ದೋಹ - ದೋಖಾ

ದೋಹ - ದೋಖಾ!
ಭಾರತದ ರೈತರ ಬಾಳ ಹರಿವಾಣದಲ್ಲಿಟ್ಟು ಕೊಡುತ್ತಿರುವ ಸರ್ಕಾರ

ಈ ಬಾರಿ ಯುಪಿಎ ಅಧಿಕಾರಕ್ಕೆ ಬಂದು ಮನಮೋಹನ ಸಿಂಗರು ತಮ್ಮ ಮಂತ್ರಿ ಮಂಡಲ ರಚಿಸಿದಾಗ ಕೆಲವು ಖಾತೆ ಹಂಚಿಕೆ ಬಹುಮಂದಿಗೆ ಆಶ್ಚರ್ಯವನ್ನುಂಟು ಮಾಡಿತ್ತು. ಅದರಲ್ಲಿ ಕಾಮರ್ಸ್ ಮಂತ್ರಿಯಾಗಿ ಅತ್ಯುತ್ತಮವಾಗಿ ಕೆಲಸ ಮಾಡಿ ಒಳ್ಳೆ ಚುನಾವಣೆ ಸಂದರ್ಭದಲ್ಲಿ ಡಬ್ಲ್ಯೂಟಿಒದ ದೋಹಾ ಸುತ್ತಿನ ಮಾತುಕತೆಗಳಲ್ಲಿ ರೈತರ ಪರ ಧ್ವನಿಯೆತ್ತಿ ಸರ್ಕಾರಕ್ಕೆ ರೈತಪರ ಎಂಬ ಸಕಾಲಿಕ ಹೆಸರು ತಂದುಕೊಟ್ಟ ಕಮಲ್ ನಾಥ್ರನ್ನು ಅಲ್ಲಿಂದ ಎತ್ತಂಗಡಿ ಮಾಡಿ ಸರ್ಫೇಸ್ ಟ್ರಾನ್ಸ್ಪೋರ್ಟ್ ಸಚಿವಾಲಯಕ್ಕೆ ವರ್ಗಾಯಿಸಿದ್ದು ಹಲವರ ಹುಬ್ಬೇರಿಸತ್ತು. ಏರಿದ್ದ ಆ ಹುಬ್ಬುಗಳು ಗಂಟಿಕ್ಕಿದ್ದು ಆ ಜಾಗಕ್ಕೆ ಮನಮೋಹನ ಸಿಂಗರು ಆನಂದ್ ಶರ್ಮ ಎಂಬ ಲೈಟ್ ವೇಯಿಟ್ ರಬ್ಬರ್ ಸ್ಟಾಂಪ್ನನ್ನು ತಂದು ಕೂರಿಸಿದಾಗ. ಮನಮೋಹನರು ಅತಿ ಮುಖ್ಯ ಕಾಮರ್ಸ್ ಸಚಿವಾಲಯವನ್ನು back seat ಡ್ರೈವಿಂಗ್ ಮಾಡಲು ನಿರ್ಧರಿಸಿದ್ದು ಸ್ಪಷ್ಟವಾಗಿತ್ತು. ಭಾರತ ಮತ್ತು ಇನ್ನಿತರ ಅಭಿವೃದ್ಧಿಶೀಲ ದೇಶಗಳ ನಾಯಕತ್ವ ವಹಿಸಿದವರಂತೆ 2008ರಲ್ಲಿ ರೈತಾಪಿಗರ ಪರ ನಿಂತು ಬಡಿದಾಡಿ, ಧರೆಯ ದೊಡ್ಡಣ್ಣರು ಮಣಿಯದಿದ್ದಾಗ ಮಾತುಕತೆಗಳು ಕುಸಿದು ಬೀಳುವಂತೆ ಮಾಡಿದ್ದ ಕಮಲ್ ನಾಥ್ ಬೆಲೆ ತೆತ್ತರು.
-----------

ನಿರೀಕ್ಷೆಯಂತೆಯೇ ನೂತನ ಕಾಮರ್ಸ್ಕಾ ಸಚಿವ ಆನಂದ್ ಶರ್ಮ ಡಬ್ಲ್ಯೂಟಿಒದ ಮುರಿದು ಬಿದ್ದಿರುವ ದೋಹಾ ಸುತ್ತಿನ ಮಾತುಕತೆಯನ್ನು ಪುನರುಜ್ಜೀವನಗೊಳಿಸಲು ಇನ್ನಿಲ್ಲದಂತೆ ಶ್ರಮಿಸುತ್ತಿದ್ದಾರೆ. ಮೊನ್ನೆ ಸೆಪ್ಟೆಂಬರ್ 3 ಮತ್ತು 4 ರಂದು ನಮ್ಮ ಸರ್ಕಾರ ದೆಹಲಿಯಲ್ಲಿ ಡಬ್ಲ್ಯೂಟಿಒಗೆ ಸಹಿ ಹಾಕಿರುವ 100 ದೇಶಗಳ ಕಾಮರ್ಸ್ ಮಿನಿಸ್ಟ್ರುಗಳನ್ನೆಲ್ಲಾ ಸೇರಿಸಿ ಒಂದು ಅನೌಪಚಾರಿಕ ಸಭೆಯೊಂದನ್ನು ನಡೆಸಿತು, ಅದೂ ಸದ್ದು ಗದ್ದಲಗಳಿಲ್ಲದೆ. ಇದರಲ್ಲಿ ಬಾರತದ ಸರ್ಕಾರ 2008ರ ಡಿಸೆಂಬರ್ನಲ್ಲಿ ನಡೆದ ಹಾಂಕಾಂಗ್ ಮಿನಿಸ್ಟೀರಿಯಲ್ನ ನಿರ್ಣಯಗಳ ಆಧಾರದ ಮೇಲೆಯೇ ಮುಂದಿನ ಮಾತುಕತೆಗಳು ಮುಂದುವರೆಸುವುದೊಳಿತು ಎಂದು ತಿಳಿಸಿದೆ. ಅದರಲ್ಲೇನಿದೆ ಅಂದಿರಾ? ಅಲ್ಲೇ ಇರೋದು ವ್ಯಂಗ್ಯ. ಇದೇ ಮನಮೋಹನರ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಕಮಲ್ ನಾಥ್ ಮೂಲಕ ವಿರೋಧಿಸಿದ್ದು ಇದೇ ನಿರ್ಣಯಗಳನ್ನು! ಈಗ ಕಮಲ್ನಾಥ್ರನ್ನು ಪಕ್ಕಕ್ಕೆ ಸರಿಸಿ ಯಥಾವತ್ ಅವೇ ನಿರ್ಣಯಗಳನ್ನು ಒಪ್ಪಿಕೊಂಡಿವೆ. ಇದರೊಂದಿಗೆ ರೈತಪರವೆಂದೆಣಿಸಿ ಈ ಸರ್ಕಾರಕ್ಕೆ ವೋಟು ಹಾಕಿದ ರೈತರಿಗೆ 100ಏ ದಿನಗಳಲ್ಲಿ ದೋಖಾ ಮಾಡಲಾಗಿದೆ. ದೇಶದ ಸುಮಾರು 65 ಕೋಟಿ ರೈತರ ಬಾಳನ್ನು ಸರ್ಕಾರ ವಿದೇಶೀ ಎಂಎನ್ಸಿಗಳಿಗೆ ಹರಿವಾಣದಲ್ಲಿಟ್ಟು ಕೊಡುತ್ತಿದೆ!
------------
ಏನಿದು ಡಬ್ಲ್ಯೂಟಿಒ, ದೋಹಾ ಸುತ್ತು, ಕಮಲ್ನಾಥ್ ಒಪ್ಪದ್ದೇನು, ಶರ್ಮ ಒಪ್ಪಿರುವುದೇನು? ಇದರಿಂದ ನಾಡಿನ ರೈತರ ಬದುಕಿನ ಮೇಲಾಗುವ ಅಡ್ಡ ಪರಿಣಾಮಗಳಾದರೂ ಏನು? ಈ ಮೇಲಿನ ಎರಡು ಪ್ಯಾರಾ ಓದಿದವರಿಗಾರಿಗಾದರೂ ಈ ಎಲ್ಲಾ ಪ್ರಶ್ನೆಗಳು ಮೂಡುವುದು ಸಹಜ.


ಡಬ್ಲ್ಯೂಟಿಒ ಎಂದರೆ world trade organisation - ವಿಶ್ವವ್ಯಾಪಾರ ಸಂಘಟನೆ. ವಿಶ್ವವ್ಯಾಪಾರಕ್ಕೊಂದು ಚೌಕಟ್ಟು ಹಾಕಿಕೊಡಲು, ನೀತಿ-ನಿಯಮಗಳನ್ನು ರೂಪಿಸಲು ಆವಿಶ್ಕಾರಗೊಂಡಿರುವ ಸಂಘಟನೆಯಿದು. ಈ ಸಂಘಟನೆಯಲ್ಲಿ ಸದಸ್ಯರಾಗಲು ಮೂಲಧಾತುವಿನಲ್ಲಿ ಮುಕ್ತ ಮಾರುಕಟ್ಟೆಯನ್ನು ಒಪ್ಪಿ-ಅಪ್ಪುವ ವಿಶ್ವವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಬೇಕು. ಇದಾದ ಮೇಲೆ ಮುಗಿಯಿತು ವಿಶ್ವವ್ಯಾಪಾರ ಸಂಘಟನೆ ರೂಪಿಸುವ ರೀತಿ-ರಿವಾಜುಗಳಿಗೆ ಈ ದೇಶಗಳು ಕಟ್ಟು ಬಿದ್ದಿರಬೇಕಾಗುತ್ತದೆ. ಈ ನಿಯಮಗಳನ್ನು ರೂಪಿಸಲು ಎಲ್ಲ ಸದಸ್ಯ ರಾಷ್ಟ್ರಗಳದೊಂದು ಸದಸ್ಸು ನಡೆಯುತ್ತದೆ - ಅದು ಒಂದು ಸಂಧಾನ ಪ್ರಕ್ರಿಯೆ. ಹೀಗೆ 2001ರಲ್ಲಿ ಕತಾರ್ನ ರಾಜಧಾನಿ ದೋಹಾದಲ್ಲಿ ಶುರುವಾದ ಮಾತುಕತೆಗೆ ದೋಹಾ ಮಾತುಕತೆ ಎಂದು ಕರೆಯುತ್ತಾರೆ. ಈ ಸುತ್ತಿನ ಮಾತುಕತೆಗಳಲ್ಲಿ ಮುಖ್ಯವಾಗಿ ಕೃಷಿ ಉತ್ಪನ್ನಗಳು ಮತ್ತು ಉತ್ಪಾದಿತ ಸರಕುಗಳ ಮಾರುಕಟ್ಟೆಯನ್ನು ಜಗತ್ತಿನಾದ್ಯಂತ ಮುಕ್ತಗೊಳಿಸುವ ಕುರಿತು ಸಮಾಲೋಚಿಸಲಾಗುತ್ತಿದೆ. ಈ ಮಾತುಕತೆಗಳು ಜಗತ್ತಿನ ಫ್ರೀಟ್ರೇಡ್ನ ಮೂಲಕ್ಕೇ ಕೈಹಾಕಿ ಕೂತಿದೆ.

ಅದಕ್ಕೇ 2001ರಿಂದ ಆಗಾಗ ಮಾತುಕತೆಗಳು ನಡೆಯುತ್ತಲೇ ಇವೆ, ಮುರಿದು ಬೀಳುತ್ತಲೇ ಇವೆ. ವಿಶ್ವವ್ಯಾಪಾರ ಸಂಘಟನೆಯನ್ನು ಶಾಶಿಸುವುದು ಅಭಿವೃದ್ದಿ ಹೊಂದಿದ ಅಮೆರಿಕಾ, ಯೂರೋಪಿಯನ್ ಯೂನಿಯನ್ ಮತ್ತಿತರ ಶಕ್ತಿಗಳೇ. ಅವು ಈ ಸಂಘಟನೆಯನ್ನು ಅಭಿವೃದ್ಧಿ ಹೊಂದುತ್ತಿರುವ ಬಡ ರಾಷ್ಟ್ರಗಳ ಬೃಹತ್ ಮಾರುಕಟ್ಟೆಗಲನ್ನು ಕಬಳಿಸಲು, ತಮ್ಮ ನವ ವಸಾಹತುಶಾಹೀ ಆಡಳಿತವನ್ನು
ಸ್ಥಾಪಿಸಲು ಬಳಸುತ್ತಿವೆಯೆಂಬುದು ಬಹುಕಾಲದಿಂದಲೂ ಕೇಳಿಬರುತ್ತಿರುವ ಆರೋಪ. ಇದು ತಕ್ಕಮಟ್ಟಿಗೆ ನಿಜವೂ ಕೂಡ ಹೌದು. ಸದ್ಯ ದೋಹಾ ಸುತ್ತಿನ ಮಾತುಕತೆಗಳನ್ನೇ ತೆಗೆದುಕೊಳ್ಳಿ ಅಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವುದು ಈ ಮೂರನೇ ಜಗತ್ತಿನ ರಾಷ್ಟ್ರಗಳಲ್ಲಿ ಬೃಹತ್ತಾದ untaped ಮರುಕಟ್ಟೆಯಿದೆ, ಅದನ್ನು ಕಬಳಿಸಬೇಕು, ಅದೂ ರಾಜಮಾರ್ಗದಲ್ಲಿ. ಅದಕ್ಕವರ ಆಯುಧ ಡಬ್ಲ್ಯೂಟಿಓ - ದೋಹಾ ಸುತ್ತಿನ ಮಾತುಕತೆಗಳು.

ಕಳೆದ 2008ರ ಜುಲೈನಲ್ಲಿ ಕಮಲ್ನಾಥ್ ಆ ಹಿಂದಿನ ಡಿಸೆಂಬರ್ ಟೆಕ್ಸ್ಟ್ ಅನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಮುಖ್ಯವಾಗಿ ಒಪ್ಪಂದದ special products ಮತ್ತು special safegaurd mechanism ಕ್ಲಾಸ್ಗಳನ್ನು ಭಾರತ ತಿರಸ್ಕರಿಸಿತ್ತು. ಡಿಸೆಂಬರ್ ಟೆಕ್ಸ್ಟ್ನ ಪ್ರಕಾರ ಯಾವುದೇ ದೇಶ ತನ್ನ ಕೃಷಿ ಉತ್ಪನ್ನಗಳ ಶೇ. 12ರಷ್ಟನ್ನು ಮಾತ್ರ special products ಅಂತ ಘೋಷಿಸಿ ಅದರ ಮೇಲೆ ಆಮದು ಸುಂಕ (ಟಾರಿಫ್) ವಿಧಿಸಬಹುದು. ಆದರೆ ಭಾರತ ಇದನ್ನು ತಿರಸ್ಕರಿಸಿತ್ತು. ಭಾರತ ಇದು ಕನಿಷ್ಠ ಶೇ.20 ರಷ್ಟಿರಬೇಕೆಂದು ವಾದಿಸಿತ್ತು. ಇದೇ ಮಾತುಕತೆ ಮುರಿದುಬೀಳಲು ಕಾರಣವಾಗಿತ್ತು. ಈ ಆಮದು ಸುಂಕ ಅಂದರೆ ದೇಶಗಳು ತಮ್ಮ ರೈತರು, ಉತ್ಪಾದಕರನ್ನು ರಕ್ಷಿಸಲು ಇತರ ದೇಶಗಳಿಂದ ಆಮದಾಗುವ ಆ ಸರಕುಗಳಿಗೆ ಹೆಚ್ಚಿನ ಸುಂಕ ವಿಧಿಸಿ, ಆಮದನ್ನು discourage ಮಾಡುವುದು. ಇದನ್ನು ಎಲ್ಲಾ ದೇಶಗಳೂ ಪಾಲಿಸಿಕೊಂಡು ಬಂದಿವೆ. ಭಾರತದಂತಹ ಬೆಳೆಯುತ್ತಿರುವ ಆರ್ಥಿಕತೆಗಳಿಗೆ, ನಮ್ಮ ದೇಶದಲ್ಲಿ ಸದ್ಯ ಇರುವ ರೈತರ ದುಸ್ಥಿತಿಗೆ ಇದು ಅತ್ಯಾವಶ್ಯಕ.

ಸದ್ಯ ಭಾರತದ ಕೃಷಿ ರಂಗದಲ್ಲಿ 715 ಟಾರಿಫ್ ಲೈನ್ಗಳಿವೆ. ಭಾರತದ ಬೇಡಿಕೆಯಿದ್ದದ್ದು ಅದರಲ್ಲಿ 215 ಟಾರಿಫ್ ಲೈನ್ಗಳನ್ನು ಉಳಿಸಿಕೊಳ್ಳಬೇಕೆಂದು. ಆದರೆ ಡಿಸೆಂಬರ್ ಟೆಕ್ಸ್ಟ್ನ ಪ್ರಕಾರ ಕೇವಲ 86 ಟಾರಿಫ್ ಲೈನ್ಗಳು ಮಾತ್ರ ಉಳಿದುಕೊಳ್ಳುತ್ತವೆ. ಇನ್ನು ಇದರಲ್ಲೂ ಒಂದು ತಿರಕಾಸಿದೆ. ಇಂತಿಪ್ಪ 86 ಟಾರಿಫ್ ಲೈನ್ಗಳಲ್ಲಿ ಶೇ.40ರಷ್ಟು ಅಂದರೆ ಕೇವಲ 36 ಲೈನ್ಗಲಲ್ಲಿ ಸುಂಕ ಅದೇ ಪ್ರಮಾಣದಲ್ಲಿರಬಹುದಾಗಿದೆ, ಇನ್ನುಳಿದ ಶೇ.60 ಅಂದರೆ 50 ಲೈನ್ಗಳಲ್ಲಿ ಆಮದು ಸುಂಕವನ್ನು ಶೇ.19ರಷ್ಟು ಕಡಿತಗೊಳಿಸಬೇಕಾಗುತ್ತದೆ. ಭಾರತದಲ್ಲಿ ಶೇ. 60ರಷ್ಟು ಮಂದಿ ಕೃಷಿಯನ್ನೇ ನಂಬಿ ಬದುಕ ನಡೆಸುತ್ತಿದ್ದಾರೆ. ಇನ್ನು ಅವರ ಸ್ಥಿತಿಯೋ ಆ ದೇವರಿಗೇ ಪ್ರೀತಿ. ಈಗಿರುವ ವ್ಯವಸ್ಥೆಯಲ್ಲೇ ಜಾಗತೀಕರಣದ ಹೊಡೆತ ತಡೆದುಕೊಳ್ಳಲಾರದೆ ಕಂಗಾಲಾಗಿ ಕ್ರಿಮಿನಾಶಕಗಳನ್ನೇ ಭೋಜನವಾಗಿಸಿಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಈ ಡಿಸೆಂಬರ್ ಟೆಕ್ಸ್ಟ್ ಇಲ್ಲದ ರಗಳೆ ಸೃಷ್ಟಿಸಿ ನೇಗಿಲ ಯೋಗಿಯ ಬದುಕನ್ನು ಇನ್ನಷ್ಟು ದುರ್ಭರಗೊಳಿಸುವುದರಲ್ಲಿ ಅನುಮನವೇ ಇಲ್ಲ.

ಅಮೆರಿಕಾ ಮತ್ತು ಯೂರೋಪಿಯನ್ ಯೂನಿಯನ್ ದೇಶಗಳಲ್ಲಿ ಸರ್ಕಾರಗಳು ಅಲ್ಲಿನ ಕೃಷಿಗೆ ಭರ್ಜರಿ ಸಬ್ಸಿಡಿ ನೀಡುತ್ತಿವೆ. ಕೃಷಿಯಲ್ಲದೇ ಕೃಷಿ ಸಂಬಂಧಿತ ಚಟುವಟಿಕೆಗಳಾದ ಸಕ್ಕರೆ, ಹೈನುಗಾರಿಕೆ, ಸೆರಿಕಲ್ಚರ್ ಮತ್ತಿತರ ಉದ್ಯಮಗಳೂ ಬಹುಪ್ರಮಾಣದಲ್ಲಿ ಸಬ್ಸಿಡೈಸ್ಡ್ ಆಗಿವೆ. ಇದರಿಂದ ಅಲ್ಲಿನ ರೈತರು ಸ್ಪರ್ಧೆಗೂ ಮೀರಿದ ಅಗ್ಗದ ದರಗಳಲ್ಲಿ ತಮ್ಮ ಬೆಳೆಗಳನ್ನು ವಿಶ್ವ ಮಾರುಕಟ್ಟೆಗೆ ತುಂಬುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇನ್ನು ನಮ್ಮ ದೇಶಗಳಲ್ಲಿರುವ ಟಾರಿಫ್ಗಳನ್ನೂ ಸಡಿಲಿಸಿಬಿಟ್ಟರೆ ಈ ದೊಡ್ಡಣ್ಣರು ನಮ್ಮ ಮಾರುಕಟ್ಟೆಗಳನ್ನು `dump yard' ಗಳಂತೆ ಬಳಸಿಕೊಳ್ಳುವಲ್ಲಿ ಅನುಮಾನವಿಲ್ಲ. ಅವರು ರಿಸೆಷನ್ನಿಂದ ಹೊರಬರಲಿಕ್ಕೆ ನಮ್ಮನ್ನು ಬಲಿತೆಗೆದುಕೊಳ್ಳಲು ನೋಡುತ್ತಿರುವುದು ಸ್ಪಷ್ಟ. ಮುಕ್ತ ಮಾರುಕಟ್ಟೆ, ಫ್ರೀಟ್ರೇಡ್ ಕುರಿತು ಅಷ್ಟೆಲ್ಲಾ ಭಾಷಣ ಬಿಗಿಯುವ ಅಮೆರಿಕಾ ಅದರಲ್ಲಿ ನಿಜವಾಗಲೂ ನಂಬಿಕೆಯಿದ್ದರೆ ಮೊದಲು ತನ್ನ ದೇಶದಲ್ಲಿ ಕೃಷಿಗೆ ನೀಡುತ್ತಿರುವ ಆಗಾಧ ಪ್ರಮಾಣದ ಸಬ್ಸಿಡಿಯನ್ನು ಕಿತ್ತು ಹಾಕಲಿ. ಆಹಾ, ಅದ್ಹೇಗೆ ಆಗುತ್ತೆ, ಆಮೇಲೆ ನಮ್ಮ ರೈತರ ಜೀವನ ಕಷ್ಟ ಕಷ್ಟ! ಅಂತ ಉದ್ಗಾರವೆಳೆಯುತ್ತದೆ ಅಮೆರಿಕಾ.


ಇದು ಭಾರತವೊಂದರ ಭಾವನೆಯಲ್ಲ. ಬ್ರೆಜಿಲ್, ಚೈನಾ, ಆಫ್ರಿಕನ್ ದೇಶಗಳು, ಹೀಗೆ ಇನ್ನೂ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳ ಭಾವನೆಯನ್ನು ಪ್ರತಿಬಿಂಬಿಸುವಂತೆ ಕಳೆದ ಸದಸ್ಸಿನಲ್ಲಿ ಭಾರತದ ಕಮಲ್ನಾಥ್ ಅಮೆರಿಕಾ ಮತ್ತಿತರ ಮುಂದುವರೆದ ರಾಷ್ಟ್ರಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇತರೆ ಅಭಿವೃದ್ಧಿಶೀಲ ದೇಶಗಳೆಲ್ಲವೂ ಭಾರತದೊಂದಿಗೆ ದನಿಗೂಡಿಸಿದ್ದವು. ಭಾರತ ತನಗರಿವಿಲ್ಲದಂತೆಯೇ ಈ ಹೋರಾಟದಲ್ಲಿ ಅಭಿವೃದ್ಧಿಶೀಲ ದೇಶಗಳ ನಾಯಕನ ಪಟ್ಟ ಅಲಂಕರಿಸಿತ್ತು. ಫ್ರೀಟ್ರೇಡ್ನ ಬಗ್ಗೆ ಅಮೆರಿಕಾ ಸದಸ್ಸಿನಲ್ಲಿ ಲೆಕ್ಚರ್ ಹೊಡೆಯಲು ಪ್ರಾರಂಭಿಸಿದಾಗ ಎದ್ದು ನಿಂತ ಕಮಲ್ ನಾಥ್ -


"ನಾವು, ನೀವು ಏನು ಮಾಡಿ ಅಂತ ಹೇಳ್ತೀರೋ ಅದನ್ನು ಮಾಡುವುದಿಲ್ಲ, ನಾವಿಂದು ಇರುವ ಪರಿಸ್ಥಿತಿಯಲ್ಲಿ ನೀವಿದ್ದಾಗ ಏನು ಮಾಡಿದರೋ ಅದನ್ನೇ ನಾವೂ ಮಾಡುತ್ತಿದ್ದೇವೆ"
ಎಂದು ಹೇಳಿ ಹೀರೋ ಆಗಿದ್ದರು.


ಮನಮೋಹನರಿಗಿದು ಯಾಕೋ ಸರಿ ಬಂದ ಹಾಗೆ ಕಾಣಲಿಲ್ಲ. ಯುಪಿಎ-2ರಲ್ಲಿ ಆನಂದ್ ಶರ್ಮ ಕಾಮರ್ಸ್ ಮಿನಿಸ್ಟ್ರಾದರು. ಮೊನ್ನೆ ದೆಹಲಿಯಲ್ಲಿ ಎಲ್ಲ ದೇಶಗಳ ಕಾಮರ್ಸ್ ಮಿನಿಸ್ಟ್ರುಗಳ ಅನೌಪಚಾರಿಕ ಸಭೆ ಸೇರಿಸಿ ಸದ್ಯ ಜಗತ್ತು ಎದುರಿಸುತ್ತಿರುವ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ದೋಹಾ ಸುತ್ತಿನ ಮಾತುಕತೆಗಳ ಅನುಷ್ಠಾನವೇ ಉತ್ತರ. ಈಗಾಗಲೇ ಇದು ಸಾಕಷ್ಟು ವಿಳಂಬವಾಗಿರುವುದರಿಂದ ಜಗತ್ತು ಒಂದು ಅಭಿವೃದ್ಧಿಯ ಶಕೆಯನ್ನೇ ಕಳೆದುಕೊಂಡಿದೆ. ಇನ್ನು ತಡ ಮಾಡಬಾರದು. ಈಗೆಲ್ಲಿವರೆಗೂ ಮಾತುಕತೆಗಳು ನಡೆದಿವೆಯೋ ಅಲ್ಲಿಂದ ಮುಂದಕ್ಕೆ ಮಾತುಕತೆ ಶುರುವಾಗಬೇಕು. ನಾವು ಸದಾ ಮುಂದೆ ನೋಡಬೇಕು, ಹಿಂದೆ ನೋಡಿ ಪ್ರಯೋಜನವಿಲ್ಲ ಎಂದೆಲ್ಲಾ ಬಡಬಡಿಸಿ, ಭಾರತ ಮಾತುಕತೆ ಮುರಿದು ಬೀಳಲು ಕಾರಣವಾದ ಅದೇ ಡಿಸೆಂಬರ್ ಟೆಕ್ಸ್ಟ್ ಅನ್ನು ಮುಂದಿನ ಮಾತುಕತೆಗೆ ಆಧಾರವಾಗಿಟ್ಟುಕೊಳ್ಳಲು ತಯಾರಿದೆ ಎಂದು ಸಿಗ್ನಲ್ ರವಾನಿಸಿದ್ದಾರೆ! ಹಿಂದಿನ ಮಾತುಕತೆಗಳು ಮುರಿದು ಬೀಳಲು ಕಾರಣರಾದ ನಾವೇ ಅತ್ಯುತ್ಸಾಹದಿಂದ ನಮ್ಮಷ್ಟಕ್ಕೆ ನಾವೇ ಸಭೆ ಸೇರಿಸಿ ಆ ಡೆಡ್ಲಾಕ್ ಅನ್ನು ಬಿಡಿಸಬಿಡುವುದೆಂದರೆ? ಇದು ನಾಡಿನ ರೈತರಿಗೆ ಮಾಡಿದ ದೋಖಾ ಅಷ್ಟೆ ಅಲ್ಲ. ಕಳೆದ ಸುತ್ತಿನ ಮಾತುಕತೆಗಳಲ್ಲಿ ಅಭಿವೃದ್ದಿಶೀಲ ರಾಷ್ಟ್ರಗಳ ನಾಯಕನಂತೆ ಬೀಗಿದ್ದ ಭಾರತ ಈಗ ಏಕಾಏಕಿ ಅದೆ ನಿರ್ಣಯಗಳಿಗೆ ತಲೆಬಾಗುತ್ತಿರುವುದು ಅಭಿವೃದ್ಧಿಶೀಲ ಜಗತ್ತಿಗೆ ಭಾರತದ ನಾಯಕತ್ವದಲ್ಲಿ ನಂಬಿಕೆಯಿರಿಸಿದ್ದ ಪ್ರತಿಯೊಂದು ದೇಶದ ಬೆನ್ನಿಗೂ ಈ ಸರ್ಕಾರ ಇರಿದ ಚೂರಿಯಾಗಿದೆ.


ವಿಷಯ ಹೊರಬರುತ್ತಿದ್ದಂತೆ ರಾಷ್ಟ್ರೀಯ ಮಟ್ಟದ ಎಲ್ಲ ರೈತ ಸಂಘಗಳೂ ಸರ್ಕಾರದ ವಿರುದ್ಧ ಹೂಂಕರಿಸಿವೆ, ಕಮ್ಯೂನಿಸ್ಟರು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ಇವು ಸರ್ಕಾರಕ್ಕೂ ಸಾಮಾನ್ಯವಾಗಿಬಿಟ್ಟಿವೆ, ಬಡಕೊಳ್ಳೋಷ್ಟೂ ಬಡಕೊಂಡು ಸುಮ್ಮನಾಗ್ತಾರೆ ಬಿಡು ಎನ್ನುವ ಧೋರಣೆಯಲ್ಲಿವೆ ಸರ್ಕಾರಗಳು. ರೈತ ಹಿಂದೆಂದಿಗಿಂತಲೂ ಇಂದು ಸಂಕಷ್ಟದಲ್ಲಿದ್ದಾನೆ. ಆತನ ನೆಲದ ಮೇಲೆಯೇ ಎಲ್ಲರ ಕಣ್ಣು, ಇನ್ನು ಬೀಜ ಗೊಬ್ಬರ ಎಲ್ಲವೂ ಎಂಎನ್ಸಿಗಳವು -ದುಬಾರಿ, ಹೋಗಲೀ ಅಂದರೆ ದುಡ್ಡು ಕೊಟ್ಟರೂ ಅವು ಸಿಗವು, ಸಿಕ್ಕರೂ ಸಕಾಲದಲ್ಲಿ ಮಳೆಯಿಲ್ಲ, ನೀರಾವರಿ ವ್ಯವಸ್ಥೆ ಮೊದಲೇ ಇಲ್ಲ, ಕೊಳವೆ ಭಾವಿ ಹೊಡಿಸೋಣ ಅಂದರೆ ನೀರು ಬೀಳಲ್ಲ, ಅದರಲ್ಲಿ ಬರೀ ಮಕ್ಕಳು ಬೀಳ್ತವೆ ಅಷ್ಟೆ, ಇದಕ್ಕೆಲ್ಲಾ ದುಡ್ಡು ಬೇಕು, ಸಾಲ-ಬಡ್ಡಿ-ಚಕ್ರಬಡ್ಡಿ, ನೇಗಿಲ ಹೊರಬೇಕಾದವನು ಸಾಲದ ನೊಗ ಹೊರಬೇಕು. ಹೆಂಗೋ ಉತ್ತಿ ಬಿತ್ತಿ ಬೆಳೆ ಏನೋ ಬಂತು ಅಂದರೆ, ಬೆಳೆದ ಬೆಲೆಗೆ ಸರಿಯಾದ ಮಾರುಕಟ್ಟೆಯೇ ಇಲ್ಲ. ಬೆಂಬಲ ಬೆಲೆ ಎಲ್ಲವೂ ಶುದ್ಧ ನಾಟಕ, ಹತಾಶೆಯಲ್ಲಿ ಬೆಳೆದ ಬೆಳೆಯನ್ನು ಬೀದೀಲಿ ಬಿಸುಡಿ ಹೋಗುವ ಪರಿಸ್ಥಿತಿ. ಉಳಿದ ದಾರಿಗಳೆರಡೇ ಒಂದೋ ನೇಣು ಬಿಗಿದುಕೊಂಡೋ, ಕ್ರಿಮಿನಾಶಕ ಸೇವಿಸೋ ಆತ್ಮಹತ್ಯೆ ಮಾಡಿಕೊಳ್ಳಬೇಕು, ಇಲ್ಲ ಹೋರಾಟ - ಸರ್ಕಾರಗಳದು ಒಂದೇ ಉತ್ತರ ಗೋಲೀಬಾರ್! ಯಾವುದನ್ನಾರಿಸಿಕೊಂಡರೂ ಕಡೆಗೆ ರಿಜಲ್ಟು ಒಂದೇ! ಇದು ಸದ್ಯ ರಾಷ್ಟ್ರದ ರೈತರ ಪರಿಸ್ಥಿತಿ. ಈ ಬದುಕಿಗೆ ವಿದೇಶೀ ಎಂಎನ್ಸಿಗಳಿಂದ ಕಾಂಪಿಟೇಷನ್ ಬೇರೆ ಏನು? ಮೊನ್ನೆಯ ಆಸಿಯಾನ್ ಒಪ್ಪಂದವೂ ಕಾಫಿ, ಟೀ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡುತ್ತದೆ. ಈಗ ದೋಹಾ ಸುತ್ತಿನಲ್ಲಿ ನಮ್ಮವರು ಕೃಷಿರಂಗದ ಕೇವಲ ಶೇ.5ರಷ್ಟನ್ನು ಮಾತ್ರ ರಕ್ಷಿತವಾಗಿರಿಸಬೇಕಾದ ಒಪ್ಪಂದವೊಂಕ್ಕೆ ತಲೆದೂಗುತ್ತಾರೆ. ಚಳುವಳಿಗಳೇ ಇಲ್ಲದ ನಾಡಲ್ಲಿ ಹೇಳೋರು, ಕೇಳೋರು ಯಾರೂ ಇಲ್ವ.....?


ಇಂದು ನಮ್ಮ ರಾಷ್ಟ್ರದಲ್ಲಿ alarming ಅನ್ನುವಂತಹ agrarian crisis ಇದೆ. ನಮ್ಮ ಕೃಷಿ ಸಚಿವರು ಕ್ರಿಕೆಟ್ಟಿನಂಗಳದಲ್ಲಿದ್ದಾರೆ. ನಮ್ಮಲ್ಲಿ ಎಲ್ಲರೂ ರೈತ ನಾಯಕರೇ, ರೈತರ ಸಾಲ ಮನ್ನಾ ಏನು, ಶೇ.3 ಬಡ್ಡಿಗೆ ಸಾಲ ಸೌಲಭ್ಯವೇನು, ಉಚಿತ ಕರೆಂಟೇನು, ಇನ್ನೇನಪ್ಪಾ ಬೇಕು ರೈತರಿಗೆ? ವೈಂಗ್ಯವೇ ಇದು. ಎಲ್ಲರವೂ ಕಣ್ಣೊರೆಸುವ ಗಿಮಿಕ್ಗಳೇ ಹೊರತು, ಸಮಸ್ಯೆಯ ಆಳಕ್ಕಿಳಿದು ಅದನ್ನು ಪರಿಹರಿಸಲು ಕಂಕಣ ತೊಟ್ಟ ಒಬ್ಬನೇ ಒಬ್ಬ ನಾಯಕ ಊಹೂಂ..ರೈತ ಸಂಘಗಳೂ ಕೂಡ ಈವತ್ತು ಅವಕಾಶವಾದಿಗಳ ಅಡ್ಡಾ ಆಗಿವೆ. ಅಸಲಿಗಿಂದು ರೈತ ಚಳುವಳಿಯೇ ಇಲ್ಲ. ರೈತರ ಸಮಸ್ಯೆ ಪರಿಹರಿಸಿ ಫಾರಿನ್ ಡಾಕ್ಟರೇಟ್ ಪಡೆದವರೊಬ್ಬರು, ಸಾಲ ಮನ್ನ ಮಾಡುವವರೊಬ್ಬರು, ಚುನಾವಣೆಗೆ ಮುಂಚೆ ರೈತಪರ ನಿಲುವು ತಾಳಿ ಪುನರಾಯ್ಕೆಯಾಗಿ ತಕ್ಷಣ ಊಸರವಳ್ಳಿಯಂತೆ ಬಣ್ಣ ಬದಲಿಸುವವರು ಮಗದೊಬ್ಬರು. ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯ ಇಲ್ಲ ಅನ್ನುವ ಹಾಗೆ ನಾಡಿನ ರೈತ ಯಾವತ್ತಿಗೂ ಅನಾಥ.
(ಈ ವಾರದ ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟಿತ )

ಭಾರತದ ಆಟದ ಅಂಗಳದಲ್ಲಿ ಅಬ್ಬರದ ವೀಕೆಂಡ್ ದೀಪಾವಳಿ


ಬಾಕ್ಸಿಂಗ್ನಲ್ಲಿ ವಿಜೇಂದರ್ ವಿಕ್ರಮ
ವಿಜೇಂದರ್ ಸಿಂಗ್ ಮತ್ತೆ ಸುದ್ದಿ ಮಾಡುತ್ತಿದ್ದಾರೆ. ಸದ್ಯ ವಿಜೇಂದರ್ ಸಿಂಗ್ ವಿಶ್ವ ಬಾಕ್ಸಿಂಗ್ ರ್ಯಾಕಿಂಗ್ನಲ್ಲಿ ಎರಡನೇ ಶ್ರೇಯಾಂಕಿತರಾಗಿದ್ದಾರೆ. ಇಟಲಿಯ ಮಿಲಾನ್ನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಛಾಂಪಿಯನ್ಶಿಪ್ನಲ್ಲಿ ಮೊದಲಿಂದಲೂ ಅತ್ಯುತ್ತಮ ಸಾಧನೆ ಮಾಡುತ್ತಾ ಬಂದ ವಿಜೇಂದರ್ ಸಿಂಗ್ ಸೆಮಿಫೈನಲ್ ಪ್ರವೇಶಿಸುವಲ್ಲಿ ಸಫಲರಾದರು. ಸೆಮಿಫೈನಲ್ನಲ್ಲಿ ಕೂಡ ಅತ್ಯುತ್ತಮ ಪ್ರದರ್ಶನ ತೋರಿದರಾದರೂ ಗೆಲುವು ಕೈಗೂಡಲಿಲ್ಲ. ಆದರೇನಂತೆ ವಿಶ್ವ ಬಾಕ್ಸಿಂಗ್
ಛಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ತಲುಪಿ ಕಂಚಿನ ಪದಕ ಪಡೆದ ಮೊದಲ ಭಾರತೀಯನೆನಿಸಿಕೊಂಡಿದ್ದಾರೆ. ಯಾರು ಈ ವಿಜೇಂದರ್ ಸಿಂಗ್ ಅಂದಿರಾ? ಮೊನ್ನೆಯ ಚೈನಾ ಒಲಂಪಿಕ್ಸ್ನಲ್ಲಿ ಬೆಳಕಿಗೆ ಬಂದ ಬಾಕ್ಸಿಂಗ್ ಪ್ರತಿಭೆ ಇವರು. ಚೀನಾ ಒಲಂಪಿಕ್ಸ್ನಲ್ಲೂ ಕೂಡ ಕಂಚಿನ ಪದಕ ಗೆದ್ದು ಭಾರತದ ವಿಜಯ ಪತಾಕೆಯನ್ನೆಗರು ಹಾಕಿದ ಧೀಮಂತ ಅಪ್ಪಟ ದೇಸೀ ಕ್ರೀಡಾ ಪ್ರತಿಭೆಯಿವರು.

ವಿಜೇಂದರ್ ಸಿಂಗ್ ಅತ್ಯಂತ ಕೆಳ ಮಧ್ಯಮ ವರ್ಗದಿಂದ ಬಂದವರು. ತಂದೆ ಒಬ್ಬ ಬಸ್ ಚಾಲಕ. ಮಗನ ಬಾಕ್ಸಿಂಗ್ ತರಬೇತಿಗೆ ದುಡ್ಡು ಹೊಂಚಲು ಒಂದೇ ದಿನ ಎರಡೂ ಷಿಫ್ಟುಗಳಲ್ಲಿ ದುಡಿಯುತ್ತಿದ್ದವರು. ವಿಜೇಂದರ್ ಹುಟ್ಟಿ ಬೆಳೆದದ್ದೆಲ್ಲವೂ ಹರ್ಯಾಣದ ಭಿವಾನಿ ಬಳಿಯ ಕಲುವಾಸ್ ಹಳ್ಳಿಯಲ್ಲಿ. ಇದ್ದದ್ದು ಒಂದು ಸೈಕಲ್ಲು, ಅಣ್ಣನೊಂದಿಗೆ ಅದನ್ನು ಹಂಚಿಕೊಳ್ಳುತ್ತಾ ಬೆಳೆದವ ಇಂದು ಬಾಕ್ಸಿಂಗ್ನಲ್ಲಿ ವಿಶ್ವದಲ್ಲೇ ಎರಡನೇ ಶ್ರೇಯಾಂಕಿತರಾಗುವವರೆಗೆ ಬೆಳೆದಿದ್ದಾರೆ. ಆದರೆ ನಮ್ಮ ವ್ಯವಸ್ಥೆ ಇಂತಹ ಅಪ್ಪಟ ಪ್ರತಿಭೆಯನ್ನು ಹೇಗೆ ನಡೆಸಿಕೊಂಡಿದೆ? ಅದು ಹೇಳದಿರುವುದೇ ಉತ್ತಮವೇನೋ. ಒಲಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಸಿರಿ ಶ್ರೀಮಂತ ಅಭಿನವ ಭಿಂಧ್ರಾನೆಡೆಗೆ ಎಲ್ಲರ ಗಮನವೂ ಕೇಂದ್ರೀಕರಿಸಿತ್ತೇ ವಿನಃ ಕಂಚಿನ ಪದಕ ಗೆದ್ದು ತಂದ ವಿಜೇಂದರ್ ಸಿಂಗ್ ಮತ್ತು ಸುಶೀಲ್ ಕುಮಾರ್ರನ್ನು ನಮ್ಮ ಮೀಡಿಯಾ ಆಗಲೀ ಸರ್ಕಾರವಾಗಲೀ ಗುರುತಿಸಿದ್ದು ಕಡಿಮೆಯೇ. ಒಲಂಪಿಕ್ಸ್ನಿಂದ ಮರಳಿದಾಗ ಅಭಿನವ ಭಿಂಧ್ರಾಗೆ ಭವ್ಯ ಸ್ವಾಗತ ದೊರೆಯಿತು, ಮಿಕ್ಕವರಿವರಿಬ್ಬರೂ ಆಟೋ ರಿಕ್ಷಾಗಳಲ್ಲಿ ಮನೆ ಸೇರಿದರು. ನಂತರ ಗಣರಾಜ್ಯ ದಿನದ ಸಂದರ್ಭದಲ್ಲಿ ಅಭಿನವ ಭಿಂಧೃಆಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಶೀಲ್ ಕುಮಾರ್ ಮತ್ತು ವಿಜೇಂದರ್ ಸಿಂಗ್ರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲಾಗುವುದೆಂದು ತಿಳಿಸಿ ನಂತರ ಕಡೇಕ್ಷಣದಲ್ಲಿ ನಿರಾಕರಿಸಲಾಯಿತು. ಒಟ್ಟಿನಲ್ಲಿ ಇವರೆಡೆಗೆ ಒಂದು ಮಲತಾಯಿ ಧೋರಣೆಯೆನ್ನುವುದಿದ್ದೇ ಇದೆ. ಇದೆಲ್ಲದರ ನಡುವೆ ಸ್ಪೆನ್ಸರ್ಸ್ ಕಂಪೆನಿಯವರು ಮುಂದೆ ಬಂದು ವಿಜೇಂದರ್ ಸಿಂಗ್ರನ್ನು ಜಾಹೀರಾತೊಂದಕ್ಕೆ ಬುಕ್ ಮಾಡಿರುವುದರಿಂದ ಸದ್ಯ ಒಂದಷ್ಟು ದುಡ್ಡು ನೋಡುವಂತಾಗಿದೆ. ವಿಜೇಂದರ್ ಸಿಂಗ್, ಸುಶೀಲ್ ಕುಮಾರ್, ಸೈನಾ ನೆಹ್ವಾಲ್ರಂಥ ದೇಸೀ ಪ್ರತಿಭೆಗಳನ್ನು ಬೆಳೆಸುವುದು ವ್ಯವಸ್ಥೆಯ ಬಾಧ್ಯತೆಯಾಗುತ್ತದೆ. ಅವರಿಗೆ ಬೇಕಾದ ಪ್ರೋತ್ಸಾಹ ನೀಡದೆ, ಒಲಂಪಿಕ್ಸ್ ಆದಾಗಲೆಲ್ಲಾ ನೂರಾಹದಿನೈದು ಕೋಟಿ ಭಾರತಕ್ಕೆ ಮೆಡಲುಗಳೇ ಇಲ್ಲವಾ, ನೋಡ್ರೀ ಕ್ಯೂಬಾ, ಇಥಿಯೋಪಿಯಾನ ನೋಡಿ ಕಲೀಬೇಕು.....ಎಂಬಂತೆ ಗೊಣಗುವುದರಲ್ಲಿ ಅರ್ಥವಿಲ್ಲ.

ಟೆನಿಸ್ - ಉಭಯ ಪ್ರಶಸ್ತಿಯೂ, ಉಭಯ ಸಂಕಟವೂ........
ಮೊನ್ನೆ ಭಾನುವಾರದ ಯುಎಎಸ್ ಒಪನ್ ಟೆನಿಸ್ ಟೂರ್ನಿಯ ಮೆನ್ಸ್ ಡಬಲ್ ಫೈನಲ್ ಪಂದ್ಯವು ಅತ್ಯಂತ ರೋಚಕವೂ, ತೃಪ್ತಿಕರವೂ, ಅಷ್ಟೇ ಸಂಕಟಕರವೂ ಆಗಿತ್ತು. ಅಲ್ಲ ಒಂದೇ ಪಂದ್ಯ ಏಕಕಾಲದಲ್ಲಿ ಇಷ್ಟೆಲ್ಲಾ ಆಗಿರಲು ಹೇಗೆ ಸಾಧ್ಯ ಅಂತೀರಾ? ಈ ಪಂದ್ಯದ ವಿಶೇಷತೆಯೇ ಅದು. ಯುಎಸ್ ಓಪನ್ ಮೆನ್ಸ್ ಡಬಲ್ ಫೈನಲ್ಸ್ನಲ್ಲಿ ಈ ಬಾರಿ ಎದುರಾಗಿದ್ದು ನಮ್ಮ ಲಿಯಾಂಡರ್ ಪೇಸ್ ಮತ್ತು ಜೆಕ್ ಗಣರಾಜ್ಯದ ಲೂಕಾಸ್ ಡ್ಲೂಹಿ ತಂಡ ಒಂದೆಡೆಯಾದರೆ ಮತ್ತೊಂದು ಕಡೆ ನಮ್ಮ ಮಹೇಶ್ ಭೂಪತಿ ಮತ್ತು ಬಹಮಾಸ್ನ ಮಾರ್ಕ್ ನೋಲ್ಸ್ ಜೋಡಿ. ಮೊಟ್ಟಮೊದಲ ಬಾರಿಗೆ ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ಜೋಡಿ ಗ್ರಂಡ್ಸ್ಲಾಮ್ ಫೈನಲ್ಲಿನಲ್ಲಿ ಎದುರಾಗಿದ್ದರು.ಮೊದಲ ಸೆಟ್ಟಿನ್ನು ಭೂಪತಿ ಜೋಡಿ ಗೆದ್ದು ಒಳ್ಳೆ ಆರಂಭ ಪಡೆಯಿತು. ಇದರಿಂದ ಛಲಕ್ಕೆ ಬಿದ್ದ ಲಿಯಾಂಡರ್ ಪೇಸ್ ಜೋಡಿ ಎರಡನೇ ಸೆಟ್ಟನ್ನು ಜಿದ್ದಿಗೆ ಬಿದ್ದು ತಮ್ಮದಾಗಿಸಿಕೊಂಡು ಸಮಬಲ ಸಾಧಿಸಿದರು. ಮೂರನೇ ಸೆಟ್ಗೆ ರೋಚಕತೆ ಬೆಳೆದು ಬೆಟ್ಟವಾಗಿತ್ತು. ಅತ್ಯಂತ ರೋಚಕವಾಗಿ ನಡೆದ ಮೂರನೇ ಸೆಟ್ಟನ್ನು ಲಿಯಾಂಡರ್ ಪೇಸ್ ಜೋಡಿ 6-2 ಬೃಹತ್ ಅಂತರದಿಂದ ತನ್ನದಾಗಿಸಿಕೊಂಡಿತು. ಇದರೊಂದಿಗೆ ಪೇಸ್ ತನ್ನ 10ನೇ ಗ್ರಾಂಡ್ಸ್ಲಾಮ್ ಟೈಟಲ್ಲನ್ನು ಪಡೆದು ಬೀಗಿದರು. ಮಹೇಶ್
ಭೂಪತಿ ಜೋಡಿ ಉತ್ತಮ ಪ್ರದರ್ಶನ ತೋರಿದರಾದರೂ ನಿರಾಶರಾಗುಳಿಯಬೇಕಾಯಿತು.
ಪಂದ್ಯ ಶುರುವಾಗುವ ಮೊದಲೇ ಒಂದು ಸಮಾಧಾನವಿತ್ತು. ಯಾವ ಜೋಡಿ ಗೆದ್ದರೂ ಮೆನ್ಸ್ ಡಬಲ್ಸ್ ಟೈಟಲ್ ಅನ್ನು ಗೆಲ್ಲುವುದು ಭಾರತದ ತಂಡವೇ. ಆ ಸಮಾಧಾನವಿತ್ತಾದರೂ ಮಾಜಿ ಶ್ರೇಷ್ಠ ಡಬಲ್ಸ್ ಜೊತೆಗಾರರು, ಸ್ನೇಹಕ್ಕೆ ಮತ್ತೊಂದು ಹೆಸರಿನಂತಿದ್ದವರು ಗ್ರಾಂಡ್ಸ್ಲಾಮ್ ಫೈನಲ್ನಲ್ಲಿ ಎದುರಾಬದುರಾಗಿ ನಿಂತು ಬಡಿದಾಡಿದಾಗ ಯಾರು ಗೆಲ್ಲುವರೋ ಎಂಬ ರೋಚಕತೆ ಸಹಜವೇ ಸರಿ, ಹಾಗೆ ಕಳೆದುಹೋದ ಸಂಬಂಧವೊಂದರ ಸಂಕಟವನ್ನೂ ಭಾರತೀಯರು ಅಂದು ಅನುಭವಿಸಿದರು. ಟೆನಿಸ್ನಲ್ಲಿ ಭಾರತದ ವಿಜಯಪತಾಕೆಯನ್ನು ಎಗರಿಹಾಕಿದ ಮೊದಲಿಗರು ಈ ಇಬ್ಬರು. ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿಯವರ ಡಬಲ್ಸ್ ಜೋಡಿಯೆಂದರೆ ಒಂದು ಕಾಲದಲ್ಲಿ ಅಜೇಯರು ಎಂಬ ಮಾತು ಚಾಲ್ತಿಯಲ್ಲಿತ್ತು. ಅವರಿಬ್ಬರೂ ಸೇರಿ ಮೊಟ್ಟಮೊದಲ ಬಾರಿಗೆ ವಿಶ್ವ ಟೆನಿಸ್ ಲಾನ್ನಲ್ಲಿ ಭಾರತಕ್ಕೊಂದು ಗೌರವಯುತ ಸ್ಥಾನ ದೊರಕಿಸಿಕೊಟ್ಟರು. ಅವರಿಬ್ಬರ ಸ್ನೇಹವೂ ಅಷ್ಟೇ ಸುಮುಧರವೂ ಆಗಿತ್ತು, ಮನೆಮಾತಾಗಿತ್ತು ಕೂಡ. ಅವರು ಹಲವಾರು ಯುವಕರಿಗೆ ಆದರ್ಶವಾಗಿದ್ದರು. 5ನೇ ಕ್ಲಾಸಿನ ಪಠ್ಯ ಪುಸ್ತಕಗಳಲ್ಲಿ ಇವರ ಜೀವನ-ವಿಕ್ರಮಗಳ ಬಗ್ಗೆ ಪಾಠ ಸೇರಿಸಲಾಗಿತ್ತು. ಹಾಗಿದ್ದವರು ಅವರು.

ಆದರೆ,....ಅದೇನಾಯಿತೋ ಬರಬರುತ್ತಾ ಅವರಿಬ್ಬರ ನಡುವೆ ಬಿರುಕು ಕಾಣಿಸಿಕೊಳ್ಳಲಾರಂಭಿಸಿತು. ಅದ್ಯಾಕೋ ಗೊತ್ತಿಲ್ಲ ಆ ಡಬಲ್ಸ್ ಜೋಡಿಯಲ್ಲಿ ಮೊದಲಿನ ಮ್ಯಾಜಿಕ್ ಇರಲಿಲ್ಲ, ಕೆಮಿಸ್ಟ್ರಿ ಮೋದಲೇ ಇರಲಿಲ್ಲ. ಅಸಲಿಗೆ ಇವರಿಬ್ಬರ ನಡುವೆ ಬಿರುಕು ಕಾಣಿಸಿಕೊಂಡಿತಾದರೂ ಯಾಕೆ? ಇಬ್ಬರಲ್ಲಿ ಯಾರು ಉತ್ತಮ ಆಟಗಾರ, ಜೊತೆಯಾಗಿ ಸಾಧಿಸಿಸದ ವಿಕ್ರಮಗಳಲ್ಲಿ ಯಾರ ಪಾಲು ಹೆಚ್ಚು, ಹೀಗೆ ಶುರುವಾಯಿತು ನೋಡಿ ಜಗಳ......ಲಿಯಾಂಡರ್ ಪೇಸ್ ಮೊದಲಿಂದಲೂ ಮೀಡಿಯಾ ಫ್ರೆಂಡ್ಲಿ, ಮೀಡಿಯಾದಲ್ಲಿ ಮಿಚುತ್ತಿದ್ದ ಪೇಸ್ ಈ ಎಲ್ಲ ವಿಕ್ರಮಗಳೂ ತನ್ನೊಬ್ಬನದೇನೇನೋ ಎನ್ನುವಂತೆ ವರ್ತಿಸತೊಡಗಿದ, ಮಹೇಶ್ ಕುಂಗಿ ಹೋದ. ಬರಬರುತ್ತಾ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿಯರ ನಡುವೆ ಮಾತು ಕಡಿಮೆಯಾಯಿತು. ಮಧ್ಯವತರ್ಿಗಳ ಮೂಲಕ ಮಾತನಾಡತೊಡಗಿದರು. ಅಲ್ಲಿಗಾಯಿತು, ಜಗಳ ಊರಗಳವಾಗಿ ಮಧ್ಯೆ ಗೋಡೆಯೊಮದು ಎದ್ದು ಕೂತಿತ್ತು. ಬಹಿರಂಗವಾಗಿ ಒಬ್ಬರಿಗೊಬ್ಬರು ಬೈದುಕೊಂಡರು. ಮಿಡಿಯಾ ಅದನ್ನು ಇನ್ನೂ ದೊಡ್ಡದು ಮಾಡಿತು. ಕಡೆಗೊಂದು ದಿನ ಇಬ್ಬರೂ ಇನ್ನು ಮುಂದೆ ತಾವಿಬ್ಬರೂ ಒಟ್ಟಿಗಾಡುವುದಿಲ್ಲವೆಂದು ಘೋಷಿಸಿಬಿಟ್ಟರು. ಇದನ್ನು ದೊಡ್ಡ ಸುದ್ದಿ ಮಡಿ ಆಡಿಕೊಂಡು ನಕ್ಕಿತ್ತು ಮಿಡಿಯಾ! ಆದರೆ ಇವೆಲ್ಲವುಗಳಲ್ಲಿ ನಷ್ಟವಾಗಿದ್ದು ಮಾತ್ರ ಭಾರತದ ಟೆನಿಸ್ ಕ್ಷೇತ್ರಕ್ಕೆ. ಈ ಭಲೇ ಜೋಡಿಯ ಮ್ಯಾಜಿಕ್ ಇಲ್ಲದೇ ಸದ್ಯ ಇದು ಕಳೆಗುಂದಿದೆ.

ಕ್ರಿಕೆಟ್ - ವಾಮನನ ತ್ರಿವಿಕ್ರ
ಭಾರತದ ಕ್ರಿಕೆಟ್ ಜೈತ್ರಯಾತ್ರೆ ಅಭಾಧಿತವಾಗಿ ಮುಂದುವರಿಯುತ್ತಿದೆ. ಲಂಕಾದಲ್ಲಿ ಕಾಂಪಾಕ್ ಸೀರೀಸ್ ಅನ್ನು ತನ್ನದಾಗಿಸಿಕೊಳ್ಳುವುದರೊಂದಿಗೆ ಭಾರತ ಸದ್ಯ ಏಕದಿನ ರ್ಯಾಕಿಂಗ್ಗಳಲ್ಲಿ ಎರಡನೇ ಸ್ಥಾನಕ್ಕೇರಿದೆ. ಸರಣಿ ಮಧ್ಯೆ ಒಮ್ಮೆ ಭಾರತ ವಿಶ್ವದ ಅತ್ಯುತ್ತಮ ಏಕದಿನ ತಂಡದ ಗೌರವಕ್ಕೆ ಪಾತ್ರವಾಗಿತ್ತು. ಆದರೆ ಮರುದಿನವೇ ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಹೀನಾಯವಾಗಿ ಸೋಲುವುದರೊಂದಿಗೆ ಈ ಕಿರೀಟ ಕೇವಲ 24 ಘಂಟೆಗಳಲ್ಲಿ ಉರುಳಿ ಬಿತ್ತು. ಲಂಕಾದಲ್ಲಿ ನಡೆದ ಕಾಂಪಾಕ್ ತ್ರಿಕೋನ ಸರಣಿಯಲ್ಲಿ ಭಾರತ, ಶ್ರೀಲಂಕಾ ಮತ್ತು ನ್ಯೂಜೀಲ್ಯಾಂಡ್ ಭಾಗವಹಿಸಿದ್ದವು. ಈ ಸರಣಿಯಲ್ಲಿ ಅಚ್ಚರಿಯೆಂಬಂತೆ ಅತ್ಯಂತ ಸಮರ್ಥ ತಂಡವಾದ ನ್ಯೂಜೀ ಲ್ಯಾಂಡ್ ತೀರ ಕಳಪೆ ಪ್ರದರ್ಶನ ನೀಡಿಬಿಟ್ಟಿತು. ಹಾಗಾಗಿ ಸರಣಿಯ ಆರಂಭದಿಂದಲೇ ಈ ಸರಣಿ ಬರಿಯ ಭಾರತ ಮತ್ತು ಶ್ರೀಲಂಕಾ ನಡುವಿನ ದ್ವೈಪಾಕ್ಷಿಕ ಸರಣಿಯಂತೆ ಭಾಸವಾಗುತ್ತಾ ಹೋಯಿತು. ಭಾರತ ಅತ್ಯುತ್ತಮ ಪ್ರದರ್ಶನ ಪ್ರದಶರ್ಿಸುತ್ತಾ ಬಂದು ವಿಶ್ವ ರ್ಯಾಂಕಿಂಗ್ನಲ್ಲಿ ಮೊದಲನೇ ಸ್ಥಾನಕ್ಕೂ ಏರಿಬಿಡ್ತು. ಆದರೆ ಮಾರನೆಯ ದಿನವೇ ಭಾರತ ಶ್ರೀಲಂಕಾ ಎದುರು 160ಕ್ಕೂ ಹೆಚ್ಚು ರನ್ಗಳ ಭಾರೀ ಅಂತರದಿಂದ ಹೀನಾಯ ಸೋಲು ಕಂಡು ಗರ್ವಭಂಗ ಮಾಡಿಸಕೊಂಡಿತು, ಇದೊಂದು ರೀತಿಯಲ್ಲಿ ಒಳ್ಲೆಯದೇ ಆಯಿತೆನ್ನಿ. ಮೊನ್ನೆ ಭಾನುವಾರ ನಡೆದ ಫೈನಲ್ ಪಂದ್ಯವನ್ನು ಭಾರತೀಯ ತಂಡ ಯಾವುದೇ ಅಹಂಕಾರ, ಹಮ್ಮ-ಬಿಮ್ಮುಗಳಿಲ್ಲದೇ ಸೀರಿಯಸ್ ಆಗಿ ತೆಗೆದುಕೊಂಡಿತ್ತು.
ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ದೊರೆತಾಗ ಓಪನರ್ಸ್ ಆಗಿ ಫೀಲ್ಡಿಗಿಳಿದದ್ದು ಭಾರತದ ವಾಮನ ಸಚಿನ್ ತೆಂಡೂಲ್ಕರ್ ಮತ್ತು ಗೋಡೆ ರಾಹುಲ್ ದ್ರಾವಿಡ್. ಎಲ್ಲರಿಗೂ ಆಶ್ಚರ್ಯ. ಕೆಲವರು ಮೂಗು ಮುರಿದರಾದರೂ ಸುಮಾರು 6-7 ವರ್ಷಗಳ ಹಿಂದಿನ ಟೈಟನ್ಸ್ ಆಟವನ್ನು ಹಾಗೇ ಮತ್ತೆ ಸವಿಯುವ ಸದಾವಕಾಶ ಅಭಿಮಾನಿಗಳಿಗೆ. ..ಶ್ರೀಲಂಕಾದ ಅರಿ-ಭಯಂಕರ ಬೌಲರ್ಗಳೆನಿಸಿಕೊಂಡವರೆಲ್ಲಾ ಅತ್ತ ಸಚಿನ್ ಇತ್ತ ದ್ರಾವಿಡ್ ನಿಂತು ಆಡುತ್ತಿದ್ದರೆ ಉತ್ತರವಿಲ್ಲದೆ ಅಂಡಲೆಯುತ್ತಿದ್ದು, ಅವರ ಅರೆಬೆಂದ `ಮಿಸ್ಟರಿ ಟೆಕ್ನಿಕ್ಕುಗಳಿಗೆ' ಉತ್ತರದಂತಿತ್ತು ಮೊದಲ ಬಾಲಿನಿಂದಲೇ ಆಕ್ರಮಣಕಾರಿ ದಾಳಿಗಿಳಿದ ಈ ಜೋಡಿ ಅತ್ಯುತ್ತಮ ಆಟ ಪ್ರದರ್ಶಿಸಿದರು. ಆದರೆ ಅತ್ಯಂತ ನಿರ್ಣಾಯಕ ಹಂತದಲ್ಲಿ ದ್ರಾವಿಡ್ 38 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಮುಂದೆ ಸಚಿನ್ಗೆ ಜೊತೆಯಾದವರು ಧೋನಿ. ಅಷ್ಟರಲ್ಲಾಗಲೇ ಸಚಿನ್ ಪಟಾಕಿ ಸಿಡಿಸಲಾರಂಭಿಸಿದ್ದರು. ಧೋನಿ ಆ ಎಂಡಿನಲ್ಲಿ ನಿಂತು ಸಚಿನ್ ಆಟಕ್ಕೆ ಸಾಥ್ ನೀಡುತ್ತಾ ಸಾಗಿದರು. ಅಷ್ಟೇ ನೋಡನೋಡುತ್ತಲೇ ಸಚಿನ್ ಏಕದಿನ ಪಂದ್ಯಗಳಲ್ಲಿ ತಮ್ಮ ಅಖಂಡ 44ನೇ ಸೆಂಚುರಿಯನ್ನು ಪೂರ್ಯಸಿ ಹಬ್ಬ ಮಾಡಿದರುರಿತ್ತ ಧೋನೀದು ಕೂಡ ಅರ್ಧಶತಕ ಪೂರ್ಣವಾಗಿತ್ತು. ಇನ್ನು ಆಯ್ತು ಲಂಕಾದ ಕಥೆ ಮುಗಿಯಿತು ಎನ್ನುವಷ್ಟರಲ್ಲಿ ಧೋನಿ ಔಟಾಗಿ ಹೋದರು. ಆದರೂ ನಂತರ ಬಂದವರೆಲ್ಲರು ಸೇರಿ ಲಂಕಾ ವಿರುದ್ಧ ಛಾಲೆಂಜಿಂಗ್ ಎನ್ನಬಹುದಾದ 315 ರನ್ಗಳ ಮೊತ್ತವನ್ನು ಗುಡ್ಡೆ ಹಾಕಿದರು. ಸಚಿನ್ 138 ರನ್ ಗಳಿಸಿ ಔಟಾದರು.

ಲಂಕಾ ಸಿಂಹಳೀಯರು ಬ್ಯಾಟಿಂಗ್ಗೆ ಬಂದಾಗ ಅದರ ಹಿಂದಿನ ಮ್ಯಾಚಿನಲ್ಲಿ 370 ರನ್ ಹೊಡೆದು ಭಾರತವನ್ನು ಮಣಿಸಿದ್ದೆವು ಅಂತಲೋ ಏನೋ ಅವರಲ್ಲಿ ಒಮದು ಕಾನ್ಫಿಡೆನ್ಸ್ ಇತ್ತು. ಆದರೆ ಶುರುವಿನಲ್ಲೇ ಯಾರನ್ನೂ ಸೆಟ್ಲ್ ಆಗಲು ಬಿಡದೆ ಒಂದರ ಹಿಂದೊಂದರಂತೆ ಇಬ್ಬರು ಓಪನರ್ಸ್ ವಿಕೆಟ್ಗಳನ್ನೂ ಹರ್ಭಜನ್ ಸಿಂಗ್ ಕಿತ್ತುಬಿಟ್ಟರು. ಅಲ್ಲಿಗೆ ಲಂಕಾಧಿಪತಿಗಳು ದಿಕ್ಕು ತಪ್ಪಿಬಿಟ್ಟರು. ಇನ್ನು ಅವರಿಗೆ ಈ ಮ್ಯಾಚ್ ಗೆಲ್ಲಲು ಇದ್ದ ಒಂದೇ ಆಸರೆಯೆಂದರೆ ಸನತ್ ಜಯಸೂರ್ಯ. ಅವರು ಬಂದದ್ದೇ ನಮ್ಮ ಬೌಲರ್ಗಳನ್ನು ಯದ್ವಾತದ್ವಾ ಓಡಿಸಲಾರಂಭಿಸಿದರು. ಇನ್ನು ಇವರು ಹೀಗೆ ಕಚ್ಚಿಕೊಂಡರೆ ಮ್ಯಾಚ್ ಕೈತಪ್ಪಿಹೋಗುತ್ತದೆ ಎಂದು ಚಿಂತಿಸುತ್ತಿರುವಷ್ಟರಲ್ಲೇ ಜಯಸೂರ್ಯ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ತೆರಳಿದರು. ಇನ್ನು ಅಲ್ಲಿಂದ ಮುಂದಕ್ಕೆ ಲಂಕಾ ತಂಡ ಗೌರವಯುತ ಪ್ರದರ್ಶನವನ್ನೇ ತೋರಲಿಲ್ಲ, ಮಿಕ್ಕೆಲ್ಲರೂ ಹೋದ ಪುಟ್ಟ, ಬಂದ ಪುಟ್ಟ ಅಂತ ತೊಪತೊಪ ವಿಕೆಟ್ ಒಪ್ಪಿಸಿದರು. ಹರ್ಭಜನ್ ಸಿಂಗ್ 5 ವಿಕೆಟ್ ಪಡೆದು ಅತ್ಯುತ್ತಮ ಪ್ರದರ್ಶನ ತೋರಿದರು. 68 ರನ್ಗಳಿಂದ ಜಯ ದಾಖಲಿಸಿ ದಿಗ್ವಿಜಯದ ನಗೆ ಬೀರಿತು. ಸಚಿನ್ ಮ್ಯಾನ್ ಆಫ್ ದಿ ಸೀರೀಸ್ ಆಗಿ ರಾರಾಜಿಸಿದರು.

ಸಚಿನ್ಗೀಗ 36 ವರ್ಷ, ಇನ್ನೂ ಅವರಲ್ಲಿ ಎಷ್ಟು ವರ್ಷಗಳ ಕ್ರಿಕೆಟ್ ಇದೆಯೋ ಬಲ್ಲವರಿಲ್ಲ. ಆದರೆ ಈ ವಯಸ್ಸಿನಲ್ಲೂ ಆ ಕ್ಲಾಸಿಕ್ ಎನ್ನುವಂತಹ ಬ್ಯಾಟಿಂಗ್, ಆ ಸ್ಟ್ರೋಕ್ಗಳು, 44ನೇ ಏಕದಿನ ಶತಕ ಇವೆಲ್ಲವೂ ಕೇವಲ ನಮ್ಮ ಸಚಿನ್ ತೆಂಡೂಲ್ಕರ್ ಕೈಯಿಂದ ಮಾತ್ರ ಸಾಧ್ಯ. 16 ವರ್ಷಗಳ ಹಿಂದೆ ಮೊದಲ ಬಾರಿಗೆ ಕ್ರೀಸಿಗೆ ಬಂದಾಗ ಹೇಗೆ ಆಡುತ್ತಿದ್ದರೋ ಈಗಲೂ ಅದೇ ಮೊನಚು, ಅದೇ ಸ್ಟೈಲು, ಅದೇ ಬೀಸು, ಅದೇ ನಮ್ರತೆ. ನಮಗಿನ್ನೇನೂ ಅಂತ ಆಸೆಯಿಲ್ಲ ಕಣ್ರೀ - ಸಚಿನ್ 2011ರಲ್ಲಿ ಬಾರತ ಉಪಖಂಡದಲ್ಲಿ ನಡೆಯುವ ಕ್ರಿಕೆಟ್ ವಿಶ್ವಕಪ್ನಲ್ಲೂ ಇದ್ದು ಹೀಗೇ ಆಡಿ, ಬೌಲರ್ಗಳಿಗೆ ಬೆವರಿಳಿಸಿ ಭಾರತಕ್ಕೇ ಆ ವಿಶ್ವಕಪ್ ಅನ್ನು ಜಯಿಸಿ ತಂದುಕೊಟ್ಟುಬಿಡಲಿ, ಆಮೇಲೆ ಅವರು ರಿಟೈರ್ ಆಗಲಿಕ್ಕೆ ನಮಗೇನೂ ಅಭ್ಯಂತರವಿಲ್ಲ...ಏನಂತೀರಾ.

`ಹೊಸ ಆರಂಭ'ವೊಂದರ ಶುಭಸಂಕಲ್ಪ - america - islam - obama - a triangle love - story




ಅಮೆರಿಕಾದ ಡಬ್ಲ್ಯೂಟಿಒ ಕಟ್ಟಡದಲ್ಲಿ ವಿಮಾನಗಳು ನುಗ್ಗಿದ ಆ ದುರಂತಕ್ಕೆ 8 ವರ್ಷ. ಇತ್ತೀಚಿನ ಇತಿಹಾಸದಲ್ಲಿ ವಿಶ್ವ ನದಿಯ ಹರಿವ ದಿಕ್ಕನ್ನೇ ಬದಲಿಸಿ ಕೆಡವಿದಂಥ ಗಟನೆಯೆಂದರೆ ಅದು 9/11! ಹೌದು 9/11 ನಂತರ ವಿಶ್ವದಲ್ಲಿ ಯಾವುದೂ ಮೊದಲಿನಂತಿಲ್ಲ. 9/11 ದಾಳಿಯ ಹಿನ್ನಲೆಯಲ್ಲಿ ಭಯೋತ್ಪಾದನೆಯ ವಿರುದ್ಧದ ಸಮರ - ವಾರ್ ಆನ್ ಟೆರರ್ನ ಹೆಸರಿನಲ್ಲಿ ಅಮೆರಿಕಾ ವಿಶ್ವದ ಮುಸ್ಲಿಂ ಜಗತ್ತಿನ ಮೇಲೆ ಮುರಕೊಂಡು ಬಿತ್ತು. ವಾರ್ ಆನ್ ಟೆರರ್ನ ಜೊತೆಜೊತೆಗೇ ವಾರ್ ಆನ್ ಟ್ರುಥ್ ಮತ್ತು ವಾರ್ ಆನ್ ಹಿಸ್ಟರಿ ಕೂಡ ನಡೆದು ಹೋಯಿತು. ನಾಗರೀಕತೆಗಳ ಸಂಘರ್ಷದ ಮಾತುಗಳು ಮತ್ತೆ ಮತ್ತೆ ಕೇಳಿ ಬಂದವು. ಅಮೆರಿಕಾ ಮತ್ತು ಇಸ್ಲಾಂ - ಇವೆರಡೂ ಒಂದಕ್ಕೊಂದು ಹೊರತಾದಂಥವು, ಇವೆರಡನ್ನೂ ಒಂದೇ ಸಾಲಿನಲ್ಲಿ ಪ್ರಸ್ತಾಪಿಸಲಾದೀತೆ ಎನ್ನುವ ಕಾಲವೊಂದಿತ್ತು. ಆದರೆ ಕಾಲ ಬದಲಾಗಿದೆ. ಅತ್ತ 9/11ನ ವರ್ಷಾಚರಣೆಯ ದುಃಖದಲ್ಲಿಯೂ ಅಧ್ಯಕ್ಷ ಬರಾಕ್ ಹುಸೇನ್ ಒಬಾಮಾ ವೈಟ್ ಹೌಸ್ನಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದರು! ವೈಟ್ ಹೌಸ್ ಇಫ್ತಾರ್ ಕೂಟಗಳು ಹೊಸವೇನಲ್ಲ. ಬುಷ್ ಕಾಲದಲ್ಲೂ ಇವನ್ನು ಏರ್ಪಡಿಸಲಾಗುತ್ತಿದ್ದರೂ ಇದನ್ನು ಕಾಟಾಚಾರಕ್ಕೆ ನಿರ್ವಹಿಸಿದರೇ ಹೊರತು ಮನಸಿಟ್ಟು ಮಾಡಿದವರಿಲ್ಲ. ಆದರೆ ಬರಾಕ್ ಒಬಾಮಾ ಇದನ್ನು ಬದಲಿಸಿದ್ದಾನೆ. ಇಫ್ತಾರ್ ಕೂಟವನ್ನು ಅಮೆರಿಕಾ-ಇಸ್ಲಾಂ ಸೌಹಾರ್ದ
ವೃದ್ದಿಗೆ ವೇದಿಕೆಯಾಗಿ ಬಳಸಿಕೊಂಡಿದ್ದಾನೆ.

ಒಬಾಮಾ ಅಧಿಕಾರಕ್ಕೆ ಬಂದಾಗಿನಿಂದ ಅಮೆರಿಕಾ ಸರ್ಕಾರದ ಮುಸ್ಲಿಂ ವಿದ್ವೇಷದ
ಕಿಚ್ಚು ಆವಿಯಾಗತೊಡಗಿದೆ. ಇಸ್ಲಾಂನ ಮೂಲಭೂತವಾದಿ ಭಯೋತ್ಪಾದಕರನ್ನು ಮಿಲಿಟರಿ ಶಕ್ತಿಯಿಂದ ದಮನ ಮಾಡಲಾಗುವುದಿಲ್ಲ, ಮೇಲಾಗಿ ತಲೆತಿರುಕರೊಂದಷ್ಟು ಜನ ಇಸ್ಲಾಂ ಹೆಸರಿನಲ್ಲಿ ಭಯೋತ್ಪಾದನೆಗಿಳಿದರೆ ಅದಕ್ಕೆ ಇಸ್ಲಾಂ ಅನ್ನೇ ದೂಷಿಸುವುದು ಸರಿಯಲ್ಲ, ಅಂತಹದರಲ್ಲಿ ಯುದ್ಧ ಸಾರುವುದು ಮೂರ್ಖತನವಾಗುತ್ತದೆಯೆಂಬ ಕನಿಷ್ಠ ಅರಿವುಳ್ಳ ಒಬಾಮಾ ಅಮೆರಿಕಾದ ಅಧ್ಯಕ್ಷನಾಗಿರುವುದು ಈ ಬದಲಾವಣೆ ತಂಗಾಳಿ ಬೀಸಲು ಕಾರಣ. ಇರಾಕ್ ಯುದ್ಧವನ್ನು ಖಂಡಿಸುತ್ತಾ, ನಾಗರೀಕತೆಗಳ ಸಂಘರ್ಷ ಥಿಯರಿಯ ವಿರುದ್ಧ ಮಾತನಾಡುತ್ತಾ, ವಿಶ್ವ ಭ್ರಾತೃತ್ವದಾಧಾರದ ಮೇಲೆ ನಿಂತ ವಿಶ್ವದ ಕನಸು ಕಟ್ಟಿಕೊಂಡ ಕಿಂದರಜೋಗಿಯಂತೆ ತನ್ನ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ನಡೆಸಿ ವಿಜಯಿಯಾಗಿ ವೈಟ್ಹೌಸ್ ಒಳಹೊಕ್ಕವನು ಒಬಾಮಾ.

ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದ ಒಬಾಮಾ ಅಮೆರಿಕಾ ಮತ್ತು ಮುಸ್ಲಿಂ ಜಗತ್ತಿಗಳ ನಡುವಿನ ಸಂಬಂಧಗಳನ್ನು ವೃದ್ಧಿಸಲು ತನ್ನ ಕೈಲಾದಷ್ಟು ಪ್ರಯತ್ನ ನಡೆಸುತ್ತಲೇ ಬಂದಿದ್ದಾನೆ. ಮೊದಲೇ ಮಾತು ಕೊಟ್ಟಂತೆ ಪರಮ ಕುಖ್ಯಾತ ಗ್ವಾಂಟನಮೋ ಬೇ ಚಿತ್ರಹಿಂಸಾ ಕೇಂದ್ರವನ್ನು ಬಂದ್ ಮಾಡಿಸಿದ್ದಾನೆ. ತನ್ನ ಮೊದಲ ನಿಲುವಿಗೆ ಬದ್ಧನಾಗಿ ಇರಾಕನ್ನು ಇರಾಕಿಗರಿಗೇ ಬಿಟ್ಟು ತನ್ನ ಸೈನ್ಯವನ್ನು ಸಂಪೂರ್ಣವಾಗಿ ವಾಪಸು ಕರೆಸಿಕೊಂಡಿದ್ದಾನೆ. ಒಸಾಮಾನ ಕಥೆ ಇತ್ಯರ್ಥವಾಗುವವರೆಗೆ ಅಫಘಾನಿಸ್ತಾನದಿಂದ ಸೈನ್ಯದ ವಾಪಸಾತಿಯಿಲ್ಲ ಎಂದು ಹೇಳಿದ್ದರೂ ಅಲ್ಲಿ 2001ರ ನಂತರ ಮೊದಲ ಬಾರಿಗೆ ಪ್ರಜಾಸತ್ತಾತ್ಮಕವಾಗಿ ಚುನಾವಣೆಗಳು ನಡೆಯುತ್ತಿವೆ. ಅಲ್ಲಿ ಅಮೆರಿಕಾ ಕೂರಿಸಿದ್ದ ಹಮೀದ್ ಕಜರ್ಾಯ್ ಸೋಲಿನ ಭೀತಿಯಲ್ಲಿರುವುದು ಚುನಾವಣೆಯ
ಪ್ರಜಾಸತ್ತಾತ್ಮಕತೆಗೆ ಹಿಡಿದ ಕನ್ನಡಿಯಾಗಿದೆ. ಇತ್ತೀಚೆಗೆ ಒಬಾಮಾ ಸಿಕ್ಕ ಪ್ರತಿ ಚಿಕ್ಕ ಅವಕಾಶವನ್ನೂ ಇಸ್ಲಾಂ ಜಗತ್ತಿನೊಂದಿಗೆ ಸಂಭಾಷಿಸಲು, ಅವರಲ್ಲಿ ಆಳವಾಗಿ ಬೇರುರಿವ ಅಮೆರಿಕಾ ಕುರಿತ ದ್ವೇಷ, ಅನುಮಾನಗಳನ್ನು ದೂರ ಮಾಡುಲು ಪ್ರಯತ್ನಿಸುತ್ತಿದ್ದಾನೆ. ಇಫ್ತಾರ್ ಕೂಟ ಅಂತಹುದೊಂದು ಗೆಸ್ಚರ್ ಅಷ್ಟೆ. ಒಬಾಮಾ ಮೊದಲ ಬಾರಿಗೆ ಮುಸ್ಲಿಂ ಜಗತ್ತಿನೊಂದಿಗೆ ಸಂಧಿಸಿದ್ದು ಮುಖಕ್ಕೆ ಮುಖ ಕೊಟ್ಟು ಭುಜಕ್ಕೆ ಭುಜ ಆನಿಸಿ ಆತ್ಮೀಯವಾಗಿ ಸಂಭಾಷಿಸಿದ್ದು ಈ ಏಪ್ರಿಲ್ನಲ್ಲಿ, ಪಿರುಮಿಡ್ಡುಗಳ ನಾಡು ಈಜಿಪ್ಟಿನ ಕೈರೋದಲ್ಲಿ. ಒಬಾಮಾನ ಕೈರೋ ಭಾಷಣ ಐತಿಹಾಸಿಕವೇ ಸರಿ. ಒಬ್ಬ ಅಮೆರಿಕಾದ ಅಧ್ಯಕ್ಷ ಮುಸ್ಲಿಂ ಜಗತ್ತಿನಲ್ಲಿ ನಿಂತು, re-conciliationನ ಮಾತನಾಡಿದ್ದು ಐತಿಹಾಸಿಕವೂ, ಚೇತೋಹಾರಿಯೂ ಆಗಿತ್ತು.

-"ನಾವು ಅಮೆರಿಕಾ ಮತ್ತು ಜಗಿತ್ತಿನಾದ್ಯಂತ ಇರುವ ಮುಸ್ಲಿಮರ ನಡುವೆ ಕರ್ಷಣಗಳಿರುವ ಸಮಯದಲ್ಲಿ ಸಂಧಿಸುತ್ತಿದ್ದೇವೆ. ಪಶ್ಚಿಮ ಮತ್ತು ಮುಸ್ಲಿಂ ಜಗತ್ತುಗಳ ನಡುವಿನ ಸಂಬಂಧಗಳು ಶತಮಾನಗಳಿಂದ ಸಹಧಾವಿಯೂ, ಸಹಕಾರಿಯೂ ಆಗಿದ್ದರೂ ಅದು ಧಾರ್ಮಿಕ ಯುದ್ಧಗಳು ಮತ್ತು ಕರ್ಷಣಗಳಿಂದಲೂ ಕೂಡಿದೆ. ಇತ್ತೀಚೆಗೆ ಅನೇಕ ಮುಸ್ಲಿಮರಿಗೆ ತಮ್ಮ ಹಕ್ಕುಗಳನ್ನು ಮತ್ತು ಅವಕಾಶಗಳನ್ನು ವಂಚಿಸಿದ ವಸಾಹತುಶಾಹಿತನ ಮತ್ತು ಶೀತಲಸಮರ....... ಜಾಗತೀಕರಣ ಮತ್ತು ಆಧುನಿಕತೆ ತಂದಿರುವ ಅಪಾರ ಬದಲಾವಣೆ ಮುಸ್ಲಿಂ ಜಗತ್ತಿಗೆ ಪಶ್ಚಿಮ ಜಗತ್ತು ಇಸ್ಲಾಂನ ಸಂಪ್ರದಾಯಕ್ಕೆ ವಿರುದ್ಧವಾಗಿದೆಯೆಂಬ ಭಾವನೆಯನ್ನು ಮೂಡಿಸಿರುವುದು ನಿಜ. ಇದನ್ನು ಕೆಲವು ಹಿಂಸಾವಿನೋದಿ ಮೂಲಭೂತವಾದಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. 9/11 ದಾಳಿ ನನ್ನ ದೇಶದ ಕೆಲವರು ಇಸ್ಲಾಂ ಅನ್ನು ಅಮೆರಿಕಾ, ಮತ್ತು ಮಾನವ ಹಕ್ಕುಗಳಿಗೆ ವಿರೋಧವಾದದ್ದೆಂದು ಭಾವಿಸುವಂತೆ ಮಾಡಿತು. ಎಂದಿನವರೆಗೂ ನಮ್ಮ ನಡುವಿನ ಸಂಬಂಧ ನಮ್ಮ ನಡುವಿನ ವೈರುಧ್ಯಗಳಿಂದ ಗೊತ್ತುಮಾಡಲ್ಪಟ್ಟಿರುತ್ತದೋ, ಅಲ್ಲಿವರೆಗೆ ನಾವು ಶಾಂತಿಯ ಬದಲಿಗೆ ದ್ವೇಷ ಬಿತ್ತುವ, ಸಹಕಾರದ ಬದಲಿಗೆ ಕರ್ಷಣವನ್ನು ಪ್ರೋತ್ಸಾಹಿಸುವವರ ಕೈಯನ್ನು ಬಲಪಡಿಸುತ್ತಿರುತ್ತೇವೆ. ಈ ಸಂಶಯ ಮತ್ತು ವೈಷಮ್ಯದ ಚಕ್ರಸುಳಿಯಿಂದ ನಾವು ಹೊರಬರಬೇಕಿದೆ. ಹೊಸ ಆರಂಭ - ಪರಸ್ಪರ ಹಿತಾಸಕ್ತಿ, ಪರಸ್ಪರ ಗೌರವ ಮತ್ತು ಅಮೆರಿಕಾ ಮತ್ತು ಮುಸ್ಲಿಂ ಜಗತ್ತು ಒಂದಕ್ಕೊಂದು ಎಕ್ಸ್ಕ್ಲೂಜಿವ್ ಅಲ್ಲ ಮತ್ತು ಅವೆರಡೂ ಸ್ಪರ್ಧೆಗೆ ಬೀಳುವ ಅಗತ್ಯವಿಲ್ಲವೆನ್ನುವ ಸತ್ಯಾಂಶದ ಆಧಾರದಲ್ಲಿ ನಮ್ಮ ನಡುವಿನ ಸಂಬಂಧಗಳಲ್ಲಿ ಹೊಸ ಆರಂಭ ಕೇಳಲು ನಾನಿಲ್ಲಿಗೆ ಬಂದಿದ್ದೇನೆ......."

ಅಮೆರಿಕಾದ ಅಧ್ಯಕ್ಷ ಇದನ್ನು ಹೇಳುವುದು ಎಷ್ಟು ಚೇತೋಹಾರಿಯಲ್ಲವೇ? ಇದು ವಿಶ್ವ ಶಾಂತಿಗೊಂದು ಮುನ್ನುಡಿಯಂತಿಲ್ಲವೇ? ಇದನ್ನು ನಾವು ಬುಷ್ನಿಂದ ನಿರೀಕ್ಷಿಸಲು ಸಾಧ್ಯವಿತ್ತೇ? ಅಮೆರಿಕಾ ಮತ್ತು ಮುಸ್ಲಿಂ ಜಗತ್ತಿನ ಸಂಭಾಷಣೆಯಲ್ಲಿ ಈ ಹಿಂದೆ ಸಂಘರ್ಷಮಯವಾಗಿದ್ದ, ಶಾಸಿಸುವಂತಿದ್ದ ಭಾಷೆ ಒಬಾಮಾ ಭಾಷಣದಲ್ಲಿ ಪರಸ್ಪರ ಗೌರವ, ಪ್ರೀತ್ಯಾದರಗಳ ಸ್ವರೂಪ ಪಡೆದಿತ್ತು. ಇಷ್ಟೇ ಅಲ್ಲದೆ ಅಮೆರಿಕನ್ನರ ಮನಸ್ಸಿನಾಳಗಳಲ್ಲಿ ಮುಸ್ಲಿಮರ ಕುರಿತು ಬೇರೂರಿರುವ ತಪ್ಪು ಕಲ್ಪನೆ, ಅನುಮಾನ, ಹೆದರಿಕೆಗಳನ್ನೂ ದೂರಮಾಡಲು ಕೂಡ ಒಬಾಮಾ ಶ್ರಮಿಸುತ್ತಿದ್ದಾನೆ. ಮುಖ್ಯವಾಗಿ ಮುಸ್ಲಿಮರ ಕುರಿತು ಇರುವ ಪೂರ್ವಾಗ್ರಹ ಪೀಡಿತ ಸಿದ್ಧಮಾದರಿಗಳನ್ನು ತೊಡೆದು ಹಾಕುವೆಡೆ ಆತ ದೃಷ್ಟಿ ಹರಿಸುತ್ತಿದ್ದಾನೆ. ಈ ಎಲ್ಲದರಿಂದ ಬಳಲುತ್ತಿರುವ ಮೈನಾರಿಟಿಯಾದ ಅಮೆರಿಕನ್ ಮುಸ್ಲಿಮರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದಾನೆ. ಅಮೆರಿಕಾದ ಚಾರಿಟಿ ಕಾನೂನಿನಿಂದ ಅಲ್ಲಿನ ಮುಸ್ಲಿಮರು ತಮ್ಮ ಧರ್ಮಾಚರಣೆಯ ಭಾಗವಾದ `ಜಕತ್' ಅನ್ನು ನಿರ್ವಹಿಸಲು ಸಾಧ್ಯವಾಗದಿರುವುದನ್ನು ಗುರುತಿಸಿ ಸರಿಪಡಿಸಿದ್ದು, ಮುಸ್ಲಿಂ ಹುಡುಗಿಯೊಬ್ಬಳನ್ನು ಶಾಲೆಯಲ್ಲಿ `ಹಿಜಾಬ್' ಹಾಕುವಂತಿಲ್ಲ ಎಂದು ಹೊರಗಟ್ಟಿದಾಗ ಸರ್ಕಾರದ ಜಸ್ಟೀಸ್ ಇಲಾಖೆ ಹುಡುಗಿಯ ಪರ ನಿಂತು `ಹಿಜಾಬ್' ತೊಡುವುದು ಅವರ ಧರ್ಮದ ಭಾಗವೆಂದು ವಾದಿಸಿ ಅವಕಾಶ ಮಾಡಿಸಿಕೊಟ್ಟದ್ದು, ಇವೆಲ್ಲಾ ಸಣ್ಣಸಣ್ಣ ವಿಷಯಗಳಾದರೂ, ಒಬಾಮಾನ ಸೂಕ್ಷ್ಮ ಸಂವೇದನೆಗಳನ್ನು ಸಂಕಲ್ಪವನ್ನೂ ತೋರಿಸುತ್ತವೆ. ಒಬಾಮಾ ಮಾಡುತ್ತಿರುವುದೆಲ್ಲಾ ಹಲವರಿಗೆ ಬರಿಯ ಅರ್ಥವಿಲ್ಲದ ರೆಟರಿಕ್ನಂತೆಯೂ ಮತ್ತೆ ಕೆಲವರಿಗೆ ಆಕ್ಷನ್ ರಹಿತ ಗೆಸ್ಚರ್ಗಳೆಂತಯೂ ತೋರಿದೆ. ಆದರೆ ಒಬಾಮಾನ ಈ ನಡೆ ತೀರ ಗಮನಾರ್ಹವಾದದ್ದು ಮತ್ತು ಅರ್ಥಗರ್ಭಿತವಾದದ್ದು. ನೆನಪಿಡಿ ಇದು ಮುಸ್ಲಿಂ ಜಗತ್ತಿನೊಂದಿಗಿನ ಸಂಬಂಧಗಳನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಅಮೆರಿಕಾ ಇಟ್ಟ ಮೊದಲ ಹೆಜ್ಜೆ. ಇದು ರೆಟರಿಕ್ ಎನ್ನುವುದು ನಿಜವಾದರೂ ಅದನ್ನು ಕೂಡ ಇಷ್ಟು ದಿನ ಹೇಳುವವರಿರಲಿಲ್ಲವೆಂಬುದರಲ್ಲಿ ಈ ರೆಟರಿಕ್ನ ಪ್ರಾಮುಖ್ಯತೆ ಅಡಗಿದೆ.


ಅಮೆರಿಕಾ ವಿಶ್ವದ ದೊಡ್ಡಣ್ಣನಂತೆಯೇ ವರ್ತಿಸುತ್ತಾ, ಹಲವಾರು ದೇಶಗಳ ಮೇಲೆ ಸವಾರಿ ಮಾಡುತ್ತಾ ಬಂದಿರುವುದು ಇತಿಹಾಸ. ಅಮೆರಿಕಾ ನವ-ವಸಾಹತುಶಾಹಿ ಆಡಳಿತವನ್ನು ಹೇರಬಯುಸುತ್ತದೆಂಬುದು ಅದರ ವಿರುದ್ಧ ಕೇಳಿ ಬರುವ ಸಾಧಾರಣ ಆರೋಪ. ಇದು ತಕ್ಕಮಟ್ಟಿಗೆ ನಿಜವೂ ಹೌದು. ಇದು ಪರಾಕಾಷ್ಠೆಗೆ ತಲುಪಿದ್ದು ಜಾರ್ಜ್ ಬುಷ್ನ ಕಾಲದಲ್ಲಿ. ಕ್ಲಿಂಟನ್ ಆಡಳಿತದ ನಂತರ ಅಮೆರಿಕಾದಲ್ಲಿ ಸಂಪ್ರದಾಯವಾದಿ ರಿಪಬ್ಲಿಕನ್ನರು ಅಧಿಕಾರಗ್ರಹಣ ಮಾಡಿದರು. ಜಾರ್ಜ್ ಬುಷ್ ಅಧ್ಯಕ್ಷರಾದರು. ಬುಷ್ ಮತ್ತು ತಂಡದ ಫಿಲಾಸಫಿ, ಅದರ ಕಾರ್ಯಚಟುವಟಿಕೆಗಳು ವಿಶ್ವದ ರಾಜಕೀಯ ನಕ್ಷೆಯನ್ನೇ ಬದಲಾಯಿಸಿಬಿಟ್ಟಿತು. ಅವರ ತಂಡದಲ್ಲಿದ್ದ ಪ್ರತಿಯೊಬ್ಬರೂ - ಡಿಕ್ ಚೆನಿ, ಕೊಲಿನ್ ಪವೆಲ್, ಡೊನಾಲ್ಡ್ ರಮ್ಸ್ಫೆಲ್ಡ್, ಕಾಂಡೊಲೀಸಾ ರೈಸ್, ಆರ್ಮಿಟೇಜ್, ವುಲ್ಫೋವಿಟ್ಜ್ - ಮಿಲಿಟರಿ ಹಿನ್ನಲೆಯಿಂದ ಬಂದವರಾಗಿದ್ದರು, ಉಗ್ರ ಸಂಪ್ರದಾಯವಾದಿಗಳಾಗಿದ್ದರು. ಇವರನ್ನು ಇವರು ವಲ್ಕನ್ಸ್ ಎಂದು ಕರೆದುಕೊಂಡರು. ಇವರು ವಿಶ್ವದ ಶಕ್ತಿ ರಾಜಕಾರಣದಲ್ಲಿ ಅಮೆರಿಕಾಗಿರುವ ಪ್ರತ್ಯೇಕ ಸ್ಥಾನ ಮತ್ತದರ ಮಿಲಿಟರಿ ಶಕ್ತಿಗೆ ಧಾರ್ಮಿಕ ಸಂಪ್ರದಾಯವಾದಿ ನೆಲೆಗಟ್ಟಿನಲ್ಲಿ ಹೊಸ ಅರ್ಥವನ್ನೂ, ಆಯಾಮವನ್ನೂ ಕೊಡತೊಡಗಿದರು.

ಇವರ ನಡುವಲ್ಲೇ ಮೂಲಭೂತವಾದಿಗಳಾದ ನಿಯೋಕಾನ್ಸ್ ಹುಟ್ಟುಕೊಂಡರು. ಇವರ ಮುಖ್ಯ ಸಿದ್ಧಾಂತ ಮಿಲಿಟರಿ ಶಕ್ತಿಯ ಪರಮಾಧಿಪತ್ಯ. ಇವರ ಪ್ರಕಾರ ಎರಡು ದೇಶಗಳ ನಡುವಿನ ಸಂಬಂಧದ ಮೂಲಧಾತು ಅವುಗಳ ಮಿಲಿಟರಿ ಶಕ್ತಿ ಮತ್ತು ಅದನ್ನು ಬಳಸುವ ಉತ್ಸುಕತೆ. ಇಲ್ಲಿ ಮೂಲಧಾತುವಾಗಿ ಹರಿಯುತ್ತಿದ್ದುದು - ಅಮೆರಿಕನ್ ನಂಬಿಕೆಗಳನ್ನು, ಜೀವನವಿಧಾನವನ್ನೂ ಜಗತ್ತಿನಾದ್ಯಂತ ಹರಡಲು, ಅಮೆರಿಕಾ ನವ-ವಸಾಹತುಶಾಹಿಯನ್ನು ಸ್ಥಾಪಿಸಬೇಕು, ಇದಕ್ಕಾಗಿ ಅಮೆರಿಕಾ ತನ್ನ ಸೇನಾ ಶಕ್ತಿಯನ್ನು ಬಳಸಲು ಹಿಂದಡಿಯಿಡಬಾರದೆಂಬ ಸಿದ್ಧಾಂತ. ಇಂಥ ಆಘಾತಕಾರಿ ಸಿದ್ಧಾಂತಕ್ಕೆ ಅವರು ಸಾಲದೆಂಬಂತೆ, ಧರ್ಮದ ಆಯಾಮವನ್ನೂ ಕೊಡತೊಡಗಿದರು. ಕ್ರಿಶ್ಚಿಯನ್ ಮತ್ತು ಇಸ್ಲಾಂ ನಾಗರೀಕತೆಗಳ ಸಂಘರ್ಷ - ಛಿಟಚಿ ಠಜಿ ಛಿತಟದಚಿಣಠಟಿ ಣಜಠಡಿಥಿ ಯನ್ನು ಇವರು ಬೇಸ್ ಆಗಿರಿಸಿಕೊಂಡಿದ್ದರು. ಇವರ ಮನಸ್ಸಿನಲ್ಲಿ ಕೊರೆಯುತ್ತಿದ್ದುದು ಮಧ್ಯಪ್ರಾಚ್ಯ, ಅದರಲ್ಲೂ ಇರಾಕ್. ಅವರೆಲ್ಲರಿಗೂ ಇರಾಕ್ನಲ್ಲಿನ ಆಡಳಿತದಲ್ಲಿ ಬದಲಾವಣೆ ಬೇಕಾಗಿತ್ತು, ಅದು ಅಮೆರಿಕನ್ ದಾಳಿಯಿಂದಲಾದರೂ ಸರಿ.


ನೆನಪಿಡಿ ಇದು 9/11ಗೂ ಹಿಂದೆಯೇ ಚಾಲ್ತಿಯಲ್ಲಿತ್ತು. ಇರಾಕನ್ನು ವಶಪಡಿಸಿಕೊಂಡರೆ, ಮಧ್ಯಪ್ರಾಚ್ಯದ ತೈಲ ನಿಕ್ಷೇಪಗಳ ಮೇಲೆ ಹಿಡಿತ, ಆ ಪ್ರದೇಶದಲ್ಲಿ ಅಮೆರಿಕಾದ ಪ್ರಾಧಾನ್ಯ-ಪ್ರಭುತ್ವ, ಹೀಗೆ ಸಕಲೆಂಟನ್ನೂ ಸಾಧಿಸಿದಂತಾಗುತ್ತದೆಯೆಂಬುದು ಅವರ ವಾದ. ದುರಾದೃಷ್ಟವೆಂದರೆ, ಇವರು ಕಾಯುತ್ತಿದ್ದಂತಹ ಅವಕಾಶವನ್ನು 9/11 ದಾಳಿಯ ಮೂಲಕ ಒಸಾಮಾ ಬಿನ್ ಲಾಡೆನ್ ಒದಗಿಸಿಬಿಟ್ಟ. ತಕ್ಷಣವೇ ಎಚ್ಚೆತ್ತ ಇವರು ತಮ್ಮ ಗುಪ್ತ ಅಜೆಂಡಾವನ್ನು ಅಮಲು ಮಾಡಲು ನಿಂತರು. 9/11 ದಾಳಿಯ ಹಿನ್ನಲೆಯಲ್ಲಿ ಇವರ ಸಿದ್ಧಾಂತಕ್ಕೆ ವ್ಯಾಪಕ ಜನಮನ್ನಣೆ ದೊರೆಯಿತು, ಭಯೋತ್ಪಾದನೆಯ ವಿರುದ್ಧದ ಸಮರದ ಹೆಸರಿನಲ್ಲಿ ಅಮೆರಿಕಾ ಮುಸ್ಲಿಂ ಜಗತ್ತಿನ ಮೇಲೆ ಮುರಕೊಂಡು ಬಿತ್ತು. ಅಫಘಾನಿಸ್ತಾನದ ನಂತರ ಇಲ್ಲ-ಸಲ್ಲದ ನೆವ ಹೇಳಿ, ಇರಾಕ್ ಮೇಲೂ ಅಮೆರಿಕಾ ಯುದ್ಧ ಸಾರಿತು. ಇತ್ತ ನಿಯೋಕಾನ್ಸ್ ವಿಜಯೋತ್ಸವ ಆಚರಿಸಿಕೊಂಡರೆ, ಅತ್ತ ಮುಸ್ಲಿಂ ಜಗತ್ತಿನಲ್ಲಿ ಒಸಾಮಾ ಹೊತ್ತಿಸಿದ ಅಮೆರಿಕಾ ವಿದ್ವೇಶದ ಕಿಡಿ ಹೊತ್ತಿ ಉರಿಯಿತು. ಅಮೆರಿಕಾದ ಈ ಮನೋಧರ್ಮ ಜಿಹಾದ್ನ ಸದ್ದಡಗಿಸಲಿಲ್ಲ, ಬದಲಿಗೆ ಮುಸ್ಲಿಂ ಜಗತ್ತಿನಲ್ಲಿ ಅದಕ್ಕೊಂದು ಕೆಚ್ಚೆದೆಯ ಹೋರಾಟದ ಇಮೇಜನ್ನು ದಯಪಾಲಿಸಿತು. ಅದಕ್ಕೆ ಸಮರ್ಥಕರನ್ನು ಹುಡುಕಿಕೊಟ್ಟಿತು. ವಿಶ್ವಶಾಂತಿಯೆನ್ನುವುದು ಆವಿಯಾಗಿ ಮರೀಚಿಕೆಯಾಯಿತು.


ಒಬಾಮಾನ ಗೆಸ್ಚರ್ರೂ ರೆಟರಿಕ್ಕುಗಳನ್ನು ನಾವು ಈ ಹಿನ್ನಲೆಯಲ್ಲಿ ನೋಡಬೇಕು. ಆಗಲೇ ಅದರ ಪ್ರಾಮುಖ್ಯತೆಯನ್ನು
ನಾವು ಮನಗಾಣಲಾಗುವುದು. ಅಮೆರಿಕಾದ ವಿದೇಶೀ ನೀತಿಗಳಲ್ಲಿ ಐರೋಪ್ಯ ಮತ್ತು ಏಷಿಯನ್ ಜಗತ್ತುಗಳ ಸೂಕ್ಷ್ಮಗಳನ್ನರಿತವರಿದ್ದರೇ ಹೊರತು, ಮುಸ್ಲಿಂ ಜಗತ್ತಿನ ಸೂಕ್ಷ್ಮಗಳನ್ನರಿತವರಿರಲಿಲ್ಲ. ಅದೂ ಕೂಡ ಈ ಕರ್ಷಣಗಳಿಗೆ ದಾರಿ ಮಾಡಿಕೊಟ್ಟಿರಬಹುದು. ಆದರೆ ಮುಸ್ಲಿಂ ಮಧ್ಯ ಹೆಸರುಳ್ಳ ಒಬಾಮಾ ಅಮೆರಿಕಾದ ಅಧ್ಯಕ್ಷನಾಗುವುದರೊಂದಿಗೆ ಆ ಕೊರತೆ ಗಣನೀಯವಾಗಿಯೇ ನೀಗಿದಂತಾಗಿದೆ. ಅಮೆರಿಕಾದ ದೊಡ್ಡಣ್ಣಗಿರಿ ನಿಂತಿದ್ದದ್ದು ಅದರ ಮಿಲಿಟರಿ ಶಕ್ತಿಗಿಂತ ಹೆಚ್ಚಾಗಿ ಅದರ ಅಪಾರ ಆರ್ಥಿಕ ಶಕ್ತಿಯ ಮೇಲೆ. ಜಾಗತಿಕ ಆರ್ಥಿಕ ಹಿಂಜರಿತ ಅದನ್ನು ಕೆಡವಿ ಹಾಕಿಬಿಟ್ಟಿದೆ. ಇಂದು ಅಮೆರಿಕಾದ ಅರ್ಥವ್ಯವಸ್ಥೆಗೆ ಅಫಘಾನ, ಇರಾಕ್ನಂತಹ ಯುದ್ಧಗಳನ್ನು ತಾಳಿಕೊಳ್ಳುವ ಶಕ್ತಿಯಿಲ್ಲ. ಅಮೆರಿಕಾ ತನ್ನ ವಸಾಹತು ಮತ್ತು ದಾಳಿಕೋರ ಫ್ಯಾಂಟಸಿಗಳನ್ನು ನಿಜಕ್ಕೂ ತ್ಯಜಿಸಿದರೆ ಖಂಡಿತವಾಗಿಯೂ ಅದು ವಿಶ್ವಶಾಂತಿಗೆ ಬರೆದ ಮುನ್ನುಡಿಯಾಗುತ್ತದೆ. ಇದು ಆ ಹೊಸ ಆರಂಭವಾ?, ವಿಶ್ವಶಾಂತಿಗೆ ಬರೆದ ಮುನ್ನುಡಿಯಾ? ಇದು ಹೊಸ ಆರಂಭವಲ್ಲದಿರಬಹುದು, ಆದರೆ ಒಬಾಮಾನ ಮುಸ್ಲಿಂ ಜಗತ್ತಿನೊಡನೆಯ ಈ ಸಂವಾದ ವಿಶ್ವಶಾಂತಿಗೆ ಮತ್ತು ಹೊಸ ಆರಂಭಕ್ಕೊಂದು ಶುಭಸಂಕಲ್ಪವಂತೂ ಹೌದು.
(ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟಿತ)

ಶಾರದ ಪ್ರಸಾದ್ ಒಂದು ನೆನಪು


(ಈ ಭಾನುವಾರ ವಾರಪತ್ರಿಕೆಯಲ್ಲಿ ಪ್ರಕಟಿತ)
ಮೂಲ ಲೇಖಕರು - ಸುಗತಾ ಶ್ರೀನಿವಾಸರಾಜು
ಕೃಪೆ - ಔಟ್ಲುಕ್

ಶಾರದಾಪ್ರಸಾದ್ ಕಾಲವಾಗಿ ವರ್ಷವಾಯಿತು. ಸೆಪ್ಟೆಂಬರ್ 2, 2008 ರಂದು ಅವರ ಸಾವಿನ ಸುದ್ದಿ ಒಂದು ಜಿಚಿಛಿಣ ಣಚಿಣಜಟಜಟಿಣ ಆಗಿತ್ತು ಅಷ್ಟೆ. ಅದರಲ್ಲಿ ಯಾವುದೇ ಉತ್ಪ್ರೇಕ್ಷೆಯಾಗಲೀ ತೋರಿಕೆಯಾಗಲೀ ಇರಲಿಲ್ಲ, ಅವರಂತಯೇ. ಆದರೆ ಶಾರದಾ ಪ್ರಸಾದರ ಸಾವು ಅವರ ಕುರಿತ ಕೌತುಕದ ಪ್ರಶ್ನೆಯೊಂದನ್ನು ತಣಿಸಿಲ್ಲ. ಅವರು ಪ್ರಧಾನಿ ಕಾರ್ಯಾಲಯದ ದಿನಗಳ ಬಗ್ಗೆ ಪುಸ್ತಕವನ್ನಂತೂ ಬರೆಯಲಿಲ್ಲ, ಹೋಗಲೀ ಆ ದಿನಗಳ ಟಿಪ್ಪಣಿ ಇಲ್ಲ ಡೈರಿಯನ್ನಾದರೂ ಇಟ್ಟಿದ್ದಾರಾ? ಈ ಪ್ರಶ್ನೆಗೆ ಉತ್ತರ ಹೌದು!

ಶಾರದಾ ಪ್ರಸಾದರ 5 ದಶಕಗಳ ಪ್ರೀತಿಯ ಓಡನಾಡಿ, ಅವರ ಧರ್ಮಪತ್ನಿ ಕಮಲಮ್ಮನವರು ಈ ಖಾಸಗೀ ಪುಟಗಳಲ್ಲಿ ಹೈ ಆಫೀಸಿನ ಸ್ವಾರಸ್ಯಕರ ಜ್ಯೂಸೀ ಸುದ್ದಿಗಳಿಲ್ಲದಿರುವುದನ್ನು ಬದಲಿಗೆ ಈ ಪುಟಗಳು ತಮ್ಮ ನೈತಿಕ ಪ್ರಜ್ಞೆಯ ಬಗೆಗಿನ ಸ್ವವಿಮರ್ಶೆಯಿಂದ ತುಂಬಿರುವುದನ್ನೂ ಹೊರಗೆಡವಿದ್ದಾರೆ. ಇಲ್ಲಿ ತನ್ನ ನಿಯಮನಿಷ್ಠೆ ಮತ್ತು ಭರವಸೆಗಳ ಕಠಿಣ ವಿಮರ್ಶೆಯಿದೆ. ತಾನಾರಿಸಿಕೊಂಡ ದಾರಿ ಮತ್ತು ತನ್ನ ನಡಿಗೆಯ ಕುರಿತು ಸಣ್ಣ ತಲ್ಲಣವಿದೆ. ಸ್ವಪ್ರತಿಷ್ಠೆಯ ಎಲ್ಲ ಲವಲೇಷಗಳನ್ನೂ ತೊಡೆದುಹಾಕುವ ಧ್ಯಾನಸ್ಥ ಪ್ರಯತ್ನವಿದೆ. ತನ್ನ ಅಹಂನ ಪ್ರತಿಯೊಂದು ಎಳೆಯನ್ನೂ ಮೈಕ್ರೋಸ್ಕೋಪಿನಡಿಯಲ್ಲಿಟ್ಟು ಪರೀಕ್ಷಿಸುತ್ತಾರೆ. ತನ್ನೆಲ್ಲಾ ಕಪಟತೆಗಳೊಂದಿಗೆ ಯಾವುದೇ ಮುಜುಗರವಿಲ್ಲದೆ ಮುಖಾಮುಖಿಗೆ ಕೂರುತ್ತಾರೆ. ಇನ್ನು ಕೆಲವಂತೂ ತಪ್ಪೊಪ್ಪಿಗೆಯ ಪತ್ರಗಳಂತಿವೆ. ಇವೆಲ್ಲವೂ ಯಾವುದೇ ಕಥನ ಕ್ರಮದಲಿಲ್ಲ ಅಥವಾ ಕ್ರನಲಾಜಿಕಲ್ ಆಗಿಯೂ ಇಲ್ಲ. ಶಾರದಾ ಪ್ರಸಾದರು ಬಿಟ್ಟು ಹೋಗಿರುವ ಸಾವಿರಾರು ಕಾಗದ ಪತ್ರಗಳಲ್ಲಿ ಇವು ಚೆದುರಿ ಹೋಗಿವೆ. ಪರಸ್ಪರ ಕೆಸರೆರಚಾಟ, ಬೈಗುಳ, ನಿಂದನೆಗಳ ಕೃತಕತೆಗಳು ನಮ್ಮ ಸಾರ್ವಜನಿಕ ರಂಗವನ್ನು ಆಳುತ್ತಿರುವ ಇಂದಿನ ದಿನಮಾನಸದಲ್ಲಿ ಇವು ವ್ಯಕ್ತಿಯೊಬ್ಬನ ಸಾರ್ವಜನಿಕ ಮತ್ತು ವಯಕ್ತಿಕ ವ್ಯಕ್ತಿತ್ವಗಳ ಸಮಗ್ರತೆಯ ಅಪೂರ್ವ ಋಜುವಾತು.
ಒಂದೆರಡು ಸ್ಯಾಂಪಲ್ಲುಗಳು ಇಲ್ಲಿವೆ ನೋಡಿ.

1957ರಲ್ಲಿ ಸರಕಾರೀ ಸೇವೆಗೆ ಸೇರುವ ಮೊದಲು ಅವರು ಮಾಡಿದ ಪ್ರಾರ್ಥನೆ:
"ನಾನು ಒಂದು ಮೆಟ್ರಾಪಾಲಿಟನ್ ನಗರದ [ಬಾಂಬೆ] ವೃತ್ತಿಗೆ [ಪತ್ರಿಕೋದ್ಯಮ] ಗುಡ್ಬೈ ಹೇಳಿ ರಾಷ್ಟ್ರದ ರಾಜಧಾನಿಯ ಸರಕಾರೀ ಸೇವೆಯಲ್ಲಿ ಸೆಟ್ಲ್ ಆಗುತ್ತಿದ್ದೇನೆ. ಸರಕಾರೀ ಅಧಿಕಾರಿಯೊಬ್ಬನ ತೋರಿಕೆಯಾಗಲೀ ಅಧಿಕಾರದ ದರ್ಪವಾಗಲೀ ಇರಬಾರದು, ಬದಲಿಗೆ ನಾನು ಜನರ ಸೇವಕನೆಂಬ ಭಾವವಿರಲಿ. ಮೇಲಿನವರ ಮೇಲೂ ಮತ್ತೊಬ್ಬರಿದ್ದಾರೆಂಬ ನಿಜ ನನ್ನ ಬುದ್ದಿ ಮನಸ್ಸುಗಳಲ್ಲಿ ನಾಟಲಿ. ಜನಹಿತ ಉಳಿದೆಲ್ಲವಗಿಂತಲೂ ಮೇಲಾದದ್ದೆಂಬುದು ನನ್ನ ಜ್ಞಪ್ತಿಯಲ್ಲಿರಲಿ. ರಾಜಧಾನಿಯ ವೈಭವ, ಅಧಿಕಾರ, ಸೊಕ್ಕು, ಪ್ರಾಮುಖ್ಯತೆ ನನ್ನನ್ನು ಆವರಿಸಿಕೊಳ್ಳದಿರಲಿ. ನನ್ನ ಆತ್ಮಸಾಕ್ಷಿಯೇ ನನ್ನ ಮಾರ್ಗದರ್ಶಿಯೆಂಬ ಜ್ಞಾನವೇ ನನ್ನ ರಕ್ಷೆಯಾಗಿರಲಿ."

ಒಂದು ಹಂತದಲ್ಲಿ ಶಾರದಾ ಪ್ರಸಾದರು ಸ್ವಾತಂತ್ರ್ಯ ಹೋರಾಟಗಾರರಾಗಿ ತಮ್ಮ ಜೀವನ ಮತ್ತು 1942ರ `ಕ್ವಿಟ್ ಇಂಡಿಯಾ' ಚಳುವಳಿಯ ಕಾಲದಲ್ಲಿ ಅವರು ಬೆಂಗಳೂರು ಮತ್ತು ಮೈಸೂರು ಸೆರೆಮನೆಗಳಲ್ಲಿ ಕಳೆದ ಕಾಲವನ್ನು ಕಥನ ರೂಪಕ್ಕೆ ತರಲು ಪ್ರಯತ್ನಿಸಿದ್ದಾರೆ. ಅವರು ಆಗ ಮೈಸೂರು ಮಹಾರಾಜಾ ಕಾಲೇಜಿನ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿಯಾಗಿದ್ದರು. ಇದರ ಕೆಲ ಭಾಗಗಳು ಕಾಲ್ಪನಿಕ ಸಂದರ್ಶನ ಅಥವಾ ಸಂವಾದದ ರೂಪದಲ್ಲಿದೆ. ಈ ಕಾಗದಗಳೆಲ್ಲಾ ಚಿಂದಿಯಾಗುವ ಹಂತದಲ್ಲಿವೆ. ಇದಲ್ಲದೆ ಪ್ರಸಾದರು ನಂತರ ಅನೇಕ ಕಡೆ ಹೊಡೆದು ಹಾಕಿದ್ದಾರೆ ಕರೆಕ್ಷನ್ಗಳನ್ನು ಮಾಡಿರುವುದರಿಂದ ಇದನ್ನು ಒಂದು ಕಥಾನಕಕ್ಕೆ ತರುವುದು ಬಹುಕಷ್ಟವಾಗಿದೆ. ಇದಲ್ಲದೆ ಇದು ಅಪೂರ್ಣವೂ ಆಗಿದೆ. ಬರೆಯುವ ಮಧ್ಯದಲ್ಲಿಯೇ ಅವರಿಗೆ ಆ ಐಡಿಯಾದಲ್ಲಿ ಆಸಕ್ತಿ ಹೊರಟುಹೋಗಿದೆ, ಇಲ್ಲ ತನಗೇ ಒಂದು ಇತಿಹಾಸವನ್ನು ಬರೆದುಕೊಳ್ಳುವುದು ಅತಿಯಾಯಿತು ಅನ್ನಿಸಿತೇನೋ, ಅಂತೂ ಮಧ್ಯದಲ್ಲಿಯೇ ನಿಲ್ಲಿಸಬಿಟ್ಟಿದ್ದಾರೆ. ಆದರೆ ದಕ್ಕಿರುವಷ್ಟರಲ್ಲಿ ಅವರ ಚಿಂತನೆಗಳು ಸ್ಫಠಿಕದಷ್ಟೇ ಸ್ಫುಟವಾಗಿವೆ.

ಕೆಲವು ಸ್ಯಾಂಪಲ್ಲುಗಳು :
"ಆತ ಸೆಂಟ್ರಲ್ ಹಾಲ್ನ ಮಧ್ಯರಾತ್ರಿಯ ಸಮಾವೇಶಕ್ಕೆ ಹೋಗಲಿಲ್ಲ. ಆತ ಆನಿವರ್ಸರಿಗಳ ಆಚರಣೆಗಳಿಂದ ದೂರ. ಆತ ನಿಜ ಅನುಭವವನ್ನು ಬೇಡುತ್ತಾನೆ, ಆದರೆ ಅದನ್ನು ಜೀರ್ಣಿಸಿಕೊಳ್ಳಲು ಆತನಿಗೆ ಶಕ್ತಿಯಿಲ್ಲ. ಬದಲಿಗೆ ಆತ ಮನೆಯಲ್ಲೇ ಕೂತ, ಒಬ್ಬನೇ. ಆ ದಿನ, ತನ್ನ ಇಂದಿನ ಅರ್ಧ ವಯಸ್ಸಿನಲ್ಲಿ ಸ್ವಾತಂತ್ರ್ಯವನ್ನು ಸ್ವಾಗತಿಸಿದ ಸಂಭ್ರಮ, ಕೋಟ್ಯಾಂತರರಲೊಬ್ಬನಾಗಿ ಜೀವನದ ಅವಿಸ್ಮರಣೀಯ ರಾತ್ರಿಯನ್ನು ಬಾಂಬೆಯ ಅಂದಿನ ಕಲರವದಲ್ಲಿ ಕಳೆದ ಚಿತ್ರಗಳು ತನ್ನ ಜ್ಞಾಪಕ ಚಿತ್ರಶಾಲೆಯಲ್ಲಿ ಕದುಲಿ ಮರೆಯಾದವು. ಆತನ ಮನಸ್ಸು 5 ವರ್ಷಗಳ ಹಿಂದೆ ಸರಿದು ನಿಂತಿತ್ತು. 42 ಮತ್ತು ಆಗಸ್ಟ್ ಜನ ಆತನ ಭಾಷಣವನ್ನು ಕೇಳಲು ನೆರೆದಿದ್ದರು. ಆತನಿಗೆ ಮಾತನಾಡುವ ಮಾಡರೇಟ್ ಆದ ಕಲೆಯಿತ್ತು. ಅದರ ಆಧಾರದ ಮೇಲೆಯೇ ಆತ ವಿಶ್ವವಿದ್ಯಾಲಯ ಯೂನಿಯನ್ನ ಕಾರ್ಯದರ್ಶಿಯಾಗಿದ್ದ. ನಗರದ ರಾಜಕೀಯ ನಾಯಕರ ಮೇಲೆ ಸರ್ಕಾರ ಮುರಕೊಂಡು ಬಿದದ್ದರಿಂದ ಎಲ್ಲರ ಗಮನ ಈತ ಮತ್ತು ಈತನ ಕೆಲವು ಸ್ನೇಹಿತರ ಮೇಲಿತ್ತು..........

ಒಂದೆರಡು ವಾರಗಳು ಹೀಗೇ ನಡೆದವು. ಆತನ ಹೆಸರಲ್ಲಿ ಜೈಕಾರಗಳೂ ಕೇಳಿಬಂದವು. ಆದರೆ ಒಂದು ಸುಂದರ ಸಂಜೆ ಆತನ ಭಾಷಣದ ನಡುವೆ ಪವರ್ ಸ್ವಚ್ ಆಫ್ ಆದಂತೆನಿಸಿತು. ಆತ ಮಾತನಾಡುವುದನ್ನು ಮುಂದುವರೆಸಿದನಾದರೂ ಆತನಲ್ಲಿನ ಮ್ಯಾಜಿಕ್ ಮರೆಯಾಗಿತ್ತು. ಆತ ಆ ಕ್ಷಣವನ್ನು ಅನೇಕ ಬಾರಿ ಒಂದು ನಾಸ್ಟಾಲ್ಜಿಕ್ ಆದ ನೋವಿನಿಂದ ಮರುಜೀವಿಸಿದ್ದ, ಸತ್ಯದ ಆ ಕ್ಷಣ ತನ್ನ ಜೀವನದಲ್ಲಿ ಅಷ್ಟು ಬೇಗ ಬಂದದ್ದಕ್ಕೆ ನಿರಾಳನಾಗಿದ್ದ. ಆ ಕ್ಷಣದಲ್ಲಿ ಆತನೊಳಗಿನವನೊಬ್ಬ ಅಧಿಕಾರಯುತವಾಗಿ ಪ್ರಶ್ನಿಸಿದ್ದ - ಅವರು ನಿನ್ನನ್ನು ಹಾಗೆ ಹೊಗಳಲು ನಿನ್ನೊಳಗೇನಿದೆ? ಸಾವಿರಾರು ಕಿವಿಗಳು ಆತನನ್ನು ಕೇಳುತ್ತಿದ್ದವು, ಆದರೆ ಆತನ ಕಿವಿಗಳು ಈ ಮಾತುಗಳನ್ನಷ್ಟೇ ಕೇಳಿಸಿಕೊಂಡಿದ್ದವು. ತಕ್ಷಣ ಆ ಪದಗಳು ಆತನ ಜೀವನದಲ್ಲಿ ಯಾವುದೇ ಬದಲಾವಣೆ ತರಲಿಲ್ಲ - ಮೆರವಣಿಗೆಗಳು, ಪೋಲೀಸರ ಆಜ್ಞೆಗಳನ್ನು ಧಿಕ್ಕರಿಸುವುದು, ಲಾಠೀ ಏಟು, ಜೈಲು, ಬಿಡುಗಡೆ, ಸಭೆಗಳು. ಮತ್ತೆ ಜೈಲು..........

ಆತನ ಹುಟ್ಟೂರ ಅತಿಥಿ ಹೊರನಡೆಯುತ್ತಾನೆ. ಆತ ಮತ್ತೆ ಆಲೋಚಮಗ್ನನಾಗುತ್ತಾನೆ. ಜ್ಯುಬಿಲಿಯ ಮೇಲೆ ಬರೆದಿರುವ ಅನೇಕ ಲೇಖನಗಳ ಕುರಿತು ಕೇಳಲಾಗುತ್ತಿರುವ ಪ್ರಶ್ನೆಗಳ ಕುರಿತು ಆಲೋಚಿಸುತ್ತಾನೆ.

ನೀವು ಜೈಲಿನಲ್ಲಿ ಒಂದು ವರ್ಷ ಕಳೆದರಲ್ಲವೆ?
ಹೌದು, ಹತ್ತೂವರೆ ತಿಂಗಳುಗಳು. ನನ್ನ ಸ್ಕೂಲು ಕಾಲೇಜಿನ ಕಲಿಕೆಗಿಂತಲೂ ಹೆಚ್ಚಿನದನ್ನು ನಾನು ಈ ತಿಂಗಳುಗಳಲ್ಲಿ ಕಲಿತೆ. ಬಹುಜನರ ಮಾನಸಿಕ ಶಕ್ತಿ ಹದಿನೆಂಟರ ನಂತರ ಇಳಿಮುಖವಾಗುತ್ತಾ ಹೋಗುತ್ತದೆ ಎಂಬುದು ನನ್ನದೊಂದು ಥಿಯರಿ. ಇದು ನನ್ನ ವಿಷಯದಲ್ಲಂತೂ ನಿಜ. ಆಗ ಬೆಂಗಳೂರು ಜೈಲಿನಲ್ಲಿ ಐನೂರು-ಆರುನೂರು ರಾಜಕೀಯ ಖೈದಿಗಳೂ ಸುಮಾರು 1500 ಕನ್ವಿಕ್ಟ್ಗಳೂ ಇದ್ದರು.
..........ಜೈಲರ್ ರಿಜಿಸ್ಟರ್ನಲ್ಲಿ ಎಂಟ್ರಿ ಮಾಡಿ ಅವರ ಬೆರಳಚ್ಚನ್ನೆಲ್ಲಾ ಪಡೆದುಕೊಂಡ ನಂತರ ಒಬ್ಬ ಖೈದಿಯನ್ನು ಕರೆದು ಅವರನ್ನು ಅವರ ವಾಡರ್್ಗೆ ಕರೆದುಕೊಂಡು ಹೋಗಲು ಸೂಚಿಸಿದ. ಆತನೊಬ್ಬ ಹಳ್ಳಿಯವನು. ಆ ಬಿಳೀ ಗಿರಿಜಾ ಮೀಸೆ, ಸುಕ್ಕುಗಟ್ಟಿದ ಮುಖ, ಆತ ಕಂಕ್ರೇಜ್ ಎತ್ತನ್ನು ಗುರುತಿಗೆ ತಂದ. ಆತ ಕಳ್ಳತನಕ್ಕೆ 8ನೇ ಬಾರಿ ಸಜೆ ಅನುಭವಿಸುತ್ತಿದ್ದನೆಂಬುದು ಅವರಿಗೆ ತರುವಾಯ ತಿಳಿದು ಬಂತು. ಇವರು ಆತನ ಜೊತೆ ಒಂದೂವರೆ ಫರ್ಲಾಂಗ್ ದೂರ ನಡೆದರು. ಆತ ವಿದ್ಯಾರ್ಥಿಗಳ ಕೆಚ್ಚೆದೆಯ ಕೆಲಸಗಳ ಸುದ್ದಿ ಜೈಲೊಳಗೂ ಹರಡಿದ್ದು ತಾವೆಲ್ಲಾ ಅವರ ಕುರಿತಾಗಿ ಹೆಮ್ಮೆ ಪಡುತ್ತಿರುವುದಾಗಿ ಹೇಳಿದ. ಅವರ ಬ್ಯಾಗುಗಳನ್ನು ವಾಡರ್್ನಲ್ಲಿರಿಸಿದಾಗ ಒಳ್ಳೆ ಸಲಹೆ ಕೊಟ್ಟ: "ನಿಮ್ಮ ವಸ್ತುಗಳನ್ನು ಜೋಪಾನ ನೋಡಿಕೊಳ್ಳಿ. ಇಲ್ಲಿ ಎಲ್ಲರೂ ಕಳ್ಳರೇ!"

ಆದರೆ ಜೈಲುಗಳು ವಿಶ್ವವಿದ್ಯಾಲಯಗಳಾಗಿರಬೇಕಿತ್ತಲ್ಲವೇ?
ಒಂದು ರೀತಿಯಲ್ಲಿ ಅವು ವಿಶ್ವವಿದ್ಯಾಲಯಗಳೇ ಆಗಿದ್ದವು. ನಾವು ಸ್ವಂತವಾಗಿ ತುಂಬಾ ಓದಿಕೊಂಡೆವು. ಇದಲ್ಲದೆ ನಾವು ಕೆಲವು ತಿಂಗಳನ್ನು ಕಳೆದ ಮತ್ತೊಂದು ಜೈಲಿನಲ್ಲಿ ವಿದ್ಯಾಥರ್ಿಗಳು ರೈತಾಪಿಗರಿಗೆ ಪಾಠ ಮಾಡುತ್ತಿದ್ದರು. ಕಾಂಗ್ರೆಸ್ನ ಹಿರಿಯರು ಬೆಂಗಳೂರಿನ ಜೈಲಿನಲ್ಲಿ ಅಂತಹ ಯಾವುದೇ ಪ್ರಯತ್ನಕ್ಕೆ ಕೈಹಾಕಲಿಲ್ಲ. ಅವರು ಅವರಲ್ಲೇ ಕಳೆದುಹೋಗಿದ್ದರಲ್ಲದೇ ವಿದ್ಯಾರ್ಥಿಗಳ ಕಂಡರೆ ಅಸಹನೆ ವ್ಯಕ್ತಪಡಿಸುತ್ತಿದ್ದರು. ಇದಲ್ಲದೆ ಕೆಲವು ಹಿರಿಯರು ಜೈಲಿನ ಅಧಿಕಾರಿಗಳೊಂದಿಗೆ ಸೇರಿ ಬ್ಲಾಕ್ ಮಾರ್ಕೆಟ್ ಡೀಲಿಂಗುಗಳನ್ನೆಲ್ಲಾ ನಡೆಸುತ್ತಿದ್ದರೆಂದು ಕೆಟ್ಟ ಕಥೆಗಳು ಹರಡಿದ್ದವು. ಗಾಂಧೀ ಕಾಲದಲ್ಲಿ ರಾಜಕೀಯ ಶುದ್ಧವಾಗಿದ್ದವು ಎಂಬ ಆ ಕಾಲದಲ್ಲಿ ಇದು ನನಗ್ಯಾಕೋ ಅನುಮಾನ - ಆದರೆ 1942ರ ವೇಳೆಗಾಗಲೇ ರಾಜಕೀಯದ ಮಟ್ಟ ಕುಸಿದಿದ್ದರೆ ಮಾತ್ರ......

...........ತಿಂಗಳುಗಳ ಕಾಲ ಜೈಲುವಾಸ, ಇವೆಲ್ಲವನ್ನೂ ಆತ ಅನುಭವಿಸಿಬೇಕಿತ್ತು. ಆದರೆ ಎಲ್ಲೋ ಆತನ ಅಂತರಾಳದಲ್ಲಿ ನಿರ್ಧಾರ ತೆಗದುಕೊಂಡಾಗಿತ್ತು: ರಾಜಕೀಯ ಆತನಿಗಲ್ಲ. ಆತನಲ್ಲಿ ಇಲ್ಲ ವಿಶ್ವಾಸದ ಅಥವಾ ಮಹತ್ವಾಕಾಂಕ್ಷೆಯ ಕೊರತೆಯಿತ್ತು, ಇಲ್ಲ ಆತ ಆತನೊಂದಿಗೆ ತುಂಬಾ ಪ್ರಾಮಾಣಿಕನಾಗಿದ್ದ."

1950ರಲ್ಲಿ ಕಮಲಮ್ಮನವರಿಗೆ ಬರೆದ ಪತ್ರದಲ್ಲಿ ಶಾರದಾ ಪ್ರಸಾದರು ಹೀಗೆ ಬರೀತಾರೆ:
"ನೀನು ನನ್ನದು ಆತ್ಮರತಿಯೆಂದು ದುಷಿಸುತ್ತಿರುವೆಯಲ್ಲ? ಇದು ನನ್ನ ಕಾಲೆಳೀಲಿಕ್ಕಾ? ಆದರೆ ನಾನು ಆತ್ಮರತಿಗೆ ತೊಡಗಿಲ್ಲ ಎಂಬುದು ನನ್ನ ನಂಬಿಕೆ. ನಾನು ನನ್ನನ್ನು ಇತರರು ನನ್ನನ್ನು ನೋಡಿದಂತೆಯೇ ನೋಡುತ್ತೇನೆ. ನನ್ನ ಆತ್ಮವಿಮರ್ಶೆ ಮತ್ತು ಅನುಮಾನಗಳ ಬಗ್ಗೆ ನಿನಗೆ ಹೇಳಿಲ್ಲ. ನನ್ನಲ್ಲಿ ಸ್ವಲ್ಪಮಟ್ಟಿಗೆ ಅವಶ್ಯವಿಲ್ಲದ ಉಡಾಫೆಯಿರಬಹುದು....ನಾನು ಈ ನನ್ನ ಉಡಾಫೆಯಂತೆ ತೋರುವ ಆತ್ಮತೃಪ್ತಿಯೊಡನೆ ಬಹುವರ್ಷದಿಂದ ನಡೆಸುತ್ತಿರುವ ಹೋರಾಟದ ಕುರಿತು ನಿನಗೆ ಹೇಗೆ ಹೇಳಲಿ? ನನ್ನ ಸಾಧನೆಗಳೇನು ಹೇಳಿಕೊಳ್ಳುವಂತಹವಲ್ಲ. ನಾನು ಹೃದಯಪೂರ್ಣವಾಗಿ ಇತರರಿಗೆ ಉಪಯೋಗವಾಗುವಂತೆ ಬದುಕಲು ಪ್ರಯತ್ನಿಸಿದರೂ ನನ್ನ ಸಾಮಥ್ರ್ಯಗಳು, ಸಾಧನೆಗಳು ಮತ್ತು ಅವು ಉಪಯೋಗವಾಗುತ್ತಿರುವ ರೀತಿಯಿಂದಾಗಿ ನನ್ನ ಪ್ರಯೋಜನ ಕಡಿಮೆಯೇ ಇರುತ್ತದೆ. ಇದು ನನ್ನನ್ನು ಬಾಧಿಸುತ್ತಿದೆ. ಆದರೆ ವಾಸ್ತವದಲ್ಲಿ ನಾನು ಎಲ್ಲರಿಗೂ ಪ್ರಯೋಜನಕಾರಿಯಾಗಿರಲಾರೆ. ಪ್ರತಿಯೊಬ್ಬರು ಒಂದೊಂದು ಸರ್ಕಲ್ನಲ್ಲಿ ಜೀವಿಸಬೇಕಾಗುತ್ತದೆ. ದಿನೇದಿನೇ ನನ್ನ ಸರ್ಕಲ್ ಕಿರಿದಾಗುತ್ತಿದೆಯಂಬುದೇ ನನ್ನ ಭಯ. ಇದರಿಂದ ನಾನು ಹೆಚ್ಚು ಹೆಚ್ಚು worthless ಆಗಿಬಿಡುವನೇನೋ........ಹಿಂದೊಮ್ಮೆ ನನಗಿದ್ದ ಅರ್ಪಣಾ ಮನೋಭಾವ ಈಗಿಲ್ಲ. ಆದರೆ ಈಗಲೂ ನನಗೆ ನಂಬಿಕೆಯಿದೆ ನಾನು ಬದುಕಿರುವಾಗಲೆಲ್ಜೀವಚ್ಛವವಾಗದಂತೆ, ನಾನು ಗತಿಸಿದ ಮೇಲೆ ನನ್ನನ್ನು ಬಲ್ಲವರು ನನ್ನ ನೆನಪಿಗೆ ಶಪಿಸದಂತೆ ಬದುಕಬಲ್ಲೆ. ಇದನ್ನೇ ನೀನು ಆತ್ಮರತಿ ಎಂದು ಕರೆದರೆ, ಇರಲೀ ಬಿಡು."

ಅವರ ಪತಿರಾಯರ ಕುರಿತು ಕಮಲಮ್ಮನವರ ಅತ್ಯಂತ ಗಾಢ ನೆನಪಿನೊಂದಿಗೆ ಈ ಲೇಖನವನ್ನು ಮುಗಿಸುತ್ತೇನೆ - ಅವರು ಪ್ರಧಾನಿಗಳ ಜೊತೆ ವಿದೇಶ ಪ್ರವಾಸ ಮಾಡಿ ರಾತ್ರಿ ಸರಹೊತ್ತಿನಲ್ಲಿ ಹಿಂತುರುಗಿದಾಗ ಪತ್ನಿಯೊಂದಿಗೆ ಸ್ಕ್ರಾಬಲ್ನ ಒಂದು ಆಟ ಆಡಿ ರಿಲ್ಯಾಕ್ಸ್ ಆಗುತ್ತಿದ್ದರು. ಹೀಗೆ ಸ್ಕ್ರಾಬಲ್ನ ಒಂದು ಆಟ ಆಡಿಯೇ ಅವರು ನಿದ್ರಿಸುತ್ತಿದ್ದದು, ಅದೂ ಕೆಲ ಘಂಟೆಗಳು ಅಷ್ಟೆ, ಬೆಳಿಗ್ಗೆ ಮತ್ತೆ ಆಫೀಸು. ಸ್ಕ್ರಾಬಲ್ ಬೋರ್ಡ್ನ ಅಥವಾ ಬೇರೆಲ್ಲೇ ಆಗಲೀ ಬರಹ ಅವರಿಗೆ ನೆಮ್ಮದಿ ಕೊಡುತ್ತಿತ್ತು, ಅದು ಅವರಿಗೆ ಪೂಜ್ಯವೂ ಆಗಿತ್ತು.

ಭಾರತದ ಫುಟ್ಬಾಲ್ ವಿಕ್ರಮ


ಭಾರತದ ಫುಟ್ಬಾಲ್ ಕಡೆಗೂ ಮಿಂಚುತ್ತಿದೆ, ಮಿನುಗುತ್ತಿದೆ. ಮೊನ್ನೆ ಸೋಮವಾರ ಸಂಜೆ ದೆಹಲಿಯ ಡಾ. ಅಂಬೇಡ್ಕರ್ ಸ್ಟೇಡಿಯಮ್ ಕ್ಕಿಕ್ಕಿರಿದು ತುಂಬಿತ್ತು. ಹಲವಾರು ಟಿಕೆಟ್ಗಳು ಬ್ಲಾಕ್ನಲ್ಲಿ ಸೇಲಾಗಿಹೋಗಿದ್ದವು. ಆಶ್ಚರ್ಯ ಅಲ್ಲಿ ನಡೆಯುತ್ತಿದ್ದದ್ದು ಕ್ರಿಕೆಟ್ ಮ್ಯಾಚಲ್ಲ ಬದಲಿಗೆ ನೆಹರೂ ಕಪ್ ಫುಟ್ಬಾಲ್ ಟೂರ್ನಿ ಫೈನಲ್ಸ್! ಹೌದು ಫುಟ್ಬಾಲ್ ಮ್ಯಾಚ್ ನೋಡಲು ದೆಹಲಿಯ ಜನ ಬ್ಲಾಕ್ನಲ್ಲಿ ಟಿಕೆಟ್ ತೆಗೆದುಕೊಂಡು ಬಂದು ಕುಂತಿದ್ದರು. ವ್ಹಾ, ಕ್ಯಾ ಸೀನ್ ಹೈ....! ಭಾರತ ಸಿರಿಯಾ ತಂಡಗಳ ನಡುವೆ ನಡೆದ ಈ ಫೈನಲ್ಸ್ ಅತ್ಯಂತ ಜಿದ್ದಾಜಿದ್ದಿನಿಂದಲೂ ಆಸಕ್ತಿಕರವಾಗಿಯೂ ನಡೆದದ್ದು ವಿಶೇಷ. ಸದ್ಯ ಭಾರತ ಫುಟ್ಬಾಲ್ ರಾಂಕಿಂಗ್ನಲ್ಲಿ 156ನೇ ಸ್ಥಾನದಲ್ಲಿದ್ದರೆ, ಸಿರಿಯಾ 94ನೇ ಸ್ಥಾನದಲ್ಲಿದೆ. ಈ ಲೆಕ್ಕದ ಪ್ರಕಾರ ಸಿರಿಯಾ ಭಾರತಕ್ಕಿಂತಲೂ ಉತ್ತಮ ತಂಡ. ಆದರೆ ಇದೇ ಸಿರಿಯಾವನ್ನು 2007ರ ನೆಹರೂ ಕಪ್ ಫೈನಲ್ಸ್ನಲ್ಲಿ ಭಾರತ ಸೋಲಿಸಿ ಕಪ್ಪನ್ನು ಕೈವಶಪಡಿಸಿಕೊಂಡದ್ದು ಇನ್ನೂ ನೆನಪಿನಿಂದ ಮಾಸಿಲ್ಲ. ಅಂತೂ ಪಂದ್ಯ ಶುರು.


90 ನಿಮಿಷಗಳ ನಿಗದಿತ ಅವಧಿಯ ಪಂದ್ಯದಲ್ಲಿ ಎರಡೂ ತಮಡಗಳು ಅತ್ಯುತ್ತಮ ಪ್ರದರ್ಶನ ತೋರಿದರೂ, ಪಂದ್ಯ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದರೂ ಈರ್ವರು ತಂಡಗಳೂ ಗೋಲು ಹೊಡೆಯುವಲ್ಲಿ ವಿಫಲವಾದವು. ನಂತರದ 15 ನಿಮಿಷಗಳ ಹೆಚ್ಚುವರಿ ಸಮಯದಲ್ಲೂ ಕೂಡ ಎರಡೂ ತಂಡಗಳು ಗೋಲು ಹೊಡೆಯುವಲ್ಲಿ ವಿಫಲವಾದವು. ಆಟ ಆಸಕ್ತಿ ಕೆರಳಿಸಿತ್ತು. ಮತ್ತೊಂದು 15 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಯಿತು. 9 ನಿಮಿಷಗಳ ಆಟ ಕಳೆಯುವಷ್ಟರಲ್ಲೇ ದೊರೆತ ಫ್ರೀಕಿಕ್ ಅವಕಾಶವನ್ನು ಸದುಪಯೋಗಪಡಿಸಿಕೊಂಡ ರೆನಡಿ ಸಿಂಗ್ ಗೋಲು ಗಳಿಸಿ ತಂಡ ಗೆಲುವಿನತ್ತ ಮುಖ ಮಾಡುವಂತೆ ಮಾಡಿದರು. ಆದರೆ ಕೆಲವೇ ನಿಮಿಷಗಲಲ್ಲಿ ಸಿರಿಯನ್ನರು ಕೂಡ ಗೋಲು ಗಳಿಸುವುದರೊಂದಿಗೆ ಸಮಬಲ ಸಾಧಿಸಿ ಪಂದ್ಯವನ್ನು ಮತ್ತೆ ಮೊದಲಿಗೆ ತಂದರು. ಪಂದ್ಯ ಪೆನಾಲ್ಟಿಗೆ ಹೋಗಿ ನಿಂತಿತು. ಎಲ್ಲರೂ ಉಸಿರು ಬಿಗಿ ಹಿಡಿದು ನಿಂತಿದ್ದರು. ಭಾರತದ ಪರ ಸುನೀಲ್ ಛೆಟ್ರಿ, ಸ್ಟೀವನ್ ಡಯಾನ್, ಅನ್ವರ್ ಮತ್ತು ಸುರ್ಕುಮಾರ್ ಸಿಂಗ್ ಪೆನಾಲ್ಟಿಯಲ್ಲಿ ಗೋಲುಗಳಿಸಿ ಭಾರತವನ್ನು ದಡ ಸೇರಿಸಿದರಾದರೂ ಅಂತಿಮವಾಗಿ ಭಾರತದ ವಿಜಯ ಪತಾಕೆಯನ್ನು ಎಗರಿಹಾಕಿದ್ದು ತಂಡದ ಗೋಲ್ಕೀಪರ್ ಸುಬ್ರತಾ ಪಾಲ್. ಸಿರಿಯನ್ನರ ಮೂರೂ ಪೆನಾಲ್ಟಿ ಶಾಟ್ಗಳನ್ನು ಗೋಲುಗಳಾಗದಂತೆ ತಡೆದು ಮ್ಯಾಚ್ ವಿನ್ನರ್ ಎನಿಸಿಕೊಂಡರು. ಇದರೊಂದಿಗೆ ನೆಹರೂ ಕಪ್ ಅನ್ನು ಅತಿಥೇಯ ಭಾರತ ತಂಡ ಸತತ ಎರಡನೇ ಬಾರಿಗೆ ತನ್ನದಾಗಿಸಿಕೊಂಡ ಕೀರ್ತಿ ಸಾಧಿಸಿತು. ಈ ವಿಕ್ರಮವನ್ನು ಸಾಧಿಸಿದ ಮೂರನೇ ದೇಶ ಭಾರತ. ಈ ಫುಟ್ಬಾಲ್ ವಿಕ್ರಮಕ್ಕೆ ಭಾರತದಾದ್ಯಂತ ಸಿಕ್ಕ ಮನ್ನಣೆ, ಪ್ರೋತ್ಸಾಹ ಅಪೂರ್ವ. ಇದು ಭಾರತದಲ್ಲಿ ಫುಟ್ಬಾಲನ್ನು ಮತ್ತಷ್ಟು ಪ್ರೊಮೋಟ್ ಮಾಡುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಬೈಚುಂಗ್ ಭೂಟಿಯಾ ಇಂದು ಯಾವ ಕ್ರಿಕೆಟಿಂಗ್ ಸ್ಟಾರ್ಗಿಂತಲೂ ಕಡಿಮೆಯಿಲ್ಲವೆಂಬಂತೆ ಮನೆಮಾತಾಗಿದ್ದಾರೆ.

ಇದು ಭಾರತದ ಫುಟ್ಬಾಲ್ ಇತಿಹಾಸದಲ್ಲೇ ಸುವಣರ್ಾಕ್ಷರಗಳಲ್ಲಿ ಬರೆದಿಡತಕ್ಕಂತಹ ಗೆಲುವು. ಇಂತಹುದೊಂದು ರೋಚಕ ಗೆಲುವನ್ನು ನೋಡಿ ಸುಮಾರು ಕಾಲು ಶತಮಾನವೇ ಸಂದು ಹೋಗಿತ್ತೇನೋ? 1970ರ ಏಷಿಯಾಡ್ನಲ್ಲಿ ಭಾರತ ಕಂಚಿನ ಪದಕ ಗೆದ್ದಿತ್ತು. ಅದು ಭಾರತ ಫುಟ್ಬಾಲ್ನ ಮೊದಲ ಗೆಲುವು. ನಂತರವೂ ಅನೇಕ ಗೆಲುವುಗಳನ್ನು ದಾಖಲಿಸಿದೆಯಾದರೂ ಯಾವ ಗೆಲುವೂ ಕೂಡ ಅಷ್ಟು ರೊಚಕವಲ್ಲ. 2007ರಲ್ಲಿ ನೆಹರೂ ಕಪ್ ಅನ್ನು ಭಾರತ ಗೆಲ್ಲುತ್ತದೆಂದು ಯಾರೂ ಭಾವಿಸಿರಲಿಲ್ಲ. ನಮ್ಮವರು ತಮ್ಮ ನೈಜ ಆಟ ಪ್ರದರ್ಶಿಸಿದರು ಅಷ್ಟೆ. 2007ರ ನೆಹರೂ ಕಪ್ ನಮ್ಮದಾಯಿತು. ಭಾರತದಲ್ಲಿ ಫುಟ್ಬಾಲ್ ಬಗ್ಗೆ ಮೊದಲ ಬಾರಿಗೆ ಗುಸುಗುಸು ಕೇಳ ಹತ್ತಿತು. ಆದರೆ ಈ ಬಾರಿಯ ಆಟವೇ ಬೇರೆ ರೀತಿಯದ್ದು. ಹೋದ ಬರಿ ಯಾವುದೇ ನಿರೀಕ್ಷೆಗಳಿರಲಿಲ್ಲ. ಆದ್ದರಿಂದ ಯಾವುದೇ ಒತ್ತಡಗಳೂ ಇರಲಿಲ್ಲ. ಆದರೆ ಈ ಬಾರಿ ಗೆಲುವಿನ ನಿರೀಕ್ಷಗಳಿದ್ದವು. ಅದು ಮೀಡಿಯಾದಲ್ಲಿರಬಹುದು, ಸಾಮಾನ್ಯ ಜನರಲ್ಲಿರಬಹುದು, ವ್ಯವಸ್ಥೆಯಲ್ಲಿರಬಹುದು, ಕೋಚ್ ಇರಲಿ ಸ್ವತಃ ಆಟಗಾರರಲ್ಲೇ ಇತ್ತು. ಹೋದ ಬಾರಿ ಫೈನಲ್ಸ್ನಲ್ಲಿ ಮಣಿಸಿದ್ದ ಸಿರಿಯಾನೇ ಮತ್ತೆ ಫೈನಲ್ನಲ್ಲಿ ಎದುರಾಗಿತ್ತು. ಅವರಿಗಿದು ಸೇಡು ತೀರಿಸಿಕೊಳ್ಳಲು ಸದಾವಕಾಶವಾಗಿದ್ದರೆ, ಭಾರತಕ್ಕೆ ತನ್ನ ಮಾನ ಉಳಿಸಿಕೊಳ್ಳುವ ತವಕ. ಡಿಫೆಂಡಿಂಗ್ ಛಾಂಪಿಯನ್ನರ ಮೇಲಿರುವ ಒತ್ತಡವದು. ಒಂದೊಮ್ಮೆ ನಮ್ಮವರು ಸೋತುಬಿಟ್ಟಿದ್ದರೆ ನಮ್ಮ ಕ್ರೀಡಾ ವ್ಯವಸ್ಥೆ ಫುಟ್ಬಾಲಿನ ಮೇಲೆ ತೀರ ಇತ್ತೀಚೆಗೆ ಮಾಡಿರುವ ಚಿಲ್ಲರೆ ಖಚರ್ಿನ ಔಚಿತ್ಯವನ್ನೂ ಪ್ರಶ್ನಿಸುತ್ತಿತ್ತು. ಭಾರತದ ಫುಟ್ಬಾಲ್ ಮತ್ತೆ ನಗೆಪಾಟಲಿಗೀಡಾಗುತ್ತಿತ್ತು. ಆದರೆ ನಮ್ಮವರು ಗೆದ್ದರು. ಈಗ ಸೀನೇ ಬದಲಾಗಿ ಹೋಗಿದೆ. ಎಲ್ಲರೂ ಬೈಚುಂಗ್ನನ್ನು ಹಾಡಿ ಹೊಗಳುವವರೇ. ಎಲ್ಲರೂ ಗೆದ್ದೆತ್ತಿನ ಬಾಲಗಳು...ಆದರೆ ದುನಿಯಾ ಇರೋದೆ ಹೀಗೆ. ಇದು ವಾಸ್ತವ.

ಎರಡು ವರ್ಷಗಳಿಗೊಮ್ಮೆ ನಡೆಯುವ ನೆಹರೂ ಕಪ್ ಫುಟ್ಬಾಲ್ ಟೋನರ್ಿಯನ್ನು ಭಾರತವೇ ನಡೆಸಿಕೊಡುತ್ತದೆ. ಇಂದು ಇದು ಫುಟ್ಬಾಲ್ ಪ್ರಪಂಚದ ಪ್ರಮುಖ ಟೋನರ್ಿಯಾಗಿದೆ. 2007ರಲ್ಲಿ ಭಾರತ ನೆಹರೂ ಕಪ್ ಅನ್ನು ತನ್ನದಾಗಿಸಿಕೊಂಡಾಗ ಇಡಿಯ ಭಾರತಕ್ಕೆ ಅದೇನೋ ಪುಳಕ. ಅಂತೂ ಫುಟ್ಬಾಲ್ನಲ್ಲೂ ನಮ್ಮವರು ಬೆಳಗುತ್ತಿದ್ದಾರಲ್ಲ ಅನ್ನುವ ಸಂಭ್ರಮ. ಆಗ ನಮ್ಮ ಬಹುಪಾಲು ಮಂದಿಗೆ ಅಸಲು ಫುಟ್ಬಾಲ್ ಅಂದರೆ ಏನೆಂಬುದೇ ಗೊತ್ತಿರಲಿಲ್ಲ. ನಾಲ್ಕು ವರ್ಷಗಳಿಗೊಮ್ಮೆ ಫೀಫಾ ವಲ್ರ್ಡಕಪ್ ನಡೆಯುತ್ತೆ ವಿಶ್ವವೆಲ್ಲಾ ಗುಲ್ಲಾಗುತ್ತೆ, ಈ ಆಟದಲ್ಲಿ ಸಥರನ್ ಅಮೆರಿಕನ್ ದೇಶಗಳಾದ ಬ್ರೆಜಿಲ್, ಚಿಲಿ, ಅರ್ಜೆಂಟಿನ ಮತ್ತು ಇಟಲಿ ದೇಶಗಳದೇ ಪಾರುಪತ್ತೆ, ಭಾರತ ಅಸಲು ಈ ವಿಶ್ವಕಪ್ಗೆ ಕ್ವಾಲಿಫೈ ಕೂಡ ಆಗುವುದಿಲ್ಲ, ಇಲ್ಲಿ ಅದೇನಿದ್ದರು ಕ್ರಿಕೆಟ್ನಲ್ಲಿ ಹಾಲ್ಯಾಂಡ್ ಇದ್ದ ಹಾಗೆ ಎಂಬಷ್ಟೇ ಗೊತ್ತಿತ್ತು. ಇಂದಿಗೂ ಇದರ ಬಹುಪಾಲು ನಿಜವೂ ಕೂಡ.

ಆದರೆ ಭಾರತದ ಕೆಲವು ಪ್ರಾಂತ್ಯಗಳಲ್ಲಿ ಮೊದಲಿಂದಲೂ ಕೊಂಚ ಫುಟ್ಬಾಲ್ ಮೇನಿಯಾ ಇದ್ದದ್ದೇ. ಈ ಕಮ್ಯೂನಿಸ್ಟರಿಗೂ ಫುಟ್ಬಾಲ್ಗೂ ಅದೇನು ಸಂಬಂಧವೋ ನಾ ಕಾಣೆ, ಇವರು ಬಲವಾಗಿರುವ ಕೇರಳ, ಪಶ್ಚಿಮ ಬಂಗಾಳ, ತ್ರಿಪುರಗಳಲ್ಲಿ ಕ್ರಿಕೆಟ್ ಮೇನಿಯಾ ಬದಲಾಗಿ ಫುಟ್ಬಾಲ್ ಮೇನಿಯಾ ಇದೆ. ಈ ಪ್ರದೇಶಗಳಲ್ಲದೆ ಪೂರ್ವೂತ್ತರ ಭಾರತದ ಸಪ್ತ ಸೋದರಿಯರ ನಾಡು ಮತ್ತು ಸಿಕ್ಕಿಂ, ಅರುಣಾಚಲಗಳಲ್ಲಿ ಫುಟ್ಬಾಲ್ಗೆ ಹೆಚ್ಚೆಚ್ಚು ಜನ ಆಕರ್ಷಿತರಾಗಿದ್ದಾರೆ. ಇವತ್ತಿನ ಭಾರತದ ಫುಟ್ಬಾಲ್ ತಂಡವನ್ನು ಗಮನಿಸಿದರೂ ಇದು ನಮಗೆ ಮನವರಿಕೆಯಾಗುತ್ತದೆ. ತಂಡದ ನಾಯಕ ಬೈಚುಂಗ್ ಭೂಟಿಯಾ ಸದ್ಯದ ನೂತನ ಸ್ಟಾರ್. ಈತ ಸಿಕ್ಕಿಂನವನು. ಈತ ಇಂದು ಭಾರತದ ಫುಟ್ಬಾಲ್ ಇತಿಹಾಸದ ದಂತಕಥೆಯಾಗಿದ್ದಾನೆ. ಆದರೆ...........

ಇಷ್ಟೆಲ್ಲ ಇದ್ದಾಗ್ಯೂ ಭಾರತದಲ್ಲಿ ಫುಟ್ಬಾಲ್ನೆಡೆಗೆ ಮಲತಾಯಿ ಧೋರಣೆ ಇದ್ದದ್ದೇ! ಬೈಚುಂಗ್ ಭೂಟಿಯಾ ಇಂದು ಒಂದು ದಂತಕಥೆ. ಆದರೆ ಇಂದಿಗೂ ಆತನಿಗೆ ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿಲ್ಲ. ಸತತ 6 ವರ್ಷಗಳಿಂದ ಕ್ರೀಡಾ ಪುರಸ್ಕಾರಗಳಲ್ಲಿ ಒಬ್ಬನೇ ಒಬ್ಬ ಫುಟ್ಬಾಲಿಗನಿಲ್ಲ. ಅದು ಸಕರ್ಾರ ನಮ್ಮ ದೇಶದ ಫುಟ್ಬಾಲ್ಗೆ ಕೊಡುತ್ತಿರುವ ಪ್ರೋತ್ಸಾಹ. ಅದೇ ಕ್ರಿಕೆಟ್ನ ಚಿಲ್ಟೂ ಪಿಲ್ಟೂಗಳಿಗೆಲ್ಲ arjuna, ಖೇಲ್ ರತ್ನ, ಪದ್ಮ ಎಲ್ಲವೂ ಬಂದಾಗಿರುತ್ತದೆ. ಸಾನಿಯಾಗೂ ಪದ್ಮ, ಅಭಿನವ್ ಭಿಂದ್ರಾಗಂತೂ ಪದ್ಮಭೂಷಣ, ಬೈಚುಂಗ್ನಂತಹ ತಳಮಟ್ಟದ ನೈಜ ಆಟಗಾರನಿಗೆ, ಸುಬ್ರತಾ ಪಾಲ್ನಂತಹ ಕೆಚ್ಚೆದೆಯ ಕುಶಲ ಆಟಗಾರರನ್ನು ಸರ್ಕಾರ ಗುರುತಿಸುವುದೇ ಇಲ್ಲ. ಇನ್ನು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ಗೋ ದಶಕಗಳ ಕಾಲ ಪ್ರಿಯ ರಂಜನ್ ದಾಸ್ ಮುನ್ಶಿ ಅಧ್ಯಕ್ಷರಾಗಿದ್ದರು. ಆಗ ಸ್ವಲ್ಪ ಕೆಲಸವೂ ನಡಿಯಿತೆನ್ನಿ. ನಂತರ ಈಗ ಕೇಂದ್ರ ವಿಮಾನಯಾನ ಸಚಿವ ಪ್ರಫುಲ್ಲ ಪಟೇಲ್ ಅಧ್ಯಕ್ಷರಾಗಿದ್ದಾರೆ. ಈ ಫೆಡರೇಷನ್ ರಾಜಕೀಯದ ಅಡುಂಬೋಲವೇ ಹೊರತು ಅದು ಕ್ರೀಡಾ ಫೆಡರೇಷನ್ ಎನ್ನುವುದನ್ನು ಸಾಕಷ್ಟು ಮಂದಿ ಮರೆತುಹೋಗಿದ್ದಾರೆ. ಹಾಗಿದೆ ಅದರ ಕಾರ್ಯಕಲಾಪಗಳು. ಇದು ನಮ್ಮ ದೇಶದ ಬಹುಪಾಲು ಕ್ರೀಡಾ ಫೆಡರೇಷನ್ಗಳ ಗೋಳಾಗಿದೆ ಬಿಡಿ. ಭಾರತ ಫುಟ್ಬಾಲ್ನ ಮತ್ತೊಂದು ಪ್ರಮುಖ ಸಮಸ್ಯೆ ಪ್ರಾಯೂಜಕರದು.

ಇಂದಿನ ದಿನಮಾನಸದಲ್ಲಿ ಯಾವುದೇ ಒಂದು ಕ್ರೀಡೆಗೆ ವಾಣಿಜ್ಯದ ಬೆಂಬಲ ಅತ್ಯಗತ್ಯ. ಅದಿಲ್ಲದೆ ಆ ಕ್ರೀಡೆ ಬಧ್ರವಾಗಿ ನೆಲೆನಿಲ್ಲುವುದು ಅನುಮಾನವೇ ಸರಿ. ಎಲ್ಲ ಕಂಪೆನಿಗಳೂ ಕ್ರಿಕೆಟ್ನಲ್ಲೇ ಮುಳುಗಿರುವಾಗ ಇತ್ತ ನೋಡುವವರಾದರೂ ಯಾರು? ಸದ್ಯ ನೆಹರೂ ಕಪ್ ಅನ್ನು ಓಎನ್ಜಿಸಿ ಸಂಸ್ಥೆ ನಡೆಸಿಕೊಡುತ್ತಿದೆ. ಇದಲ್ಲದೆ ಜೀ ಸ್ಪೋಟ್ಸ ಛಾನೆಲ್ನೊಡನೆ ಪಂದ್ಯಗಳ ಟೆಲಿಕ್ಯಾಸ್ಟ್ ರೈಟ್ಸ್ನ ಒಪ್ಪಂದವೂ ಇದೆ. ಈ ವಿಜಯದ ನಂತರ ಕೋಕಾ ಕೋಲಾ ಜೂನಿಯರ್ಸ್ ಟೂನರ್ಿಯನ್ನು ಪ್ರಾಯೋಜಿಸಲು ಮುಂದೆ ಬಂದಿರುವುದು ಬರಲಿರುವ ದಿನಗಳ ಸೂಚನೆಯಂತಿದೆ. ಇನ್ನು ಸಲ್ಮಾನ್ ಖಾನ್ ನಯಾಪೈಸೆಯನ್ನೂ ತೆಗೆದುಕೊಳ್ಳದೆ ಭಾರತದ ಫುಟ್ಬಾಲ್ಗೆ ಬ್ರಾಂಡ್ ಅಂಬಾಸಿಡರ್ ಆಗಲು ಒಪ್ಪಿರುವುದು ಕೂಡ ಶುಭ ಸೂಚಕವೇ ಸರಿ. ಈ ಎಲ್ಲ ಇಲ್ಲಗಳ ನಡುವೆ ಭಾರತ ತಂಡದ ಪ್ರಮುಖ ಬಲವಾಗಿ ಕಾಣುತ್ತಿರುವುದು ನಾಯಕ ಬೈಚುಂಗ್ ಭೂಟಿಯಾ ಮತ್ತು ಕೋಚ್ ಬಾಬ್ ಹಾಗ್ಟನ್. ಬಾಬ್ ತಂಡದ ಬೆನ್ನುಲುಬಾಗಿ ದುಡಿಯುತ್ತಿದ್ದಾರೆ. ಮೊದಲ ಬಾರಿಗೆ ಭಾರತದ ಫುಟ್ಬಾಲ್ ರಂಗದಲ್ಲಿ ನಾವು ಗೆಲ್ಲಬಲ್ಲವೆಂಬ ಆತ್ಮವಿಶ್ವಾಸವನ್ನೂ, ಗೆಲ್ಲುವ ವಾತಾವರಣವನ್ನೂ ಹುಟ್ಟುಹಾಕಿರುವುದು ಮಹತ್ತರ ಸಾಧನೆಯೇ ಸರಿ. ಹಾಗೇ ಅವರು ಬರುವ ಏಷಿಯನ್ ಗೇಮ್ಸ್ನಲ್ಲೂ ತಂಡವನ್ನು ಹೀಗೆ ಮುನ್ನಡೆಸಿಬಿಟ್ಟರೆ, ಆಹಾ..ಹಾಗೇ ಬರುವ ಫೀಫಾ ವಿಶ್ವಕಪ್ನಲ್ಲಿ ಭಾರತವನ್ನು ಕ್ವಾಲಿಫೈ ಮಾಡಿಸಿ ಆಡಿಸಿಬಿಟ್ಟರೆನಾ..ಆಸೆಗಳು ನೂರಾರು.....ಬೈಚುಂಗ್ ಮತ್ತು ಬಾಬ್ ಕೇಳುತ್ತಿದ್ದಾರಾ?

ಭಾರತದ ಕ್ರೀಡಾರಂಗಕ್ಕೆ ಕ್ರಿಕೆಟ್ ಮೇನಿಯಾ ಹಿಡಿದಿರುವುದು ಸ್ಪಷ್ಟ. ಇಂದು ಭಾರತದಲ್ಲಿ ಕ್ರೀಡೆಯೆಂದರೆ ಕ್ರಿಕೆಟ್. ಕಡೆಗೆ ರಾಷ್ಟ್ರೀಯ ಆಟ ಹಾಕಿಯ ಬಗ್ಗೆಯೂ ಕ್ಯಾರೇ ಅನ್ನುವವರಿಲ್ಲ. ಅದೇನು ಈ ಆಟಗಳಲ್ಲಿ ಗೆಲುವಿನ ಬರವಿರುವುದರಿಂದ ಆಟ ಅಷ್ಟು ಪ್ಯಾಪುಲರ್ ಅಲ್ಲವೋ ಅಥವಾ ಪ್ರೋತ್ಸಾಹದ ಬರ ಗೆಲುವಿನ ಬರವಾಗಿ ಪರಿವತಿತವಾಗಿದೆಯೋ ಗೊತ್ತಿಲ್ಲ. ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯ ಇಲ್ಲ ಅನ್ನೋ ರೀತಿ ಈ ಇತರ ಆಟಗಳಿಗೆ ಗೆಲುವೂ ಇಲ್ಲ, ಪ್ರೋತ್ಸಾಹವೂ ಇಲ್ಲ. ಆದರೆ ನಿಧಾನವಾಗಿ ಇದು ಬದಲಾಗುತ್ತಿದೆ. ಭಾರತದ ಕ್ರೀಡಾಭಿಮಾನಿಗಳು ಹಾಕಿ, ಫಾಮರ್ುಲಾ 1, ಫುಟ್ಬಾಲ್ ಮತ್ತಿತರ ಟೀಂ ಇಂಡಿಯಾಗಳ ಸುತ್ತಲೂ ನೆರೆಯತೊಡಗಿದ್ದಾರೆ. ಇದಕ್ಕೆ ಪ್ರತಿಸ್ಪಂದಿಸುವಂತೆ ಅವೂ ಕೂಡ ಮಗುವಿನ ಮೊದಲ ಹೆಜ್ಜೆಗಳಂತೆ ಮೊದಮೊದಲ ಗೆಲುವುಗಳನ್ನು ದಾಖಲಿಸತೊಡಗಿವೆ. ಅಸಲಿಗೆ ಭಾರತದಂತಹ ದೇಶದ ಇಂದಿನ ದಿನಮಾನಸದಲ್ಲಿ ಆಟಗಳು ಬೆಳೆಯುವುದೇ ಹೀಗೆ. ಈ ಬೆಳವಣಿಗೆಗೆ ಮೀಡಿಯಾದ ಗೊಬ್ಬರ, ಮಸಾಲೆ ಜೊತೆಗೆ ಸಕರ್ಾರದ ನೀರೂ ಹರಿದುಬಿಟ್ಟರೆ ಅಲ್ಲೊಂದು ಮಹಾವೃಕ್ಷ ಕಾಣಸಿಗುತ್ತದೆ. ಭಾರತದಲ್ಲಿ ಇಂದು ಈ ಪ್ರಾಸೆಸ್ ಶುರುವಾಗಿದೆ ಅಂತಲೇ ಹೇಳಬಹುದು. ಮೊನ್ನೆ ಚೆಂಡನ್ನು ಬ್ಯಟಿನ ಬದಲಿಗೆ ಕಾಲಲ್ಲಿ ಒದೆಯುತ್ತಿದ್ದ ಹನ್ನೊಂದು ಆಟಗಾರರ ಸುತ್ತಲೂ ದೇಶವೇ ನೆರೆದು ಹುರಿದುಂಬಿಸಿದ್ದು ಇದಕ್ಕೆ ಅತ್ಯುತ್ತಮ ಉದಾಹರಣೆ.

Proudly powered by Blogger
Theme: Esquire by Matthew Buchanan.
Converted by LiteThemes.com.