂದು ಅಂದಿನ ಲೋಕೋಪಯೋಗಿ ಕಾರ್ಯದರ್ಶಿ  ಬಿ.ಪಿ.ನಿತ್ಯಾನಂದ ನೈಸೆಲ್ಗೆ ಒಂದು ಪತ್ರ ಬರೆಯುತ್ತಾರೆ. ಈ ಪತ್ರಕ್ಕುತ್ತರವಾಗಿ ಭಾರತ್ ಫೋರ್ಜ್ ಲೆಟೆರ್ ಹೆಡ್ನ ಮೇಲೆ ಶಿವಕುಮಾರ ಖೇಣಿಯವರು ಒಂದು ಪತ್ರ ಬರೆದು ಬೆಂಗಳೂರು ಅರ್ಬನ್ ಮತ್ತು ರೂರಲ್ ಜಿಲ್ಲೆಗಳಲ್ಲಿ, ನೈಸ್ ಪ್ರಾಜೆಕ್ಟ್ಗೆ ಬೇಕಾದ ಭೂಮಿಯ ವಿವರವನ್ನು ಸರ್ವೇ ನಂ.ಗಳ ಸಹಿತ ಸಲ್ಲಿಸುತ್ತಾರೆ. ಹೀಮದೆಯೇ ಮಾರ್ಚ್ 11, 18, 29, ಏಪ್ರಿಲ್ 24, 1996ರಂದು ಬರೆದ ಸತತ ಪತ್ರಗಳಲ್ಲಿ  ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಟೌನ್ಷಿಪ್, ಇಂಟರ್ಛೇಂಜ್, ಕ್ಲೋವರ್ ಲೀಫ್, ಪೆರಿಫೆರಲ್ ರೋಡ್ ಮತ್ತಿತರ ಎಲ್ಲ ಕಾಮಗಾರಿಗೂ ಅಗತ್ಯ ಬೇಕಾದ ಭೂಮಿಯ ವಿವರವನ್ನು ಸರ್ವೇ ನಂ.ಗಳ ಸಹಿತ ಸಲ್ಲಿಸುತ್ತಾರೆ. ಎಲ್ಲಾ ಶೇರಿ ಈ ಭೂಮಿಯ ವಿವರ ನೈಸೆಲ್ ಸಲ್ಲಿಸಿರುವ 12 ಬುಕ್ಲೆಟ್ಗಳಲ್ಲಿ ಅಡಗಿದೆ.

ಇವತ್ತು ಖೇಣಿ ಸಾಹೇಬರು ನಾವು ಸರ್ಕಾರಕ್ಕೆ ಸಲ್ಲಿಸರುವುದೇ ಒಂದು ಅಲೈನ್ಮೆಂಟು ಅದರಂತೆಯೇ ನಾವು ಒಮ್ಮೆ ಮಾತ್ರ ಅಗತ್ಯ ಭೂಮಿಯ ಸರ್ವೇ ನಂ.ಗಳನ್ನು ಸಲ್ಲಿಸಿದ್ದೇವೆ ಎನ್ನುತ್ತಾರಲ್ಲ? ಅದು ಇದೇ. ಆದರೆ ನೀವು ಇವತ್ತು ನೈಸ್ ರಸ್ತೆ ಹಾದು ಹೋಗುತ್ತಿರುವುದು ಈ ಪ್ರಾಂತ್ಯದಲ್ಲಲ್ಲವೇ ಅಲ್ಲ. ಇರಲಿ, ಅದು ಇನ್ನೊಂದು ದೊಡ್ಡ ಕಥೆ. ಅದಕ್ಕೆ ನಂತರ ಬರೋಣ. ಹೀಗೆ ಖೇಣಿ ಸಾಹೇಬರು ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ನಲ್ಲಿರುವ , ಸರ್ಕಾರದಿಂದ ಅನುಮೋದನೆ ಪಡೆದಿರುವ ಅಲೈನ್ಮೆಂಟಿಗೆ ಅನುಗುಣವಾಗಿ ಬಿಎಂಐಸಿಪಿಗೆ ಅಗತ್ಯ ಬೇಕಾದ ಭೂಮಿಯ ವಿವರಗಳನ್ನು ಸಲ್ಲಿಸಿದ್ದಾರೆ. ಅಲ್ಲಿಗೆ ಅವರೇ ಒಪ್ಪಿಕೊಂಡಂತೆ ನೈಸ್ ಯೋಜನೆಗೆ ಬೇಕಾಗಿರುವುದು ಇದೇ ಭೂಮಿ.

ರ್ನಯಸೆಲ್ ಕಂಪೆನಿ ನೀಡಿರುವ ಈ ಮಾಹಿತಿಯ ಆಧಾರದ ಮೇಲೆ ಸರ್ಕಾರದ ಮಟ್ಟದಲ್ಲಿ ಕೆಲಸ ಶುರುವಾಯಿತು. ಲೋಕೋಪಯೋಗಿ ಕಾರ್ಯದರ್ಶಿಗಳು ತಮಗೆ ಸಲ್ಲಿಸಲ್ಪಟ್ಟ ಈ ಮಾಹಿತಿಯ ಆಧಾರದ ಮೇಲೆ ಲೋಕೋಪಯೋಗಿ ಚೀಫ್ ಇಂಜಿನಿಯರ್ ಅವರಿಗೆ 16-03-1996ರಂದು ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ಕೊಡುವಂತೆ ಕೋರಿ ಪತ್ರ ಬರೆಯುತ್ತಾರೆ. ಅವರು ಇನ್ ಟರ್ನ್ ಲೋಕೋಪಯೋಗಿ ಇಲಾಖೆಯ ಡೆಪ್ಯೂಟಿ ಕಮೀಶನರ್ ಅವರಿಗೆ ಪತ್ರ ಬರೆಯುತ್ತಾರೆ. ಇದೇ ವಿಷಯವಾಗಿ ಅಶೋಕ ಖೇಣಿಯವರು 20 ಮೇ, 1996ರಂದು ಕೆಎಸ್ಐಐಡಿಸಿ ಅಧ್ಯಕ್ಷರಿಗೆ ಒಂದು ಪತ್ರ ಬರೆಯುತ್ತಾರೆ. ಕೆಎಸ್ಐಐಡಿಸಿಯಲ್ಲಿ ಮೇ 22ರಂದು ಈ ವಿಷಯವಾಗಿ ಒಮದು ಕೋರ್ ಗ್ರೂಪ್ ಮೀಟಿಂಗ್ ನಡೆಯುತ್ತದೆ. ಅಲ್ಲಿ ಬಿಎಂಐಸಿಪಿ ಯೋಜನೆಯನ್ನು ಕೆಎಸ್ಐಐಡಿಸಿಗಿಂತಲೂ, ಕೆಐಎಡಿಬಿ ಕಾಯ್ದೆಯನ್ವಯ ಜಾರಿ ಮಾಡಿದರೆ ಸುಲಭವಾಗುತ್ತದೆ ಎಂದು ಕೈ ತೊಳೆದುಕೊಳ್ಳುತ್ತದೆ.

ನವೆಂಬರ್ 22 ಮತ್ತು 26ರಂದು ಅಶೋಕ ಖೇಣಿ ಸಾಹೇಬರು ಲೋಕೋಪಯೋಗಿ ಕಾರ್ಯದರ್ಶಿಗಳಾದ ಸಿ.ಆರ್. ರಮೇಶ್ ಅವರಿಗೆ ಮತ್ತೆರಡು ಪತ್ರಗಳನ್ನು ಬರೆದು, ಬಿಎಂಐಸಿಪಿಗೆ ಅಗತ್ಯ ಬೇಕಾದ 6956 ಎಕರೆ ಸರಕಾರೀ ಭೂಮಿಯ ಹಸ್ತಾಂತರ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತಾರೆ. ಇದರ ಜೊತೆಗೆ ಬಿಎಂಐಸಿಪಿಗೆ ಅಗತ್ಯ ಬೇಕಾದ ಸರಕಾರೀ ಭೂಮಿಯ ಸಂಪೂರ್ಣ ವಿವರ ಸರ್ವೇ ನಂ.ಗಳ ಸಹಿತ ಸಲ್ಲಿಸಿರುತ್ತಾರೆ. ಅದೇ ದಿನ ಅಂದರೆ ನವೆಂಬರ್ 26, 1996 ರಂದು ಸಿ.ಆರ್.ರಮೇಶ್ ಅವರು ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಈ ಕೂಡಲೇ ಅಗತ್ಯ ಬೇಕಾದ ಸರಕಾರೀ ಭೂಮಿಯನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕಾಗಿ ಬರೆಯುತ್ತಾರೆ. ಈ ಕೂಡಲೇ ಸರ್ಕಾರದ ಮಟ್ಟದಲ್ಲಿ ಈ ಕುರಿತು ಒಂದು ಸಭೆ ನಡೆಯುತ್ತದೆ. ಲೋಕೋಪಯೋಗಿ ಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ, ಕೆಎಸ್ಐಐಡಿಸಿ ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ ಬಿಎಂಐಸಿಪಿ ಯೋಜನೆಗೆ ಅಗತ್ಯ ಬೇಕಾದ 6956 ಎಕರೆ ಸರಕಾರೀ ಭೂಮಿಯನ್ನು ಕಂಪೆನಿಗೆ ಹಸ್ತಾಂತರಿಸಲು ನಿರ್ಧರಿಸಲಾಯಿತು. ಈ ಸಂಬಂಧ ಫೈನಾನ್ಸ್ ಡಿಪಾರ್ಟ್ಮೆಂಟಿನ ಒಪ್ಪಿಗೆಯನ್ನೂ ಪಡೆದು 20-1-1997ರಂದು ಸರಕಾರೀ ಆದೇಶವೊಂದನ್ನು ಕೂಡ ಹೊರಡಿಸಲಾಯಿತು.

ಇದಾದ ಕೆಲವೇ ದನಗಳಲ್ಲಿ, ಅಂದರೆ ಏಪ್ರಿಲ್ 3, 1997 ರಂದು ಸರ್ಕಾರ ನ್ಯಸೆಲ್ ಕಂಪೆನಿಯ ಜೊತೆ ಫ್ರೇಂವರ್ಕ್ ಅಗ್ರೀಮೆಂಟಿಗೆ ಸಹಿ ಹಾಕಿತು. ಬಹುತೇಕ ಬದಲಾವಣೆಗಳು ನಡೆದದ್ದೇ ಆಗ. ನಾವು ಈ ಕುರಿತು ಕೂಲಂಕುಷವಾಗಿ ತಿಳಿದುಕೊಂಡಿದ್ದೇವೆ. ಆದ್ದರಿಂದ ಎಲ್ಲವನ್ನೂ ಮೆಲುಕು ಹಾಕುವುದು ಅನಾವಶ್ಯಕವಾದರೂ, ಭೂಮಿಯ ವಿಷಯದಲ್ಲಿ ಆದ ಬದಲಾವಣೆಗಳೇನು ಎಂಬುದನ್ನು ಸಂಕ್ಷಿಪ್ತವಾಗಿ ಮೆಲುಕು ಹಾಕುವುದು ಉತ್ತಮ. ನಿಮಗೆ ನೆನಪಿರುವುದೇ ಆದರೆ ಕಂಪೆನಿ ತನ್ನ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ನ ಟೇಬಲ್ 6.7ರಲ್ಲಿ ಸ್ಪಷ್ಟವಾಗಿ ದಾಖಲಿಸಿತ್ತು, ರಸ್ತೆಗೆ 5119.37 ಎಕರೆಗಳು ಅಗತ್ಯ ಎಂದು. ಇದಲ್ಲದೆ 7 ಟೌನ್ಷಿಪ್ಗಳಿಗೆ 20,092 ಎಕರೆಗಳು ಅಗತ್ಯವೆಂದು ತಿಳಿಸಿತ್ತು. ಆದರೆ ಸರ್ಕಾರ ಟೌನ್ಷಿಪ್ಗಳನ್ನು 7ರಿಂದ 5ಕ್ಕೆ ಇಳಿಸಿದ್ದರಿಂದ ಇದಕ್ಕಾಗಿ 13,194 ಎಕರೆಗಳು ಸಾಕೆಂದು ಹೈಲೆವೆಲ್ ಕಮಿಟಿ ಶಿಫಾರಸಿನ ಹಿನ್ನಲೆಯಲ್ಲಿ ಹೊರಡಿಸಿದ ಆದೇಶದಲ್ಲಿ ಸರ್ಕಾರ ಹೇಳಿಕೊಂಡಿದೆ. ಅಲ್ಲಿಗೆ ರಸ್ತೆ ಮತ್ತು ಟೌನ್ಷಿಪ್ಗಳೆರಡಕ್ಕೂ ಸೇರಿ ಮೂಲದಲ್ಲಿ ಅಗತ್ಯವಿದ್ದದ್ದು ಬರಿಯ 18,313 ಎಕರೆಗಳು.

ಆದರೆ ಫ್ರೇಂವರ್ಕ್ ಅಗ್ರೀಮೆಂಟಿನಲ್ಲಿ ಆಶ್ಚರ್ಯ ಕಾದಿತ್ತು. ಫ್ರೇಂವರ್ಕ್ ಅಗ್ರೀಮೆಂಟಿನ ಷೆಡ್ಯೂಲ್ 1ರಲ್ಲಿ ಪ್ರಾಜೆಕ್ಟಿಗೆ ಅಗತ್ಯ ಬೇಕಾದ ಭೂಮಿಯ ಪ್ರಮಾಣವನ್ನು ನಮೂದಿಸಲಾಗಿದೆ. ಅಲ್ಲಿ ಮಿಕ್ಕೆಲ್ಲವೂ ಮೊದಲಿನಂತೆಯೇ ಇದ್ದರೂ ರಸ್ತೆಗೆ 5119.37 ಎಕರೆಗಳ ಬದಲಿಗೆ 6999 ಎಕರೆಗಳು ಎಂದು ನಮೂದಾಗಿದೆ! ಅಂದರೆ ಕೇವಲ(!) 1880 ಎಕರೆಗಳಷ್ಟು ಹೆಚ್ಚುವರಿ ಭೂಮಿಯನ್ನು ಸರ್ಕಾರ ಕಂಪೆನಿಗೆ ಬಿಟ್ಟುಕೊಟ್ಟಿದೆ. ಆದರೆ ಯಾಕೆ? ಅದು ಉತ್ತರವೇ ಇಲ್ಲದ ಪ್ರಶ್ನೆ. ಹೀಗೆ ಹೆಚ್ಚುವರಿ ಭೂಮಿ ನೀಡುವುದರ ಪ್ರಸ್ತಾಪ ಇಡಿಯ ಫ್ರೇಂವರ್ಕ್ ಅಗ್ರೀಮೆಂಟಿನಲ್ಲಿ ಬೇರೆಲ್ಲೂ ಬರುವುದಿಲ್ಲ. ಷೆಡ್ಯೂಲ್ನಲ್ಲಿ ಕೂಡ ಈ ಹೆಚ್ಚುವರಿ ಭೂಮಿಗೆ ಯಾವುದೇ ವಿವರಣೆಗಳಿಲ್ಲ. ಅದಕ್ಕೊಂದು ಕಾರಣ, ಸರ್ವೇ, ಅನುಮೋದನೆಗಳು....ಊಹುಂ ಅದ್ಯಾವುದೂ ಇಲ್ಲ, ಸುಮ್ಮನೆ ಗಿಫ್ಟ್ ಏನೋ ಅನ್ನುವಂತೆ 1880 ಎಕರೆ ಹೆಚ್ಚುವರಿ ಭೂಮಿಯನ್ನು ಕಂಪೆನಿಗೆ ಕೊಡುವಂತಿರುವ ಒಪ್ಪಂದಕ್ಕೆ ಸರ್ಕಾರ ಸಹಿ ಹಾಕಿದೆ.

ಇಲ್ಲಿಂದ ಶುರುವಾಯಿತು ಸ್ವಾಮಿ ಬಿಎಂಐಸಿಪಿ ಯೋಜನೆಯು ಒಂದು ರಿಯಲ್ ಎಸ್ಟೇಟ್ ದಂಧೆಯಾಗಿ, ಡಿಜೆನರೇಟ್ ಆಗುವುದು. ಇನ್ನು ಮುಂದಕ್ಕೆ, ಬಿಎಂಐಸಿಪಿ ಯೋಜನೆಯ ಈ ನೈಸ್ ಪುರಾಣದಲ್ಲಿ ಕೇಳಿ ಬರುವುದೆಲ್ಲವೂ ಭೂಮಿ ನುಂಗುವ ಹೆಬ್ಬಾವಿನ ಉಪಮೆಯೇ! ಆ ಮಟ್ಟಿಗೆ ಯೋಜನೆ ಅಡ್ಡದಾರಿ ಹಿಡಿದುಬಿಟ್ಟಿತ್ತು.

ಮೇ 15 1997ರಂದು ಲೋಕೋಪಯೋಗಿ ಕಾರ್ಯದರ್ಶಿ ಸಿ.ಆರ್.ರಮೇಶ್ ಅವರು ವಿಶೇಷ ಆಸಕ್ತಿ ವಹಿಸಿ ಕೆಐಎಡಿಬಿಗೆ ಒಂದು ಪತ್ರ ಬರೆದು ಎಕ್ಸ್ಪ್ರೆಸ್ ವೇನ ದಾರಿಯಲ್ಲಿ ಇನ್ನೂ ಅನೇಕರು ತಮ್ಮ ತಮ್ಮ ಪ್ರಾಜೆಕ್ಟ್ಗಳನ್ನು ಸ್ಥಾಪಿಸಲು ಹವಣಿಸುತ್ತಿದ್ದಾರೆ, ಮತ್ತು ಇದೇ ಪರಿಧಿಯಲ್ಲಿ ಅನೇಕ ಒತ್ತುವರಿಗಳಾಗುತ್ತಿವೆ. ಇದನ್ನು ಕೆಐಎಡಿಬಿ ತಡೆಯಬೇಕು ಎಂದು ಮನವಿ ಮಾಡಿಕೋಳ್ಳುತ್ತಾರೆ. ಜೂನ್ 3, 1997ರಂದು ಇದೇ ಕ್ಯಾಪ್ಟನ್ ರಮೇಶ್ ಬೆಂಗಳೂರು ನಗರ, ಗ್ರಾಮಾಂತರ, ಮಂಡ್ಯ, ಮೈಸೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಕಾರ್ಯದರ್ಶಿ ಗಳಿಗೆ ಹೀಗೊಂದು ಪತ್ರ ಬರೆಯುತ್ತಾರೆ.
I am enclosing herewith a copy of the survey nos. covering the Bangalore - Mysore infrastructure Corridor Project alignment. This alignment has been approved by the state government.
In view of the government decision, it is required that the aforementioned survey nos. should not be alienated. It is required that action must be initiated immediately in the matter.

ಇದರ ಜೊತೆಗೆ ಬಿಎಂಐಸಿಪಿ ಯೋಜನೆಗೆ ಅಗತ್ಯ ಬೇಕಾದ ಭೂಮಿಯ ವಿವರವನ್ನೂ ಸರ್ವೇ ನಂ.ಗಳ ಸಹಿತ ಲಗತ್ತಿಸುತ್ತಾರೆ. ಫ್ರೇಂವರ್ಕ್  ಅಗ್ರೀಮೆಂಟ್ ಆದ ಬಳಿಕ ಅದರ ಅನುಷ್ಠಾನಕ್ಕೆಂದು ಒಂದು ಎಂಪವರ್ಡ್ ಕಮಿಟಿಯನ್ನು ರಚಿಸಲಾಗಿತ್ತು. ಅದರ ಮೊದಲ ಸಬೆ ನಡೆದದ್ದು, ಏಪ್ರಿಲ್ 29, 1997ರಂದು. ಈ ಸಬೆಗೆ ಅಂದಿನ ಮೂಖ್ಯ ಕಾರ್ಯದರ್ಶಿ ಬಿ.ಆರ್.ಪ್ರಭಾಕರರವರು ಅಧ್ಯಕ್ಷತೆ ವಹಿಸಿದ್ದರು. ಸಂಬಂಧಪಟ್ಟ ಇಲಾಖೆಗಳ ಎಲ್ಲಾ ಕಾರ್ಯದಶರ್ಿಗಳೂ ಹಾಜರಿದ್ದ ಈ ಸಭೆಗೆ ಅಶೋಕ ಖೇಣಿಯವರು ವಿಶೇಷ ಆಹ್ವಾನಿತರಾಗಿದ್ದರು. ಈ ಸಭೆಯಲ್ಲಿ ಅಶೋಕ ಖೇಣಿಯವರು ಅಗತ್ಯ ಭೂಮಿಯ ಸರ್ವೇ ನಂ.ಗಳ ಹೊಸ ಲಿಸ್ಟ್ ಒಂದನ್ನು ಸಲ್ಲಿಸಿದರಲ್ಲದೆ, ಈ ಲಿಸ್ಟ್ ಅನ್ನು ಮುಖ್ಯ ಕಾರ್ಯದರ್ಶಿ ಗಳು ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ರವಾನಿಸಬೇಕು ಎಂದು ನಿರ್ಧಾರ ಕೈಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು. ಸಭೆಯ ನಿರ್ಧಾರದಂತೆ 31-07-1997ರಂದು ಮುಖ್ಯ ಕಾರ್ಯದರ್ಶಿಗಳ ಕಛೇರಿಯಿಂದ ಸರಕಾರೀ ಆದೇಶವೊಂದನ್ನು ಹೊರಡಿಸಲಾಯಿತು. PWD 155 CRM 95. ಇದು ಹೇಗೆ ಹಗರಣವಾದೀತು? ಎಂದು ನೀವು ಕೇಳಬಹುದು. 


ಅಸಲಿಗೆ ಹಗರಣವಿರುವುದೇ ಇಲ್ಲಿ. ಅಶೋಕ ಖೇಣಿಯವರು ಪುನಃ ಸಲ್ಲಿಸಿದ್ದ ಸರ್ವೇ ನಂ.ಗಳ ಲಿಸ್ಟ್ ಏನಿತ್ತು, ಅದು ಖೊಟ್ಟಿಯಾಗಿತ್ತು. ಹೌದು ಈ ಹೊಸ ಲಿಸ್ಟ್ನಲ್ಲಿ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ ಅಥವಾ ಫ್ರೇಂವರ್ಕ್ ಅಗ್ರೀಮೆಂಟಿನಿಂದ ಹೊರಹೊಮ್ಮುವ ರಸ್ತೆಯ ಅಲೈನ್ಮೆಂಟಿಗಿಂತ ಹೊರತಾದ ಸುಮಾರು 17 ಹಳ್ಳಿಗಳನ್ನು ಬಿಎಂಐಸಿಪಿ ಪರಿಧಿಗೆ ಸೇರಿಸಲಾಗಿತ್ತು. ಅದು ಹೇಗೆ? ಅದಕ್ಕೆ ಖೇಣಿ ಸಾಹೇಬರು ಮಾತ್ರ ಉತ್ತರವಾಗಬಲ್ಲರು. ಈ ಹೊಸ ಲಿಸ್ಟ್ನಲ್ಲಿ 17 ಹೊಸ ಹಳ್ಳಿಗಳನ್ನು ಸೇರಿಸಿರುವುದನ್ನು ನಾವೇ ಹಳೆಯ ಸರ್ವೇ ನಂ.ಗಳು ಮತ್ತು ಈ ಲಿಸ್ಟ್ನಲ್ಲಿರುವ ಸರ್ವೇ ನಂ.ಗಳನ್ನು ತಾಳೆ ಹಾಕಿ ನೋಡಿದಾಗ ತಿಳಿಯುತ್ತದೆ. ಆದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹೇಗೆ ಇದನ್ನು ವೆರಿಫೈ ಕೂಡ ಮಾಡಿಸದೇ ಆದೇಶ ಹೊರಡಿಸಿಬಿಟ್ಟರು. ಅದೂ ಕೂಡ ಮಿಸ್ಟರಿಯೇ. ಅದಕ್ಕೂ ಸಹ ಅವರೊಬ್ಬರು ಮಾತ್ರ ಉತ್ತರವಾಗಬಲ್ಲರು. ಮುಖ್ಯ ಕಾರ್ಯದರ್ಶಿಗಳ ಕಛೇರಿಯಿಂದ ಹೊರಬಿದ್ದಿರುವ ಈ ಆದೇಶ ಇವತ್ತಿಗೂ ಜಾರಿಯಲ್ಲಿದೆ. ಈ ಆದೇಶ ಸ್ಪಷ್ಟವಾಗಿ ಸರ್ಕಾರದ ಹಿಂದಿನ ಅನೇಕ ಆದೇಶಗಳ ಉಲ್ಲಂಘನೆಯಾಗಿದೆಯಾದರೂ ಅದನ್ನು ಪ್ರಶ್ನಿಸುವವರಿಲ್ಲ. ಇಂದಿಗೂ ಹೀಗೆ ಅಕ್ರಮವಾಗಿ ವಶಪಡಿಸಿಕೊಂಡಿರುವ 17 ಹಳ್ಳಿಗಳ ಭೂಮಿ ಅಶೋಕ ಖೇಣಿಯವರ ಕಪಿ ಮುಷ್ಠಿಯಲ್ಲಿ ಭಧ್ರವಾಗಿದೆ. 

ಎಲ್ಲರೂ ನೋಡಲೇಬೇಕಾದ ಚಿತ್ರ - ಪೃಥ್ವಿ!


saw pruthvi movie yesterday. i was actually mislead by media reviews till yesterday. all media reviews are a sham and are paid to be so! its a wonderful movie both as an independent movie and in its script. its a very good movie showing the naked truth of bellary mining. a rare film that makes a statement, made with great concern, conviction and guts.


i was reminded of mani ratnams films! yes they have adopted his style of scripting. usually mani would be telling you a personal story of the central characters who are stricken with some turmoil. the movie doesn't go out of this frame. but in the backdrop he would have dealt with a major national issue of relevance! similarly pruthvi tells you the story of an upright IAS officer, his dreams, efficiency, honesty, family...but in the backdrop very effectively portrays bellary today in the most realistic way. he deals with the issue really very well. kudos to the team! 


as a movie also it has a very tight script, though with some glitches in the climax, every role is well defined , amazing camera work, good editing - especially a montage song, amazing!, hummable music good casting and acting. what else do you want from a movie? 


what i observed and felt happy was that even the front benchers were politically educated about one of the very major issues bothering our state today. a housefull theatre watched the movie spellbound! what an impact?! i am convinced that no media coverage on the issue, no articles, not even books can have such an impact on those who matter! 


thanks for the entire pruthvi team for making such a film. we all should support this effort for the benifit of both our society and kannada filmland. dayavittu hogi cinema nodi banni, bandu innoo nalku janakke heli.  

ಹಾಲಪ್ಪ ಇದೇನಪ್ಪ?


ಭಾನುವಾರದ ಬೆಳ್ಳಿಗ್ಗೆನೆ ಒಂದು ಪ್ರೈಮ್ ವಿಕೆಟ್ ಕಿತ್ತ ವಿಜಯ ಕರ್ನಾಟಕಕ್ಕೆ ಕುಡೋಸ್! ಅವರ ಹೆಸರೇ ಪ್ರಸ್ತಾಪವಾಗದೆ, ವಿರೋಧ ಪಕ್ಷಗಳು ಅವರ ರಾಜೀನಾಮೆಗೆ ಅಗ್ರಹಿಸದೆ ಹರತಾಳು ಹಾಲಪ್ಪನವರು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸಿರುವುದು ಯಾಕೋ, ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ ಹಾಗಾಗಲಿಲ್ಲವೇ? ಈ ಕ್ರಮದಿಂದ ಹಾಲಪ್ಪನವರು implicit ಆಗಿ ತಮ್ಮ guilt ಅನ್ನು ಅಂಗೀಕರಿಸಿದಂತಾಗಲಿಲ್ಲವೇ?



victims of halappa have come out & complained to the DGP, with requisite evidence of phone records & a one & half minute mobile video. but there are many incongruencies in the video. eradu dressu , eradu bedspreadu, video tegeda patiraya kooda videodalli feature agirodu....adare there are irrefutable phone records of mr.Halappa calling on them 116 times! halappa has said that he is ready for even narco analysis! both Mr. Halappa and the victims exude confidence . let us see..adare it was a good move on the govt. in making mr.Halappa resign immediately. opposition has nothing to say now.



adare CM yeddiyurappa giving halappa a clean chit, calling him a satvika manushya, nishthaavanta kaaryakarta, raajakiiya shadyantrakke bali....is shameful. when a CM gives a clean chit to a fellow so brazenly, then how far would the police investigation be impartial? is anybody's guess! Mr. yediyurappa is trying to sail through this crisis politically. no doubt he is a 24 hr. politician like Mr. Gouda. but this isnt just politics. a lady - housewife and mother of 2 has come out to say that she was sexually assalted by a minister. yediyurappa has the responsibility to gaurd the people's belief in the system & the conciousness of the society.

ಸ್ವತಂತ್ರ ಭಾರತದ ಅತಿ ದೊಡ್ಡ ಹಗರಣ - 60 ಸಾವಿರ ಕೋಟಿಗಳ spectrum scam

ಕಳೆದ ಮೂರು ತಿಂಗಳ ಹಿಂದೆ ಹಸ್ತಿನೆಯ ಅಧಿಕಾರದ ಗಲ್ಲಿಗಳಲ್ಲಿ ಹೊಸದೊಂದು ಸಂಚಲನ. ದೇಶದ ಟೆಲಿಕಾಂ ರಂಗದ ಮುಖ್ಯ ಕಛೇರಿ, ಕೇಂದ್ರ ಸರ್ಕಾರದ ಟೆಲಿಕಾಂ ಸಚಿವರ ಕಛೇರಿಯನ್ನೂ ಒಳಗೊಂಡ ಸಂಚಾರ ಭವನ್ ಮತ್ತು ದೇಶಾದ್ಯಂತ 19 BSNL ಕಛೇರಿಗಳ ಮೇಲೆ ಸಿಬಿಐ ದಾಳಿ! ಈ ಮೊಬೈಲ್ ಕಂಪೆನಿಗಳಿಗೆ ಸರ್ಕಾರ ಪರವಾನಗಿ ಮತ್ತು ಮೊಬೈಲ್ ಸೇವೆಗೆ ಬೇಕಾದ Spectrum ಅನ್ನು ಪೂರೈಸುತ್ತದೆ. 2008ರ ಜನವರಿಯಲ್ಲಿ ಟೆಲಿಕಾಂ ಇಲಾಖೆಯು, ಪರವಾನಗಿ ಮತ್ತು Spectrumನ್ನು ಹರಾಜು ಹಾಕುವ ತನ್ನ ಎಂದಿನ ವೈಖರಿಯನ್ನು ಅನುಸರಿಸದೆ, first come first serve, ಅಂದರೆ ಮೊದಲು ಬಂದವರಿಗೆ ಆದ್ಯತೆಯಂತೆ Spectrumನ್ನು ಕೊಟ್ಟುಕಳಿಸಿದೆ, ಅದೂ 2001ರ ಬೆಲೆಗಳಿಗೆ! ಒಂದು ಅಂದಾಜಿನಂತೆ ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟ-60 ಸಾವಿರ ಕೋಟಿಗಳು! ಬಹುಶಃ ಇದು ಭಾರತದ ಅತಿ ದೊಡ್ಡ ಹಗರಣ. ಆದರೆ ಡಿಎಂಕೆಯ, ಕೇಂದ್ರ ಟೆಲಿಕಾಂ ಸಚಿವ ಅಂದಿಮುತ್ತು ರಾಜಾ ಮತ್ತು ಯುಪಿಎ ಸರ್ಕಾರ ಇದನ್ನು ಅಸಲು ಹಗರಣವೆಂದೇ ಗುರುತಿಸುತ್ತಿಲ್ಲ. ಆದರೆ 2008ರ ಅಕ್ಟೋಬರ್ನಲ್ಲಿ ಕಮ್ಯೂನಿಸ್ಟ್ ಪಕ್ಷಗಳು ಈ ಹಗರಣವನ್ನು ಬಯಲುಗೊಳಿಸಿ ರಾಜಕೀಯವಾಗಿ ಹೋರಾಟಕ್ಕಿಳಿದವು. ಫಲವಾಗಿ ಸೆಂಟ್ರಲ್ ವಿಜಿಲೆನ್ಸ್ ಕಮೀಷನ್ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತು. ಈ ಕಮಿಟಿಯು ಟೆಲಿಕಾಂ ಇಲಾಖೆ ಪರವಾನಗಿ ಮತ್ತು Spectrum ಅನ್ನು ಮೊದಲು ಬಂದವರಿಗೆ ಆದ್ಯತೆಯಂತೆ 2001ರ ಬೆಲೆಗಲಿಗೆ ಬಿಕರಿ ಮಾಡಿರುವುದರಲ್ಲಿ ಹಗರಣದ ವಾಸನೆಯೊಡೆಯುತ್ತಿದ್ದು, ಈ ವಿಚಾರವಾಗಿ ಸಿಬಿಐ ಕೂಲಂಕುಷ ತನಿಖೆ ನಡೆಸಬೇಕೆಂದು ಶಿಫಾರಸು ಮಾಡಿತ್ತು. ಈ ಶಿಫಾರಸಿನನ್ವಯ ಸಿಬಿಐ ಟೆಲಿಕಾಂ ಇಲಾಖೆಯ  ಅಧಿಕಾರಿಗಳು ಮತ್ತು ಖಾಸಗೀ ಕಂಪೆನಿಗಳ ವಿರುದ್ಧ ಭ್ರಷ್ಟಾಚಾರ ನಿರ್ಮೂಲನಾ  ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿಕೊಂಡು, ಪೂರಕವಾಗಿ ಈ ದಾಳಿಗಳನ್ನು ನಡೆಸಿತ್ತು. 


ಈಗ ಆ ತನಿಖೆಯ ಒಂದೊಂದೇ ಸುದ್ದಿ ಹೊರಬರುತ್ತಿದ್ದಂತೆ ಪಾರ್ಲಿಮೆಂಟ್ ಎಂದಿನಂತೆ ಫಿಶ್ ಮಾರ್ಕೆಟ್ ಆಗತೊಡಗಿದೆ. ಇದರ ಕುರಿತು ಹೆಚ್ಚು ಮಾತನಾಡುತ್ತಿರುವುದೆಂದರೆ ಅದು ಎಡಪಕ್ಷಗಳೇ. ಅವರು ಈ ಹಗರಣದ ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ. ಸೀತಾರಾಂ ಯೆಚೂರಿಯವರು, 18-11-2008ರಂದೇ ಪ್ರಧಾನಿಗಳನ್ನುದ್ದೇಶಿಸಿ ಬಹಿರಂಗ ಪತ್ರ ಬರೆದು ಈ ನಿಟ್ಟಿನಲ್ಲಿ ತನಿಖೆಗೆ ಆದೇಶಿಸಬೇಕೆಂದು ಮತ್ತು ಈಗ ಕೊಡಮಾಡಿರುವ ಪರವಾನಗಿಗಳನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದರು. ಇನ್ನು ಈ ಕುರಿತು ಅತ್ಯಂತ ದೊಡ್ಡ ದನಿಯೆತ್ತುತ್ತಿರುವವರು, ಪ್ರಧಾನ ಪ್ರತಿಪಕ್ಷವಾದ ಬಿಜೆಪಿ. ತರೂರ್ ರಾಜೀನಾಮೆಯಿಂದ ಉತ್ತೇಜಿತಗೊಂಡಿದ್ದ ಬಿಜೆಪಿಯನ್ನು ಕಾಂಗ್ರೆಸ್ ರೆಡ್ಡಿಗಳ ಹೆಸರು ಹೇಳಿ ಅವರ ಉಬ್ಬಿದ ಬಲೂನಿಗೆ ಸೂಜಿ ಚುಚ್ಚಿತ್ತು. ಹೌದಾ ಹಾಗಾದರೆ ಇನ್ನೊಂದು ಸವಾಲ್ ಎಂದು ಈ ಬಾರಿಯ ಪಾರ್ಲಿಮೆಂಟ್ ಅಧಿವೇಶನದಲ್ಲಿ ಸಿಬಿಐ ಹೊರಗೆಡವಿದ ಸತ್ಯಗಳನ್ನಿಟ್ಟುಕೊಂಡು ಅಂದಿಮುತ್ತು ರಾಜಾನ ರಾಜೀನಾಮೆಗೆ ಆಗ್ರಹಿಸುತ್ತಿದೆ.


ಅಸಲಿಗೆ ಏನಿದು ಹಗರಣ? ಇದರಲ್ಲಿ ಯಾರ್ಯಾರ ಕೈವಾಡವಿದೆ? Spectrum ಅಂದರೇನು? ಹೀಗೆ ನಿಮ್ಮ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳೇಳಬಹುದು. ಎಲ್ಲದಕ್ಕೂ ಉತ್ತರವಾಗಿ ಈ ಲೇಖನ. ಇಂದು ಭಾರತದ ಟೆಲಿಕಾಂ ರಂಗದಲ್ಲಿ ಖಾಸಗೀ ಕಂಪೆನಿಗಳ ಪಾಲು ಬಹುದೊಡ್ಡದು. ಸರ್ಕಾರವೇನಿದ್ದರೂ ಕಂಪೆನಿಗಳ ಮಧ್ಯೆ ಆರೊಗ್ಯಕರ ಸ್ಪರ್ಧೆಯನ್ನು ಕಾಪಾಡುವ ರೆಗ್ಯೂಲೇಟರ್ ಅಷ್ಟೇ. ಈ ಟೆಲಿಕಾಂ ಕಂಪೆನಿಗಳು ವ್ಯವಹರಿಸಲು ಬೇಕಾಗಿರುವ ಪರವಾನಗಿ ಮತ್ತು Spectrumನ ಪೂರೈಕೆ ಕೇಂದ್ರ ಸರ್ಕಾರದ ಜವಾಬ್ದಾರಿ. ಮೊಬೈಲೊಂದರ ಕೆಲಸಕ್ಕೆ ಗಾಳಿ ಮತ್ತು electromagnetic ತರಂಗಗಳೇ ಮಾಧ್ಯಮ. ಈ ತರಂಗಗಳು ಅವುಗಳ ಫ್ರೀಕ್ವೆನ್ಸಿಯಾಧಾರದಲ್ಲಿ ವ್ಯವಸ್ಥಿತವಾಗಿ ಜೋಡಣೆಯಾದಾಗ ಅದೇ Spectrum. ಇದು ದೇಶದ ಅತ್ಯಮೂಲ್ಯ ನೈಸರ್ಗಿಕ ಸಂಪತ್ತಾಗಿರುವುದರಿಂದ ಇದರ ಸಂಪೂರ್ಣ ಒಡೆತನ ಸರ್ಕಾರದ್ದು. ಸರ್ಕಾರವು ಕಂಪೆನಿಗಳಿಗೆ ಪರವಾನಗಿ ಮತ್ತು Spectrumನ್ನು ನೀಡುತ್ತದೆ. 1991 ರಿಂದ Spectrum ಅನ್ನು ಹರಾಜು ಹಾಕಲಾಗುತ್ತಿದೆ. ಆದರೆ ಈ ಬಾರಿ Spectrumನ್ನು ಹರಾಜು ಹಾಕದೆ, ಮೊದಲು ಬಂದವರಿಗೆ ಆದ್ಯತೆಯಂತೆ ವಿತರಿಸಲಾಯಿತು, ಅದೂ 2001ರ ಬೆಲೆಗಳಿಗೆ!! 2001ರಲ್ಲಿ 4  ಮಿಲಿಯನ್ ಗ್ರಾಹಕರಿದ್ದರೆ, 2008 ರಲ್ಲಿ 300 ಮಿಲಿಯನ್ ಗ್ರಾಹಕರಿದ್ದರು! ತಿಂಗಳಿಗೆ 8-9 ಮಿಲಿಯನ್ ನೂತನ ಗ್ರಾಹಕರನ್ನು ಸೇರಿಸಿಕೊಳ್ಳುತ್ತಿರುವ ಮಾರುಕಟ್ಟೆಯ ಪರವಾನಗಿಯನ್ನು 7 ವರ್ಷಗಳ ಹಿಂದಿನ ಬೆಲೆಗಳಿಗೆ ಬಿಕರಿ ಮಾಡಲಾಗಿದೆ!


2008ರ ಜನಿವರಿ 10ರಂದು ಸಂಚಾರ್ ಭವನವು ಬೃಹತ್ ನಾಟಕವೊಂದಕ್ಕೆ ವೇದಿಕೆಯಾಯಿತು. ಅಂದು ಮಧ್ಯಾಹ್ನ 2:45ಕ್ಕೆ ಇಲಾಖೆಯು ತನ್ನ ವೆಬ್ಸೈಟಿನಲ್ಲಿ 3:30ರಿಂದ 4:30ರೊಳಗೆ Spectrumನ್ನು ವಿತರಿಸಲಾಗುವುದೆಂದೂ, ಅಷ್ಟರೊಳಗಾಗಿ ಪರವಾನಗಿ ಪಡೆಯಲಿಚ್ಚಿಸುವವರು ಅಗತ್ಯ ಹಣ ಮತ್ತು ದಾಖಲೆಗಳನ್ನು ಪೂರೈಸಬೇಕೆಂದು ಮತ್ತು ಮೊದಲು ಪಾವತಿಸಿದವರಿಗೆ ಆದ್ಯತೆಯೆಂದು ಪ್ರಕಟಿಸಿತು. every second counts! ಆದ ನೂಕುನುಗ್ಗಲನ್ನು ತಡೆಯಲು ಅನೇಕರು ಬೌನ್ಸರ್ಗಳಿಂದ ಹೊರಗೆಸಯಲ್ಪಟ್ಟರು. ಸಾವಿರಾರು ಕೋಟಿಗಳ ವ್ಯವಹಾರದ Spectrum ಅನ್ನು ವಿತರಿಸಲು ಇದಾ ವಿಧಾನ? ಇದರಲ್ಲಿ ಪಾರದರ್ಶಕತೆಯಾದರೂ ಎಲ್ಲಿದೆ? ಮುಕ್ಕಾಲು ಘಂಟೆಯೊಳಗೆ ಒಂದೂವರೆ ಸಾವಿರ ಕೋಟಿಗಳ ಹಣವನ್ನು ಪಾವತಿಸಬೇಕೆಂಬುದು ಎಷ್ಟು ಸರಿ? ಆದರೂ ಕಂಪೆನಿಗಳು ಈ ಸಮಯದೊಳಗೇ ಇಷ್ಟೊಂದು ಹಣವನ್ನು ಕಟ್ಟಿದ್ದಾವೆಂದರೆ ಅವುಗಳಿಗೆ ಪೂರ್ವ ಮಾಹಿತಿಯಿಲ್ಲದೇ ಇತ್ತೇ? ಹೀಗೆ ಪರವಾನಗಿ ಪಡೆದ ಕಂಪೆನಿಗಳ ಸಂಖ್ಯೆ ಹದಿಮೂರು. 
1)Vodafone Essar cellular Ltd., 2)Idea Cellular Ltd., 3)Bharti Airtel Ltd., 4)Datacom Solutions Pvt. Ltd., 5)Reliance Communications Ltd., 6)S Tel Ltd., 7)Tata Teleservices Ltd., 8)Loop Telecom Private Limited.9)Unitech Wireless Pvt. Ltd., 10)Swan Telecom Pvt. Ltd., 11)Spice Communication Ltd., 12)Allianz Infratech (P) Ltd.,13) Azare Properties Ltd. 


ಈ ಕಂಪೆನಿಗಳ ಪಟ್ಟಿಯಲ್ಲಿ ಹಲವಾರು ರಿಯಲ್ ಎಸ್ಟೇಟ್ ಕಂಪೆನಿಗಳಿವೆ. ಇವುಗಳಿಗೆ ಟೆಲಿಕಾಂ ಕ್ಷೇತ್ರದಲ್ಲಿ ಯಾವುದೇ ಅನುಭವ ಇಲ್ಲ. ಈ ಕಂಪೆನಿಗಳಿಗೆ ತಮ್ಮ ಮೊಬೈಲ್ ಸೇವೆ ಪ್ರಾರಂಭಿಸಲು infrastructure ಇಲ್ಲ. ಉದಾ. ಯೂನಿಟೆಕ್ ವೈರ್ಲೆಸ್ ಲಿ., ಅಜಾರೇ ಪ್ರಾಪರ್ಟೀಸ್  ಲಿ.,ಸ್ವಾನ್ ಟೆಲಿಕಾಂ ಲಿ. .ಹಲವರ ಮೂಗಿಗೆ ಹೆಗ್ಗಣ ಸತ್ತ ವಾಸನೆ ಬಡಿಯಲಾರಂಭಿಸಿತ್ತು.


ಈ Spectrumನ ಮಾರುಕಟ್ಟೆ ಬೆಲೆಯ ಅಂದಾಜು ಸಿಗಲು ಅಕ್ಟೋಬರ್ವರೆಗೆ ಕಾಯಬೇಕಾಯಿತು. ಆಗ Spectrumನ್ನು ಪಡೆದಿದ್ದ ಎರಡು ಕಂಪೆನಿಗಳು ಅವುಗಳ ಹಿಡಿತವನ್ನು ವಿದೇಶೀ ಕಂಪೆನಿಗಳಿಗೆ ಮಾರಿದವು. ಯೂನಿಟೆಕ್ ವೈರ್ಲೆಸ್ಗೆ ದೊರೆತಿದ್ದುದು ಪ್ಯಾನ್ ಇಂಡಿಯಾದ ಪರವಾನಗಿ, 1,651 ಕೋಟಿಗಳಿಗೆ. ಈ ಕಂಪೆನಿಯು ನಾರ್ವೆಯ ಟಲೆನಾರ್ಗೆ ಶೇ. 60 ರಷ್ಟು ತನ್ನ ಹಿಡಿತವನ್ನು ಮಾರಿದ್ದು 6120 ಕೋಟಿಗಳಿಗೆ! ಈ ಲೆಕ್ಕದಂತೆ ಇದರ ಒಟ್ಟು ಬೆಲೆಯು 10,200 ಕೋಟಿಗಳಿಗೇರುತ್ತದೆ. ಅಂದರೆ ಈ ಕಂಪೆನಿಯ ನಿವ್ವಳ ಲಾಭ 8,549 ಕೊಟಿಗಳು. ಅಷ್ಟೂ ಬೊಕ್ಕಸಕ್ಕೆ ನಷ್ಟ. ಇದೇ ಇಂದು ಯೂನಿನಾರ್ ಆಗಿ ನಿಮ್ಮ ಮುಂದೆ ನಳನಳಿಸುತ್ತಿದೆ. ಇನ್ನು ಸ್ವಾನ್ ಟೆಲಿಕಾಂ. ಕಂಪೆನಿಯು 13 ಸರ್ಕಲ್ಗಳ ಪರವಾನಗಿಯನ್ನು 1,537 ಕೋಟಿಗಳಿಗೆ ಪಡೆದುಕೊಂಡಿತ್ತುಇದು ಯು.ಎ.ಇದ ಎಟಿಸಲಾಟ್ಗೆ ತನ್ನ ಶೇ.45 ರಷ್ಟು ಹಿಡಿತವನ್ನು ಮಾರಿದೆ- 4,500 ಕೋಟಿಗಳಿಗೆ. ಹಾಗಾದರೆ ಈ ಲೆಕ್ಕದ ಪ್ರಕಾರ Spectrumನ ಒಟ್ಟು ಬೆಲೆ - ಅಂದಾಜು 10,000 ಕೋಟಿಗಳು. ಹೀಗೆ ಲೆಕ್ಕ ಹಾಕಿದರೆ ಬರಿಯ ಯೂನಿಟೆಕ್ ಮತ್ತು ಸ್ವಾನ್ಗಳಿಂದ ಸರ್ಕಾರಕ್ಕಾದ ನಷ್ಟ ಸುಮಾರು 16 ಸಾವಿರ ಕೋಟಿಗಳು. ಇದೇ ಅಂದಾಜನ್ನು ನಾವು ಇತರೆ ಕಂಪೆನಿಗಳ ಪರವಾನಗಿಗಳಿಗೂ ವಿಸ್ತರಿಸಿದರೆ ನಮ್ಮ ಮುಂದೆ ಬಂದು ನಿಲ್ಲುವುದೇ 60 ಸಾವಿರ ಕೋಟಿಗಳ ನಷ್ಟ ಎಂಬ ಮೊತ್ತ. ಈ ಮೊತ್ತ ಅಂದಾಜು ಕರ್ನಾಟಕದ ಬಡ್ಜೆಟ್ನಷ್ಟು! ಈಗ ಅರ್ಥವಾಯಿತಲ್ಲ ಈ ಹಗರಣದ ಆಳ - ಅಗಲ. ಇದು ಖಂಡಿತವಾಗಿಯೂ ಭಾರತ ಇತಿಹಾಸದ ಅತಿ ದೊಡ್ಡ ಹಗರಣ. 


ಈ ಸ್ವಾನ್ ಟೆಲಿಕಾಂ ಕಂಪೆನಿಯದು ಹಗರಣದಲ್ಲೊಂದು ಉಪ ಹಗರಣ. ಈ ಕಂಪೆನಿಯ ಪರ ರಾಜಾ ವಿಶೇಷ ಕಾಳಜಿ ವಹಿಸಿದಂತಿದೆ. ಸ್ವಾನ್ ಟೆಲಿಕಾಂ ಕಂಪೆನಿಯನ್ನು ಮೊದಲು ಪ್ರಾರಂಭಿಸಿದವನು ಅನಿಲ್ ಅಂಬಾನಿ. ನಂತರ ಈ ಕಂಪೆನಿಯನ್ನು ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಡೈನಮಿಕ್ಸ್ ಬಿಲ್ವಾಸ್ ಗ್ರೂಪ್ನವರು ಟೇಕೋವರ್ ಮಾಡಿಕೊಂಡರು. ಇದಕ್ಕೂ ರಾಜಾರವರ ಆಶೀರ್ವಾದವಿತ್ತು ಅಂತ ಸುದ್ದಿ. 13 ಸರ್ಕಲ್ಗಳಲ್ಲಿ 1,537 ಕೋಟಿಗಳಿಗೆ ಪರವಾನಗಿ ಮತ್ತು Spectrumನ್ನು ಪಡೆದ ಸ್ವಾನ್ ಟೆಲಿಕಾಂ ಮತ್ತು ರಾಜಾ ಸಂಬಂಧ ಅಲ್ಲಿಗೇ ನಿಂತಂತೆ ಕಾಣುವುದಿಲ್ಲ. 2008ರ ಸೆಪ್ಟೆಂಬರ್ 13 ರಂದು, ಸ್ವಾನ್ ಟೆಲಿಕಾಂ ಎಟಿಸಲಾಟ್ಗೆ ತನ್ನ ಹಿಡಿತ ಮಾರುವುದಕ್ಕಿಂತಲೂ ಕೇವಲ ಹತ್ತು ದಿನಗಳ ಮೊದಲು, ಸ್ವಾನ್ನೊಂದಿಗೆ BSNL  ಇಂಟ್ರಾ ಸರ್ಕಲ್ ರೋಮಿಂಗ್ ಡೀಲ್ ಎಂಬ ಒಪ್ಪಂದವೊಂದಕ್ಕೆ ಸಹಿ ಹಾಕುತ್ತದೆ. ಇದರನ್ವಯ BSNL ತನ್ನ infrastructure ಮತ್ತು Spectrum ಅನ್ನು ಸ್ವಾನ್ ಟೆಲಿಕಾಂನೊಂದಿಗೆ ಹಂಚಿಕೊಳ್ಳಲಿದೆ. ಇದಕ್ಕಾಗಿ ಸ್ವಾನ್ ಟೆಲಿಕಾಂ ಪ್ರತಿ ಕರೆಗೆ 52 ಪೈಸೆ, ಕೊಡಬೇಕೆಂದು BSNLನ ಹಿರಿಯರು ತೀರ್ಮಾನಿಸಿದ್ದರು. ಆದರೆ ಆಶ್ಚರ್ಯದ ಸಂಗತಿಯೆಂದರೆ ಒಪ್ಪಂದದಲ್ಲಿ ಇದರ ಪ್ರಸ್ತಾಪವೇ ಇಲ್ಲ! BSNL ಸ್ವಾನ್ನೊಂದಿಗೆ ಈ ರೀತಿಯ ಒಪ್ಪಂದಕ್ಕೆ ಸಹಿ ಹಾಕಲು ರಾಜಾ ಕಾರಣವಾಗಿದ್ದರೆಂಬುದು ಗುಸುಗುಸು. ಈ ಒಪ್ಪಂದವಾದ ಹತ್ತೇ ದಿನಗಳಿಗೆ ಸ್ವಾನ್ ಟೆಲಿಕಾಂ ಎಟಿಸಲಾಟ್ಗೆ ತನ್ನ ಶೇ.45ರಷ್ಟು ಹಿಡಿತವನ್ನು 4500 ಕೋಟಿಗಳಿಗೆ ಮಾರಿತು. ಸ್ವಾನ್ಗೆ ಇಂತಹುದೊಂದು ಉತ್ತಮ ಮೊತ್ತ ಸಿಗುವಲ್ಲಿ BSNLನೊಂದಿಗಿನ ಒಪ್ಪಂದ ಪ್ರಮುಖ ಪಾತ್ರ ವಹಿಸಿತ್ತು. ಇದಕ್ಕೆ ಪ್ರತ್ಯುಪಕಾರವಾಗಿ ರಾಜಾ ಅವರಿಗೆ ತೀರ ಆಪ್ತರು ನಿರ್ದೇಶಕರಾಗಿರುವ ಷೆಲ್ ಕಂಪೆನಿಯೊಂದಕ್ಕೆ, ಸ್ವಾನ್ ಟೆಲಿಕಾಂ 380 ಕೋಟಿಗಳ ಬೆಲೆ ಬಾಳುವ ಷೇರ್ಗಳನ್ನು ನಿಯತಗೊಳಿಸಿದೆಯೆಂಬುದು ಅಲ್ಲಲ್ಲಿ ಕೇಳಿಬರುತ್ತಿರುವ ಸುದ್ದಿ. 


ಹೌದು ಈ ಎಲ್ಲಾ ಆರೋಪಗಳನ್ನು ರಾಜಾ ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ರಾಜಾ ಇದನ್ನು ನಾಲ್ಕು ರೀತಿಯಲ್ಲಿ ಸಮರ್ಥಿಸಿಕೊಳ್ಳ ಹೊರಡುತ್ತಾರೆ. ಮೊದಲಿಗೆ ಅವರು ಇದನ್ನು ಒಂದು ಹಗರಣವೆಂದೇ ಗುರುತಿಸುವುದಿಲ್ಲ. ಅವರ ಪ್ರಕಾರ Spectrum ಅನ್ನು ಹರಾಜು ಹಾಕದೆ ಮೊದಲು ಬಂದವರಿಗೆ ಆದ್ಯತೆಯಂತೆ ವಿತರಿಸಿರುವುದು ಆಮ್ ಆದ್ಮಿಯನ್ನು ದೃಷ್ಟಿಯಲ್ಲಿಟ್ಟುಕೊಂಡು! ಟೆಲಿಕಾಂ ಕಂಪೆನಿಗಳಿಗೆ Spectrum ದುಬಾರಿಯಾದರೆ ಅವರು ಅದನ್ನು ಗ್ರಾಹಕರ ಮೇಲೆ ಹೊರಿಸುತ್ತಾರೆ. ಗ್ರಾಹಕರ ಮೇಲಿನ ಈ ಹೊರೆಯನ್ನು ತಪ್ಪಿಸಲು ಈ ಕ್ರಮ! ರಾಜಾರವರು ತಮ್ಮ ಕ್ರಮಗಳ ಮೇಲೆ ಇಂಥದೊಂದು ಸದ್ದುದೇಶವನ್ನು ಆಪಾದಿಸಿಕೊಳ್ಳುತ್ತಾರಲ್ಲ ಅದು ಈಡೇರಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕು. ಪರವಾನಗಿ ಪಡೆದ ಯಾವ ಕಂಪೆನಿಗಳೂ ಸೇವೆಯನ್ನೇ ಆರಂಭಿಸದಿರುವಾಗ ಇನ್ನು ಗ್ರಾಹಕರಿಗೆ ಲಾಭವೆಲ್ಲಿಯದು? ಅವರು ಹೇಳುವ ಲಾಭವೆಲ್ಲಾ ಈ ಖಾಸಗೀ ಕಂಪೆನಿಗಳ ಬ್ಯಾಲೆನ್ಸ್ ಷೀಟ್ಗಳಲ್ಲಿ ರರಾಜಿಸ್ತಾ ಇದೆ. ಮತ್ತೊಂದು ರೀತಿಯಲ್ಲಿ ಅವರನ್ನವರು ಸಮರ್ಥಿಸಿಕೊಳ್ಳುತ್ತಾ, ಹೋರಾಟಗಾರನ ವೇಷ ತೊಡುತ್ತಾರೆ. ಭಾರತದ ಟೆಲಿಕಾಂ ರಂಗವನ್ನು ಕೆಲವೇ ಕಂಪೆನಿಗಳು ಆಳುತ್ತಿದ್ದು, ಇವು ಇಂದು ಒಂದು ಕಾರ್ಟೆಲ್ ಆಗಿ ರೂಪುಗೊಂಡಿವೆ. ಈ ರಂಗದಲ್ಲಿ ಸ್ಪರ್ಧಾತ್ಮಕತೆ ತರಲು ತಾನು ಮೊದಲು ಬಂದವರಿಗೆ ಆದ್ಯತೆಯಂತೆ ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಇದನ್ನು ಸಹಿಸದ ಈ ಕಾರ್ಟೆಲ್ ಇದನ್ನೇನೋ ಹಗರಣವೆಂಬಂತೆ ಚಿತ್ರಿಸುತ್ತಿವೆ ಅಂತಾರೆ. ಸರಿ ಸ್ವಾಮಿ ನಿಮ್ಮ `ಲೇಪಿತ' ಉದ್ದೇಶವನ್ನು ಒಪ್ಪೋಣ. ಆದರೆ ಅದಕ್ಕಾಗಿ ಟೆಲಿಕಾಂ ಕ್ಷೇತ್ರದಲ್ಲಿ ಯಾವುದೇ ಅನುಭವವಿಲ್ಲದ, ಎಳ್ಳಷ್ಟೂ infrastructure ಇಲ್ಲದ ರಿಯಲ್ ಎಸ್ಟೇಟಿಗರಿಗೆ ಅತ್ಯಮೂಲ್ಯವಾದ Spectrum ಅನ್ನು 2001ರ ಬೆಲೆಗಲಿಗೆ ಬಿಕರಿ ಮಾಡಿಬಿಡುವುದೆ? ಹೋಗಲಿ ಈಗ ನಿಮ್ಮ ಉದ್ದೇಶ ಈಡೇರಿದೆಯೇ? ಅದೆಲ್ಲ ಇರಲಿ ಸ್ವಾಮಿ ನೀವು ಆಪಾದಿಸಿಕೊಳ್ಳುವ ಇದೇ ಸದುದ್ದೇಶಗಳಿಗಾಗಿ ನೀವ್ಯಾಕೆ 3G Spectrum ಅನ್ನು ಮೊದಲು ಬಂದವರಿಗೆ ಆದ್ಯತೆಯಂತೆ ವಿತರಿಸುತ್ತಿಲ್ಲ? ಯಾಕೆ ಹರಾಜಿಗೆ ಮನಸೋತಿದ್ದೀರಾ? 


ಇಂಥ ಯಾವುದೇ ಸಮರ್ಥನೆ ಕೈಗೂಡದಾದಾಗ ರಾಜಾ ಹೇಳುವುದು ಒಂದೇ ಮಾತು. ತಾನು ನಿಯಮಗಳ ಪ್ರಕಾರ ನಡೆದುಕೊಂಡಿರುವುದಾಗಿಯೂ, ಟೆಲಿಕಾಂ ರಂಗದ ವಾಚ್ ಡಾಗ್ ಟ್ರಾಯ್ನ ಶಿಫಾರಸುಗಳನ್ನು ಅಮಲು ಮಾಡಿರುವುದಾಗಿಯೂ ಹೇಳುತ್ತಾರೆ. ಇದೂ ಕೂಡ ದಾರಿ ತಪ್ಪಿಸುವ ಕಾರ್ಯಕ್ರಮವೇ. ಟ್ರಾಯ್ನ ಶಿಫಾರಸುಗಳಲ್ಲಿ ರಾಜಾ ತಮಗನುಕೂಲವೆನಿಸಿದ್ದನ್ನು ಚಿತ್ರಾನ್ನದಲ್ಲಿ ಕಡಲೆಬೀಜ ಆರಿಸಿದಂತೆ ಆರಿಸಿಕೊಂಡಿದ್ದಾರೆ. ಅಂದಿನ ಟ್ರಾಯ್ ಅಧ್ಯಕ್ಷ ನ್ರಿಪೇಂದ್ರ ಮಿಶ್ರಾ Spectrum ಅನ್ನು ಮೊದಲು ಬಂದವರಿಗೆ ಆದ್ಯಂತೆಯಂತೆ ವಿತರಿಸುರುವುದು ಮತ್ತು ಅದನ್ನು ಟ್ರಾಯ್ ಶಿಫಾರಸು ಎಂಬಂತೆ ಚಿತ್ರಿಸಿರುವುದನ್ನು ಪತ್ರ ಬರೆದು ಪ್ರತಿಭಟಿಸಿದ್ದಾರೆ. ಇದಕ್ಕಾಗಿ ಅವರನ್ನು ಕೆಲವೇ ದಿನಗಳಲ್ಲಿ ಅಲ್ಲಿಂದ ಎತ್ತಂಗಡಿ ಮಾಡಲಾಯಿತು. ಇನ್ನು ಮಾತೆತ್ತಿದರೆ ರಾಜಾ ಈ ವಿಚಾರ ಪ್ರಧಾನಿಯೂ ಸೇರಿದಂತೆ ಇಡೀ ಕ್ಯಾಬಿನೆಟ್ಗೇ ಗೊತ್ತಿತ್ತು, ನನ್ನನ್ನೇ ಏಕೆ ಟಾರ್ಗೆಟ್ ಮಾಡುತ್ತೀರಾ ಎಂದು ಮನಮೋಹನರನ್ನೂ ಜೊತೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಇದೂ ಕೂಡ ಶುದ್ಧ ಸುಳ್ಳು. ಪರವಾನಗಿಯ ನಿರ್ಧಾರ ತೆಗೆದುಕೊಂಡಿರುವುದು ಕ್ಯಾಬಿನೆಟ್ ಅಲ್ಲ, ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಟೆಲಿಕಾಂ ಇಲಾಖೆಯ ಹಿರಿಯ ಅಧಿಕಾರಿಗಳನ್ನೊಳಗೊಂಡ ಟೆಲಿಕಾಂ ಕಮೀಷನ್. ಇನ್ನು ವಿತ್ತ ಸಚಿವಾಲಯ ಹರಾಜಿನ ಬದಲಿಗೆ ಮೊದಲು ಬಂದವರಿಗೆ ಆದ್ಯತೆಯಂತೆ Spectrum ಅನ್ನು ಬಿಕರಿ ಮಾಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟವಾಗಿದೆಯೆಂದು, ವಿವರಣೆ ಕೋರಿ ಪತ್ರ ಬರೆದಿದೆ. ಇನ್ನು ಒಪ್ಪಿಗೆಯ ಮಾತೆಲ್ಲಿಂದ ಬಂತು? ಹೀಗೆ ನೋಡಿದರೆ ರಾಜಾ ತನ್ನನ್ನು ಸಮರ್ಥಿಸಿಕೊಳ್ಳಲು ಮುಂದಿಡುವ ಪ್ರತಿ ವಾದ ಸರಣಿಯೂ ಟೊಳ್ಳಾಗಿದ್ದು, ದಾರಿ ತಪ್ಪಿಸುವ ಉದ್ದೇಶದಿಂದಲೇ ಹೇಳಿದ ಅರ್ಧ ಸತ್ಯಗಳೆಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಹಾಗಾದರೆ ರಾಜಾರ ನಿಲುವು - ಕ್ರಮಗಳ ಹಿಂದಿನ ಉದ್ದೇಶವಾದರೂ ಏನು? ರಾಜಕಾರಣಿಗಳು ಏನು ಮಾಡಿದರೂ ಅದರ ಹಿಂದೆ ವೋಟು ಇಲ್ಲ ನೋಟಿರುತ್ತದೆ. ಇಲ್ಲಿ ವೋಟಿಗೆ ಆಸ್ಪದವಿಲ್ಲ. 


ದೆಹಲಿಯ ಡಾ ಅರವಿಂದ ಗುಪ್ತರವರು  ಈ ವಿಷಯವಾಗಿ ದೆಹಲಿ ಹೈಕೋರ್ಟ್ನಲ್ಲಿ, ಸಾರ್ವಜನಿಕ ಹಿತಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ (ಕೇಸ್ ನಂ. 7815/2008). 1993ರ ಕೇಸೊಂದರಲ್ಲಿ ನ್ಯಾಯಾಲಯವು first come first serve ಪದ್ದತಿಯು ಅವೈಜ್ಞಾನಿಕವಾಗಿದ್ದು, ಪಾರದರ್ಶಕತೆಯ ಕೊರತೆಯೂ ಇದೆಯೆಂದು ಹೇಳಿದೆ. ಈಗ ಹದಿನೈದು ವರ್ಷಗಳ ತರುವಾಯ ಅತ್ಯಮೂಲ್ಯವಾದ Spectrumನ್ನು ಇದೇ ಪದ್ಧತಿಯ ಆಧಾರದ ಮೇಲೆ ವಿತರಿಸಲಾಗಿರುವುದನ್ನು ಗಮನಿಸಿದ ಇವರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ವಿಷಯವಾಗಿ ಸರ್ಕಾರದ ವಿವರಣೆ ಕೋರಿದ ನ್ಯಾಯಾಲಯಕ್ಕೆ ಸರ್ಕಾರವು ಡಿಸೆಂಬರ್ 10 ರಂದು ಈ ರೀತಿ ವಿವರಣೆ ಸಲ್ಲಿಸಿದೆ: 
"ಈ Spectrum ಅನ್ನು ಹರಾಜಿನಲ್ಲಿ highest bidder ಗೆ ನೀಡಿದ್ದೇ ಆದರೆ, ಆ ಬೃಹತ್ ಮೊತ್ತವನ್ನು ಕಂಪೆನಿಯು ಗ್ರಾಹಕರಿಂದ ವಸೂಲು ಮಾಡುತ್ತದೆ. ಆಗ ಗ್ರಾಹಕರ ಮೇಲೆ ಅನಗತ್ಯ ಒತ್ತಡ ಬೀಳುತ್ತದೆ. ಇಲ್ಲ ಕಂಪೆನಿಗಳು ತಮ್ಮ ದರಗಳನ್ನು ಏರಿಸದೇ ಇದ್ದರೆ, ಕಂಪೆನಿಗಳು ದಿವಾಳಿಯಾಗುತ್ತವೆ. ಹೀಗೆ ಕಂಪೆನಿಗಳ ಖರ್ಚುಗಳು ಹೆಚ್ಚಾಗಿ ಪರವಾನಗಿಯನ್ನು ಅಪೇಕ್ಷಿಸುವವರ ಸಂಖ್ಯೆಯೇ ಕಡಿಮೆಯಾಗುತ್ತದೆ. ಮತ್ತು Spectrum fee ಎನ್ನುವುದು ಸರಕಾರೀ ಆಸ್ತಿಯ ಮಾರಾಟವಲ್ಲದಿರುವುದರಿಂದ ಹರಾಜಿನ ಅವಶ್ಯಕತೆಯೇ ಇಲ್ಲ" ಎಂದು ವಾದಿಸಿದೆ. ಈ ಕೇಸಿನಲ್ಲಿ ತೀರ್ಪು ಇನ್ನೂ ಹೊರಬೀಳದಿರುವುದರಿಂದ ಇದರ ತಾರ್ಕಿಕ ಅಂತ್ಯಕ್ಕೆ ನಾವಿನ್ನೂ ಬಂದಿಲ್ಲ. 


ಈ ಮಧ್ಯೆ ಹೊರಬಂದಿರುವ ಹೊಸ ಡೀಟೆಲ್ಸ್ ಎಂದರೆ, ನೀರಾ ರಾಡಿಯಾ ಎಂಬ ಪಿಆರ್ ಎಕ್ಸಿಕ್ಯೂಟಿವ್ ಕೆಲಸ ಮಾಡುತ್ತಿರುವ 4 ಕಂಪೆನಿಗಳಿಗೆ Spectrum ಆಲ್ಮೋಸ್ಟ್ ಉಚಿತವಾಗಿ ಸಿಕ್ಕುಬಿಟ್ಟಿದೆ. ಸಿಬಿಐ ತನಿಖೆಯಲ್ಲಿ ಹೊರಬಿದ್ದಿರುವ ಸತ್ಯವೆಂದರೆ ಈಕೆ ಟೆಲಿಕಾಂ ಸಚಿವ ಅಂದಿಮುತ್ತು ರಾಜಾ ಅವರಿಗೆ ಈತ್ತೀಚೆಗೆ ಹೆಚ್ಚು ಆಪ್ತರಾಗಿದ್ದು, ಅವರೊಂದಿಗೆ ಘಂಟೆಗಟ್ಟಲೆ ಫೋನಿನಲ್ಲಿ ಸಂಭಾಷಿಸಿದ್ದಾರೆ. ಪೂರ್ವನುಮತಿಯೊಂದಿಗೆ ಸಿಬಿಐ ಈ ಫೋನ್ ಕಾಲ್ಗಳನ್ನು ಟ್ಯಾಪ್ ಮಾಡಿದೆ. ಈಕೆ ಇನ್ನೂ ಹಲವರಿಗೆ ಟೆಲಿಕಾಂ ರಂಗದಲ್ಲಿ `ಕೆಲಸ ಮಾಡಿಸಿಕೊಡುವುದಾಗಿ' ಹೇಳಿಕೊಂಡು ತಿರುಗುತ್ತಿದ್ದಳು ಎಂಬ ಅಂಶ ಕೂಡ ಬಯಲಿಗೆ ಬಂದಿದೆ. ಕಳೆದ ಕೆಲವು ದಿನಗಳ ಆಗುಹೋಗುಗಳು ಹೊಸ ನಾಣ್ಣುಡಿಯೊಂದನ್ನು ಹುಟ್ಟುಹಾಕುವಂತಿವೆ. - behind every successful scam there is a lady love!! ಇನ್ನು ಮೀಡಿಯಾದವರಿಗೆ ಇನ್ವೆಸ್ಟಿಗೇಟಿವ್ ರಿಪೋರ್ಟ್ಗಳನ್ನು ಫೈಲ್ ಮಾಡುವುದಕ್ಕೆ ಸುಗ್ರಾಸ ಸುದ್ದಿ.


ಯುಪಿಎ-1ರಲ್ಲಿ ರಾಜಾ ಮೊದಲಿಗೆ ಪರಿಸರ ಮತ್ತು ಅರಣ್ಯ ಮಂತ್ರಿಯಾಗಿದ್ದರು. ಆದರೆ ದಯಾನಿಧಿ ಮಾರನ್ ಮತ್ತು ಕರುಣಾನಿಧಿಯವರ ನಡುವೆ ಭಿನ್ನಾಭಿಪ್ರಯಾಗಳು ತಲೆದೋರಿದಾಗ ಅವರ ಜಾಗಕ್ಕೆ ಅಂದಿಮುತ್ತು ರಾಜಾರನ್ನು ತಂದು ಟೆಲಿಕಾಂ ಸಚಿವನನ್ನಾಗಿ ಮಾಡಲಾಯಿತು. ಅವರು ಬಂದ ಮೊದಲ ದಿನದಿಂದ ಮಾಡಿದ್ದು ಇದೇ Spectrum ಗಲಾಟೆ. ಕಡೆಕಡೆಯಲ್ಲಿ ಅವರು ಸರ್ಕಾರಕ್ಕೆ ದೊಡ್ಡ ಮುಜುಗರವಾಗಿದ್ದರು. ಈ ವರ್ಷ ಯುಪಿಎ ಮತ್ತೆ ಅಧಿಕಾರಕ್ಕೆ ಬಂದು, ಕಾಂಗ್ರೆಸ್ ಮೇಲುಗೈ ಸಾಧಿಸಿದರೂ ಡಿಎಂಕೆ ಬೆಂಬಲ ಅನಿವಾರ್ಯವಾಗಿತ್ತು. ಆದರೂ ಕಳಂಕಿತರು ತನ್ನ ಸಚಿವ ಸಂಪುಟದಲ್ಲಿರಬಾರದೆಂದು ಪಟ್ಟು ಹಿಡಿದ ಮನಮೋಹನರು ಡಿಎಂಕೆಯ ಟಿ.ಆರ್.ಬಾಲು ಮತ್ತು ಅಂದಿಮುತ್ತು ರಾಜಾರವರನ್ನು ಹೊರಗಿಡಬೇಕೆಂದಿದ್ದರಾದರೂ ಕರುಣಾನಿಧಿ ಒಪ್ಪಲಿಲ್ಲ. ಮನಮೋಹನರು ಕಡೆಗೂ ಬಾಲುರನ್ನು ಹೊರಗಿಡುವಲ್ಲಿ ಯಶಸ್ವಿಯಾದರೇ ಹೊರತು, ರಾಜಾರನ್ನಲ್ಲ. ನಂತರ ರಾಜಾಗೆ ಟೆಲಿಕಾಂ ಖಾತೆಯನ್ನು ತಪ್ಪಿಸಲು ನೋಡಿದರಾದರೂ ಅದೂ ಸಾಧ್ಯವಾಗಲಿಲ್ಲ. ಆಗಲೇ ಈ ಸರ್ಕಾರಕ್ಕೆ ಇವತ್ತಲ್ಲ ನಾಳೆ ರಾಜಾ ಮುಜುಗರವಾಗುವುದು ಖಾತ್ರಿಯಾಗಿತ್ತು. ಸೆಂಟ್ರಲ್ ವಿಜಿಲೆನ್ಸ್ ಕಮಿಟಿ ವರದಿ ಬಂದು, ಅದರ ಶಿಫಾರಸಿನಂತೆ ಸಿಬಿಐ ತನಿಖೆ ಕೈಗೆತ್ತಿಕೊಂಡಿತು. ಈಗ ತನಿಖೆಯ ವಿವರಗಳು ಹೊರಬಂದು ಗದ್ದಲ ಮಾಡುತ್ತಿದೆ. ಇಲ್ಲಿ ಕರುಣಾನಿಧಿ ಧಿಗ್ಗನೆ ಎದ್ದು ಕೂತರು. ತಮ್ಮ ಮಗಳು ಕನಿಮೊಳಿಯ ಮೂಲಕ ಪ್ರಧಾನಿಯವರ ಬಳಿ ಪ್ರತಿಭಟಿಸಿದರು. ತಮ್ಮವರದೇನೂ ತಪ್ಪಿಲ್ಲವೆಂದ ಮೇಲೆ ಸಿಬಿಐ ತನಿಖೆಗೆ ಪ್ರತಿಭಟನೆಯೇಕೋ? ಈಗ ತನಿಖೆಯ ಲೀಕ್ಗಳು ಶುರುವಾಗಿವೆ. ಇನ್ನೂ ಕರುಣಾ ಈ ವಿಷಯವಾಗಿ ತುಟಿ ಎರಡು ಮಾಡಿಲ್ಲ. 


ಹಿಂದೆ ಒಂದು ರೈಲು ದುರಂತವಾದಾಗ, ಅದರ ನೈತಿಕ ಹೊಣೆ ಹೊತ್ತು ತಮ್ಮ ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆಯಿತ್ತವರು ಲಾಲ್ ಬಹದ್ದೂರ್ ಶಾಸ್ತ್ರಿ. ಈಗ ಒಬ್ಬ ಮಂತ್ರಿಯ ಕಛೇರಿಯ ಮೇಲೆ ಭ್ರಷ್ಟಾಚಾರದ ಆರೋಪದ ತನಿಖೆ ನಡೆಸಲು ಸಿಬಿಐ ದಾಳಿ ಮಾಡಿದರೂ, ಮೇಲ್ನೋಟಕ್ಕೆ ಆರೋಪ ಸಾಬೀತಾಗುವಂತಿದ್ದರೂ ತನಗೆ ಯಾವುದೇ ನೈತಿಕ ಹೊಣೆಯಿಲ್ಲ ಎನ್ನುವ ಭಂಡರು ರಾಜಕೀಯಕ್ಕೆ ಬಂದುಬಿಟ್ಟಿದ್ದಾರೆ. ಮನಮೋಹನ ಸಿಂಗರು ಇಂದಿನ ಮಾರುಕಟ್ಟೆ ಕೇಂದ್ರಿತ ಸಮಾಜದಲ್ಲಿಯೂ ಸಚ್ಚಾರಿತ್ರ್ಯದ ಮಹತ್ವವನ್ನು ಸಾರಿದವರು. ಇವರ ಮೂಗಿನಡಿಯಲ್ಲೇ ಇಂತಹುದೊಂದು ದೊಡ್ಡ ಹಗರಣ ನಡೆದಿರುವುದು, ಅವರು ಅದನ್ನು ರಾಜಕೀಯ ಒತ್ತಡಗಳಿಗಾಗಿ ಸಹಿಸುತ್ತಿರುವುದು ಅವರ ಕುರಿತು ಸದಭಿಪ್ರಾಯ ಮೂಡುಸುವುದಿಲ್ಲ. ಸಿಬಿಐನ ತನಿಖೆಗೆ ಅನುವು ಮಾಡಿಕೊಟ್ಟು ಈ ಕೂಡಲೇ ಅಂದಿಮುತ್ತು ರಾಜಾ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ಆ ಕುರ್ಚಿಯಲ್ಲಿ ಕೂರುವ ನೈತಿಕ ಅರ್ಹತೆಯನ್ನು ಕಳೆದುಕೊಂಡಿದ್ದಾರೆ. ಆದರೆ ರಾಜಾ ರಾಜೀನಾಮೆಯ ಮಾತು ಅತ್ತ ಇರಲಿ, ಅಸಲು ಇದನ್ನೊಂದು ಹಗರಣವೆಂದೇ ಗುರುತಿಸುತ್ತಿಲ್ಲ. ಸರ್ಕಾರ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಗಳೇ ನಮ್ಮ ಸರ್ಕಾರದ ಗುರುತುಪತ್ರವೆಂದು ಬೀಗುವ ಪ್ರಧಾನಿಗಳು ರಾಜಕಾರಣದ ಒತ್ತಡಗಳಿಗೆ ಮಣಿಯದೆ ರಾಜಾರವರಿಂದ ರಾಜೀನಾಮೆ ಪಡೆಯಬೇಕು. ಆದರೆ ಪ್ರಧಾನಿಯವರ ಇತ್ತೀಚಿನ ಹೇಳಿಕೆಗಳು ಇದನ್ನು ಪುಷ್ಟೀಕರಿಸದಿರುವುದು ವಿಷಾದನೀಯ.


ಕಳೆದ ಒಂದೂವರೆ ದಶಕಗಳಿಂದ ಭಾರತದ ದೆಹಲೀ ರಾಜಕಾರಣವನ್ನು ಸಮ್ಮಿಶ್ರ ಸರ್ಕಾರಗಳಾಳುತ್ತಿದ್ದು, ಸರ್ಕಾರದ ಪ್ರಮುಖ ಪಕ್ಷಗಳಿಗೆಲ್ಲವಕ್ಕೂ ಟೆಲಿಕಾಂ ಸಚಿವಾಲಯವೇ ಬೇಕು. ಇದನ್ನು `ವೆಟ್ ಮಿನಿಸ್ಟ್ರಿ' ಎಂದು ಬಣ್ಣಿಸುತ್ತಾರೆ. ಅಂದರೆ ಒಳ್ಳೆ ದುಡ್ಡು ಓಡಾಡುವ ಜಾಗ ಅಂತ. ಅದಕ್ಕೇ ಅದಕ್ಕಷ್ಟು ಡಿಮ್ಯಾಂಡು! ಭಾರತ ಮಾಹಿತಿ ಯುಗವನ್ನು ಈಗಷ್ಟೇ ಪ್ರವೇಶಿಸುತ್ತಿದ್ದು, ಭಾರತದ ಸರ್ವತೋಮುಖ ಅಭಿವೃದ್ಧಿಯಲ್ಲಿ ಟೆಲಿಕಾಂ ಕ್ಷೇತ್ರ ಅತ್ಯಂತ ಮಹತ್ವದ ಪಾತ್ರ ವಹಿಸಿದೆ, ವಹಿಸಲಿದೆ. ಇಂತಿಪ್ಪ ಟೆಲಿಕಾಂ ರಂಗವನ್ನು ವೆಟ್ ಮಿನಿಸ್ಟ್ರಿ ಎಂದು ಗುರುತಿಸಿ ಅದರ ಸಾರ-ರಸವನ್ನೆಲ್ಲಾ ಹೀರಿ ಹಾಕಿದ್ದಾರೆ ಇವರು. 1997ರ ಸುಖರಾಮ್ ಹಗರಣ, ಪ್ರಮೋದ್ ಮಹಾಜನ್ರ ವಿಎಸ್ಎನ್ಎಲ್ ಹಗರಣ, ಈಗ ಈ ಹಗರಣ. ಈ ನವ ಭಾರತ ಖಂಡಿತವಾಗಿಯೂ ಇನ್ನೂ ಉತ್ತಮ, ದಕ್ಷ, ಪ್ರಾಮಾಣಿಕ, ಮುತ್ಸದ್ಧಿ ಟೆಲಿಕಾಂ ಸಚಿವನನ್ನು ಪಡೆಯಲು ಅರ್ಹವಾಗಿದೆ. ಇದು ಸದ್ಯದ ತುರ್ತು ಕೂಡ. 2G Spectrum ವಿತರಣೆಯಲ್ಲಿ 60 ಸಾವಿರ ಕೋಟಿಗಳ ಮೊತ್ತದ ಹಗರಣದ ಆರೋಪ ಹೊತ್ತ ಅದೇ ಅಂದಿಮುತ್ತು ರಾಜಾ, 3G Spectrumನ ಹರಾಜು ಮತ್ತು ವಿತರಣೆಯನ್ನು ಪರ್ಯಾವೆಕ್ಷಿಸುವುದು ಸರಿಯಲ್ಲ. 

Proudly powered by Blogger
Theme: Esquire by Matthew Buchanan.
Converted by LiteThemes.com.