ಚಿರು ದುರಂತ




ಆಗಸ್ಟ್ 26, 2008: ಆಂಧ್ರದ ಆಗಸದಲ್ಲಿ ಮತ್ತೊಂದು ಪಕ್ಷದ ಉದಯವಾಗಿದೆ. ತೆಲುಗು ಸಿನಿರಂಗದ ಮೆಗಾಸ್ಟಾರ್ ಚಿರಂಜೀವಿ ಬಹುದಿನಗಳ ಊಹಾಗಾನಗಳ ನಂತರ ಇಂದು ಇಲ್ಲಿ ನೆರೆದ ಸುಮಾರು 12 ಲಕ್ಷ ಜನಸಾಗರದ ಭಾರಿ ಸಭೆಯಲ್ಲಿ ತಮ್ಮ ಪ್ರಜಾರಾಜ್ಯಂ ಪಕ್ಷವನ್ನು ಸ್ಥಾಪಿಸಿದರು. ಇಂದಿನ ಕುಲಗೆಟ್ಟ ರಾಜಕೀಯ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುವ ಮತ್ತು ಸಾಮಾಜಿಕ ನ್ಯಾಯದ ನಿನಾದದೊಂದಿಗೆ ಚಿರಂಜೀವಿ ರಾಜಕೀಯ ಅರಂಗ್ರೇಟಂ ಮಾಡಿದ್ದಾರೆ. ಈಗಾಗಲೇ ರಾಜ್ಯದ ನಾನಾ ರಂಗಗಳ ಬುದ್ಧಿಜೀವಿಗಳು, ಸಾಫ್ಟ್ವೇರಿಗರು ಮತ್ತು ಸುಶಿಕ್ಷಿತ ಯುವಕರು ಉತ್ಸಾಹ ತೋರಿ ಪಕ್ಷದಲ್ಲಿ ಸೇರುವ ಇಂಗಿತ ತೋರಿದ್ದಾರೆ. ಚಿರಂಜೀವಿ ಮತ್ತೊಬ್ಬ ರಾಮರಾಯರಾಗುವ
ಎಲ್ಲ ಲಕ್ಷಣಗಳೂ ಕಂಡು ಬರುತ್ತಿವೆ..........

ಮೇ 16, 2009: ಎಲ್ಲರ ನಿರೀಕ್ಷೆಗಳೂ ತೆಲೆಕೆಳಗಾಗಿವೆ. ಇನ್ನೇನು ಮತ್ತೊಬ್ಬ ರಾಮರಾಯರಾಗಿ ಚಿರಂಜೀವಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬಷ್ಟರ ಮಟ್ಟಿಗೆ ನಿರೀಕ್ಷೆಗಳನ್ನು ಮೂಡಿಸಿದ್ದ ಚಿರಂಜೀವಿಯವರ ಪ್ರಜಾರಾಜ್ಯಂ ಪಕ್ಷ ಕೇವಲ 17 ಶಾಸಕರನ್ನು ಗೆಲ್ಲಿಸಿಕೊಳ್ಳುವಲ್ಲಿ ಮಾತ್ರ ಸಫಲವಾಗಿದೆ! ತಿರುಪತಿ ಮತ್ತು ಪಾಲುಕೊಲ್ಲುಗಳಲ್ಲಿ ನಿಂತಿದ್ದ ಚಿರಂಜೀವಿ ತಿರುಪತಿಯಲ್ಲಿ ಗೆದ್ದಿದ್ದಾರಾದರೂ ಸ್ವಂತ ಜಿಲ್ಲೆಯ ಪಾಲಕೊಲ್ಲುವಿನಲ್ಲಿ ಸೋತು ಹೋಗಿದ್ದಾರೆ. ಮುಂದಿನ ಮುಖ್ಯಮಂತ್ರಿಯೆಂದೇ ಬಿಂಬಿಸಿಕೊಳ್ಳುತ್ತಿದ್ದ ಚಿರಂಜೀವಿಗೆ ಇದು ತೀವ್ರ ಮುಖಭಂಗವನ್ನೇ ಮಾಡಿದೆ. ಪ್ರಜಾರಾಜ್ಯಂ ಈಗ ಸೂತಕದ ಮನೆಯಂತೆ ದರ್ಶನವೀಯುತ್ತಿದೆ. ಚಿರಂಜೀವಿ ಜನರ ತೀರ್ಪನ್ನು ಒಪ್ಪಿ ಬರುವ ಐದು ವರ್ಷಗಳಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡುವುದಾಗಿ ಪ್ರತಿಕ್ರಿಯಿಸಿದ್ದಾರೆ. ಸೋಲಿನ ಪರಾಮರ್ಶೆಯ ಸಂದರ್ಭದಲ್ಲೇ ಪ್ರಜಾರಾಜ್ಯಂ ಮನೆಯಲ್ಲಿ ಒಡಕುಗಳು ಕಾಣಿಸಿಕೊಳ್ಳಲಾರಂಭಿಸಿವೆ..........

ಆಗಸ್ಟ್ 26 2009: ಇಂದಿಗೆ ಪ್ರಜಾರಾಜ್ಯಂ ಪಕ್ಷದ ಉದಯವಾಗಿ ಸರಿಯಾಗಿ ಒಂದು ವರ್ಷ. ಚಿರಂಜೀವಿಗಿದ್ದ ಎಲ್ಲ ಭ್ರಮೆಗಳೂ ಕಳಚಿ ಬಿದ್ದಿವೆ, ಜನರವೂ ಸಹ. ಚಿರಂಜೀವಿ ಇಂದು ಅಕ್ಷರಶಃ ಒಬ್ಬಂಟಿಯಾಗಿ ಕಾಣಿಸುತ್ತಿದ್ದಾರೆ. ಪಕ್ಷದ ಪ್ರಮುಖ ನಾಯಕರೆಲ್ಲರೂ ನಾನಾ ಕಾರಣಗಳಿಗಾಗಿ ಪಕ್ಷ ಬಿಟ್ಟು ತೆರಳಿದ್ದಾರೆ, ಉಳಿದಿರುವವರೆಲ್ಲರೂ ಬಕಗಳು ಇಲ್ಲ ಮಿಕಗಳು! ಪಕ್ಷಕ್ಕೆ ಒಂದು ನೆಲೆಗಟ್ಟೇ ಇಲ್ಲದಂತಾಗಿದೆ. ಗೆದ್ದು ಬಂದ 17 ಮಂದಿ ಶಾಸಕರಲ್ಲಿ ಬಹುಪಾಲು ಹೊಸಬರು. ಹಾಗಾಗಿ ವಿಧಾನಸಭೆಯಲ್ಲೂ ಪಕ್ಷದ performance ತೀರ ಕಳಪೆ. ಒಂದೇ ವರ್ಷದಲ್ಲಿ ಪಕ್ಷದ ಅಳಿವು-ಉಳಿವುಗಳೇ ಪ್ರಶ್ನಾರ್ಹವಾಗುತ್ತಿವೆ. ಗೆದ್ದು ಬಂದಿರುವ 17 ಶಾಸಕರಿಗೆ ಅಧಿಕಾರ ಬೇಕು. ಅತ್ತ ರಾಜಶೇಖರ ರೆಡ್ಡಿ ಮೊಲಗಳಿಗೆ ಕ್ಯಾರೆಟ್ಟು ಹಿಡಿದು ನಿಂತಿದ್ದಾರೆ. ಅದು ಆಪರೇಷನ್ ಹಸ್ತವಾ? ಮೊನ್ನೆ ಸುಮಾರು 9 ಪ್ರಜಾರಾಜ್ಯಂ ಶಾಸಕರು ಪಕ್ಷದ ಪ್ರಧಾನ ಕಾರ್ಯದರ್ಶಿ ಅಲ್ಲು ಅರವಿಂದ್ ಬಳಿ ತೆರಳಿ ಸದ್ಯದ ಪರಿಸ್ಥಿತಿಯಲ್ಲಿ ಪಕ್ಷವನ್ನು ನಡೆಸುವುದು ಸಾಧ್ಯವಿಲ್ಲವೆಂದೂ, ಅಧಿಕಾರಸ್ಥ ಕಾಂಗ್ರೆಸ್ನಲ್ಲಿ ಪಕ್ಷವನ್ನು ವಿಲೀನ ಮಾಡಿಬಿಡೋಣವೆಂದು ಪ್ರತಿಪಾದಿಸಿದ್ದಾರೆ!.................

ರಾಜ್ಯದುದ್ದಗಲಕ್ಕೂ ಹೊಸ ಸಂಚಲನ ಮೂಡಿಸಿದ್ದ ಚಿರಂಜೀವಿಯವರ ಪ್ರಜಾರಾಜ್ಯಂ ಪಕ್ಷದ ಮೂರು ಪ್ರಮುಖ ಘಟ್ಟಗಳನ್ನು ಈ ಮೇಲಿನ ವರದಿಗಳು ಚಿತ್ರಿಸುತ್ತವೆ. ಇಂದು ಇದೊಂದು `ಚಿರು ದುರಂತ'ವಾಗಿ ನಮ್ಮನ್ನು ಕಾಡುತ್ತಿದೆ. ಇದು ಅವರ ಸ್ವಯಂಕೃತಾಪರಾಧವೇ ಸರಿ. ಅವರು ಎಡವಿದ್ದೆಲ್ಲಿ? ಶುದ್ಧ ರಾಜಕೀಯದ ಭರವಸೆಯ ಪ್ರಯೋಗವೊಂದು ಏಕೆ ಮಧ್ಯದಲ್ಲೇ ಕಮರಿ ಹೋಯಿತು? ಅದಕ್ಕೆ ಕಾರಣಗಳು ಅಂತರ್ಗತವಾ, ಬಹಿರ್ಗತವಾ? ಪ್ರಜಾರಾಜ್ಯಂ ಪಕ್ಷ ಸ್ಥಾಪನೆಯ ಮೊದಲನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಎಲ್ಲಾ ಪ್ರಶ್ನೆಗಳನ್ನೂ ಮುಂದಿಟ್ಟುಕೊಂಡು ಒಂದು ವಿಮರ್ಶೆಗೆ ಕೂತ ಫಲವೇ ಈ ಲೇಖನ.


ಪಕ್ಷ ಸ್ಥಾಪಿಸಿದ ಏಳು ತಿಂಗಳಿಗೆ ಚುನಾವಣೆ ಎದುರಿಸಿದ ಪಕ್ಷ ಬಹುಜನರ ಅಪಾರ ನೀರೀಕ್ಷೆಗಳನ್ನು ಪೂರೈಸದೇ ಇದ್ದರೂ ಶೇ.17ರಷ್ಟು ಮತಗಳಿಸುವಲ್ಲಿ ಸಫಲವಾಯಿತು. ಆದರೆ ಪಕ್ಷದ ಮೊದಲನೇ ವಾರ್ಷಿಕೋತ್ಸವದೊಳಗೇ ಪಕ್ಷದ ಅಸ್ತಿತ್ವದ ಕುರಿತು ಪ್ರಶ್ನೆಗಳೇಳುತ್ತಿರುವುದಾದರೂ ಏಕೆ? ವಿಲೀನದ ಸದ್ದು ದೊಡ್ಡದಾಗುತ್ತಿದೆಯಲ್ಲಾ, ಚಿರಂಜೀವಿ ಸದ್ಯದಲ್ಲೇ ಅಂಗಡಿ ಎತ್ತಲಿದ್ದಾರೆಯೇ? ಪ್ರಜಾರಾಜ್ಯಂ ಅನ್ನುವ ಒಂದು ರಾಜಕೀಯ ಪ್ರಯೋಗವನ್ನು ಆಮೂಲಾಗ್ರವಾಗಿ ಅವಲೋಕಿಸುತ್ತಾ ಬಂದರೆ ಇದಕ್ಕೆ ನಮಗೆ ಉತ್ತರ ಸಿಗಬಹುದು. ಅಸಲು ಸಮಸ್ಯೆಯಿರುವುದು ಅಡಿಪಾಯದಲ್ಲಿ!

ಮೊದಲಿಂದಲೂ ಅಷ್ಟೇ ಆಂಧ್ರದ ರಾಜಕಾರಣಕ್ಕೂ ಸಿನಿಮಾ ರಂಗಕ್ಕೂ ಅವಿನಾಭವ ಸಂಬಂಧ. ಇದನ್ನು ಮೊದಲ ಬಾರಿಗೆ ಬಳಸಿಕೊಂಡು ರಾಜ್ಯದ ಮುಖ್ಯಮಂತ್ರಿಯಾದವರು ಎನ್.ಟಿ.ರಾಮರಾಯರು. ಚಿರಂಜೀವಿಗೆ ಮಾತ್ರ ಅದನ್ನು ಪುನರಾವರ್ತಿಸುವ ಶಕ್ತಿಯಿತ್ತು(?). ಚಿರಂಜೀವಿ ಚಾರಿಟಬಲ್ ಟ್ರಸ್ಟ್ನ ಮೂಲಕ ರಕ್ತದಾನ ನೇತ್ರದಾನಗಳ ಚಳುವಳಿಯನ್ನೇ ಹುಟ್ಟುಹಾಕಿದ. ತನ್ನ ಸಮಾಜಸೇವೆಯನ್ನು ಮತ್ತೊಂದು ಬೃಹತ್ ಕ್ಯಾನ್ವಾಸ್ಗೆ ತೆಗೆದುಕೊಂಡುಹೋಗುವ ಇಂಗಿತ ಮತ್ತು ಆತನಿಗೆ ಇದ್ದಿರಬಹುದಾದ ಅಧಿಕಾರದ ಆಸೆ ಚಿರಂಜೀವಿಯನ್ನು ರಾಜಕಾರಣದ ಅಂಗಳಕ್ಕೆ ತಂದು ನಿಲ್ಲಿಸಿದವು. ಸರಿ ಕ್ರಿಯಾ ಯೋಜನೆಯೊಂದು ಸಿದ್ಧವಾಯಿತು.


ಎಡರಂಗದ ಡಾ.ಮಿತ್ರಾ ಮತ್ತು ಬಲಪಂಥೀಯ ಪರಕಾಲ ಪ್ರಭಾಕರ ರಾವ್ ಚಿರಂಜೀವಿಯ ಜೊತೆಗೂಡಿದರು. ಆತನ ಸೂಪರ್ ಸ್ಟಾರ್ಗಿರಿಯೊಂದೇ ಆತನನ್ನು ದಡ ತಲುಪಿಸ ಬಿಡಬಹುದೆಂಬಷ್ಟು ಶಕ್ತವಾಗಿತ್ತು. ಆತನ `ಜೆಂಟಲ್ಮ್ಯಾನ್' ಇಮೇಜ್, ಸೇವಾತತ್ಪರತೆ, ರಾಜಕೀಯೇತರ ಹಿನ್ನಲೆ ಇವೆಲ್ಲವೂ ಆತನ ಪರ ಅಲೆ ಸೃಷ್ಟಿಸುತ್ತವೆಂದು ಅಂದಾಜಿಸಲಾಗಿತ್ತು. ಚಿರಂಜೀವಿ ಕಾಲಿಗೆ ಚಕ್ರ
ಕಟ್ಟಿಕೊಂಡಂತೆ ರಾಜ್ಯಾದ್ಯಂತ ಬಿರುಗಾಳಿ ಪ್ರವಾಸ ಕೈಗೊಂಡರು. ಆಂಧ್ರದ ಬೀದಿ ಬೀದಿಗಳಲ್ಲಿ ಚಿರಂಜೀವಿಯದ್ದೇ ಮಾತು. ಚಿರಂಜೀವಿಯ ರೋಡ್ಷೋಗಳಿಗೆ ಬಂದವರೆಲ್ಲಾ ಆತನಿಗೆ ವೋಟು ಹಾಕಿದಿದ್ದರೆ ಆತ ಈಗ ಆಂಧ್ರದ ಮುಖ್ಯಮಂತ್ರಿಯಾಗಿರುತ್ತಿದ್ದ. ಅದೊಂದು ಅಲೆ, ಸಿನಿ ಗ್ಲಾಮರು ಮತ್ತು ಚಿರಂಜೀವಿಯ ಅಮಲು ಆಂಧ್ರಪ್ರದೇಶವನ್ನು ಆವರಿಸಿಕೊಳ್ಳಲು ಪ್ರಾರಂಭಿಸಿತು. ಆದರೆ ಆ ಅಲೆ, ಅಮಲನ್ನು ಎನ್ಕ್ಯಾಷ್ ಮಾಡಿಕೊಳ್ಳಲು ಪಕ್ಷಕ್ಕೆ ಅಗತ್ಯ ಬೇಕಾದ ಒಂದು ಸಾಂಸ್ಥಿಕ ವ್ಯವಸ್ಥೆ, ಆದರ್ಶ-ಸಿದ್ಧಾಂತಗಳ ತಳಹದಿಯನ್ನು ಪಕ್ಷ ಪಡೆಯಲೇ ಇಲ್ಲ. ಇದು ದುರಂತವೇ ಸರಿ.

ಪ್ರಜಾರಾಜ್ಯಂ ಪಕ್ಷ ಚಿರಂಜೀವಿಯವರ ತಾರಾಬಲದ ಮೇಲೆ ಅತಿ ವಿಶ್ವಾಸವನ್ನಿಟ್ಟು ಚುನಾವಣೆಗೆ ಹೋಯಿತು. ಇದರ ನಡುವೆ ಅವರು ಪಕ್ಷಕ್ಕೆ ಒಂದು ಗಟ್ಟಿ ಸೈದ್ಧಾಂತಿಕ ನೆಲೆಯನ್ನು ರೂಪಿಸುವುದನ್ನೇ ನಿರ್ಲಕ್ಷಿಸಿದರು. ಅವರ ಮುಖ್ಯ ಘೋಷಣೆ `ಬದಲಾವಣೆ'. ಆದರೆ ಅವರು ತರ ಬಯಸುವ ಬದಲಾವಣೆ ಯಾವುದು, ಎಂತಹುದು? ಎಂಬುದನ್ನು ಇವತ್ತಿಗೂ ಅವರು ಸ್ಪಷ್ಟವಾಗಿ ಹೇಳಿಲ್ಲ. ಇನ್ನು ಪ್ರಜಾರಾಜ್ಯಂನ ನಿನಾದ ಸಾಮಾಜಿಕ ನ್ಯಾಯ. ಚಾರತ್ರಿಕವಾಗಿ ಆಂಧ್ರದಲ್ಲಿ ರಾಜಕೀಯವಾಗಿ ಪ್ರಬಲ ಕೋಮಿನವರೆಂದರೆ ರೆಡ್ಡಿ ಮತ್ತು ನಾಯುಡುಗಳು. ಕಮ್ಮಾ-ನಾಯುಡುಗಳ ನಂತರ ಅಲ್ಲಿ ಪ್ರಬಲ ಕೋಮಿನವರೆಂದರೆ ಕಾಪುಗಳು. ಚಿರಂಜೀವಿ ಕಾಪು ಜನಾಂಗಕ್ಕೆ ಸೇರಿದವರು. ಆತನ ರಾಜಕೀಯ ನಡೆಗಳು ನಿರ್ಧಾರಿತವಾದದ್ದೇ ಈ ಜಾತಿ ಸಮೀಕರಣಗಳ ಮೇಲೆ. ಬದಲಾವಣೆಯ

ಹರಿಕಾರನೆಂದು ಪೋಸುಕೊಡುತ್ತಾ ಜಾತಿ ಸಮೀಕರಣಗಳ ಬೆನ್ನು ಹತ್ತಿದ ಚಿರಂಜೀವಿಯಲ್ಲಿದ್ದದ್ದು ರಾಜಕೀಯ ಸ್ಪಷ್ಟತೆಯ
ಕೊರತೆ. ತೆಲಂಗಾಣವೂ ಸೇರಿದಂತೆ ರಾಜ್ಯವೆದುರಿಸುತ್ತಿದ್ದ ಹಲವಾರು ಪ್ರಮುಖ ಸಮಸ್ಯೆಗಳ ಕುರಿತು ಏನೇ ಕೇಳಿದರೂ ಅಡ್ಡಗೋಡೆಯ ಮೇಲೆ ದೀಪ! ಅಸಲಿಗೆ ಸಾಮಾಜಿಕ ನ್ಯಾಯದ ಒಣ ಠೇಂಕಾರ ಬಿಟ್ಟರೆ ಚಿರಂಜೀವಿಯ ಬಳಿ ಬೇರೇನೂ ಇರಲಿಲ್ಲ, ಈಗಲೂ ಇಲ್ಲ. ಚುನಾವಣೆಗೆ ತನ್ನ ಪಕ್ಷದ ಉಮೇದುವಾರರಾಗಿ ಸುಮಾರು ಶೇ.45-50 ರಷ್ಟು ಹಿಂದುಳಿದ ವರ್ಗದವರನ್ನೇ ಆರಿಸಿ ಅದನ್ನು ಉಳಿಸಿಕೊಂಡರಾದರೂ ಗೆದ್ದು ಬಂದವರು ಬೆರಳೆಣಿಕೆಯಷ್ಟು ಮಂದಿಯೂ ಇಲ್ಲ.

ಈ ಎಲ್ಲದರ ನಡುವೆ ಪಕ್ಷಕ್ಕೆ ಜಿಲ್ಲಾ, ತಾಲೂಕು, ಮಂಡಲ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಅದನ್ನು ಕಾರ್ಯಪ್ರವೃತ್ತಗೊಳಿಸುವಲ್ಲಿಯೂ ಪಕ್ಷ ಸೋತಿತು. ಎಲ್ಲವೂ ad-hoc ವ್ಯವಸ್ಥೆಯೇ ಹೊರತು ಸಾಂಸ್ಥೀಕರಣಗೊಂಡ ಕ್ಯಾಡರ್ ವ್ಯವಸ್ಥೆಯೊಂದು ರೂಪುಗೊಳ್ಳಲೇ ಇಲ್ಲ. ಯಾವುದೇ ಪಕ್ಷಕ್ಕೆ ತನ್ನ ನೀತಿ-ಸಿದ್ಧಾಂತ-ಕಾರ್ಯಕ್ರಮಗಳನ್ನು ಜನರ ಬಳಿ ಕೊಂಡೊಯ್ಯಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದೇ ಇಲ್ಲದಿದ್ದರೆ ಜನರಿಗೆ ತಲುಪುವುದಾದರೂ ಹೇಗೆ? ಇನ್ನು ಪ್ರಜಾರಾಜ್ಯಂನಲ್ಲಿ ನಾಯಕರೆನಿಸಿಕೊಂಡವರೆಲ್ಲಾ ಒಂದು ಬ್ಯಾಗೇಜನ್ನು ಹೊತ್ತು ತಂದ ಇತರೆ ಪಕ್ಷಗಳಿಂದ ವಲಸೆ ಬಂದವರೆ. ಇವರೆಲ್ಲರನ್ನೂ ಜೊತೆಯಿಟ್ಟುಕೊಂಡು ಚಿರಂಜೀವಿ ಅದೇನು ಬದಲಾವಣೆ ತರಬಲ್ಲರು ಎಂಬುದು ಬಹುತೇಕರ ಪ್ರಶ್ನೆಯಾಗಿತ್ತು.


ಬದಲಾವಣೆ, ಬದಲಾವಣೆ ಅಂತ ಹೇಳಿಕೊಂಡು ತಿರುಗುತ್ತಿದ್ದ ಪ್ರಜಾರಾಜ್ಯಂನಲ್ಲಿ ನಡೆಯುತ್ತಿದ್ದದ್ದು, ನಡೆಯುತ್ತಿರುವುದು ಅಕ್ಷರಶಃ ಕುಟುಂಬ ಪರಿಪಾಲನೆ. ಚಿರಂಜೀವಿ ಪ್ರಜಾರಾಜ್ಯಂನ ಅಧ್ಯಕ್ಷರಾದರೆ,

ಅವರ ಭಾವಮೈದುನ ಅಲ್ಲು ಅರವಿಂದ್ ಪ್ರಧಾನ ಕಾರ್ಯದರ್ಶಿ ತಮ್ಮ ಪವನ್ ಕಲ್ಯಾಣ್ ಯುವರಾಜ್ಯಂ ಅಧ್ಯಕ್ಷ. ಇದು ಸಹಜವಾಗಿಯೇ ಅನೇಕರನ್ನು ಕೆರಳಿಸಿದೆ. ಮುಖ್ಯವಾಗಿ ಅಲ್ಲು ಅರವಿಂದ್. ಪಕ್ಷದ ರಾಜಕೀಯ ಸಲಹಾ ಸಮಿತಿ ಚುನಾವಣಾ ಸೋಲಿನ ಸಂಪೂರ್ಣ ಹೊಣೆಯನ್ನು ಅರವಿಂದ್ ಮೇಲೇ ಹೊರಿಸಿಬಿಟ್ಟಿದೆ. ಚಿರಂಜೀವಿಯ ಭಾವಮೈದುನನಾದ ಈತ ತೆಲುಗು ಚಿತ್ರರಂಗದ ಗೌರವಾನ್ವಿತ ಸಿನಿ ನಿರ್ಮಾಪಕ. ಚಿರಂಜೀವಿಯ ನೆರಳಿನಂತಿದ್ದು ಆತನ ಇಮೇಜನ್ನು ಕಾಪಿಟ್ಟು ಬೆಳೆಸಿದವನೇ ಈತ. ಆತನನ್ನು ಒಪ್ಪಿಸಿ ರಾಜಕೀಯಕ್ಕೆ ಕರೆತಂದವನೂ ಈತನೇ. ಈತ ಚಿರಂಜೀವಿಯ ಹಿಂದಿನ ಬ್ರೈನ್! ಚಿರಂಜೀವಿ ಉತ್ಸವ ಮೂರ್ತಿಯಷ್ಟೇ. ಹಿಂದಿನಿಂದ ಎಲ್ಲವನ್ನೂ ನಡೆಸುತ್ತಿರುವವನೇ ಈತ. ಇಂದಿನ ರಾಜಕಾರಣದಲ್ಲಿ ಪ್ರತಿ ಪಕ್ಷದಲ್ಲಯೂ ಒಬ್ಬರಲ್ಲ ಒಬ್ಬರು ಮ್ಯಾನಿಪ್ಯುಲೇಟರ್ ಇರಬೇಕಾಗುತ್ತದೆ, ಪ್ರಜಾರಾಜ್ಯಂನಲ್ಲಿ ಅಲ್ಲು ಅರವಿಂದ್. ಈತನಿಂದಲೇ ಪಕ್ಷದ ಮೇಲೆ ಭ್ರಷ್ಟಾಚಾರದ ಆರೋಪಗಳು ಬಂದಿವೆ, ಹಲವರು ಪಕ್ಷ ಬಿಟ್ಟು ಹೋಗಿದ್ದಾರೆ. ಆದರೆ ಚಿರಂಜೀವಿ ಮಾತ್ರ ಇವರನ್ನು ಬಿಟ್ಟುಕೊಟ್ಟಿಲ್ಲ. ಇದು ಚಿರಂಜೀವಿಯ ಮೇಲೂ ಹಲವಾರು ಅನುಮಾನಗಳು ಮೂಡುವಂತೆ ಮಾಡಿವೆ.

ಇನ್ನು ಪಕ್ಷ ಟಿಕೆಟ್ ಹಂಚಿಕೆ ಮಾಡಿತು ನೋಡಿ, ಎಲ್ಲ ಅಸಮಾಧಾನಗಳೂ ಕಟ್ಟೆಯೊಡೆಯಿತು. ಅಲ್ಲಿ ಚಿರಂಜೀವಿಗೂ ಇತರರಿಗೂ ಯಾವುದೇ ವ್ಯತ್ಯಾಸವಿರಲಿಲ್ಲ. ಅಂದರೂ ದೊಂಗಲೇ!....ಪ್ರಜಾರಾಜ್ಯಂ ಪಕ್ಷ ಶೇ.40 ರಷ್ಟು ಸೀಟುಗಳನ್ನು ಹಿಂದುಳಿದ ವರ್ಗದವರಿಗೆ ಕೊಟ್ಟಿತಾದರೂ ಮಿಕ್ಕವನ್ನು ಓಪನ್ ಆಕ್ಷನ್ನಲ್ಲಿ ಹರಾಜು ಹಾಕಿಬಿಟ್ಟಿತು. ಪಕ್ಷಕ್ಕಾಗಿ ದುಡಿದ ಹಲವಾರು ನಿಷ್ಠಾವಂತರನ್ನು ಕಡೆಗಣಿಸಿ ದುಡ್ಡಿದ್ದವರು, ರೌಡಿಗಳಿಗೆಲ್ಲಾ ಟಿಕೆಟ್ಟುಗಳನ್ನು ಹಂಚಲಾಯಿತು. ಹಲವರು ಟೆಕೆಟ್ ಆಕಾಂಕ್ಷಿಗಳು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹಂಚಿಕೊಂಡರು. ಒಬ್ಬ ಭೂಪನಂತೂ ನಾನು ಪಕ್ಷದ ಟಿಕೆಟ್ಟಿಗಾಗಿ 2 ಕೋಟಿ ಫಂಡು ಕೊಟ್ಟಿದ್ದೆ, ಆದರೂ ನನಗೆ ಟಿಕೆಟ್ಟು ಸಿಗಲಿಲ್ಲ ಎಂದು ಆರ್ಭಟಿಸಿದ. ಮೂಲಗಳ ಪ್ರಕಾರ ಪ್ರಜಾರಾಜ್ಯಂನ ಎಂಎಲ್ಲೆ ಟಿಕೆಟ್ಟು 5 ಕೊಟಿಗಳಿಗೂ, ಎಂಪಿ ಟಿಕೆಟ್ಟು 8 ಕೋಟಿಗಳಿಗೂ ಹರಾಜಾದವಂತೆ! ಮತ್ತೊಬ್ಬರು ಚಿರಂಜೀವಿಯದು 2500 ಕೋಟಿಗಳ ಹಗರಣ ಎಂದು ಆಪಾದಿಸಿದರು. ಬಿಜೆಪಿಯ ಶತೃಘ್ನ ಸಿನ್ಹಾರೊಂದಿಗೆ ಎಂಪಿಗಳ ಬಿಕರಿಗೆ ಡೀಲು ಕುದಿರಿತ್ತೆಂದೂ, ಅದಕ್ಕೆ ತಾನೇ ಸಾಕ್ಷಿಯೆಂದೂ ಹೇಳ ತೊಡಗಿದರು.


ಈ ಎಲ್ಲವೂ ಅಂತೆ ಕಂತೆಗಳಾಗೇ ಇದ್ದವು. ಆದರೆ ಚುನಾವಣೆಗೆ ಕೆಲವೇ ದಿನಗಳ ಹಿಂದೆ ಪಕ್ಷದ ಸ್ಥಾಪಕ ಸದಸ್ಯರಾದ ಪರಕಾಲ ಪ್ರಭಾಕರ ರಾವ್ ಈ ಎಲ್ಲ ಆಪಾದನೆಗಳೂ ನಿಜವೆಂದು ಹೇಳಿ, ಪ್ರಜಾರಾಜ್ಯಂನನ್ನು ವಿಷವೃಕ್ಷವೆಂದು ಹೀಯಾಳಿಸಿ ಪಕ್ಷ ತ್ಯಜಿಸಿಬಿಟ್ಟರು. ಚಿರಂಜೀವಿಗೆ ಸಿಡಿಲು ಬಡಿದಂತಾಯಿತು. ಪರಕಾಲ ಪ್ರಭಾಕರ ರಾವ್ ಬೇರೆ ಏನಾದರೂ ಭ್ರಷ್ಟರಲ್ಲ. ಜನರಿಗೂ ಅದು ಗೊತ್ತು. ಹಾಗಾಗಿ ಪ್ರಭಾಕರ ರಾವ್ ರಾಜೀನಾಮೆ ಪಕ್ಷದ ಇಮೇಜಿಗೆ ಅಪಾರ ಪ್ರಮಾಣದ ಧಕ್ಕೆಯುಂಟು ಮಾಡಿತ್ತು. ಅವರು ಪ್ರಜಾರಾಜ್ಯಂನಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ, ಸಿದ್ಧಾಂತ ನೀತಿಗಳೂ ಇಲ್ಲ. ಇಲ್ಲಿ ನಡೆಯುತ್ತಿರುವುದು ಶುದ್ಧ ವ್ಯಾಪಾರ, ಜನರನ್ನು ಇಷ್ಟು ದಿನಗಳ ಕಾಲ ಮೋಸ ಮಾಡಲಾಗಿದೆ. ಅದರಲ್ಲಿ ನಾನೂ ಒಬ್ಬ ಪಾಲುದಾರನಾಗಿರುವುದಕ್ಕೆ ಕ್ಷಮೆಯಿರಲಿ ಎಂದು ಹೇಳಿ ಸೀದಾ ಹೊರಟುಬಿಟ್ಟರು. ನಿಜ ಇಂದಿನ ಚುನಾವಣೆಗಳಲ್ಲಿ ನಿಂತು ಬಡಿದಾಡಲಿಕ್ಕೆ ದುಡ್ಡು ಬೇಕು. ಇದು ನಮ್ಮ ಇಂದಿನ ವಾಸ್ತವ. ಆದರೆ ಟಿಕೆಟ್ಟುಗಳನ್ನು ಹರಾಜು ಹಾಕುವುದೆಂದರೆ ಏನು? ಅಲ್ಲು ಅರವಿಂದ್ ಪಕ್ಷವನ್ನು ಒಂದು corporate ಕಂಪೆನಿಯಂತೆ ನಡೆಸಿದರೊ ಅಥವಾ ಒಂದು ಖಾಸಗೀ ಕುಟುಂಬ ನಿಯಂತ್ರಿತ ಕಂಪೆನಿಯನ್ನು ಪಕ್ಷ ಎಂದು ಜನರನ್ನು ಮರಳು ಮಾಡಿದರೋ ಎಂಬುದು ಇಂದಿಗೂ ಹಲವರ ಮನದಲ್ಲುಳಿದಿರುವ ಅನುಮಾನ.


ಅಂತೂ ಚುನಾವಣೆಗಳಲ್ಲಿ ನಿರೀಕ್ಷೆಯಷ್ಟು ಫಲಿತಾಂಶ ಬರಲಿಲ್ಲವಾದರೂ 17 ಶಾಸಕ ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಯಸಸ್ವಿಯಾಯಿತು. ಗೆದ್ದರೆ ಅಧಿಕಾರ ಪಕ್ಷವೊಂದನ್ನು ಒಗ್ಗೂಡಿಸಿಟ್ಟುಕೊಳ್ಳಬಹುದಾಗಿರುತ್ತದೆ, ಆದರೆ ಸೋತರೆ? ಎಲ್ಲ ಹೊಲಸೂ ಬೀದಿಗೆ ಬರುತ್ತದೆ. ಚುನಾವಣೆಯ ನಂತರದ ಕೆಲವೇ ದಿನಗಳಲ್ಲಿ ಪಕ್ಷದ ಮತ್ತೊಬ್ಬ ಮೂಲ ಸಿದ್ದಾಂತಕರ್ತ ಡಾ.ಮಿತ್ರಾ ಅವರು ಕೂಡ ಪಕ್ಷವನ್ನು ತ್ಯಜಿಸಿಬಿಟ್ಟರು. ಇವರು ಯಾವುದೇ ಆರೋಪಗಳನ್ನು ಮಡಲಿಲ್ಲವಾದರೂ ಅವರ ಹೊರನಡೆಯುವಿಕೆ ಪಕ್ಷದ ಇಮೇಜನ್ನು ಮತ್ತಷ್ಟು ಘಾಸಿಗೊಳಿಸಿತು. ತದನಂತರದ ಕೆಲವೇ ದಿನಗಳಲ್ಲಿ ಟಿಡಿಪಿಯಿಂದ ಬಂದು ಸೇರಿದ್ದ ಪ್ರಮುಖ ನೇತಾರ ದೇವೇಂದರ್ ಗೌಡ್, ಸಿನಿನಟ ಕೃಷ್ಣಂರಾಜುರೂ ಸೇರಿದಂತೆ ನಾಯಕರ ಒಂದು ದೊಡ್ಡ ಹಿಂಡೇ ಪಕ್ಷ ತ್ಯಜಿಸಿ ಹೊರಟು ಹೋಯಿತು.

ಇಂದು ಅಳಿದುಳಿದಿರುವ ನಾಯಕರು, ಶಾಸಕರು ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನ ಮಾಡುವ ಪ್ರಪೋಸಲ್ಲೊಂದನ್ನು ಕೈಲಿ ಹಿಡಿದು ಓಡಾಡುತ್ತಿದ್ದಾರೆ. ಚಿರಂಜೀವಿ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸದೇ ಇರಬಹುದು ಆದರೆ ಇರುವ 17 ಮಂದಿ ಶಾಸಕರಲ್ಲಿ 8-10 ಮಂದಿ ಕಾಂಗ್ರೆಸ್ಗೆ ಹೋಗಲು ನಿರ್ಧರಿಸಿದರೆ ಯಾವ ಕಾಯ್ದೆಗಳೂ ಅಡ್ಡ ಬರುವುದಿಲ್ಲ. ಅದೇ ಆಪರೇಷನ್ ಹಸ್ತ! ಚಿರಂಜೀವಿ ಇಂದು ಎಕಾಂಗಿಯಾಗಿದ್ದಾರೆ. ಅವರ ಸುತ್ತಲೂ ನೆರೆದಿರುವುದು ಅವರ ಕುಟುಂಬಿಗರು ಮಾತ್ರ, ಅಭಿಮಾನಿಗಳು? ಅವರು ಚಿರಂಜೀವಿಯನ್ನು ರಾಜಕೀಯ ನಾಯಕನಾಗಿ ತಿರಸ್ಕರಿಸಿ ಶಾನೇ ಕಾಲವಾಯಿತು ಬಿಡಿ.

ಹೀಗೆ ಎರಡೂಮುಕ್ಕಾಲು ದಶಕದ ನಂತರ ಆಂಧ್ರದ ರಾಜಕೀಯದ ಅತ್ಯಂತ ಆಶಾಜನಕ ಬೆಳವಣಿಗೆಯೆನಿಸಿಕೊಂಡ, ಜನರಲ್ಲಿ ಶುದ್ಧ ರಾಜಕೀಯ ವ್ಯವಸ್ಥೆಯೊಂದರ ಭರವಸೆ ಹುಟ್ಟಿಸಿದ್ದ ರಾಜಕೀಯ ಪ್ರಯೋಗವೊಂದು ಕುಸಿದು ಬಿದ್ದಿದೆ. ಮತದಾರ ಮತ್ತೆ ಸಿನಿಕನಾಗಿದ್ದಾನೆ. ಇಂದಿಗೂ ಚಿರಂಜೀವಿಗೆ ಅವಕಾಶವಿದೆ. ಆತ ಇನ್ನೈದು ವರ್ಷಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಶ್ರಮಿಸಬೇಕು. ವಿಧಾನಸಭೆಯಲ್ಲಿ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸಬೇಕು. ನಮ್ಮ ಸಂಖ್ಯೆ ಕೇವಲ 17 ಅಂತ ಕೂರುವುದು ಪಲಾಯನವಾದವಾಗುತ್ತದೆ. ಅದೇ ವಿಧಾನಸಭೆಯಲ್ಲಿ ಲೋಕಸತ್ತಾದ ಜಯಪ್ರಕಾಶ ನಾರಾಯಣ ಒಬ್ಬರೇ ಇರುವುದು ಅವರ ಪಕ್ಷದಿಂದ. ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ನೋಡುವುದೇ ಒಂದು ಛೆಂದ! ಇವರು 17 ಅವರು ಒಬ್ಬರು, ಇವರು ಪ್ರೇಕ್ಷಕರು ಅವರು ಪ್ರತಿಪಕ್ಷ ನಾಯಕರು! ಅಲ್ಲಿ ತಮಿಳು ನಾಡಿನಲ್ಲಿ ವಿಜಯಕಾಂತ್ರನ್ನು ನೋಡಾದರೂ ಕಲಿಯಬೇಕು. ಅವರೂ ಇವರಷ್ಟೇ ಪ್ರಖ್ಯಾತ ಸಿನಿನಟರು, ರಾಜಕೀಯಕ್ಕೆ ಬಂದಿದ್ದಾರೆ. ಅವರ ಪಕ್ಷದಿಂದ ಅವರೊಬ್ಬರೇ ಶಾಸಕರು. ಆದರೆ ಅವರು ತಮ್ಮ ಹೋರಟವನ್ನು ಕೈಬಿಟ್ಟಿಲ್ಲ. ಯಾರೊಂದಿಗೂ ಕೈಜೋಡಿಸುತ್ತಲೂ ಇಲ್ಲ. ನಿಧಾನವಾಗಿ ತಮಿಳು ನಾಡಿನ ರಾಜಕೀಯವನ್ನು ತ್ರಿಕೋನಗೊಳಿಸುವುತ್ತಾ ಶ್ರಮಿಸುತ್ತಿದ್ದಾರೆ. ಈಗ ಚಿರಂಜೀವಿ ಮಾಡಬೇಕಾದ್ದೂ ಅದನ್ನೇ ಅವರು ನಿಧಾನವಾಗಿ ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಒಂದು space ಅನ್ನು ಸೃಷ್ಟಿಸಿಕೊಳ್ಳಬೇಕು. ಅದು ಅವರ ಸ್ಟಾರ್ಗಿರಿಯಿಂದ ಆಗುವಂತಹ ಕೆಲಸವಲ್ಲ. ಅವರ ಜನಪರ ಹೋರಟಗಳಿಂದಲೇ ಅದು ಸಾಧ್ಯ. ಚಿರಂಜೀವಿಗೆ ಅಷ್ಟು ತಾಳ್ಮೆ ಇದೆಯೇ? ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದೆಂದರೆ ಯಾರೇ ಆಗಲೀ ರಾಜಕೀಯ ಮಾಡುವುದು ಅಧಿಕಾರವನ್ನು ಗುರಿಯಾಗಿಸಿಕೊಂಡೋ ಅಥವಾ ಅಧಿಕಾರವನ್ನು ಜನಸೇವೆಯ ಮಾರ್ಗವೆನಿಸಿಕೊಂಡೋ ಎನ್ನುವುದು. ಚಿರಂಜೀವಿ ಮೊದಲನೇ ಗುಂಪಿಗೆ ಸೇರಿ ಬಂದವರು. ಅದಂತೂ ಈಡೇರಲಿಲ್ಲ, ಈಗಲಾದರೂ ಎರಡನೇ ಗುಂಪಿಗೆ ಸೇರುವರೋ? ಕಾದು ನೋಡಬೇಕು. ಏನೇ ಆಗಲಿ ಚಿರಂಜೀವಿ ಹುಟ್ಟಿಸಿದ ನಿರೀಕ್ಷೆ ಮತ್ತು ನಿರಾಶೆ ಅಕ್ಷಮ್ಯ.
( ಈ ವಾರದ ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟಿತ )

ದ್ರಾವಿಡ್ ಪುನರಾಗಮನ

ಹೌದು, ಭಾರತದ ಅಂತರಾಷ್ಟ್ರೀಯ ಏಕದಿನ ತಂಡದಲ್ಲಿ ದ್ರಾವಿಡ್ ಮರಳಿ ಸ್ಥಾನ ಪಡೆದಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಶ್ರೀಲಂಕಾದ ತ್ರಿಕೋಣ ಸರಣಿ ಮತ್ತು ದಕ್ಷಿಣಾಫ್ರಿಕಾದಲ್ಲಿ ನಡೆಯಲಿರುವ ಛಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಳಿಗೆ ಮೊನ್ನೆ ಪ್ರಕಟಗೊಂಡ ತಂಡದ ಆಟಗಾರರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ. ಇದರೊಮದಿಗೆ ರಾಹುಲ್ ದ್ರಾವಿಡ್ರ ಎರಡು ವರ್ಷಗಳ ವನವಾಸ ಕೊನೆಗೊಂಡಂತಾಗಿದೆ. ಅವರು ಕಡೆಯ ಬಾರಿ ಏಕದಿನ ಪಂದ್ಯ ಆಡಿದ್ದು 2007ರಲ್ಲಿ. ಆಗ ಕೆಲ ತಿಂಗಳುಗಳ ಕಾಲ ಅವರು ಫಾಮರ್್ನಲ್ಲಿರಲಿಲ್ಲ. ಅವರು ಆಗ ಸತತವಾಗಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡುತ್ತಾ ಬಂದರು. ಅಷ್ಟರಲ್ಲಿ ಇಡಯ ಕ್ರಿಕೆಟ್ಟನ್ನು ಟಿ-20 ಎಂಬ ಮಹಮ್ಮಾರಿ ಆವರಿಸಿಕೊಂಡು ಬಿಟ್ಟಿತು. ದ್ರಾವಿಡ್ ಒಬ್ಬ ಅತ್ಯುತ್ತಮ ಟೆಸ್ಟ್ ಆಟಗಾರ. ಅವರ ಆಟವನ್ನು ಗಮನಿಸಿದ ಯಾರಿಗಾದರೂ ಸರಿ ಅವರು 20-20 ಫಾರ್ಮಾಟ್ಗೆ ಹೊಂದಿಕೊಳ್ಳುವುದು ಕನಸಿನ ಮಾತೆಂಬುದು ತಿಳಿದಿತ್ತು. ನಿರೀಕ್ಷಿಸಿದಂತೆಯೇ ಅವರು ಐಪಿಎಲ್ನ ಮೊದಲ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಇದೆಲ್ಲವೂ ಸೇರಿ ಅವರನ್ನು ಎರಡು ವರ್ಷಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ದೂರವೇ ಉಳಿಸಿತ್ತು. ಆದರೆ ಐಪಿಎಲ್ನ ಎರಡನೇ ಆವೃತ್ತಿಯ ವೇಳೆಗೆ ದೃಆವಿಡ್ ತಮ್ಮ ಫಾರ್ಮ್ನಲ್ಲಿ ಚೇತರಿಕೆ ಕಂಡುಕೊಂಡರು. ದಕ್ಷಿಣಾಫ್ರಿಕದಲ್ಲಿ ನಡೆದ ಐಪಿಎಲ್ನ ಎರಡನೇ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಅಂದಿನಿಂದಲೇ ಅಂತರಾಷ್ಟರೀಯ ಕ್ರಿಕೆಟ್ಗೆ ಅವರ ಪುನರಾಗಮನವನ್ನು ನಿರೀಕ್ಷಿಸಲಾಗಿತ್ತು. ಅದು ಇಮದು ಸಾಕಾರಗೊಂಡಿದೆ ಅಷ್ಟೆ. ದ್ರಾವಿಡ್ ಇದಕ್ಕೆ ಪ್ರತಿಕ್ರಿಯಿಸುತ್ತಾ ಆಯ್ಕೆದಾರರು ತನ್ನ ಮೇಲಿಟ್ಟಿರುವ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲವೆಂದೂ ತನ್ನ ಅತ್ಯುತ್ತಮ ಆಟವನ್ನು ಆಡಲು ಪ್ರಯತ್ನಿಸುತ್ತೇನೆಂದೂ ಹೇಳಿದ್ದಾರೆ. ಅವರು ಅತ್ಯುತ್ತಮ ಆಟ ಪ್ರದರ್ಶಿಸಿ ತಮ್ಮ ಟೀಕಾಕಾರರೆಲ್ಲರಿಗೂ ತಮ್ಮ ಬೈಅಟಿನ ಮೂಲಕವೇ ಉತ್ತರಿಸಬೇಕೆಂಬುದು ನಮ್ಮೆಲ್ಲರ ಹಾರೈಕೆ. ಅವರಿಗೊಂದು ಗುಡ್ ಲಕ್!

ಸದ್ಯ ದ್ರಾವಿಡ್ಗೆ 36 ವರ್ಷ ವಯಸ್ಸು. ಅವರಲ್ಲಿ ಇನ್ನು ಎಷ್ಟು ವರ್ಷದ ಕ್ರಿಕೆಟ್ ಇದೆ? ತಿಳಿದಿಲ್ಲ. ಅವರು ಇದೇ ಫಾರ್ಮ್ ಅನ್ನು ಕಾಪಾಡಿಕೊಂಡರೆ ಸಚಿನ್ ಜೊತೆ ಭಾರತದಲ್ಲಿ ನಡೆಯುವ 2011ರ ಆ ವಿಶ್ವಕಪ್ ಅನ್ನು ಆಡುವುದರಲ್ಲಿ ಅನುಮಾನವಿಲ್ಲ. ಅದು ಭಾರತ ತಂಡದ ಬಹು ಮಂದಿ ಹಿರಿಯ ಆಟಗಾರರಿಗೆ ಕಟ್ಟಕಡೆಯ ವಿಶ್ವಕಪ್ ಆಗಲಿದೆ. ದ್ರಾವಿಡ್ ಅವರಲ್ಲಿ ಒಬ್ಬರಾ? ಕಾಲವೇ ಉತ್ತರಿಸಬೇಕು. ಏನೇ ಆಗಲೀ ಮರಳಿ ಬಂದ ಭಾರತದ ಗೋಡೆ, ಕನರ್ಾಟಕದ ಕುವರ ರಾಹುಲ್ ದ್ರಾವಿಡ್ರಿಗೆ ನಮ್ಮ ಕಡೆಯಿಂದ ಒಂದು ಆಲ್ ದಿ ಬೆಸ್ಟ್ ಶೂಭಾಕಾಂಕ್ಷೆಗಳಿರಲಿ. ಏನಂತೀರಿ?

ಡೆಲ್ಲಿ ರಣಜಿಲ್ಲಿ ವೀರು ಬಿರುಗಾಳಿ

ಕಳೆದ ಒಂದು ವಾರದಿಂದ ವೀರೇಂದ್ರ ಸೆಹ್ವಾಗ್ರದೇ ಸುದ್ದಿ. ವೀರು ದೆಹಲೀ ರಣಜಿ ತಂಡದ ನಾಯಕನಾಗಿರುವುದು, ಈಗ ಆತ ದೆಹಲಿ ತಂಡವನ್ನು ತ್ಯಜಿಸಿ ಹರ್ಯಾಣ ರಣಜಿ ತಂಡಕ್ಕೆ ಹೋಗಿ ಸೇರುವುದಾಗಿ ಬೆದರಿಸಿರುವುದು, ತಂಡದ ಸುಮಾರು 8-9 ಆಟಗಾರರು ವೀರೂನನ್ನು ಹಿಂಬಾಲಿಸಲು ತಯಾರಾಗಿ ನಿಂತಿರುವುದು - ಬರೀ ಇದರದೇ ಸುದ್ದಿ. ಇದೆಲ್ಲಾ ನೋಡುತ್ತಲಿದ್ದರೆ, ದೆಹಲೀ ಕ್ರಿಕೆಟ್ ಸಂಕಷ್ಟದಲ್ಲಿರುವುದಂತೂ ಖಚಿತ. ಹಾಗೆ ನೋಡಿದರೆ ದೆಹಲೀ ಕ್ರಿಕೆಟ್ ಬಹುದಿನಗಳಿಂದ ಸಮಸ್ಯೆಯಲ್ಲಿದೆ. ಏನು ಅಂಥಾ ಸಮಸ್ಯೆ? - ಮಾಮೂಲೇ - ರಾಜಕೀಯ, ಭ್ರಷ್ಟಾಚಾರ ಮತ್ತು ತಂಡದ ಕಳಪೆ ನಿರ್ವಹಣೆ. ಇವೆಲ್ಲಾ ದೆಹಲೀ ರಣಜಿ ತಂಡದ ಮೇಲೆ ಅತ್ಯಂತ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.


ಹೋದ ವರ್ಷದ ರಣಜಿ ಪಂದ್ಯಾವಳಿಯನ್ನು ದೆಹಲೀ ತಂಡ ಗೆದ್ದುಕೊಂಡಿತ್ತು. ಆದರೆ ಈ ಬಾರಿ ಅದೇ ತಂಡ ನಾಕೌಟ್ ಸುತ್ತಿಗೂ ಕೂಡ ಅರ್ಹತೆ ಗಳಿಸಿಕೊಳ್ಳಲಾಗದೆ, ಅತ್ಯಂತ ಹೀನಾಯ ಮತ್ತು ಅವಮಾನಕಾರಿ ಸೋಲು ಕಂಡಿತು. ಹೋಗಲೀ ಸರಿಯಾದ ಆಟಗಾರರರಿಲ್ಲವೇ ಅಂದರೆ, ಅದೂ ಇದೆ. ಭಾರತ ಕಂಡ ಅತ್ಯಂತ ಸ್ಫೋಠಕ ಓಪನರ್ ಬ್ಯಾಟ್ಸಮನ್ ವೀರೇಂದ್ರ ಸೆಹ್ವಾಗ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಇವರಲ್ಲದೆ ಭಾರತ ಅಂತರಾಷ್ಟ್ರೀಯ ತಂಡದಲ್ಲಿ ಪ್ರಜ್ವಲವಾಗಿ ಬೆಳಗುತ್ತಿರುವ ಮತ್ತೊಬ್ಬ ಸ್ಫೋಠಕ ಬ್ಯಾಟ್ಸಮನ್ ಗೌತಮ್ ಗಂಭೀರ್ ಮತ್ತು ಅತ್ಯುತ್ತಮ ಬೌಲರ್ ಈಶಾಂತ್ ಶರ್ಮರಲ್ಲದೆ ಭಾರತವನ್ನು ಬಹುದಿನಗಳ ಕಾಲ ಪ್ರತಿನಿಧಿಸಿದ ಆಶಿಷ್ ನೆಹ್ರಾ ಇದ್ದಾರೆ. ಹೀಗೆ ದೆಹಲೀ ತಂಡದಲ್ಲಿ ಅತಿ ಹೆಚ್ಚು ನಾಲ್ಕು ಅಂತರಾಷ್ಟ್ರೀಯ ಆಟಗಾರರರಿದ್ದಾರೆ. ಆದರೂ ಸೋತರು ಯಾಕೆ? ಈಗ ಅದೇ ಪ್ರಶ್ನೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ನಾಯಕ ವೀರೇಂದ್ರ ಸೆಹ್ವಾಗ್ ಅದಕ್ಕೆ ಉತ್ತರವೀಯುವ ಮತ್ತು ಅದನ್ನು ಸರಿಪಡಿಸುವ ಪ್ರಯತ್ನದಲ್ಲಿದ್ದಾರೆ ಅಂತಲೇ ಹೇಳಬಹುದು.

ಅಸಲಿಗೆ ಸೆಹ್ವಾಗ್ ಹೇಳಿರುವುದಾದರೂ ಏನು? ದೆಹಲೀ ಕ್ರಿಕೆಟ್ನಲ್ಲಿ ನಡೆಯುತ್ತಿರುವ ಅಪಾರ ಭ್ರಷ್ಟಾಚಾರವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವಲ್ಲಿ ತಂಡದ ಮ್ಯಾನೇಜರರು ಮತ್ತು ಆಡಳಿತದ ಉಸ್ತುವಾರಿ ಹೊತ್ತುಕೊಂಡಿರುವವರ ಅತೀವ ಹಸ್ತಕ್ಷೇಪವನ್ನು ಅವರು ಬಯಲಿಗೆಳೆದಿದ್ದಾರೆ. ರಣಜಿಗಿಂತಲೂ ಹೆಚ್ಚಾಗಿ ಅಮಡರ್ 16 ಮತ್ತು ಅಂಡರ್ 19 ತಂಡಗಳ ಆಯ್ಕೆ ಅಪಾರ ಪ್ರಮಾಣದ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ನಡೆಯುತ್ತಿರುವುದಾಗಿ ಅವರು ಆರೋಪಿಸಿದ್ದಾರೆ. ಪ್ರತಿ ಬಾರಿ ಒಂದಿಲ್ಲೊಂದು ಕಾರಣ ನೀಡಿ ಎರಡು ಮೂರು ಅಟಗಾರರನ್ನು ಹೀಗೆ ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಇಲ್ಲಿ ಪ್ರತಿಭೆಗೆ ಬೆಲೆ ಇಲ್ಲದಂತಾಗಿದೆ. ಯಾರು ದೊಡ್ಡವರ ಬಳಿ ರೆಕಮೆಂಡೇಷನ್ ತರುತ್ತಾರೋ ಅಥವ
ಯಾರ ಬಳಿ ಹೆಚ್ಚು ದುಡ್ಡಿದಡಯೋ ಅವರು ಸರಾಗವಾಗಿ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಆದರೆ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದವರನೇಕರು ತಂಡದಲ್ಲಿ ಸ್ಥಾನ ಪಡೆಯುವುದೇ ಇಲ್ಲ. ಈ ಎಲ್ಲ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸದಿದ್ದರೆ, ತಾವು ದೆಹಲೀ ತಂಡವನ್ನು ತ್ಯಜಿಸಿ ಹರಿಯಾಣ ತಂಡದ ಪರ ಆಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಇದು ಸದ್ಯ ದೆಹಲೀ ಅಷ್ಟೆ ಅಲ್ಲದೆ ರಾಷ್ಟ್ರದ ಕ್ರಿಕೆಟ್ ರಂಗದಲ್ಲೇ ಹೊಸದೊಂದು ಸಂಚಲನ ಮೂಡಿಸಿದೆ. ಭ್ರಷ್ಟ ಆಡಳಿತದ ವಿರುದ್ಧ ದಂಗೆಯೆದ್ದಿರುವ ಸೆಹ್ವಾಗ್ರ ಕ್ರಮವನ್ನು ಯಾರೂ ಕೂಡ ಸದ್ಯ ಬಹಿರಂಗವಾಗಿ ಸ್ವಾಗತಿಸುತ್ತಿಲ್ಲವಾದರೂ ವ್ಯವಸ್ಥೆಯ ವಿರುದ್ಧ ಆಕ್ರೋಶಗೊಂಡಿರುವ ಅನೇಕರು ಸೆಹ್ವಾಗ್ರನ್ನು ಬೆಂಬಲಿಸುವುದರಲ್ಲಿ ಅನುಮಾನವಿಲ್ಲ.

ವೀರೇಂದ್ರ ಸೆಹ್ವಾಗ್ ದೆಹಲೀ ಕ್ರಿಕೆಟ್ಗೆ ಬಹುದಿನಗಳ ನಂತರ ಸಿಕ್ಕ ಅತ್ಯಂತ ಯಶಸ್ವಿ ಸ್ಟಾರ್ ಆಟಗಾರ. ಈಗ ಸೆಹ್ವಾಗ್ರನ್ನು ಬಿಟ್ಟುಕೊಡುವುದು ದೆಹಲೀ ಕ್ರಿಕೆಟ್ಗೆ ಅತ್ಯಂತ ದುಬಾರಿಯೆನಿಸಲಿದೆ. ಬಹು ಅಂತರಾಷ್ಟ್ರೀಯ ಅಸೈನ್ಮೆಂಟುಗಳು ಇರುವ ಕಾರಣ ಸೆಹ್ವಗ್ ಅಷ್ಟಾಗಿ ರಣಜಿ ಕ್ರಿಕೆಟ್ ಆಡದೇ ಇರಬಹುದು. ಆದರೆ ಸೆಹ್ವಾಗ್ ದೆಹಲೀ ತಂಡದ ಹಿಂದಿನ ಮುಖ್ಯ ಇನ್ಸ್ಪಿರೇಷನ್. ಸೆಹ್ವಗ್ ಇಲ್ಲದ ದೆಹಲೀ ತಂಡ ಅತ್ಯಮತ ನೀರಸವೂ, ಕಳಪೆಯೂ ಆಗುತ್ತದೆ. ಇದಲ್ಲದೆ ತಂಡದ ಇತರೆ ಅಂತರಾಷ್ಟ್ರೀಯ ಆಟಗಾರರಾದ ಆಶಿಷ್ ನೆಹ್ರಾ, ಇಶಾಂತ್ ಶರ್ಮ ಮತ್ತು ಗೌತಮ್ ಗಂಭೀರ್ ಅವರೆಲ್ಲರೂ ತಾವು ಸೆಹ್ವಾಗ್ನ ಹಿಂದೆ ಇರುವುದಾಗಿ, ಆತನ ಹೋರಾಟಕ್ಕೆ ತಮ್ಮ ಬೆಂಬಲವಿರುವುದಾಗಿಯೂ ಘೋಷಿಸಿದ್ದಾರೆ. ಇದಲ್ಲದೆ ಒಂದೊಮ್ಮೆ ಸೆಹ್ವಾಗ್ ದೆಹಲೀ ತಂಡ ಬಿಟ್ಟು, ಹರ್ಯಾಣ ತಂಡವನ್ನು ಆಶ್ರಯಿಸಲು ನಿಶ್ಚಯಿಸಿದರೆ ತಾವೂ ಕೂಡ ಸೆಹ್ವಾಗ್ನನ್ನು ಹಿಂಬಾಲಿಸುವುದಾಗಿ ಘೋಷಿಸಿದ್ದಾರೆ. ಸದ್ಯ ದೆಹಲಿ ತಂಡದ ಮೂರು ದಿನಗಳ ತರಬೇತಿ ಶಿಬಿರ ನಡೆಯುತ್ತಿದೆ. ಈ ಶಿಬಿರಕ್ಕೆ 15 ಆಟಗಾರರಲ್ಲಿ 9 ಮಂದಿ ಗೈರಾಗಿದ್ದಾರೆ. ಸೆಹ್ವಾಗ್ ಸದ್ಯ ಭುಜದ ಗಾಯಕ್ಕೆ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲದೆ ಮೇಲೆ ಹೆಸರಿಸಿದ ಯಾವುದೇ ಆಟಗಾರರೂ ಈ ತರಬೇತಿ ಶಿಬಿರಕ್ಕೆ ಹಾಜರಾಗಿಲ್ಲ. ಇದು ಆಟಗಾರರು ಒಗ್ಗಟ್ಟಾಗಿರುವುದು ಮತ್ತು ಅವರ ಧೃಢ ನಿರ್ಧಾರವನ್ನು ತೋರಿಸುತ್ತದೆ. ಇಧೇ ಸಮಯದಲ್ಲಿ ದೆಹಲೀ ಕ್ರಿಕೆಟ್ ಅಸೋಸಿಯೇಷನ್ನ ಉಪಾಧ್ಯಕ್ಷ ಭಾರತದ ಮಾಜೀ ಆಟಗಾರ ಚೇತನ್ ಛೌಹಾಣ್ ಸೆಹ್ವಾಗ್ರೊಂದಿಗೆ ಏಕೀಭವಿಸಿದ್ದಾರೆ. ಖಾಸಗೀ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅವರು ಸೆಹ್ವಾಗ್ ಅವರು ಮಾಡಿರುವ ಎಲ್ಲ ಆರೋಪಗಳೂ ವಾಸ್ತವವೆಂದೂ ಅವರ ಹೋರಾಟಕ್ಕೆ ತಮ್ಮ ಬೆಂಬಲವಿರುವುದಾಗಿಯೂ ಹೇಳಿದ್ದಾರೆ. ಸ್ವತಃ ಉಪಾಧ್ಯಕ್ಷರಿಂದ ಬಂದ ಈ ಹೇಳಿಕೆ ಸೆಹ್ವಾಗ್ ಮತ್ತು ಸಂಗಡಿಗರ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.

ಇದಕ್ಕೆ ದೆಹಲೀ ಕ್ರಿಕೆಟ್ ಆಡಳಿತ ಹೇಗೆ ಪ್ರತಿಕ್ರಿಯಿಸಿದೆ? ಅವರ ಪ್ರಕಾರ ಸೆಹ್ವಾಗ್ ಮಾಡುತ್ತಿರುವುದು ಬರಿಯ ಪ್ರೆಷರ್ ಟ್ಯಾಕ್ಟಿಕ್ಸು ಅಷ್ಟೆ. ಅವರಿಗೆ ಅವರ ಹುಡುಗರಾದ ಮಾನ್ಯಂಕ್ ತೆಹ್ಲಾನ್ ಮತ್ತು ಪ್ರದೀಪ್ ಸಾಂಗ್ವಾನ್ರನ್ನು ಕೂಡಲೇ ತಂಡಕ್ಕೆ ಸೇರಿಸಬೇಕಿದೆ. ಸದ್ಯ ಅದು ಆಗದೇ ಇರುವುದರಿಂದ ಸೆಹ್ವಾಗ್ ಹೀಗೆ ಬೆದರಿಕೆಯೊಡ್ಡುತ್ತಿದ್ದಾರೆ. ಇದಲ್ಲದೆ ಅವರು ಮತ್ತೊಂದು ಕಡೆ ದೆಹಲೀ ಕ್ರಿಕೆಟ್ ಅನ್ನುವುದು ಒಂದು ಕುಟುಂಬವಿದ್ದಂತೆ, ಏನೇ ಸಮಸ್ಯೆ ಬಂದರೂ ನಾವು ನಾವೇ ಬಗೆಹರಿಸಿಕೊಳ್ಲಬೇಕೇ ಹೊರತು ಅದನ್ನು ನೆರೆಹೊರೆಯವರಿಗೆ ತಗುಲಿಸಬಾರದು ಎಂದು ಹೇಳುತ್ತಿದ್ದಾರೆ. ಇದು ಯಾವುದೇ ಆಡಳಿತ ವ್ಯವಸ್ಥೆಯ ರೆಡಿಮೆಡ್ ಹೇಳಿಕೆ. ಇಲ್ಲ ದೆಹಲಿ ಕ್ರಿಕೆಟ್ ಆಡಳಿತ ಮಾಡುತ್ತಿರುವುದೂ ಅದೇ. ಅಸಲಿಗೆ ಅಲ್ಲಿ ನಡೆಯುತ್ತಿರುವುದು ಶುದ್ಧ ರಾಜಕೀಯ ಮತ್ತು ಸಣ್ಣತನ. ಆಡಳಿತದ ವಿರುದ್ಧ ಬಂಡೆದ್ದ ಆಟಗಾರರಿಗೆ ಉಪಾಧ್ಯಕ್ಷರ ಬೆಂಬಲ! ಅಲ್ಲಿಗೆ ಅಧ್ಯಕ್ಷರ ಪೀಠಕ್ಕೆ ಕುತ್ತು ಬಂತು ಅಂತಲೇ ಅರ್ಥ.
ದೆಹಲಿಯ ಕ್ರಿಕೆಟ್ ಅನ್ನು ಕಳೆದ ಸರಿಸುಮಾರು ಒಂದು ದಶಕದಿಂದ ಆಳುತ್ತಿರುವುದು ಸದ್ಯ ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ. ಅವರು ಕಳೆದ ಸುಮಾರು ಒಂದು ದಶಕದಿಂದ ದೆಹಲೀ ಕ್ರಿಕೆಟ್ ಅಸೋಸಿಯೇಷನ್ನ ಅಧ್ಯಕ್ಷರಾಗಿದ್ದಾರೆ. ಸಮಸ್ಯೆಯಿರುವುದು ಇವರದ್ದಾ, ಇಲ್ಲ ಅವರು ಬ್ಯುಸಿಯಾಗಿದ್ದಾಗ ಅವರ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವವರದ್ದಾ? ಅದು ಇನ್ನೂ ತಿಳಿಯಬೇಕಿದೆ. ಸದ್ಯ ಸೆಹ್ವಗ್ ಮತ್ತು ಸಂಗಡಿಗ ಆಟಗಾರರು ತಮ್ಮ ನಿರ್ಧಾರವನ್ನು ಕೆಲ ದಿನಗಳ ಕಾಲ ತಡೆಹಿಡಿದಿದ್ದಾರೆ. ಸದ್ಯ ಅರುಣ್ ಜೇಟ್ಲಿ ಬಿಜೆಪಿಯ ಚಿಂತನ್ ಬೈಠಕ್ನಲ್ಲಿ ಪಾಲ್ಗೊಳ್ಲಲು ಶಿಮ್ಲಾಗೆ ತೆರಳಿದ್ದಾರೆ. ಅವರು ಹಿತುರಿಗಿದ ತಕ್ಷಣವೇ ಸೆಹ್ವಾಗ್ ಮತ್ತು ಅವರ ನಡುವಿನ ಭೇಟಿಯನ್ನು ಆಯೋಜಿಸಲಾಗಿದೆ. ಅರುಣ್ ಜೇಟ್ಲಿ ಆಗಲೇ ಸೆಹ್ವಾಗ್ರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದ್ದಾರೆಂಬ ಸುದ್ದಿಗಳಿವೆ. ಬಹುಷಃ ಆಗಸ್ಟ್ 22 ರಂದು ನಡೆಯಲಿರುವ ಆ ಭೇಟಿಯ ನಂತರ ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸುವುದಾಗಿ ಸೆಹ್ವಾಗ್ ಘೋಷಿಸಿದ್ದಾರೆ.

ಆಟಗಾರರಿಲ್ಲದೇ ಆಡಳಿತಕ್ಕೆ, ಆಡಳಿತ ನಡೆಸಲು ಯಾವ ಕ್ರಿಕೆಟ್ಟೂ ಇರುವುದಿಲ್ಲ. ಅದನ್ನು ಮನಗಂಡು ದೆಹಲೀ ಕ್ರಿಕೆಟ್ ಆಡಳಿತ ಆಟಗಾರರ ಬೇಡಿಕೆಗಳಿಗೆ ತಲೆಬಾಗುತ್ತದಾ? ಊಹಿಸುವುದು ಕಷ್ಟ. ಈ ಆಡಳಿತ ವ್ಯವಸ್ಥೆಯಿದೆಯಲ್ಲ ಅದೊಮಥರಾ ಸೊಕ್ಕಿದ ಆನೆ ಇದ್ದ ಹಗೆ ಅದನ್ನು ಪಳಗಿಸುವುದು ತೀರ ಕಷ್ಟ. ಭಾರತ ಕ್ರೀಡಾರಂಗದಲ್ಲಿ ಈ ಹಿಮದೆ ಇಂಥ ಹಲವಾರು ಪ್ರಯತ್ನಗಳನ್ನು ಮಾಡಿದ ಅತಿರಥ ಮಹಾರಥರಿದ್ದಾರೆ - ಕಪಿಲ್, ಗವಾಸ್ಕರ್, ಬಿಷನ್ ಸಿಂಗ್ ಬೇಡಿ, ಪ್ರಕಾಶ ಪಡುಕೋಣೆ, ಮೀರ್ ರಂಜನ್ ನೇಗಿ..., ಎಲ್ಲರೂ ಕಡೆಗೆ ಸೋಲೊಪ್ಪಿಕೊಂಡವರೇ. ಈ ಬಾರಿ ಸೆಹ್ವಾಗ್ ಗೆಲ್ಲುತ್ತಾರಾ? ಕಾದು ನೋಡಬೇಕಿದೆ.

ಇಂದಿನ ಭಾರತ - ಸೂಪರ್ ಸ್ಟಾರೋ? ವೈಟ್ ಟೈಗರ್ರೋ?

ಇತ್ತೀಚೆಗಷ್ಟೆ ನಾವು ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದೇವೆ. ಈಗ ಇಂಥ ರಾಷ್ಟ್ರೀಯ ಹಬ್ಬಗಳು ಸಾಮಾನ್ಯರ ಪಾಲಿಗೆ ರಜಾದಿನಗಳಾಗಿ ಮಾತ್ರ ನೆನಪು. ಆದರೂ ಸ್ವಾತಂತ್ರ್ಯೋತ್ಸವವೆಂಬುದು ದೇಶ ಸದ್ಯ ಇರುವ ಪರಿಸ್ಥಿತಿಗಳ ಮತ್ತು ನಡೆದು ಬಂದ ಹಾದಿಯ ಕುರಿತು ಆತ್ಮಾವಲೋಕನ ನಡೆಸಲು ಒಳ್ಳೆಯ ಸಂದರ್ಭ. ನಾವು ಗಮನಿಸಿದರೆ ಭಾರತ ಮತ್ತು ಅದರ ಆರ್ಥಿಕದಾಪುಗಾಲು ವಿಶ್ವದಲ್ಲಿ ಬಹುಚರ್ಚಿತ ವಿಷಯವಾಗಿದೆ. ಅದು ಸಕಾರಾತ್ಮಕವಾಗಿರಬಹುದು, ನಕರಾತ್ಮಕವಾಗಿರಬಹುದು, ಚರ್ಚೆಯಂತೂ ನಡೆದಿದೆ. ಇಂಡಿಯಾ ಷೈನಿಂಗ್ ಘೋಷಣೆ ನಮ್ಮ ನೆನಪಿನಿಂದ ಮಾಸುವ ಮುನ್ನವೇ ಭಾರತದ ಆಥರ್ಿಕ ದಾಪುಗಾಲು ಆರ್ಥಿಕ ದಾಪುಗಾಲಿಗೆ ಜಾಗತಿಕ ಆರ್ಥಿಕ ಹಿಂಜರಿತ ಲಗಾಮು ಹಾಕಿರುವುದು ಭಾರತದ `ನಾಗಾಲೋಟ'ದ ಕುರಿತು ಹಲವಾರು ಪ್ರಶ್ನೆಗಳೇಳುವಂತೆ ಮಾಡಿದೆ.

ಇತ್ತೀಚಿನ ಕುತೂಹಲಕಾರಿ ಟ್ರೆಂಡ್ ಎಂದರೆ ಹಲವಾರು ಆಂಗ್ಲ ಲೇಖಕರು ತಮ್ಮ ಪುಸ್ತಕಗಳನ್ನು ಬರೆಯಲು ಆರಿಸಿಕೊಳ್ಳುವ ವಿಷಯ - ಅದು ಭಾರತ. ಭಾರತವೆಂಬುದು ಈಗ `ಮೋಸ್ಟ್ ಸೇಲಬಲ್'. ನಾರಾಯಣ ಮೂರ್ತಿ, ನಂದನ್ ನೀಲಕೇಣಿ, ಶಶಿ ತರೂರ್, ಶೋಭಾ ಡೇ ರಿಂದ ಹಿಡಿದು ಅರವಿಂದ ಅಡಿಗರವರೆಗೂ ಎಲ್ಲರೂ ಬರೆಯುತ್ತಿರುವುದು ಭಾರತದ ಬಗೆಗೆ! ಇತ್ತೀಚೆಗೆ ಇದೊಂದು ಟ್ರೆಂಡ್. ಅದರಲ್ಲಿ ಎರಡು ತಮ್ಮ ಹೆಸರಿನಲ್ಲಿನ ಉಪಮೆಯಿಂದ ಹೆಚ್ಚು ಗುರಿತಸಲ್ಪಟ್ಟವು. ಒಂದು ಶೋಭಾ ಡೇ ಅವರ `ಸೂಪರ್ ಸ್ಟಾರ್ - ಇಂಡಿಯಾ' ಮತ್ತೊಂದು ಬುಕರ್ ಪ್ರಶಸ್ತಿ ವಿಜೇತ ಅರವಿಂದ ಅಡಿಗರ `ವೈಟ್ ಟೈಗರ್'. ಶೋಭಾ ಡೇರವರ ಪ್ರಕಾರ ಇಂದಿನ ಭಾರತವೆಂಬುದು ಮೂರನೇ ಜಗತ್ತಿನ ಸ್ಟಿಗ್ಮಾದಿಂದ ಹೊರಬಂದು ಆರ್ಥಿಕ ಬೆಳವಣಿಗೆಯ ಹಾದಿಯಲ್ಲಿ ನಡೆಯುತ್ತಿರುವ ಮಿನುಗು ನಕ್ಷತ್ರ - ಸೂಪರ್ ಸ್ಟಾರ್.

ಈ ಪುಸ್ತಕವನ್ನು ನೀವು ಓದಿದರೆ ಭಾರತವು ಸಮಸ್ಯೆಗಳೇ ಇಲ್ಲದ ವಂಡರ್ಲ್ಯಾಂಡ್ ಎಂದು ಬಿಂಬಿಸಹೊರಟಿರುವುದು ಸ್ಪಷ್ಟವಾಗುತ್ತದೆ. 90ರ ದಶಕದ ಆದಿಯಲ್ಲಿ ನಮ್ಮ ಮಾರುಕಟ್ಟೆಗಳನ್ನು ಮುಕ್ತಗೊಳಿಸಿದ್ದರಿಂದಾಗಿ ಜಾಗತೀಕರಣದ `ಸಂಪೂರ್ಣ' ಲಾಭವನ್ನು ನಮ್ಮ ದೇಶವು ಪಡೆದುಕೊಳ್ಳಲು ಸಾಧ್ಯವಾಯಿತು. ಜನಸಂಖ್ಯಾ ಸ್ಫೋಟವನ್ನು
ಸಮಸ್ಯೆಯೆಂದು ತಿಳಿಯುತ್ತಿದ್ದ ಭಾರತಕ್ಕೆ ತನ್ನ ಅಪಾರ ಜನಸಂಖ್ಯೆಯ ಮೌಲ್ಯ ತಿಳಿದದ್ದೇ ಆಗ. ಲಿಬರಲೈಸೇಷನ್ನಿಂದಾಗಿ ಭಾರತವು ಐ.ಟಿ.ಕ್ರಾಂತಿಗೆ ಸಾಕ್ಷಿಯಾಯಿತು. ಇದು ಮಾನವ ಸಂಪನ್ಮೂಲ ಕೇಂದ್ರಿತ ಉದ್ಯಮವಾದ್ದರಿಂದ ಭಾರತದ ಜನಸಂಖ್ಯೆಯು ಆಗಿ ಪರಿವರ್ತಿತವಾಯಿತು. ಭಾರತದಲ್ಲಿ ತಾಂಡವವಾಡುತ್ತಿದ್ದ ನಿರುದ್ಯೋಗ ಸಮಸ್ಯೆಗೆ ಬಹುಮಟ್ಟಿಗೆ ಇದು ಮದ್ದಾಯಿತು. ಇದರಿಂದ ಭಾರತದಲ್ಲಿ ಸಮಾಜದ ಮಧ್ಯಮ ವರ್ಗದ ವಿಸ್ತರಿಸುತ್ತಾ ಹೋಯಿತು ಮತ್ತು ನಗರ ಕೇಂದ್ರಿತ ಸಮಾಜದ ಕಡೆಗೆ ನಮ್ಮ ದಾಪುಗಾಲು. ಇದರಿಂದ ಪ್ರಾರಂಭವಾದ ಸಂಪತ್ತು ಉತ್ಪಾದನೆಯು ಇತರ ಹಲವಾರು ಕ್ಷೇತ್ರಗಳಿಗೆ ಹರಡಿ ಭಾರತದ ಆರ್ಥಿಕತೆಯ ನಾಗಾಲೋಟಕ್ಕೆ ನಾಂದಿ ಹಾಡಿತು.
ಇದರ ಪ್ರತಿಫಲವೆಂದರೆ ಭಾರತದಲ್ಲಿ ಹಿಂದೆಂದೂ ಕಾಣದಿದ್ದ ನವೋಲ್ಲಾಸ ಮತ್ತು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ಆತ್ಮವಿಶ್ವಾಸವೊಂದು ಯುವಕರಲ್ಲಿ ಮೂಡಿರುವುದು. ಇದು ಉತ್ತಮ ಬೆಳವಣಿಗೆಯೇ. ಆರ್ಥಿಕ ಹಿಂಜರಿತದ ಹೊರತಾಗಿಯೂ ಭಾರತದ ಆರ್ಥಿಕತೆ ದಾಪುಗಾಲಿಡುತ್ತಿದೆ. ಇದು ಇತರ ಹಲವರಿಗಿಂತ ಎಷ್ಟೋ ಲೇಸು. ಬರುವ ಶತಮಾನದಲ್ಲಿ ವಿಶ್ವದ ಆಗು ಹೋಗುಗಳು, ಭಾರತ-ಅಮೇರಿಕಾ-ಚೈನಾಗಳ ನಡುವಿನ ಸಂಬಂಧಗಳ ಸ್ವರೂಪದ ಮೇಲೆ ನಿರ್ಧಾರವಾಗುತ್ತವೆ ಎನ್ನುತ್ತಾರೆ. ಕೇವಲ ಎರಡು ದಶಕಗಳ ಹಿಂದೆ ಹಾವಾಡಿಗರ ದೇಶವೆಂದು ಹೆಸರಾಗಿದ್ದ ಭಾರತವು ಇಂದಿರುವ ಸ್ಥಿತಿಯನ್ನ ತಲುಪಿರುವುದು ಸಾಧನೆಯೇ ಸರಿ.


ಆದರೆ ಪ್ರಶ್ನೆ ಈ ಹಾವಾಡಿಗರು, ಭಿಕ್ಷುಕರು, ಅನಕ್ಷರಸ್ತರು, ಇವರೆಲ್ಲಾ ಎಲ್ಲಿ ಹೋದರು ಅನ್ನುವುದು? ಅದನ್ನು ಹುಡುಕುತ್ತಾ ಹೊರಟವರಿಗೆ `ಇಂಡಿಯಾ ಷೈನಿಂಗ್'ನ ಕರಾಳ ಮುಖದ ದರ್ಶನವಾದೀತು. ಇತ್ತೀಚೆಗೆ ಅರವಿಂದ ಅಡಿಗರು ತಮ್ಮ `ವೈಟ್ ಟೈಗರ್' ಕೃತಿಯಲ್ಲಿ ಇದರ ಪ್ರಯತ್ನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ ಕೂಡ. ಇದರಲ್ಲಿ, ಇಂದಿನ ಸಮಾಜದಲ್ಲಿ ಕಡೆಗೆ ನಿರ್ಣಾಯಕವಾಗುವುದು ಹಣವೇ ಹೊರತು ಅದನ್ನು ಸಂಪಾದಿಸಿದ ಮಾರ್ಗವಲ್ಲವೆಂದಾಗ, ತಲೆ ಹೊಡೆದು ದುಡ್ಡು ಮಾಡಿದರೂ ಸರಿಯೇ ಎಂಬ ವಾದ ಹುಟ್ಟುವುದನ್ನು, ಒಬ್ಬ ಮನುಷ್ಯ ಎಷ್ಟು ದುಡಿಯುತ್ತಾನೋ ಅದರಲ್ಲಿ ಆತನ ಸಕ್ಸಸ್ ಅನ್ನು ಅಳೆಯುವ ಇತ್ತೀಚಿನ ಸಂಸ್ಕೃತಿಯನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಇದರಲ್ಲಿ ಅಡಿಗರು ಮಾರುಕಟ್ಟೆ ಕೇಂದ್ರಿತವಾಗುತ್ತಿರುವ ಭಾರತದ ವ್ಯವಸ್ಥೆಯ ವೈಫಲ್ಯವನ್ನು ಮತ್ತು ಇಂದಿಗೂ ಸೋಷಿಯಲಿಸ್ಟ್ ಎನಿಸಿಕೊಂಡಿರುವ ಚೀನಾದಲ್ಲಿನ ವ್ಯವಸ್ಥೆಗೆ ತಾಳೆ ಹಾಕಿ ನೋಡುತ್ತಾರೆ. ಇದರಿಂದ ಅವರು ಮುಂದಿನ ದಿನಗಳಲ್ಲಿ ಸಮಾಜವಾದದ ಪುನರುದಯವನ್ನು ನಿರೀಕ್ಷಿಸುತ್ತಿರುವುದು ಸ್ಪಷ್ಟವಾಗುತ್ತದೆ. ಆದರೆ ಸಮಸ್ಯೆಯೆಂದರೆ ಈ ಪುಸ್ತಕವನ್ನು ಓದಿದರೆ ಭಾರತವೆಂಬುದು ಅಸಲು ಬೆಳವಣಿಗೆಯನ್ನೇ ಕಾಣದ `third worldನ ಕೊಂಪೆಯೆನಿಸದೇ ಇರದು. ಇದು ಇಂದಿನ ಭಾರತದ ನೈಜ ಚಿತ್ರಣವಾದೀತೆ? ಹಿಂದೆ ಹೇಳಿದಂತೆ ಮುಕ್ತ ಮಾರುಕಟ್ಟೆಯು ನಮ್ಮ ಸಮಾಜದಲ್ಲಿ ಕ್ರಾಂತಿಯನ್ನೇ ಉಂಟುಮಾಡಿರುವುದು ವಾಸ್ತವವಾದರೂ, ಅದು ಸಂಪತ್ತಿನ ದ್ವೀಪಗಳನ್ನು ಸ್ಥಾಪಿಸಲು ಸಫಲವಾಯಿತೇ ಹೊರತು, ಜನ್ಯ ಸಂಪತ್ತನ್ನು ಸಾಮಾನ್ಯರಿಗೆ, ಸಮಾಜದ ತಳ ಮಟ್ಟದಲ್ಲಿರುವವರಿಗೆ ತಲುಪುವಂತೆ ಮಾಡುವಲ್ಲಿ ವಿಫಲವಾಗಿರುವುದು ಸುಸ್ಪಷ್ಟ.

ಇದರಿಂದ ಉಳ್ಳವರ ಮತ್ತು ಬಡವರ ನಡುವಿನ ಅಂತರ ಮತ್ತು ನಗರ ಹಳ್ಳಿಗಳ ಜೀವನ ಮಟ್ಟದಲ್ಲಿನ ಅಂತರವು ಬೆಳೆಯುತ್ತಲೇ ಇದೆ. ಇದು ಎಂದಿಗಾದರೂ ಅಪಾಯಕಾರಿ ಬೆಳವಣಿಗೆಯೇ. ಜಾಗತೀಕರಣದಿಂದಾಗಿ ಸ್ಥಾಪಿಸಲ್ಪಟ್ಟ ಈ ಸಂಪತ್ತಿನ ದ್ವೀಪಗಳಲ್ಲಿ ನಮ್ಮ ರಾಜಕೀಯ, ಸಾಮಾಜಿಕ, ಮಾಧ್ಯಮ ವ್ಯವಸ್ಥೆಯು ಮೈಮರೆತಿರುವುದು ವಾಸ್ತವ. ಆದರೆ ಜಾಗತಿಕ ಆರ್ಥಿಕ ಮುಗ್ಗಟ್ಟಿನಿಂದಾಗಿ ಸಂಪತ್ತಿನ ಈ ದ್ವೀಪಗಳೂ ಮುಳುಗಡೆಯಾಗುವ ಲಕ್ಷಣಗಳನ್ನು ಪ್ರದರ್ಶಿಸುತ್ತಿವೆ. ಈಗಲಾದರೂ ವಿಶ್ವದ ಹ್ಯೂಮನ್ ಡೆವಲಪಮೆಂಟ್ ಇಂಡೆಕ್ಸ್ನಲ್ಲಿ ಭಾರತವು ಕೆಳಗಡೆಯಿಂದ ಐದೋ ಆರೋ ಸ್ಥಾನದಲ್ಲಿರುವುದನ್ನು ಮನದಟ್ಟು ಮಾಡಿಕೊಂಡು ದೇಶವನ್ನು ಪ್ರಗತಿಯ ದಿಶೆಯಲ್ಲಿ(ಅಭಿವೃದ್ಧಿಯಲ್ಲ) ಮುನ್ನಡೆಸಲು ಹೆಜ್ಜೆ ಹಾಕಬೇಕಿದೆ. ಈ ಆರ್ಥಿಕ ಬೆಳವಣಿಗೆಯ ಮುಖ್ಯ ಸೋಲೆಂದರೆ ಅದು ಸಕಲರನ್ನೂ ಒಳಗೊಳ್ಳದೇ ಇರುವುದು. ಒಂದು ದೇಶದ ಆರ್ಥಿಕತೆಯು ಬಹಳ ವರ್ಷಗಳ ಕಾಲ ವಿದೇಶಿ ಮಾರುಕಟ್ಟೆಗಳ ಮೇಲೆ ಅವಲಂಬಿತವಾಗಿ ಬೆಳೆಯಲಿಕ್ಕಾಗುವುದಿಲ್ಲ. ಭಾರತದಲ್ಲಿ ಬೃಹತ್ತಾದ ಸ್ವದೇಶಿ ಮಾರುಕಟ್ಟೆಯೊಂದು ಬಳಸದೇ ವ್ಯರ್ಥವಾಗುತ್ತಿದೆ. ಆದರೆ ಇದನ್ನು ನಾವು ಬಳಸಬೇಕಾದರೆ ಮುಖ್ಯವಾಗಿ ದೇಶದ ಸಾಮಾನ್ಯರಿಗೆ ಕೊಳ್ಳುವ ಶಕ್ತಿಯನ್ನು ನೀಡಬೇಕಿದೆ. ಅದಕ್ಕೆ ಸಂಪತ್ತಿನ ಸಮಾನ ವಿತರಣೆ ಆಗಬೇಕು. ಇದು ಇಂದಿನ ಭಾರತದ ಪ್ರಥಮ ಸವಾಲುಗಳ್ಳಲ್ಲೊಂದು.

ಶೋಭಾ ಡೇ ತಿಳಿಸಿರುವಂತೆ ಇಂದಿನ ಭಾರತ ಸೂಪರ್ ಸ್ಟಾರೂ ಅಲ್ಲ. ಅರವಿಂದ ಅಡಿಗರು ಹೇಳುವಂತೆ ವೈಟ್ ಟೈಗರ್ರೂ ಅಲ್ಲ. ಇವೆರಡೂ ಆಶಾವಾದ ಮತ್ತು ನಿರಾಶಾವಾದದ ಉತ್ಪ್ರೇಕ್ಷಿತ ಉಪಮೆಗಳು ಅಷ್ಟೆ. ಇದು ಶಾಶ್ವತ ಆಶಾವಾದಿಗಳ ಮತ್ತು ಶಾಶ್ವತ ನಿರಾಶಾವಾದಿಗಳ ನಡುವಿನ ತಿಕ್ಕಾಟಗಳೇ ಹೊರತು ಇದರಲ್ಲಿ ಯಾವ ಕೃತಿಯು ಇಂದಿನ ಭಾರತದ ನೈಜ ಚಿತ್ರಣವನ್ನು ಕಟ್ಟಿಕೊಡುವುದಿಲ್ಲ. ಹಾಗಾದರೆ ಇವೆರಡೂ ಸುಳ್ಳುಗಳ ಕಂತೆಯೇ? ಉತ್ತರ ಅಷ್ಟು ಸುಲಭವಲ್ಲ. ಇದು ಭಾರತ. ಇಲ್ಲಿನ ಎರಡೂ ಚಿತ್ರಣಗಳು ನಿಜ. ಆದರೆ ಸಂಪೂರ್ಣವಲ್ಲ ಅಷ್ಟೆ. ಭಾರತದ ವೈವಿಧ್ಯತೆ ಅಪಾರ. ಅದೇ ಅದರ ಶಕ್ತಿ ಕೂಡ. ನೆಹರೂ ಎಲ್ಲೋ ಹೇಳಿದ ನೆನಪು ಭಾರತದ ಕುರಿತು ಏನೇ ಹೇಳಿದರೂ ಅದರ ವಿರುದ್ದವೂ ಅಷ್ಟೆ ನಿಜವೆಂದು. ಹಾಗಾಗಿ ನಾಣ್ಯದ ಒಂದೇ ಮುಖವನ್ನು ಕಂಡು ನಾಣ್ಯಕ್ಕಿರುವುದೇ ಒಂದು ಮುಖವೆಂದು ವಾದಿಸ ಹೊರಡುವುದು ಹಾಸ್ಯಾಸ್ಪದವಾಗುತ್ತದೆ. ಶೋಭಾ ಡೇ ಚಿತ್ರಿಸಲು ಹೊರಟಂತೆ ಇದು ಸಮಸ್ಯೆಗಳೇ ಇಲ್ಲದ ವಂಡರ್ಲ್ಯಾಂಡ್ ಅಲ್ಲವೇ ಅಲ್ಲ - ಇಲ್ಲಿ ಹಲವಾರು ಸಮಸ್ಯೆಗಳಿವೆ. ಜನಸಂಖ್ಯೆಯ ಮೂರನೇ ಒಂದು ಭಾಗವು ಬಡತನ ರೇಖೆಗಿಂತ ಕೆಳಗಿದೆ ಮತ್ತು ಶೇ.40 ರಷ್ಟು ಅನಕ್ಷರಸ್ತರಿದ್ದಾರೆ. ಹಾಗಂತ ಅರವಿಂದ ಅಡಿಗರು ನಂಬಿಸ ಹೊರಟಂತೆ ಇದು ಇನ್ನೂ ಬೆಳವಣಿಗೆಯೇ ಕಾಣದ ಮೂರನೇ ಜಗತ್ತಿನ ಕೊಂಪೆಯೂ ಅಲ್ಲ. ವಾಸ್ತವವೆಂಬುದು ಈ ಎರಡು ಉತ್ಪ್ರೇಕ್ಷೆ ಗಳ ನಡುವೆ ಎಲ್ಲೊ ಇದೆ. ಇಂದಿನ ಭಾರತದಲ್ಲಿ ವಂಡರ್ಲ್ಯಾಂಡ್ನಂತಹ ದ್ವೀಪಗಳೂ ಇವೆ, ಇವನ್ನು ಸುತ್ತುವರೆದ ಕೊಂಪೆಗಳಂತಹ ವಿಶಾಲ ಸಮುದ್ರವೂ ಇದೆ. ಇವರೆಡರ ನಡುವಿನ ಅಂತರವನ್ನು ಕಡಿತಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಭಾರತವು 1991ರಲ್ಲಿ ತನ್ನ ಮಾರುಕಟ್ಟೆಗಳನ್ನು ಮುಕ್ತಗೊಳಿಸಿತು. ಈ ಹಿಂದೆ ನಾಲ್ಕೂವರೆ ದಶಕಗಳ ಕಾಲ ನಮ್ಮ ದೇಶವನ್ನು ಸಮತಾವಾದ ಆವರಿಸಿಕೊಂಡಿತ್ತು. ಮುಖ್ಯವಾಗಿ ನಮ್ಮ ದೇಶವು ಪ್ರಜಾಪ್ರಭುತ್ವವನ್ನು ಒಪ್ಪಿ, ಅಪ್ಪಿ ಅದು ಜಾರಿಯಾಗಲು ಶೂರುವಾದ ನಾಲ್ಕು ದಶಕಗಳ ನಂತರ ನಾವು ಲಿಬರಲೈಸೇಶನ್ ಅನ್ನು ಆಹ್ವಾನಿಸಿರುವುದು. ತಮ್ಮ ಇಂಡಿಯಾ ಅನ್ಬೌಂಡ್ ಕೃತಿಯಲ್ಲಿ ಗುರುಚರಣ್ದಾಸ್ ಹೇಳುವಂತೆ - ಪ್ರಜಾಪ್ರಭುತ್ವ ಮತ್ತು ಲಿಬರಲೈಸೇಶನ್ ನಡುವಿನ ಈ ಸಂಬಂಧ ಭಾರತಕ್ಕೆ ವಿಷೇಶ. ಹೀಗಾಗಿ ಭಾರತದ ಭವಿಷ್ಯವೆಂಬುದು ಮಾರುಕಟ್ಟೆಯ ಲಂಗುಲಗಾಮಿಲ್ಲದ ಶಕ್ತಿಗಳಿಂದ ರೂಪಿತವಾಗುವುದಿಲ್ಲ. ಬದಲಾಗಿ ಅದು ಡೆಮಾಕ್ರಟಿಕ್ ಆಗಿ ನೆಹರೂವಿಯನ್ ಸಮತಾವಾದಿಗಳು, ಕಮ್ಯೂನಿಸ್ಟರು, ಧರ್ಮಗಳು - ಹೀಗೆ ಭಾರತದ ಮನೋ ಸಾಮ್ರಾಜ್ಯವನ್ನು ಆಳುತ್ತಿರುವ ಮನಸ್ಥಿತಿಗಳು ಮತ್ತು ಶಕ್ತಿಗಳೊಂದಿನ ದೈನಂದಿನ ಚರ್ಚೆಯಿಂದ ಭಾರತದ ಭವಿಷ್ಯ ರೂಪಿತವಾಗುತ್ತದೆ. ಇಂತಹುದೊಂದು ಪ್ರಕ್ರಿಯೆಯಿಂದಾಗಿ ವೈವಿಧ್ಯಮಯ ದೃಷ್ಟಿಕೋನಗಳು, ಇಸಮ್ಗಳು ತಮ್ಮ ಪ್ರಭಾವ ಬೀರುವುದರಿಂದ ಭಾರತದ ಆರ್ಥಿಕ ಸುಧಾರಣೆಗಳು ಸಾವಧಾನವಾಗಿ, ಮುಂದುವರಿಯುತ್ತವೆಯೇ ಹೊರತು ಇತರ ಏಷಿಯನ್ ಟೈಗರ್ ಇಕಾನಮಿಗಳಂತೆ ಛಂಗನೆ ನೆಗೆಯುವುದಿಲ್ಲ. ಅಸಲಿಗೆ ಭಾರತವು ಹುಲಿಯೇ ಅಲ್ಲ. ಅದೊಂದು ಆನೆ - ಒಂಟಿ ಸಲಗ. ಈಗತಾನೆ ಅದು ನಡೆಯಲು ಪ್ರಾರಂಭಿಸಿದೆ, ಅದು ಛಂಗನೆ ಎಗರುವುದಿಲ್ಲ ಆದರೆ ಅದು ಬೀಳುವುದೂ ಇಲ್ಲ, ನಡೆಯುವುದನ್ನು ನಿಲ್ಲುಸುವುದೂ ಇಲ್ಲ. ಅದಕ್ಕೆ ಯಾವತ್ತು ಸ್ಪೀಡ್ ಇರುವುದಿಲ್ಲ ಆದರೆ ಎದುರು ಹೊಡೆತಗಳನ್ನು ತಡೆದುಕೊಳ್ಳುವ ಶಕ್ತಿ ಮತ್ತು ಸ್ಟಾಮಿನಾ ಇರುತ್ತದೆ. ಇದನ್ನು ನಾವೀಗಾಗಲೇ ಕಾಣುತ್ತದ್ದೇವೆ. ಜಾಗತಿಕ ಆರ್ಥಿಕ ಹಿಂಜರಿತದ ಹೊರತಾಗಿಯೂ ಭಾರತದ ಆರ್ಥಿಕತೆಯು ಶೇ.5ರಷ್ಟು ಬೆಳೆಯುವ ನಿರೀಕ್ಷೆಯಿದ್ದರೆ ಅದು ಈ ನಿಧಾನಗತಿಯ ಲಿಬರಲೈಸೇಷನ್ನ ಫಲಿತವೇ. 90ರ ದಶಕದಲ್ಲಿ ಏಕಾಏಕಿ ಸಂಪೂರ್ಣವಾಗಿ ಜಾಗತೀಕರಣಕ್ಕೆ ಮೊರೆ ಹೋಗಿದ್ದರೆ ಇಂದಿನ ಸ್ಥಿತಿ ಬೇರೆಯದೇ ಆಗಿರುತ್ತಿತ್ತು. ಭಾರತದ ಡೆಮಾಕ್ರಸಿ ಮತ್ತು ಕ್ಯಾಪಿಟಲಿಸಮ್ನ ಈ ವಿಶಿಷ್ಟ ಸಂಬಂಧದ ಹಿನ್ನಲೆಯಲ್ಲಿ ನಮ್ಮ ಭವಿಷ್ಯವು ಆಶಾದಾಯಕವಾಗೇ ಕಾಣುತ್ತದೆ. ಜಾಗತೀಕರಣದ ಹೊಡೆತಗಳ ಹೊರತಾಗಿಯೂ ಭಾರತವು ತನ್ನ ಸಂಸ್ಕೃತಿ, ಆಧ್ಯಾತ್ಮ, ರೈತಾಪಿ ಜನರನ್ನು ಸಂರಕ್ಷಿಸಿಕೊಂಡರೆ ಖಂಡಿತಾ ಭಾರತವು ಒಂಟಿ ಸಲಗವೇ. ಅದನ್ನು ಸಾಧಿಸುತ್ತೇವೆಂಬ ಭರವಸೆ, ವಿಶ್ವಾಸ ಮತ್ತು ಛಲದೊಂದಿಗೆ ನಾವು ಮುನ್ನಡೆಯಬೇಕಿದೆ. ಆಗಸ್ಟ್ 15, 1947ರ ಮಧ್ಯರಾತ್ರಿ ನೆಹರೂ ಮಾಡಿದ ಭಾಷಣ ವಿಧಿಯೊಂದಿಗೆ ಅನುಸಂಧಾನದಲ್ಲಿ ನೆಹರೂರ ಧ್ಯೇಯವಾಕ್ಯವನ್ನು ನಾವಿಂದು ಮನಸ್ಸಿನಲ್ಲಿಟ್ಟುಕೊಂಡು ಮುನ್ನಡೆಯಬೇಕಿದೆ.

“The service of India means the service of the millions who suffer. It means the ending of poverty and ignorance and disease and inequality of opportunity. The ambition of the greatest man of our generation [Mahatma Gandhi] has been to wipe every tear from every eye. That may be beyond us but so long as there are tears and suffering, so long our work will not be over”
- Jawaharlal Nehru, tryst with destiny
(ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟಿತ )

ಆರೋಗ್ಯ ಇಲಾಖೆಯೆಂಬ ಸೋಮಾರಿ ಕತ್ತೆ!

ಮೊದಲಿಗೆ ನಾನು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ರೇಸಿಸ್ಟ್ ದಾಳಿಗಳು ಮತ್ತು ಅವುಗಳಿಗೆ ನಮ್ಮ ವಿದೇಶಾಂಗ ಇಲಾಖೆಯ ರೆಸ್ಪಾನ್ಸ್ ಅನ್ನು ಟೀಕಿಸುತ್ತಾ ವಿದೇಶಾಂಗ ಇಲಾಖೆಯನ್ನು ಸೋಮಾರಿ ಕತ್ತೆ ಅಂತ ಜರಿದಿದ್ದೆ. ಬರೆದ ಮೇಲೆ ನನಗೇ ಯಾಕೋ ಇದು ಅತಿಯಾಯಿತಾ ಅನ್ನಿಸಿತ್ತು. ಆದರೆ ಅದಾದ ಕೆಲವೇ ದಿನಗಳಿಗೆ ನಮ್ಮ ದೇಶದ ಆರೋಗ್ಯ ಇಲಾಖೆಗಳಿಗೆ ಹಾಗೆ ಜರಿಯುವಂತಾಗಿದೆ. ಈ ಬಾರಿ I think I am justified .

ಭವ್ಯ ಭಾರತದ ಜನ ಹಂದಿ ಜ್ವರದ ಭೀತಿಯಲ್ಲಿ ನರಳುತ್ತಿದ್ದಾರೆ. ಜ್ವರ ಪೀಡಿತರ ಸಂಖ್ಯೆ 1000-1500 ದಾಟಿದೆ, ಸತ್ತವರ ಸಂಕ್ಯೆ 26ಕ್ಕೇರಿದೆ. ಇದೊಂದು ಹೆಲ್ತ್ emergency ಅನ್ನುವುದರಲ್ಲಿ ಅನುಮಾನವೇ ಇಲ್ಲ. ಈಗ ನಮ್ಮ ಜನರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಿರುವುದು ನಮ್ಮ ಸರ್ಕಾರಗಳ ಆರೋಗ್ಯ ಇಲಾಖೆಗಳು. ಈ ಆರೋಗ್ಯ ಇಲಾಖೆಯಿದೆಯಲ್ಲ ಅದು ಅತ್ಯಗತ್ಯ ಸೇವೆಯ ಮಿನಿಸ್ಟ್ರಿ, ಆದರೆ ಹಲವರು ಅಲ್ಲಿ ಹೋಗಿ ಕೂರಲೇ ಹಿಂಜರಿಯುತ್ತಾರೆ - ನಮ್ಮ ಹಲವು ರಾಜಕಾರಣಿಗಳಿಗೆ ಅದೇನೋ ಕೀಳು ಎಂಬ ಭಾವನೆ. ಎಲ್ಲರಿಗೂ ದುಡ್ಡು-ಕಾಸು ಜೋರಾಗಿರುವ ಇಲಾಖೆಯೇ ಬೇಕು. ಹಾಗಾಗಿ ಅಲ್ಲಿ ಹೋಗಿ ಕೂತವರಿಗೆಲ್ಲರಿಗೂ ಅದೇನೋ ಉದಾಸೀನ. ಹೀಗಾಗಿ ಇಂದು ಆರೋಗ್ಯ ಇಲಾಖೆಯೆಂಬುದು ಸೋಮಾರಿ ಕತ್ತೆಯೆನಿಸಿಕೊಂಡಿದೆ. ದೇಶದಲ್ಲಿ ಇಷ್ಟೆಲ್ಲಾ ನಡೀತಿದ್ದರೂ ಅದು ನಿದ್ದೆಯಿಂದೆಚ್ಚೆತ್ತದ್ದು ನಾ ಕಾಣೆ. ಅದು ಕೇಂದ್ರ ಸರ್ಕಾರವಾಗಿರಬಹುದು, ರಾಜ್ಯ ಸರ್ಕಾರವಾಗಿರಬಹುದು ಎರಡರ ಕಥೆಯೂ ಅಷ್ಟೆಯಾ!

ಹಂದಿ ಜ್ವರ ಬರಲು ಶುರು ಮಾಡಿದಾಗ, ನಮ್ಮ ಕೇಂದ್ರ ಆರೋಗ್ಯ ಸಚಿವ ಗುಲಾಂ ನಭಿ ಆಜಾದ್ ವಿಮಾನ ನಿಲ್ಡಾಣಗಳಲ್ಲೆಲ್ಲಾ ಸ್ಕ್ರೀನಿಂಗು, ಹಾಳು ಮೂಳು ಅಂತ ಏರ್ಪಡಿಸಿದ್ದಷ್ಟೇ ಬಂತು ನಂತರ ಅವರು ಅದೇನೂ ಮಾಡಿದರೋ ಭಗವಂತ ಬಲ್ಲ. ಈಗ ಮತ್ತೆ ಹಂದಿ ಜ್ವರ ಹರಡಲು ಶುರುವಾದಾಗ ಧಡಬಡನೆ ಎದ್ದು ಬಂದು ಮೀಡಿಯಾ ಮುಂದೆ ನಿಂತು ಬಡಬಡಾಯಿಸಿದ್ದಷ್ಟೇ ಬಂತು ಕೆಲಸವೇನಿಲ್ಲ. ಹೋಗಲೀ ಅದನ್ನಾದರೂ ಸರಿಯಾಗಿ ಮಾಡಿದರಾ ಮೊದಲಿಗೆ ಸರ್ಕಾರೀ ಆಸ್ಪತ್ರೆಗಲಲ್ಲಿ ಮಾತ್ರ ಚಿಕಿತ್ಸೆ ಎಂದೂ, ನಂತರದ ಕೆಲವೇ ದಿನಗಳಲ್ಲಿ ಇಲ್ಲ ಕೆಲವು ಖಾಸಗೀ ಆಸ್ಪತ್ರೆಗಳಲ್ಲೂ ತಪಾಸಣೆ, ಚಿಕಿತ್ಸೆ ನಡೆಯುತ್ತದೆ ಎಂದು ಗೊಂದಲಮಯ ಹೇಳಿಕೆಗಳನ್ನು ನೀಡಿ ಜನರೆಲ್ಲರನ್ನೂ ಗೊಂದಲದಲ್ಲಿ ಮುಳುಗಿಸಿದರು. ಇದಲ್ಲದೆ, ಹಂದಿ ಜ್ವರಕ್ಕೆ ಭಾರತದಲ್ಲಿ ಬಲಿಯಾದ ಹುಡುಗಿಯ ಮನೆಯವರನ್ನು ಕೆರಿಳಿಸುವಂತೆ ಅಸೂಕ್ಷ್ಮ ಹೇಳಿಕೆಗಳನ್ನು ನೀಡಿ ಉಗಿಸಿಕೊಂಡರು. ಇತ್ತ ಅನೇಕ ಕಡೆ ತಪಾಸಣಾ ಕಿಟ್ಗಳು ಖಾಲಿಯಾಗುತ್ತಿವೆ. ಆ ಕಿಟ್ಗಳಿಲ್ಲದೇ ತಪಾಸಣೆ ಸಾಧ್ಯವಿಲ್ಲ. ಅವುಗಳನ್ನು ವಿದೇಶಗಳಿಂದ ಆಮದು ಮಡಿಸಿಕೊಳ್ಳಬೇಕು. 27 ಸಾವಿರ ಕಿಟ್ಗಳನ್ನು ತರಿಸಿಕೊಳ್ಳಲಾಗಿತ್ತಾದರೂ ಅವೆಲ್ಲವೂ ಮುಗಿದಾಗಿದೆ, ಈಗ ಹೊಸದಾಗಿ 22 ಸಾವಿರ ಕಿಟ್ಗಳಿಗಾಗಿ 1.75 ಕೋಟಿಗಳನ್ನು ಸಕರ್ಾರ ಈಗ ತೆಗೆದಿರಸುತ್ತದಂತೆ, ಇವರು ಬಿಡುಗಡೆ ಮಾಡುವುದು ಯಾವಾಗೋ? ಅವು ಬರುವುದು ಯಾವಾಗೋ? ದೇವರೇ ಬಲ್ಲ! ಖಾಸಗೀ ಆಸ್ಪತ್ರೆಗಳಿಗೂ ತಪಾಸಣೆ ನಡೆಸಲು ಬೇಗ ಲೈಸೆನ್ಸ್ ನೀಡುತ್ತಿಲ್ಲ. ಎಲ್ಲದರಲ್ಲೂ ವಿಳಂಬ. ಹಾಗೆ ನೋಡಿದರೆ ಮಹಾರಾಷ್ಟ್ರದ ಪುಣೆ, ಮುಂಬಯಿ, ಕರ್ನಾಟಕ ಮತ್ತಿತರ ಜ್ವರ ಪೀಡಿತ ರಾಜ್ಯಗಳಿಗೆ ಆರೋಗ್ಯ ಸಚಿವ ಗುಲಾಂ ನಭಿ ಆಜಾದ್ ಭೇಟಿ ನೀಡಿ ಪರಿಶೀಲನೆ ನಡೆಸಿ ಧೈರ್ಯ ಹೇಳಬೇಕಿತ್ತು. ಅದನ್ನು ಬಿಟ್ಟು ಮೀಡಿಯಾದಲ್ಲಷ್ಟೆ ಅವರು ಬೊಬ್ಬೆ ಹೊಡೆಯುತ್ತಿದ್ದಾರೆ. ಇನ್ನು ಹಂದಿ ಜ್ವರ ತಡೆಗೆ ಪ್ರಧಾನಿಗಳ ನೇತೃತ್ವದ ಸಮಿತಿಯೊಂದನ್ನು ರಚಿಸಲಾಗಿದೆಯಂತೆ. ಇದು ಒಳ್ಳೆಯದೇ ಆದರೆ, ಗ್ರೌಂಡ್ನ ಮೇಲೆ ಕೆಲಸ ಮಾಡವವರಿಲ್ಲದೆ, ದೆಹಲಿಯಲ್ಲಿ ಪ್ರಧಾನಿಗಳು ಕೂತು ಮಾಡುವುದಾದರೂ ಏನು?


ಇದು ಕೇಂದ್ರ ಸರ್ಕಾರದ ಕಥೆಯಾದರೆ, ಇನ್ನು ನಮ್ಮ ರಾಜ್ಯ ಸಕಾರದ ಆರೋಗ್ಯ ಇಲಾಖೆಯ ಸ್ಥಿತಿ ನೋಡಿ ನಗಬೇಕೋ, ಅಳಬೇಕೋ ನಮಗೇ ತಿಳಿಯದು. ಹೌದು ಥಟ್ಟನೆ ಹೇಳಿ, ನಮ್ಮ ರಾಜ್ಯದ ಆರೋಗ್ಯ ಸಚಿವರಾರು? ತುಂಬ ಜನಕ್ಕೆ ತಿಳಿದಿಲ್ಲ. ಗಣಿ ರೆಡ್ಡಿಗಳ ಆಪ್ತಮಿತ್ರ ಶ್ರೀರಾಮುಲು! ಈತನದ್ದು ಪ್ರಚಂಡ ಉದಾಸೀನ, ಬೇಜವಾಬ್ದಾರಿತನ. ಮೊನ್ನೆ ವಿಧಾನಮಂಡಲ ಕಲಾಪದಲ್ಲಿ ಎರಡು ದಿನ ಆರೋಗ್ಯ ಇಲಾಖೆಯ ಅವ್ಯವಸ್ಥೆಗಳ ಕುರಿತೇ ಚಚರ್ೆ ನಡೆಯಿತು. ಆದರೆ ಈ ಸ್ವಾಮಿ ನಾಪತ್ತೆ! ಕಲಾಪ ಶುರುವಾದಾಗೊಮ್ಮೆ ಮುಖ ತೋರಿಸಿ ನಂತರ ಮಂಗಮಾಯ. ಇವರಿಗೆ ಗಣಿ ವಹಿವಾಟಿನ ನಡುವೆ ಎಲ್ಲೋ ಟೈಮು ಸಿಕ್ಕಿದರೆ ಆರೋಗ್ಯ ಖಾತೆಯ ಎಡತಾಕುತ್ತಾರೆ. ಸದ್ಯ ರಾಜ್ಯಾದ್ಯಂತ ಹಂದಿ ಜ್ವರದ ಭೀತಿ ಕಾಳ್ಗಿಚ್ಚಿನಂತೆ ಹಬ್ಬಿರುವಾಗಲೂ ಈತ ನಾಪತ್ತೆಯೇ. ರಾಜ್ಯದಲ್ಲಿ ಹಂದಿ ಜ್ವರದ ಮೊದಲ ಪ್ರಕರಣ ದಾಖಲಾದ ಹತ್ತು ದಿನಗಳಿಗೆ ಬೆಂಗಳೂರಿನಲ್ಲಿ ರಾಜ್ಯದ ಮೊದಲ ಎಚ್1ಎನ್1 ಸಾವು ಸಂಭವಿಸಿತು. ಆಗಲೂ ಸಾಹೇಬರು ನಾಪತ್ತೆ. ಮರುದಿನ ಭಕ್ತರಿಗೆ ದೇವರು ದರ್ಶನವಿತ್ತಂತೆ ಧಢಾರನೆ ಪ್ರತ್ಯಕ್ಷರಾಗುತ್ತಾರೆ ಶ್ರೀರಾಮುಲು. ಅದು ಭೇಟಿಯಂತಿರಲಿಲ್ಲ. It was more of an appearance. ಇವೆರಡಕ್ಕೂ ಶಾನೆ ವ್ಯತ್ಯಾಸವಿದೆ. ಸಚಿವ ರಾಮಚಂದ್ರೇಗೌಡ ಮತ್ತು ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳ ಜೊತೆ ಪತ್ರಿಕಾಘೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾರೆ (?). ಆ ಪತ್ರಿಕಾಘೋಷ್ಠಿ it was a statement in itself. ಆರೋಗ್ಯ ಸಚಿವರು ಪತ್ರಕರ್ತರು ಕೇಳಿದ ಯಾವುದೇ ಪ್ರಶ್ನೆಗೆ ಉತ್ತರಿಸಲಾಗಲಿಲ್ಲ. ಅಲ್ಲಿ ಸಿಡುಕಿದ್ದು ರಾಮುಲು ಅಲ್ಲ ಬದಲಿಗೆ ರಾಮಚಂದ್ರೇಗೌಡರು. ಮಂತ್ರಿ ಸಹೋದ್ಯೋಗಿಯನ್ನು ಸಮರ್ಥಿಸಲು ಹೋಗಿ, ಅದಾಗದಾದಾಗ ಸರ್ರನೆ ಸಿಡುಕಿ, ಮೀಡಿಯಾ ಕಣ್ಣಲ್ಲಿ ವಿಲನ್ ಆದರು. ರಾಮುಲು ತುಟಿ ಎರಡು ಮಾಡಲಿಲ್ಲ. ಆರೋಗ್ಯ ಸಚಿವ ಶ್ರೀರಾಮುಲು ತಮ್ಮ ಇಲಾಖೆಗೆ ಸಂಬಂಧವೇ ಇಲ್ಲದ ರಾಮಚಂದ್ರೇಗೌಡರನ್ನು ಕೂರಿಸಿಕೊಂಡು ಪತ್ರಿಕಾಘೋಷ್ಠಿ ನಡೆಸಿದ್ದೇ ತಿಳಿಸುತ್ತಿತ್ತು ಅವರ lack of confidence ಅನ್ನು. ಯಾವಾಗಾದರೂ ಪಟ್ಟಾಗಿ ಕೂತು ಕೆಲಸ ನಿರ್ವಸಿದ್ದರೆ ತಾನೆ ಅದೆಲ್ಲ?

ಇದೇ ಅತಿಯಾಯಿತು ಅಂದರೆ ಮಾರನೇ ದಿನ ರಾಮುಲು ಆರೋಗ್ಯ ಜ್ಞಾನದ ಕುರಿತು ಮತ್ತೊಂದು ತಮಾಷೆ ನಡೆಯಿತು. ವಿಷಯ ಏನಪ್ಪಾ ಅಂದರೆ ಜಯದೇವ ಆಸ್ಪತ್ರೆಯಲ್ಲಿನ ಯಾವುದೋ ಕಾರ್ಯಕ್ರಮಕ್ಕೆ ಆರೋಗ್ಯ ಮಂತ್ರಿಗಳು ಹೋಗಿದ್ದಾರೆ. ಜೊತೆಗೆ ಮತ್ತೆ ರಾಮಚಂದ್ರೇಗೌಡರಿದ್ದಾರೆ. ಜಯದೇವ ಆಸ್ಪತ್ರೆಗೆ ಹೋದ ರಾಮುಲುಗೆ ಒಳಗೆಲ್ಲಾ ನೋಡಿ ಖುಷಿಯಾಗಿದೆ. ಪಕ್ಕದಲ್ಲೇ ಇದ್ದ ಗೌಡರನ್ನು - `ಅಣ್ಣಾ ಈ ಆಸ್ಪತ್ರೆ ತುಂಬಾ ಸುಸಜ್ಜಿತವಾಗಿ, ಚೆನ್ನಾಗಿದೆ. ಅಂದಹಾಗೆ ಇದು ಯಾರದು?' ಅಂತ ಕೇಳಿದರಂತೆ! ಗೌಡರು ಅವಾಕ್ಕಾಗಿ ಬಿಟ್ಟ ಬಾಯಿ ಬಿಟ್ಟಂತೆ ಹಾಗೇ...ಆಮೇಲೆ ಗೌಡರೇ ವಿವರಿಸಿದರಂತೆ ಜಯದೇವ ಆಸ್ಪತ್ರೆ ಸರ್ಕಾರದ್ದು, ಆರೋಗ್ಯ ಇಲಾಖೆ ಕೆಳಗೇ ಬರುತ್ತದೆ ಎಂದು. ಈ ವಿಷಯವನ್ನು ಅದೇ ಕಾರ್ಯಕ್ರಮದಲ್ಲಿ ಗೌಡರು ತಮ್ಮ ಬಾಷಣದಲ್ಲಿ ಹೇಳಿದರೆಂದು ಇಂದಿನ ಪತ್ರಿಕೆಯಲ್ಲಿ ವರದಿಯಾಗಿದೆ. ಅಲ್ಲಾ ರಾಮುಲು ಸಾಹೇಬರು ಆರೋಗ್ಯ ಮಂತ್ರಿಗಳಾಗಿ ಹತ್ತಿರತ್ತಿರ ಒಂದೂಕಾಲು ವರ್ಷವಾಗುತ್ತಾ ಬಂತು. ಇನ್ನೂ ಜಯದೇವ ಆಸ್ಪತ್ರೆ ಸರ್ಕಾರದ್ದು ಎಂದು ಗೊತ್ತಿಲ್ಲವೆಂದರೆ ಇಲಾಖೆಯಲ್ಲಿ ಅವರ involvement ಎಷ್ಟಿದೆಯೆಂದು ನೀವೇ ಲೆಕ್ಕ ಹಾಕಿ. ಅಸಲಿಗೆ ಈ ಹಂದಿ ಜ್ವರ, ಎಚ್1ಎನ್1 ಎಂದರೆ ಏನೆಂಬದಾದರೂ ನಮ್ಮ ಆರೋಗ್ಯ ಮಂತ್ರಿಗಳಿಗೆ ತಿಳಿದಿದೆಯೇ? ನನಗಂತೂ ಅನುಮಾನ. ಕುರಿಸಿ ಪಾಠ ಮಾಡಿದರೂ ಅರ್ಥವಾಗುವುದು ಇನ್ನೂ ಅನುಮಾನ! ಇಂಥವರನ್ನು ಆರೋಗ್ಯ ಸಚಿವರನ್ನಾಗಿಟ್ಟುಕೊಂಡು ಯಡಿಯೂರಪ್ಪನವರು ರಾಜ್ಯವನ್ನು ಹೇಗೆ ಪರಿಪಾಲಿಸುತ್ತಾರೆ? ಶ್ರೀರಾಮುಲು ಮೊದಲಿಂದಲೂ ಅವರ ಮುಗ್ಧತೆ, ನೇರವಂತಿಕೆಯಿಂದಲೇ ಗುರುತಿಸಿಕೊಂಡವರು. ಕೆಲಸಗಾರನೆಂದೂ ಹೆಸರಾದವರು, ಕೆಳಜಾತಿಯಿಂದ ಬಂದವರು, ಬಳ್ಳಾರಿಯಲ್ಲಿ ಜನರೊಪ್ಪಿದ ನಾಯಕರು. ಎಲ್ಲಾ ನಿಜ. ಅವರನ್ನು ಮಂತ್ರಿಯಾಗಿ ಮಾಡಿರುವುದೂ ಸರಿಯೇ ಅಂತಿಟ್ಟುಕೊಳ್ಳಿ, ಆದರೆ ಆರೋಗ್ಯ ಇಲಾಖೆಯೆಂಬುದು ಅತ್ಯಗತ್ಯ ಸೇವೆಯ ಮಿನಿಸ್ಟ್ರಿ ಮತ್ತು ಅದು ತೀರ ಟೆಕ್ನಿಕಲ್ ಆದಂತುಹುದು. ಅಲ್ಲಿಗೆ ಬರುವವರು ಮೆಡಿಕಲ್ ಓದಿರಬೇಕು ಅಂತಿಲ್ಲವಾದರೂ ಓದಿದ್ದರೆ ಉತ್ತಮ. ಈ ಎಲ್ಲದರ ಹಿನ್ನಲೆಯಲ್ಲಿ ನೋಡಿದರೆ ಶ್ರೀರಾಮುಲು ಅವರು ಆರೋಗ್ಯ ಇಲಾಖೆಗೆ ಸರಿಹೊಂದುವ ಕ್ಯಾಂಡಿಡೇಟಲ್ಲ. ಅವರಿಗೆ ಬೇರೆ ಇಲಾಖೆಯ ಜವಾಬ್ದಾರಿ ಕೊಟ್ಟರೆ ಒಳ್ಳಯದಿತ್ತೇನೋ ಎಂಬುದು ನನ್ನ ಭಾವನೆ. ಏನಂತೀರಿ? ಇದನ್ನೆಲ್ಲಾ ಕೇಳುವವರಾರು? ಯಾರು ಕೇಳಲಿ ಬಿಡಲಿ ನಾವು ಊದೋ ಶಂಖ ನಾವು.....

ಆರೋಗ್ಯ ಇಲಾಖೆಯಲ್ಲಿ ಮೊದಲಿಗೆ ಮದನ್ ಗೋಪಾಲ್ ಎಂಬ ದಕ್ಷ ಅಧಿಕಾರಿಯಾದರೂ ಇದ್ದರು. ಈಗ ಅವರೂ ಇಲ್ಲ, ಎತ್ತಂಗಡಿಯಾಗಿ ತುಂಬ ದಿನವಾಯಿತು. ರಾಜ್ಯದ ಆರೋಗ್ಯ ಇಲಾಖೆ ಅಕ್ಷರಶಃ ಅನಾಥವಾಗಿದೆ. ಈ ಕುರಿತು ವಿರೋಧಪಕ್ಷಗಳು ಸಕಾರಣವಾಗಿ ಟೀಕಿಸಿದರೆ ರಾಮುಲು ಬದಲಿಗೆ ರೆಡ್ಡಿಗಳು ಉತ್ತರಿಸುತ್ತಾರೆ - ಸಿದ್ಧರಾಮಯ್ಯನವರಿಗೆ ಹಂದಿ ಜ್ವರ ಬಂದರೆ ಅವರಿಗೆ ನಾನೇ ಮದ್ದು ಕೊಡಿಸುತ್ತೇನೆ ಆಯಿತಾ ಎಂಬಂತೆ ಮಾತಾಡುತ್ತಾರೆ. ಇನ್ನ ರಾಜ್ಯದ ಜನರನ್ನು ಆ ದೇವರೇ ಕಾಪಾಡಬೇಕು. ಜನರ ಪಾಲಿಗೆ ಆರೋಗ್ಯ ಇಲಾಖೆಯಂತೂ ಇಲ್ಲ!

ನೇತಾಜಿ: ಹಿಸ್ಟರಿಯೋ? ಮಿಸ್ಟರಿಯೋ?

ಇಂದು ನಾವು ನಮ್ಮ 63ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಸಹ ಸಂಪದಿಗ ಶ್ರೀಯುತ ರಾಕೇಶ್ ಶೆಟ್ಟಿಯವರು `1947ರ ಸ್ವಾತಂತ್ರ್ಯದ ಸೂರ್ಯ ನೋಡಲು ಅವರು ಬದುಕಿದ್ದರಾ?' ಎಂಬ ಲೇಖನ ಮಾಲಿಕೆಯ ಮೂಲಕ ಸುಭಾಷ್ ಚಂದ್ರ ಬೋಸರ ಸಾವಿನ ನಿಗೂಢತೆ ಮತ್ತು ವಿವಾದಗಳನ್ನು ಚರ್ಚೆಗೊಡ್ಡಿದ್ದಾರೆ. ಅದು ಸ್ವಾಗತಾರ್ಹವೇ ಸರಿ. ನೇತಾಜಿ ವಿಮಾನಾಪಘಾತದಲ್ಲಿ ಸಾಯಲಿಲ್ಲವಂತೆ, ಅವರು ಸ್ವಾತಂತ್ರ್ಯ ಬಂದ ಮೇಲೂ ಬದುಕಿದ್ದರಂತೆ, ಸನ್ಯಾಸಿಯಾಗಿದ್ದರಂತೆ, ಅವರೂ ಇನ್ನೂ ಇದ್ದಾರಂತೆ.. ಇತ್ಯಾದಿ, ಇತ್ಯಾದಿ ಅನೇಕ ವದಂತಿ, ಪುಕಾರುಗಳಿಗೆ ಲೆಕ್ಕವಿಲ್ಲ. ಇದನ್ನೇ ವಸ್ತುವಾಗಿಟ್ಟುಕೊಂಡು ಕೊಂಚ ಹಿಂದೆ ನಾನು ಬರೆದ ಕಿರು ಲೇಖನವೊಂದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಇದು ನೇತಾಜಿಯವರ ಸಾವಿನ ಕುರಿತ ಎಲ್ಲ ವಿವಾದಗಳನ್ನೂ ಮುಟ್ಟುತ್ತದಾದರೂ ವಿಸ್ತೃತವಾಗಿ ಚರ್ಚಿಸುವುದಿಲ್ಲ. ಆದರೆ ನೇತಾಜಿ ಸಾವಿನ ಕುರಿತ ನಿಗೂಢತೆ ಮತ್ತು ವಿವಾದಗಳ ಕುರಿತು ಒಂದು ವಿಹಂಗಮ ನೋಟವನ್ನಂತೂ ನೀಡುತ್ತದೆ. ತಮಗಿಷ್ಟವಾದೀತೆಂದು ಇಲ್ಲಿ ಪ್ರಕಟಿಸುತ್ತಿದ್ದೇನೆ.

ನೇತಾಜಿ ಸುಭಾಷ್ ಚಂದ್ರ ಬೋಸ್. ಆ ಹೆಸರು ಕೇಳದರೇನೆ ಏನೋ ಒಂದು ರೋಮಾಂಚನ. ನಮ್ಮ ಪೀಳಿಗೆಯ ಅನೇಕರಿಗೆ ಅವರ ಕುರಿತು ಹೆಚ್ಚು ತಿಳಿದೇ ಇಲ್ಲ. ಅವರು ಗೋಡೆಯ ಮೇಲಿನ ಚಿತ್ರವಷ್ಟೆ. ಆದರೆ ನೇತಾಜಿಯವರ ಕುರಿತು ಓದುತ್ತಾ ಹೋದಂತೆ ಅವರ ವ್ಯಕ್ತಿತ್ವದ ಅನೇಕ ಮುಖಗಳು ಮತ್ತು ನಮ್ಮ ಸ್ವತಂತ್ರ್ಯ ಸಂಗ್ರಾಮದಲ್ಲಿ ಅವರು ವಹಿಸಿದ ನಿರ್ಣಾಯಕ ಪಾತ್ರದ ಕುರಿತು ತಿಳಿಯುತ್ತದೆ. ಅವರ ಶೌರ್ಯ ಸಾಹಸದ ಅನೇಕ ಕಥೆಗಳು ಮೈನವಿರೇಳಿಸುತ್ತವೆ. ಅವರು 1941ರಲ್ಲಿ ಬ್ರಿಟಿಷರ ಗೃಹಬಂಧನದಿಂದ ತಪ್ಪಿಸಿಕೊಂಡು ನಂತರ ಅವರು ನಡೆಸಿದ ಸ್ವತಂತ್ರ್ಯ ಹೋರಾಟ ಭಾರತ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡತಕ್ಕದ್ದು. ಆದರೆ ಸುಭಾಷರಿಗೆ ಸಲ್ಲಬೇಕಾದ ಗೌರವವನ್ನು ಅವರಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಗಿದೆ. ಇದು ನಮ್ಮ ದೇಶದ ದುರ್ದೈವ . ಸುಭಾಷರು 1897ರ ಜನವರಿ 23ರಂದು ಕಟಕ್ನಲ್ಲಿ ಜನಿಸಿದರು. ಕಾಂಗ್ರೆಸ್ ಸೇರಿ ತಮ್ಮ ಹೋರಾಟವನ್ನು ಪ್ರಾರಂಭಿಸಿದ ಅವರು ನಂತರ ಅಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ಕಾಂಗ್ರೆಸ್ ತೊರೆದು ಫಾರ್ವಡ್ ಬ್ಲಾಕ್ ಪಕ್ಷವನ್ನು ಸ್ಥಾಪಿಸಿದರು. ತಮ್ಮ ರಾಷ್ಟ್ರೀಯವಾದ, ಸ್ಪಷ್ಟ ಚಿಂತನೆ ಮತ್ತು ಬ್ರಿಟಿಷರಿಗೆ
ಬಂದೂಕಿನ ನಳಿಕೆಯಿಂದಲೇ ಉತ್ತರಕೊಡಬೇಕೆಂಬ ಅವರ ವಿಚಾರಧಾರೆ ಅಪಾರ ಜನಮನ್ನಣೆ ಗಳಿಸಿದ್ದವು. ಎರಡನೇ ವಿಶ್ವ ಯುದ್ಧದಲ್ಲಿ ಭಾರತವನ್ನು ಪಾಲ್ಗೊಳ್ಳುವಂತೆ ಮಾಡಿದ ಬ್ರಿಟಿಷರ ಕ್ರಮವನ್ನು ವಿರೋಧಿಸಿದ ಸುಭಾಷರನ್ನು ಗೃಹಬಂಧನದಲ್ಲಿರಿಸಲಾಯಿತು. ಆದರೆ 41ರ ಜನವರಿ 17ರಂದು ಅಲ್ಲಿಂದ ತಪ್ಪಿಸಿಕೊಂಡ ಸುಭಾಷರು ನಂತರ ಜರ್ಮನಿ, ಜಪಾನ್ಗಳ ಸಹಾಯದಿಂದ ಭಾರತ ಸ್ವತಂತ್ರಕ್ಕಾಗಿ ಹೋರಾಡಿದರು. ಅವರು ಸ್ಥಾಪಿಸಿದ ಇಂಡಿಯನ್ ನ್ಯಾಷನಲ್ ಆರ್ಮಿ ಜಪಾನ್ ಸೇನೆಯೊಡಗೂಡಿ ಬರ್ಮ ಮತ್ತು ಭಾರತದ ಈಶಾನ್ಯ ಪ್ರದೇಶದ ಬಹುತೇಕ ಭಾಗವನ್ನು ಆಕ್ರಮಿಸಿಕೊಂಡಿದ್ದರು. ಇದೇ ಅಲ್ಲದೇ ಭಾರತದ ಹಂಗಾಮಿ ಸರ್ಕಾರವನ್ನೂ ಅವರು ಸ್ಥಾಪಿಸಿದ್ದರು. ಆದರೆ 1945ರ ಆಗಸ್ಟ್ 18ರಂದು ತೈವಾನ್ನ ತೈಪೆಯಲ್ಲಿ ನಡೆದಿದೆಯೆನ್ನಲಾದ ವಿಮಾನಾಪಘಾತವೊಂದರಲ್ಲಿ ಅವರು ಮರಣವನ್ನಪ್ಪಿದರೆಂಬ ಸುದ್ದಿ ಬರಸಿಡಿಲಿನಂತೆ ಬಂದೆರಗಿತು. ಆದರೆ ಇದನ್ನು ಬಹುತೇಕರು ನಂಬಲೇ ಇಲ್ಲ. ಇದು ಸುಭಾಷರು ಭೂಗತರಾಗಿದ್ದಾಗ ಅವರ ಸಹವರ್ತಿಗಳು ತೇಲಿಬಿಟ್ಟ ಸುದ್ದಿಯೆಂದೇ ಭಾವಿಸಲಾಯಿತು. ಅವರ ವ್ಯಕ್ತಿತವವೇ ಹಾಗೆ - ನಿಗೂಢ. ಅವರ ಪ್ರತಿ ಹೆಜ್ಜೆಯ ಹಿಂದೆಯೂ ಒಂದು ದೂರದರ್ಶಿತ್ವ, ನಿಗೂಢತೆ ಇರುತಿತ್ತು. ಇದು ಕೂಡ ಅಂತಹುದೇ ಒಂದು ಸುದ್ದಿಯೆಂದು ಅನೇಕರು ಭಾವಿಸಿದರು. ಆದರೆ ಅಂದೇ ಕೊನೆ ನಂತರ ಸುಭಾಷರು `ಅವರಾಗಿ' ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಸುಭಾಷರ ಕುರಿತು ಈಗಲೂ

ಹೊಗೆಯಾಡುತ್ತಿರುವ ವಿವಾದವೆಂದರೆ ಅದು ಅವರ ಸಾವಿನ ಕುರಿತಾದ್ದೇ. ಸರ್ಕಾರದ ದಾಖಲೆಗಳ ಪ್ರಕಾರ ಸತ್ತನೆಂದು ಘೋಷಿಸಲಾದ ಮನುಷ್ಯನ ಸಾವಿನ ಬಗ್ಗೆ 64 ವರ್ಷಗಳ ನಂತರವೂ ವಿವಾದಗಳಿರುವುದು ಇದೇ ಮೊದಲಿರಬೇಕು.

ಇದುವರೆಗೂ ಮೂರು ತನಿಖಾ ಆಯೋಗಗಳು ಇದರ ಕುರಿತು ತನಿಖೆ ನಡೆಸಿವೆ. ಆದರೂ ಜನರಿಗೆ ತಮ್ಮ ರಾಷ್ಟ್ರನಾಯಕನೊಬ್ಬನ ಅಂತ್ಯದ ಸತ್ಯಾಂಶಗಳನ್ನು ತಿಳಿಸಲಾಗಿಲ್ಲ. ಆರಂಭದ ಎರಡು ವಿಚಾರಣಾ ಆಯೋಗಗಳಾದ ಷಾ ನವಾಜ್ ಖಾನ್ ಆಯೋಗ (1956) ಮತ್ತು ಜೆ.ಡಿ.ಖೋಸ್ಲಾ (1970)ಆಯೋಗಗಳು - ಸುಭಾಷರು ಜಾಪಾನೀಯರು ಹೇಳುವಂತೆ ವಿಮಾನಾಪಘಾತದಲ್ಲಿ ಸತ್ತಿರುವುದು ನಿಜವೆಂದೂ, ಜಪಾನಿನ ರೆಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮವು ಅವರದೇ ಎಂದು ವರದಿ ನೀಡಿದವು. ಆದರೆ ಇವು ಪೂರ್ವಾಗ್ರಹ ಪೀಡಿತವಾಗಿದ್ದವೆಂಬುದು ಎಲ್ಲರೂ ಬಲ್ಲ ವಿಚಾರವೆ. ನರಸಿಂಹರಾಯರ ಅವಧಿಯಲ್ಲಿ ಮರುಜೀವ ಪಡೆದ ಈ ವಿವಾದವು ಕಲ್ಕತ್ತೆಯ ಹೈಕೋರ್ಟ್ ವಿಚಾರಣೆಗೆ ಆದೇಶಿಸುವುದರೊಂದಿಗೆ, 1999ರಲ್ಲಿ ಏಕಸದಸ್ಯ ಮುಖರ್ಜಿ ಆಯೋಗದ ರಚನೆಗೆ ದಾರಿ ಮಾಡಿಕೊಟ್ಟಿತು. ಅದು 2005ರ ನವೆಂಬರ್ 8ರಂದು ತನ್ನ ವರದಿ ಸಲ್ಲಿಸಿತು. ಹಲವಾರು ಅಡ್ಡಿ ಆತಂಕಗಳ ನಡುವೆ ತನ್ನ ತನಿಖೆ ನಡೆಸಿದ ಸಮಿತಿಯು ಸುಭಾಷರು ಈಗ ಬದುಕಿಲ್ಲವಾದರೂ, ಹಲವರು ತಿಳಿದಿರುವಂತೆ ಅವರು 45ರ ವಿಮಾನಾಪಘಾತದಲ್ಲಿ ಮರಣವನ್ನಪ್ಪಲಿಲ್ಲವೆಂದೂ, ರೆಂಕೋಜಿ ದೇವಾಲಯದಲ್ಲಿರುವುದು ಅವರ ಚಿತಾಭಸ್ಮವಲ್ಲವೆಂದು ವರದಿ ನೀಡಿದೆ. ಆದರೆ ಕೇಂದ್ರದ ಯು.ಪಿ.ಎ ಸರ್ಕಾರವು ಈ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಕಾರಣ? - ಆ ದೇವರೇ ಬಲ್ಲ. ಇದೇ ನಿಜವಾದರೆ 1945ರ ವಿಮಾನಾಪಘಾತದ ನಂತರ ಸುಭಾಷರು ಏನಾದರು? ಅವರೇಕೆ ಎಲ್ಲೂ ಕಾಣಿಸಿಕೊಳ್ಳಲಿಲ್ಲ? ಅಷ್ಟಕ್ಕೂ ಸುಭಾಷರು ವಿಮಾಣಾಪಘಾತದಲ್ಲಿ ಸಾಯಲಿಲ್ಲವೆಂದು ವರದಿ ನೀಡಿರುವ ಮುಖರ್ಜಿ ಆಯೋಗವು ಅದಕ್ಕೆ ಪೂರಕವಾಗಿ ಸಂಗ್ರಹಿಸಿರುವ ಸಾಕ್ಷಿಗಳಾದರೂ ಯಾವುವು?

ಜನಜನಿತ ವೃತ್ತಾಂತದಂತೆ 1945ರ ಆಗಸ್ಟ್ 18ರಂದು ತೈವಾನ್ನ ತೈಪೆಯಲ್ಲಿ ನಡೆದ ವಿಮಾನಾಪಘಾತದಲ್ಲಿ ಸುಭಾಷರು ತೀರಿಕೊಂಡಿದ್ದರು. ಆದರೆ ಆಶ್ಚರ್ಯಕರ ವಿಚಾರವೆಂದರೆ ತೈವಾನ್ನ ಸಕರ್ಾರವು 45ರ ಆಗಸ್ಟ್ 18ರಂದು ತೈಪೆಯಲ್ಲಿ ಯಾವುದೇ ವಿಮಾನಾಪಘಾತ ನಡೆದಿಲ್ಲವೆಂದು ಹೇಳಿಕೆ ನೀಡಿದೆ. ಈ ಹೇಳಿಕೆಯನ್ನು ಹಿಂದಿನ ಯಾವುದೇ ಆಯೋಗವು ದಾಖಲಿಸಿರಲಿಲ್ಲ. ಹೀಗೆ ಮುಂದುವರಿದು 1945ರ ನಂತರವೂ ವಿಶ್ವದ ಅನೇಕ ದೇಶಗಳ ಸರ್ಕಾರಗಳು ಸುಭಾಷರ ಚಟುವಟಿಕೆಗಳ ಕುರಿತಾಗಿ ಚರ್ಚೆ ನಡೆಸಿರುವುದರ ದಾಖಲೆಗಳನ್ನು ಮುಂದಿರುಸುತ್ತಾರೆ. ಇದರಲ್ಲಿ ಪ್ರಮುಖವಾಗಿರುವವರೆಂದರೆ ಗ್ರೇಟ್ ಬ್ರಿಟನ್, ಅಮೇರಿಕಾ ಮತ್ತು ರಷಿಯಾ(ಯು.ಎಸ್.ಎಸ್.ಆರ್). ಹಾಗಾದರೆ ಅವರು ಏನು ಮಾಡುತ್ತಿದ್ದರು. ಅವರ `ಸಾವಿನ' ನಂತರದ ಬದುಕಿನ ಯಾವುದೇ ವಿವರಗಳು ಲಭ್ಯವಿಲ್ಲವೇ? ಒಂದು ಕಥಾನಕದ ಪ್ರಕಾರ ಎರಡನೇ ಪ್ರಪಂಚ ಯುದ್ಧದಲ್ಲಿ ಸುಭಾಷರು ಗುರುತಿಸಿಕೊಂಡಿದ್ದ ಆಕ್ಸಿಸ್ ಶಕ್ತಿಗಳು ಸೋಲುವುದರೊಂದಿಗೆ, ಸುಭಾಷರು ತಮ್ಮ ಮುಂದಿನ ಕಾರ್ಯತಂತ್ರದಂತೆ ರಷಿಯಾದ ಸಹಾಯ ಬೇಡಲು ಮಂಚೂರಿಯಾಕ್ಕೆ ಹೊರಟರೆನ್ನಲಾಗಿದೆ. ಇಲ್ಲಿ ನಡೆದ ಕುಖ್ಯಾತ ಉಗಐಉ ಆಪರೇಶನ್ನ ಭಾಗವಾಗಿ ರಷಿಯಾದ ಸ್ಟಾಲಿನ್ ಸಕರ್ಾರ ಸುಭಾಷರನ್ನು ಬಂಧಿಸಿ ಸೈಬೀರಿಯಾದ ಬಂದೀಖಾನೆಯಲ್ಲಿಟ್ಟಿದ್ದರು. ಇದಕ್ಕೂ ಪೂರಕ ಸಾಕ್ಷಿಗಳಿಲ್ಲದಿಲ್ಲ. 1946ರಲ್ಲಿ ತನ್ನ ಸಚಿವ ಸಂಪುಟದ ಸಭೆಯಲ್ಲಿ ನೇತಾಜಿಯವರ ಜೊತೆ ಹೇಗೆ ವ್ಯವಹರಿಸಬೇಕು? ಅವರನ್ನು ಏನು ಮಾಡಬೇಕೆಂದು ಚರ್ಚಿಸಿರುವುದರ ಕುರಿತ ದಾಖಲೆಗಳು ರಷಿಯಾದ ಪತ್ರಾಗಾರದಲ್ಲಿವೆಯೆಂದು ಅಲೆಕ್ಸಾಂಡರ್ ಕೊಲೆಷ್ನಿಕೋವ್ ತಿಳಿಸಿದ್ದಾರೆ. ಇದೇ ಅಲ್ಲದೇ ಸ್ವಲ್ಪ ಕಾಲ ರಷಿಯಾದ ರಾಯಭರಿಯಾಗಿದ್ದ ಎಸ್. ರಾಧಾಕೃಷ್ಣನ್ರವರು ರಷಿಯಾದಲ್ಲಿ ಸುಭಾಷರನ್ನು ಬೇಟಿಯಾದರೆಂಬ ಪ್ರತೀತಿಯಿದೆ. ಇದನ್ನು ಅವರೇ ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಿದ್ದರೆಂಬುದಾಗಿ ಹೇಳುತ್ತಾರೆ. ಇದರ ಮುಂದಕ್ಕೆ ಒಂದು ಕಥಾನಕವು ಸುಭಾಷರು ಸೈಬೀರಿಯಾದ ಸರೆವಾಸದ ಸಂದರ್ಭದಲ್ಲೆ ತೀರಿಕೊಂಡರೆಂದು ಹೇಳಿದರೆ, ಮಗದೊಂದು ಕಥಾನಕದ ಪ್ರಕಾರ ಸುಭಾಷರು ಸೈಬೀರಿಯಾದ ಸೆರೆವಾಸದಿಂದ ಬಿಡುಗಡೆಗೊಂಡು ಭಾರತಕ್ಕೆ ಮರಳಿ ಬಂದರು. ಅಷ್ಟರಲ್ಲಿ ಭಾರತಕ್ಕೆ ಸ್ವತಂತ್ರ್ಯ ದಕ್ಕಿಸಿಕೊಡುವ ಅವರ ಆಶಯ ಈಡೇರಿದ್ದರಿಂದ ಸನ್ಯಾಸಿಯ ಜೀವನ ನಡೆಸಿದರೆಂದು ಹೇಳುಲಾಗುತ್ತದೆ.

ಉತ್ತರಪ್ರದೇಶದಲ್ಲಿ ಗುಮ್ನಾಮಿ ಬಾಬಾ ಎಂಬ ಹೆಸರಿನಲ್ಲಿ ಅವರು ಅಜ್ಞಾತವಾಸದಲ್ಲಿದ್ದರೆಂಬ ಪ್ರತೀತಿ ಇದೆ. ಕುತೂಹಲ ಕೆರಳಿಸುವ ವಿಚಾರಗಳೆಂದರೆ - ಗುಮ್ನಾಮಿ ಬಾಬಾ ತಮ್ಮ ಮುಖವನ್ನು ಯಾರಿಗೂ ತೋರಿಸದೇ ಇರುತ್ತಿದ್ದುದು, ಸುಭಷರಿಗೆ ಪರಿಚಯವಿದ್ದ ಹಲವಾರು ಜನ ಬಾಬಾಗೂ ಪರಿಚಯವಿದ್ದುದು, ಬಾಬಾ ಮತ್ತು ಸುಭಾಷರ ಜನ್ಮದಿನ ಮತ್ತು ಕೈಬರಹ ಒಂದೇ ಆಗಿದ್ದುದು, ಬಾಬಾ ಸೈಬೀರಿಯಾದಲ್ಲಿ ತಾನು ಕಳೆದ ಸೆರೆವಾಸದ ಕುರಿತು ಮಾತನಾಡುತ್ತಿದ್ದುದು ಮತ್ತು 1985ರ ಸೆಪ್ಟೆಂಬರ್ 16ರಂದು ಗುಮ್ನಾಮಿ ಬಾಬಾ ತೀರಿಕೊಂಡ ನಂತರ ಉತ್ತರ ಪ್ರದೇಶದ ಹೈಕೋಟರ್್ ಆದೇಶದ ಮೇರೆಗೆ ಅವರ ವಸ್ತುಗಳನ್ನು ಜಪ್ತಿ ಮಾಡಿ ಸಕರ್ಾರದ ಖಜಾನೆಗೆ ತುಂಬಿದಾಗ ಸುಭಾಷರಿಗೆ ಸೇರಿದ್ದೆನ್ನಲಾದ ಅನೇಕ ವಸ್ತುಗಳು ಅದರಲ್ಲಿದ್ದುದು. ಇವೆಲ್ಲವುಗಳ ಕುರಿತು ತನಿಖೆ ನಡೆಯಬೇಕಿದೆ. ನಡೆಯುತ್ತದಾ?

ಪ್ರಧಾನಿಗಳ ಕಾರ್ಯಾಲಯದಲ್ಲಿ ಸುಭಾಷರಿಗೆ ಸಂಬಂಧಿಸಿದಂತೆ 11 ಕಡತಗಳಿದ್ದು, ಅವೆಲ್ಲವೂ `ಕ್ಲಾಸಿಫೈಡ್' ಆಗಿವೆ. ಇನ್ನುಳಿದ ಈ ಕುರಿತ ಕೆಲವು ಕಡತಗಳು ಕಳುವಾಗಿವೆಯಂತೆ! ಈ ಕ್ಲಾಸಿಫೈಡ್ ಆದ ಕಡತಗಳಲ್ಲಿ ಅಂತಹುದ್ದೇನಿದೆಯೋ ನಾನಂತೂ ಕಾಣೆ. ಸುಭಾಷರ ಕುರಿತು, ಅವರ ಸಾವಿನ ಕುರಿತ ಸತ್ಯದ ಕುರಿತು ತೀರ ಪ್ಯಾಷನೇಟ್ ಆಗಿ ಮಾತನಾಡಿದವರು ಅನೇಕರಿದ್ದರು. ಇದರಲ್ಲಿ ಹಲವರು ಪ್ರಧಾನಿಗಳೂ ಆದರು. ಆದರೆ ಅಲ್ಲಿ ಹೋಗಿ ಕೂತು ಆ ಫೈಲಿನ ಮೇಲೆ ಕೈಯಿಡುತ್ತಿದ್ದಂತೆಯೇ ಅದೇನಾಗುತ್ತದೋ ಎಲ್ಲರೂ ಗಪ್ಚುಪ್! ಬಿಜೆಪಿಯ ವಾಜಪೇಯಿಯವರು ಅಂಥವರಲ್ಲಿ ಒಬ್ಬರು. ವಾಜಪೇಯಿ ಅಧಿಕಾರಕ್ಕೆ ಬಂದ ಕೂಡಲೇ ಅವರು ಸುಭಾಷ್ರ ಸಾವಿನ ಕುರಿತು ನೂತನವಾಗಿ ತನಿಖೆ ನಡೆಸಲು ಮುಖಜರ್ಿ ಆಯೋಗವನ್ನು ನೇಮಿಸಿದರು. ನಾನ್-ಕಾಂಗ್ರೆಸ್ ಸರ್ಕಾರವೊಂದು ಮುತುವರ್ಜಿ ವಹಿಸಿ ನೇಮಿಸಿದ್ದ ಆಯೋಗವಾದ್ದರಿಂದ ಈ ಬಾರಿ ಸತ್ಯ ಹೊರಬೀಳುತ್ತದೆಂದೇ ಎಲ್ಲರೂ ಆಸೆ ಪಟ್ಟಿದ್ದರು. ಆದರೆ ಅದೇನೇಯಿತೋ ಏನೋ ಅಪ್ಪ, ಮುಖರ್ಜಿ ಆಯೋಗ ಪ್ರಧಾನಿ ಕಛೇರಿಯಲ್ಲಿ ಕ್ಲಾಸಿಫೈಡ್ ಆಗಿರುವ ಕಡತಗಳನ್ನು ಪರಿಶೀಲನೆಗೆ ಕೊಡಬೇಕೆಂದು ಸರ್ಕಾರವನ್ನು ವಿನಂತಿಸಿದಾಗ, ಸರ್ಕಾರ ವಿಚಿತ್ರವಾಗಿ ಸ್ಪಂದಿಸಿತು. ಆ ಕಡತಗಳನ್ನು ಬಹಿರಂಗಗೊಳಿಸುವುದರಿಂದ ಭಾರತ ಮತ್ತಿತರ ದೇಶಗಳ ನಡುವಿನ ಸಂಬಂಧಕ್ಕೆ ಧಕ್ಕೆ ಬರುವುದೆಂದೂ ಮತ್ತು ಸುಭಾಷರ ವ್ಯಕ್ತಿತ್ವದ ಮೇಲೆಯೂ ಇದು ಕಪ್ಪು ಮಚ್ಚೆಯೇಳಿಸಬಹುದು. ಆದ್ದರಿಂದ ಇದನ್ನು ಆಯೋಗಕ್ಕೆ ನೀಡಲಾಗುವುದಿಲ್ಲ ಎಂದಿತು ಸರ್ಕಾರ . ಅಲ್ಲ ಈ ಕಡತಗಳಲ್ಲಿ ಅಂತದ್ದೇನಿದೆ ಅಂತ? ದೇವರೇ ಬಲ್ಲ.

ಇದಲ್ಲದೆ ಇತ್ತೀಚೆಗೆ, ಮಾಹಿತಿ ಹಕ್ಕು ಕಾಯಿದೆಯನ್ನು ಬಳಸಿಕೊಂಡು ಈ ಕಡತಗಲನ್ನು ಬೆಳಕಿಗೆ ತರುವ ಹೋರಾಟಗಳು ನಡೆದಿದೆ. ಈ ವಿಷಯದಲ್ಲಿ ದೆಹಲಿಯ ಪತ್ರಕರ್ತ ಅನುಜ್ ಧರ್ ಕಳೆದ ಕೆಲವಾರು ವರ್ಷಗಳಿಂದ ಅವಿಷ್ರಾಂತವಾಗಿ ದುಡಿಯುತ್ತಿದ್ದಾರೆ. ಆದರೆ ಫಲ ಮಾತ್ರ ಸೊನ್ನೆ. ಎಲ್ಲ ಕ್ಲಾಸಿಫೈಡ್ ಕಡತಗಳನ್ನು ವಿಶೇಷವೆಂದು ತಿಳಿಸಿ ಮಾಹಿತಿ ಹಕ್ಕಿನಡಿಯಲ್ಲಿ ನಿರಾಕರಿಸಲಾಗಿದೆ. ಅವರು ಇದಕ್ಕಾಗಿ `ಮಿಷನ್ ನೇತಾಜಿ' (missionnetaji.org) ಎಂಬ ಎನ್ಜಿಒ ಒಂದನ್ನು ಕೂಡ ಹುಟ್ಟು ಹಾಕಿದ್ದಾರೆ. ಇವರು ಈ ವಿಷಯವಾಗಿ back from dead - inside subhash bose mystery ಎಂಬ ಪುಸ್ತಕವೊಂದನ್ನು ಬರೆದಿದ್ದಾರೆ. ಸುಭಾಷರ ಸಾವಿನ ಕುರಿತ ಎಲ್ಲ ಮಾಹಿತಿಗಳ ಎನ್ಸೈಕ್ಲೋಪೀಡಿಯಾ ಇದ್ದಂತಿದೆ ಈ ಪುಸ್ತಕ. ಇನ್ನು ಕನ್ನಡದಲ್ಲಿ ಸದ್ಯ ಟಿವಿ9ನ ದೆಹಲಿ ಬ್ಯೂರೋ ಚೀಫ್ ಆಗಿರುವ ಶಿವಪ್ರಸಾದ್ ಅವರು `ಸುಭಾಷ್ ಸಾವಿನ ಸುತ್ತ?!' ಎಂಬ ಚೆಂದನೆಯ ಪುಸ್ತಕವೊಂದನ್ನು ಬರೆದಿದ್ದಾರೆ. ಒಟ್ಟಿನಲ್ಲಿ ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ ಎನ್ನುವ ಹಾಗೆ ಸುಭಾಷರ ಸಾವಿನ ಸತ್ಯ ಬಯಲಿಗೆ ಬಂದಿಲ್ಲ, ಬರುತ್ತದಾ? ನನಗಂತೂ ನಂಬಿಕೆಯಿಲ್ಲ. ನಾವಿರುವ ರಾಜಕೀಯ ವ್ಯವಸ್ಥೆ ಅಂತಹುದ್ದು.

ಹಂದಿ ಜ್ವರ - ಜಗತ್ತೇ ಜ್ವರ ಪೀಡಿತ!



ಜಗತ್ತಿನೆಲ್ಲೆಡೆ ಸ್ವೈನ್ ಫ್ಲೂ ಒಂದು ರೌಂಡು ಹೊಡೆದು ಇನ್ನು ಇದರ ಕತೆ ಮುಗಿಯಿತು ಎನ್ನುವಷ್ಟರಲ್ಲೇ ಇದು ಮತ್ತೆ ಬಂದಿದೆ. ಇದು ಇಷ್ಟು ದಿನ ತೆಗೆದುಕೊಂಡದ್ದು ಒಂದು ಸಣ್ಣ ಬ್ರೇಕ್ ಅಷ್ಟೆ, ಇದು ಸೀಸನ್ 2! ಇದರ ಸೀಸನ್ 1ರಲ್ಲಿ ಅಷ್ಟೇನೂ ಬಾಧಿತವಾಗದಿದ್ದ ಭಾರತ ಮತ್ತಿತರ ಏಷಿಯನ್ ರಾಷ್ಟ್ರಗಳೆಲ್ಲವೂ ಈಗ ಜ್ವರ ಪೀಡಿತ-ತತ್ತರ! ಭಾರತದಲ್ಲಿ ಈಗ ಸರಿಸುಮಾರು 1200 ಹಂದಿ ಜ್ವರ ಪೀಡಿತರಿದ್ದಾರೆ, ಸಾವಿನ ಸಂಖ್ಯೆ - 21! ಕಳೆದೊಂದು ವಾರದಿಂದ ಮೀಡಿಯಾಗೆ ಇದೇ ಸುದ್ದಿ - ಲೈವ್ ಅಪಡೇಟುಗಳು ಬೇರೆ! ಇದು ಜನರಲ್ಲಿ ಒಂದು ರೀತಿಯ ಆತಂಕವನ್ನು ಹುಟ್ಟುಹಾಕಿದೆ. ಎಲ್ಲರೂ ಜ್ವರ ಭೀತಿಗೊಳಗಾಗಿದ್ದಾರೆ. ಈ ಜ್ವರ ಹೇಗೆ ಹರಡುತ್ತದೆ? ಅದು ನಮಗೆ ತಗುಲದಂತೆ ನಾವು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳಾವುವು? ಒಂದೊಮ್ಮೆ ಬಂದರೆ ನಂತರ ನಾವು ಎಲ್ಲಿಗೆ ಹೋಗಬೇಕು? ಅದೇನೋ ಇದಕ್ಕೆ ಖಾಸಗೀ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವುದಿಲ್ಲವಂತೆ?....ಇತ್ಯಾದಿ, ಇತ್ಯಾದಿ.. ಜನರಲ್ಲಿ ಎಲ್ಲ ಪ್ರಶ್ನೆಗಳೇ, ಉತ್ತರವಿಲ್ಲವಷ್ಟೆ. ಮೊದಲಿಗೇ ಕೆಲವನ್ನು ಸ್ಪಷ್ಟ ಪಡಿಸಬೇಕು. ಯಾವುದೇ ಕಾರಣಕ್ಕೂ ಹಂದೀ ಜ್ವರ ಮಹಮ್ಮಾರಿಯಲ್ಲ! ಹಂದಿ ಜ್ವರ ಪೀಡಿತರೆಲ್ಲರೂ ಸಾಯುವುದಿಲ್ಲ. ಅಸಲಿಗೆ ಹಂದಿಜ್ವರದ ಆಯುಶ್ಯ ಕೇವಲ ಹತ್ತು ದಿನಗಳು! ಇದೂ ಸಹ ಸಾಮಾನಯ ಜ್ವರವಿದ್ದಂತೆಯೇ ಸ್ವಾಮಿ. ಸೂಕ್ತ ಕಾಲದಲ್ಲಿ ಗುರುತಿಸಿ ಚಿಕಿತ್ಸೆ ತೆಗೆದುಕೊಂಡಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.
ಒಂದರಿಂದ ಮೂರು ದಿನಗಳು ಇದು ಉಲ್ಬಣಾವಸ್ಥೆಯಲ್ಲಿದ್ದು ನಂತರ ಉಪಶಮನವಾಗುತ್ತದೆ. 7-8 ದಿನಗಳಲ್ಲಿ ಮನುಷ್ಯ ಮಾಮೂಲಿಯಾಗುತ್ತಾನೆ. ಆದರೆ ಇದರಲ್ಲೊಂದು ಸಮಸ್ಯೆಯಿದೆ - ಇದು ಬಹುಬೇಗನೇ ಜ್ವರ ಪೀಡಿತನಿಂದ ಮತ್ತೊಬ್ಬರಿಗೆ ಹಬ್ಬುತ್ತದೆ. ಜ್ವರ ಪೀಡಿತ ರೋಗಿಯು ಕೆಮ್ಮುವುದರಿಂದ, ಸೀನುವುದರಿಂದ ರೋಗಾಣುಗಳನ್ನು ಗಾಳಿಗೆ ಬಿಡುತ್ತಾನೆ. ಅದು ಸುತ್ತಲಿನ ಪರಿಸರದಲ್ಲಿ ಜಮೆಯಾಗಬಹುದು - ತೀಪಾಯಿ, ಲೋಟ, ಪೇಪರ್ರು, ಫೋನ್ ಸೆಟ್ಟು, ಬಾಗಿಲುಗಳು ಹೀಗೆ. ಆ ಪರಿಸರದಲ್ಲಿ ಮತ್ತೊಬ್ಬರು ಉಸಿರಾಡುವುದರಿಂದ ಈ ರೋಗಾಣುವು ಅವರ ದೇಹವನ್ನೂ ಪ್ರವೇಶಿಸಿ ಜ್ವರ ಪೀಡಿತರನ್ನಾಗಿ ಮಾಡುತ್ತದೆ. ರೋಗಿಯ ದೇಹದಿಂದ ಹೊರಬಿದ್ದ ರೋಗಾಣುವು ಪರಿಸರದಲ್ಲಿ ಸುಮಾರು ಎರಡು ಘಂಟೆಗಳ ಕಾಲ ಜೀವಿಸಬಲ್ಲದು, ಅಷ್ಟರಲ್ಲಿ ಯಾರ ದೇಹವನ್ನೋ ಅದು ಹೊಕ್ಕರೆ ಅದಕ್ಕೆ ಪನರ್ಜನ್ಮ ಬಂದಂತೆಯೇ! ವಯಸ್ಕ ರೋಗಿಗಳು ಸುಮಾರು ರೋಗ ಬಂದಾಗಿನಿಂದ ಸುಮಾರು ಏಳು ದಿನಗಳು ಮತ್ತು ಮಕ್ಕಳು ಸುಮಾರು 10 ದಿನಗಳು ಈ ರೋಗವನ್ನು ಇತರರಿಗೆ ಹರಡಬಲ್ಲರು. ರೋಗಿಗಳು ಶಾಲಾ, ಕಾಲೇಜು, ಖಚೇರಿಗಳಿಂದ ಕನಿಷ್ಠ ಏಳು ದಿನಗಳ ಕಾಲ ದೂರವುಳಿದರೇನೆ ಒಳ್ಳೆಯದು.
ಇದು ರೋಗ ಮತ್ತೆ ಹಲವರಿಗೆ ಹರಡದಂತೆ ತಡೆಯುವಲ್ಲಿ ಸಹಕಾರಿ. ಈ ಹಂದಿ ಜ್ವರವಿದೆಯಲ್ಲ ಅದೊಂಥರಾ ಸೀಜನಲ್ ರೋಗ. ವೈರಾಣುವಿನ ಪ್ರಸರಣಕ್ಕೆ ಇಂದಿನ ವಾತಾವರಣ ಮತ್ತು ಹವೆ ಅತ್ಯಂತ ಪ್ರಶಸ್ತ್ಯ. ಈಗ ಭಾರತದಲ್ಲೆಲ್ಲಾ ಮಳೆ, ಚಳಿಗಳು ಸಮ್ಮಿಳಿತವಾಗಿ ಒಳ್ಳೆ ತಂಪು ಹವೆ ಇದೆ. ಇದೇ ಇದರ ಗುಟ್ಟು. ಈ ವೈರಾಣುಗಳು ಹರಡುವುದೇ ಈ ಕಾಲದಲ್ಲಿ. ಬರಬರುತ್ತಾ ಇದೂ ಸತ್ತು ಹೋಗುತ್ತದೆ, ಇದು ಮಾರಣಾಂತಿಕವೂ ಅಲ್ಲ, ಶಾಶ್ವತವೂ ಅಲ್ಲ.

ಇದೆಲ್ಲಾ ಸರಿ, ನಮಗೆ ಹಂದಿ ಜ್ವರ ಬಂದಿದೆ ಅಂತ ಹೇಗೆ ತಿಳಿಯುವುದು? ಮೊದಲಿಗೆ ಈ ವೈರಾಣು ನಮ್ಮ ಮೂಗು ಅಥವಾ ಬಾಯಿಯಿಂದ ದೇಹದ ಒಳ ಪ್ರವೇಶಿಸುತ್ತದೆ, ಅದೇ ಅದಕ್ಕ ರಾಜ ಮಾರ್ಗ. ಮೊದಲಿಗೆ ಅದು ದಾಳಿ ಮಾಡುವುದೇ ಶ್ವಾಸಕೋಶವನ್ನು. ಈ ವೈರಾಣು ರಕ್ತದಲ್ಲಿ ಅದರ ಸಂತಾನಾಭಿವೃದ್ಧಿ ಮಾಡುತ್ತದೆ. ಹಂದಿ ಜ್ವರದ ಲಕ್ಷಣಗಳು ಸಾಧಾರಣವಾಗಿ ಇತರ ಜ್ವರ ಅಥವಾ ಇನ್ಫ್ಲೂಎನ್ಜಾ ಜ್ವರಗಳಂತೆಯೇ ಇರುತ್ತವೆ. ತೀವ್ರ ಅಥವಾ ಸಾಧಾರಣ ತಾಪಮಾನದ ಜ್ವರ, ಕೈ-ಕಾಲು ನೋವು, ಗಂಟಲು ನೋವು, ತಲೆನೋವು, ಸುಸ್ತು, ಕೀಲು ನೋವು, ಕಟ್ಟಿದ ಮೂಗು ಅಥವಾ ಮೂಗಿನ ಸೋರುವಿಕೆ ಹೀಗೆ. ಹಂದಿ ಜ್ವರದ ಮುಖ್ಯ ಲಕ್ಷಣವೆಂದರೆ ಉಸಿರಾಟದ ತೊಂದರೆ. ಈ ರೋಗ ಲಕ್ಷಣಗಳನ್ನು ಮೊಳಕೆಯಲ್ಲೇ ಗುರುತಿಸಿ ಚಿಕಿತ್ಸೆ ತೆಗೆದುಕೊಂಡರೆ ಯಾವುದೇ ಸಮಸ್ಯೆಯಿರುವುದಿಲ್ಲವಾದರೂ ಇವುಗಳನ್ನು ನಿರ್ಲಕ್ಷಿಸಿ ಕೂತರೆ, ಈ ಲಕ್ಷಣಗಳು ಉಲ್ಬಣಾವಸ್ಥೆಗೆ ಹೋಗಿ ಸಾವಿನಲ್ಲಿ ಅಂತ್ಯಗೊಳ್ಳುತ್ತದೆ. ಈಗ ದೇಶದಲ್ಲಿ ನಡೆಯುತ್ತಿರುವ ಸಾವಿನ ಪ್ರಕರಣಗಳೆಲ್ಲವೂ ಇಂಥವೇ. ಸಮಸ್ಯೆಯೆಂದರೆ ಈಗ ಹಂದಿ ಜ್ವರವಲ್ಲದೇ ಬೇರೆ ಇನ್ನಿತರ ಅನೇಕ ಜ್ವರಗಳು ಚಾಲ್ತಿಯಲ್ಲಿರುವುದು - ಡೆಂಗೆ, ಚಿಕನ್ ಗುನ್ಯಾ.... ಆದ್ದರಿಂದ ಈ ಲಕ್ಷಣಗಳು ಕಂಡು ಬಂದ ತಕ್ಷಣವೇ ಇದು ಹಂದಿ ಜ್ವರ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಅದು ಡೆಂಗ್ಯೂ ಆಗಿರಬಹುದು, ಇಲ್ಲ ಗುನ್ಯಾ ಕೂಡ ಆಗಿರಬಹುದು, ಇಲ್ಲ ಸಾಮಾನ್ಯ ಜ್ವರವೇ ಆಗಿರಬಹುದು. ಯಾವುದಕ್ಕೂ ಈ ಲಕ್ಷಣಗಳ ಸುಳಿವು ಕಂಡಕೂಡಲೇ ವೈದ್ಯರ ಬಳಿ ತೆರಳಿ ಪರೀಕ್ಷಿಸಿಕೊಳ್ಳುವುದು ಒಳಿತು. ಯಾವ ವೈದ್ಯರು? ಇದು ಇನ್ನೂ ಗೋಜಲು ಗೋಜಲು ಮಾರಾಯ್ರೇ!

ಹಂದಿ ಜ್ವರ ತಪಾಸಣೆಯನ್ನು ಎಲ್ಲ ವೈದ್ಯರೂ ಮಾಡಲಾಗುವುದಿಲ್ಲ. ಅದರ ಪತ್ತೆಗೆಂದೇ ಒಂದು ಪ್ರತ್ಯೇಕ ಕಿಟ್ ಬರುತ್ತದೆ. ಅದನ್ನು ಕೇಂದ್ರ ಸರ್ಕಾರವೇ ಪೂರೈಸುತ್ತದೆ. ಈ ಕಿಟ್ಗಳನ್ನು ಸದ್ಯ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಮೊದಲಿಗೆ ಸರ್ಕಾರವು ಜ್ವರ ಲಕ್ಷಣಗಳು ಕಂಡಾಕ್ಷಣ ಸರ್ಕಾರೀ ಆಸ್ಪತ್ರೆಗಳಿಗೇ ತೆರಳಿ ಖಸಗೀ ಆಸ್ಪತ್ರೆಗಳಲ್ಲಿ ಇದರ ತಪಾಸಣೆ ಮತ್ತು ಚಿಕಿತ್ಸೆಯ ಸೌಲಭ್ಯಗಳಿಲ್ಲ ಎಮದು ಘೋಷಿಸಿತು. ಅದೂ ಏನು ಎಲ್ಲಾ ಸರ್ಕಾರೀ ಆಸ್ಪತ್ರೆಗಳಲ್ಲೂ ಈ ಸೌಲಭ್ಯವಿಲ್ಲ. ಕೆಲವೇ ಕೆಲವು ಸರ್ಕಾರೀ ವೈದ್ಯಕೀಯ ಸಂಸ್ಥೆಗಳಲ್ಲಿ ಮಾತ್ರ ಈ ಸೌಲಭ್ಯ. ಇಡೀ ಕರ್ನಾಟಕಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿವಿ ಒಂದೇ ಇತ್ತು. ಇದು ಅಗತ್ಯವಿಲ್ಲದ ನೂಕುನುಗ್ಗಲು, ಗೊಂದಲಗಳಿಗೆ ಕಾರಣವಾಗಿತ್ತು. ಇದರಿಂದ ಎಚ್ಚತ್ತ ಕೇಂದ್ರ ಆರೋಗ್ಯ ಸಚಿವಾಲಯ ಖಾಸಗೀ ಆಸ್ಪತ್ರೆಗಳೂ ಇನ್ನು ಮುಂದೆ ಹಂದಿ ಜ್ವರ ಪೀಡಿತರ ತಪಾಸಣೆ ಮತ್ತು ಚಿಕಿತ್ಸೆ ಮಾಡುತ್ತವೆ ಎಂದು ಘೋಷಿಸಿದೆ. ಎಲ್ಲೋ ಕೆಲ ಆಸ್ಪತ್ರೆಗಳು ಮಾತ್ರ ಈಗ ಈ ಸೇವೆಯನ್ನು ಪ್ರಾರಂಬಿಸಿದೆ. ಇವತ್ತಿಗೂ ಇದೆಲ್ಲವೂ ಗೊಂದಲಮಯ.

ತಪಾಸಣೆ ಅಂತ ತಲೆಬಿಸಿಯೇನಿಲ್ಲ. ಸೋಂಕಿನ ಶಂಕೆಯಿರುವವರ ಮೂಗಿನ ಸ್ರಾವ, ಉಗುಳು ಅಥವಾ ಉಸಿರಾಟದ ಅಂಗಗಳಿಂದ ಹೊರತೆಗೆಯುವ ಮಾದರಿಯನ್ನು ಪರೀಕ್ಷೆಗೊಳಪಡಿಸಿ ಅದು ಹಂದಿ ಜ್ವರವೋ ಅಲ್ಲವೋ ಎಂಬುದನ್ನು ಹೇಳುತ್ತಾರೆ. ಜ್ವರ ಪೀಡಿತರು ಅಂತ ಗೊತ್ತಾದರೆ ಏನು ಮಾಡಬೇಕು? ಅವರ ಮನೆಯವರು ಸುತ್ತಲಿನವರು ತೆಗೆದುಕೊಳ್ಳಬೇಕಾದ ಜಾಗ್ರ್ರತೆಗಳ್ಯಾವವು ಅಂದಿರಾ? ಮೊದಲಿಗೆ ಮೂಗು ಮತ್ತು ಬಾಯಿಗೆ ಅಡ್ಡವಾಗಿ ಒಂದು ಮಾಸ್ಕನ್ನು ಹಾಕಿಕೊಳ್ಳುವುದೊಳಿತು. ಇದು ರೋಗ ಬೇರೆಯವರಿಗೆ ಹರಡದಂತೆ ತಡೆಯುತ್ತದೆ. ರೋಗಿಗಳ ಜೊತೆ ಹತ್ತಿರದಲ್ಲೇ ಓಡನಾಡುವವರೂ ಕೂಡ ಇಂಥದೊಂದು ಮಾಸ್ಕನ್ನು ಹಾಕಿಕೊಳ್ಳುವುದು ಒಳಿತು. ಈ ಮಾಸ್ಕು ಎಲ್ಲ ಔಷಧೀ ಅಂಗಡಿಗಳಲ್ಲೂ ಸಿಗುತ್ತದೆ. ರೋಗಿಗಳು ಸದಾ ಕಾಲ ಬೆಚ್ಚನೆಯ ಬಟ್ಟೆ ಧರಿಸಿದ್ದರೆ ಒಳ್ಳೆಯದು. ಇನ್ನು ಹೆಚ್ಚುಹೆಚ್ಚು ಬಿಸಿನೀರನ್ನು ಸೇವಿಸುವುದು ಕೂಡ ಒಳ್ಳೆಯದು. ರೋಗಿ ಬಳಸಿದ ಊಟದ ತಟ್ಟೆ, ಲೋಟ...ಇತ್ಯಾದಿ ಸಾಮಾನುಗಳು ಮತ್ತು ತೊಟ್ಟ ಬಟ್ಟೆಯ ನಿರ್ವಹಣೆ ಸರಿಯಾಗಿರಬೇಕು. ಅವನ್ನು ಮುಟ್ಟಿದ ನಂತರ ಬಿಸಿನೀರಿನಲ್ಲಿ ಕೈತೊಳೆಯುವುದು ಉತ್ತಮ. ಮರೆತಿದ್ದೆ, ಆಗಾಗ ಸೋಪು ತಿಕ್ಕಿ ಬಿಸಿನೀರಿನಲ್ಲಿ ಕೈತೊಳೆಯುವುದು ಮೋಸ್ಟ್ ರೆಕಮೆಂಡೆಡ್! ವಿಶೇಷವಾಗಿ ಮಕ್ಕಳನ್ನು ರೋಗಿಗಳಿಂದ ದೂರವುಳಿಸುವುದು ಶ್ರೇಯಸ್ಕರ. ಈ ರೋಗವು ಮುಖ್ಯವಾಗಿ ಮಕ್ಕಳು, ಗರ್ಭಿಣಿಯರು ಮತ್ತು ಮುದಕರಿಗೆ ಬಹುಬೇಗನೇ ಹರಡುವುದರಿಂದ ಅವರ ವಿಷಯದಲ್ಲಿ ಹೆಚ್ಚಿನ ಕಾಳಜಿ ಅಗತ್ಯ.

ಹಂದಿ ಜ್ವರಕ್ಕೆ ಚಿಕಿತ್ಸೆ ಇದೆಯೇ? ಇನ್ನೂ ಯಾವುದೇ ವ್ಯಾಕ್ಸೀನ್ ಕಂಡು ಹಿಡಿದಿಲ್ಲವಂತೆ? ಹಾಗಾದರೆ ಜ್ವರ ಪೀಡಿತರ ಗತಿ? ಹೀಗೆಲ್ಲ ಮಾತುಗಳು ಹರಿಯುತ್ತಿವೆ. ಆದರೆ ಹಂದಿ ಜ್ವರಕ್ಕೆ ಚಿಕಿತ್ಸೆ ಇದೆ. ಟ್ಯಾಮಿಫ್ಲೂ ಅನ್ನೋ ಮಾತ್ರೆಯನ್ನು ವೈದ್ಯರು ಇದಕ್ಕೆ ಕೊಡುತ್ತಾರೆ. ಇದನ್ನು ಒಸೆಲ್ಟಾಮಿವಿರ್ ಎಂದೂ ಕರೆಯುತ್ತಾರೆ. ಆದರೆ ಇದರ ರೀಟೇಲ್ ಮಾರಾಟವನ್ನು ಸಕರ್ಾರ ನಿಷೇಧಿಸಿದೆ. ಇದರ ಸಮಸ್ಯೆಯೆಂದರೆ ಇದನ್ನು ಸಾಧಾರಣ ಜ್ವರಗಳಿಗೆ ತೆಗದುಕೊಂಡುಬಿಟ್ಟರೆ, ನಂತರ ಹಂದಿ ಜ್ವರ ಬಂದರೂ ಇದು ಕೆಲಸ ಮಾಡುವುದಿಲ್ಲ. ದೇಹ ಇದಕಲ್ಕನುಗುಣವಾಗಿ ಅಷ್ಟರಲ್ಲಿ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡುಬಿಟ್ಟಿರುತ್ತದೆ. ಈ ಮಾತ್ರೆಯನ್ನು ಹಂದಿ ಜ್ವರ ಖಚಿತವಾದ ಮೇಲೆ ವೈದ್ಯರೇ ಸೂಚಿಸುತ್ತಾರೆ. ಆಗಲೇ ತೆಗೆದುಕೊಳ್ಳಬೇಕು. ಇಲ್ಲಿ ಮೂಕೈವಾಗಿ ಆಗುತ್ತಿರುವುದೆಂದರೆ ಹಂದಿ ಜ್ವರದ ಕುರಿತು ಅನೇಕ ಊಹಾಗಾನಗಳು, ವದಂತಿಗಳು ಚಾಲ್ತಿಯಲ್ಲಿವೆ. ಇದು ನಡೆಯುವುದು ಸಾಮಾನ್ಯರಿಗೆ ಮಾಹಿತಿಯ ಕೊರತೆ ಕಾಡಿದಾಗ. ಆದ್ದರಿಂದ ಹಂದಿ ಜ್ವರ ಅಂದ ತಕ್ಷಣ ಅದೇನೋ ಮಹಮ್ಮಾರಿಯೆಂಬಂತೆ ಜನ ಭಯಭೀತಿಗೊಳ್ಳುತ್ತಿದ್ದಾರೆ. ಇನ್ನು ತಮ್ಮ ಕಥೆ ಮುಗಿಯಿತು ಎಂಬಂತೆ ಆಡುತ್ತಿದ್ದಾರೆ, ಅದರ ಜೊತೆಗೆ ತಪಾಸಣೆ-ಚಿಕಿತ್ಸೆಯ ಕುರಿತು ಗೊಮದಲಗಳು ಬೇರೆ. ಇನ್ನು ಮೀಡಿಯಾ ಅಂತೂ ಒಳ್ಳೆ ಕ್ರಿಕೆಟ್ ಸ್ಕೋರ್ ಹೇಳಿದ ಹಾಗೆ ರೋಗ ಪೀಡಿತರ ಮತ್ತು ಸತ್ತವರ ಸಂಖ್ಯೆಯನ್ನು ಘಳಿಗೆಗೊಂದು ಸಾರಿ ಬಿತ್ತರಿಸುತ್ತಿದೆ. ಇದು ಜನರಲ್ಲಿನ ಆತಂಕವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಅನೇಕರು ಹಂದಿ ಜ್ವರ ಖಚಿತವಾದ ಕೂಡಲೇ ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. ಇದು ಜ್ವರದ ಪರಿಣಾಮಗಳನ್ನು ಬೂಥಕನ್ನಡಿಯಡಿಯಿಟ್ಟಂತೆ ದೊಡ್ಡದಾಗಿ ಮಾಡಿ ತೋರಿಸುತ್ತದೆ, ಆತಂಕ ಇನ್ನೂ ಹೆಚ್ಚುತ್ತದೆ. ಭಯ ಪಡುವ ಅಗತ್ಯವಿಲ್ಲ ಹಂದಿ ಜ್ವರ ಮತ್ತೊಂದು ರೀತಿಯ ಸಾಮಾನ್ಯ ಜ್ವರ ಅಷ್ಟೆ, ಅದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ತಿಂದು ಹಾಕಿ ನಿಮ್ಮನ್ನು ಸಾವಿಗೆ ದೂಡುವ ಏಡ್ಸೂ ಅಲ್ಲ, ಲಿವರನ್ನು ತಿಂದು ಹಾಕುವ ಹ್ಯಪಟಟಿಸ್ಸೂ ಅಲ್ಲ, ಅದೊಂದು ಸಾಮಾನ್ಯ ಜ್ವರ. ಆತಂಕ ಬೇಡ ಆದರೆ ಎಚ್ಚರವಿರಲಿ.


ಏನಿದು ಎಚ್1ಎನ್1? ಹಂದಿ ಜ್ವರಕ್ಕೆ ಕಾರಣವಾಗಿರುವ ವೈರಾಣುವನ್ನು ಎಚ್1ಎನ್1 ಎಮದು ಕರೆಯುತ್ತಾರೆ. ಇದೊಂದು ವ್ಯರಸ್. ಇದರ ಮೂಲ ಹಕ್ಕಿ ಜ್ವರ - ಏವಿಯನ್ ಫ್ಲೂ! ಉತ್ತರ ಅಮೆರಿಕಾದ ಹಕ್ಕಿ ಜ್ವರ, ಹಂದಿ ಜ್ವರ, ಮಾನವ ಜ್ವರ ಮತ್ತು ಏಷಿಯಾದ ಹಂದಿ ಜ್ವರಕ್ಕೆ ಕಾರಣವಾಗುವ ವೈರಾಣುಗಳ ಸಮ್ಮಿಳಿತ ರೂಪವೇ ಈ ಎಚ್1ಎನ್1! ಇದನ್ನು ಜೆನೆಟಿಕ್ ಮಿಕ್ಸ್ ಎಮದು ಕರೆಯುತ್ತಾರೆ. ಜ್ವರ ತಗುಲಿರುವ ವ್ಯಕ್ತಿಗೆ ಹಂದಿಗಳ, ಹಕ್ಕಿಗಳ ಜೊತೆ ಒಡನಾಟವಿದ್ದರೆ, ಆ ವೈರಸ್ಗಳೆಲ್ಲವೂ ಹೀಗೆ ಸಮ್ಮಿಳಿತಗೊಮಡು ಜಗತ್ತನ್ನೇ ಆಟವಾಡಿಸಬಹುದು, ಆಡಿಸುತ್ತಿದೆ. ಈ ಎಚ್1ಎನ್1 ವೈರಸ್ನ ಮೂಲ ಮೆಕ್ಸಿಕೋ ನಗರ. ಈ ಸ್ವೈನ್ ಫ್ಲೂನ ಉಗಮವೂ ಅಲ್ಲೇ. ಎಲ್ಲಾ ವೈರಸ್ಸುಗಳಂತೆಯೇ ಈ ಎಚ್1ಎನ್1 ಕೂಡ ರೂಪಾಂತರಗೊಳ್ಳುವ ಅಥವಾ ಮ್ಯುಟೇಟ್ ಆಗುವ ಶಕ್ತಿಯನ್ನು ಹೊಂದಿದೆ. ಹಾಗಾಗಿಯೇ ಇದು ಪ್ರತಿ ಬಾರಿ ರೂಪಾಂತರಗೊಂಡು, ಒಂದೊಂದು ಹೊಸ ಪ್ರಭೇಧದ ವೈರಸ್ ಹುಟ್ಟಿಕೊಂಡಾಗಲೂ ಒಂದೊಂದು ಬಗೆಯ ಫ್ಲೂ ಅನ್ನು ಹರಡಿಸುತ್ತದೆ. ಈಗಿನದು ಹಂದಿ ಜ್ವರದ ಸರದಿ.

ಫ್ಲೂ ಇತಿಹಾಸ - ಈ ಫ್ಲೂಗೆ ದೊಡ್ಡ ಇತಿಹಾಸವೇ ಇದೆ. ಇದರಲ್ಲಿ ಅತ್ಯಂತ ಭಯಾನಕವೆಂದರೆ 1918ರ ಸ್ಪಾನಿಷ್ ಫ್ಲೂ. ಸುಮಾರು 50 ದಶಲಕ್ಷ ಜನ ಈ ಸ್ಪಾನಿಷ್ ಫ್ಲೂದಿಂದ ಅಂದು ಮೃತಪಟ್ಟಿದ್ದರು. ಇದರ ನಂತರ ಇದು ಮತ್ತೆ ಕಾಣಿಸಿಕೊಂಡದ್ದು 1957ರಲ್ಲಿ - ಏಷ್ಯನ್ ಫ್ಲೂ, ಆಗ ಸತ್ತವರ ಸಂಖ್ಯೆ 70 ಸಾವಿರ. ಮತ್ತೆ 1968-69ರಲ್ಲಿ ಹಾಂಕಾಂಗ್ ಫ್ಲೂನ ರೂಪದಲ್ಲಿ ದರ್ಶನವಿತ್ತ ಇದು 33 ಸಾವಿರ ಜನರನ್ನು ಬಲಿತೆಗೆದುಕೊಂಡಿತು. ನಂತರದ್ದು ಇತ್ತೀಚಿನ 1990ರ ಹಕ್ಕಿ ಜ್ವರ, ಸತ್ತವರ ಸಂಕ್ಯೆ ಕೇವಲ 257. ತೀರ ಇತ್ತೀಚಿನದ್ದು ಎಂದರೆ 2002ರಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಸಾರ್ಸ್. ಆಗ 774 ಜನ ಅಸುನೀಗಿದ್ದರು. ನಂತರ ಮತ್ತೆ ಕಳೆದೆರಡು ವರ್ಷಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತಾದರೂ ಅದು ಮನುಷ್ಯರಿಗೇ ಹರಡಲಿಲ್ಲ. ಈಗಿನದ್ದು ಹಂದಿ ಜ್ವರ. ಇಲ್ಲಿ ಪ್ರತಿ ಬಾರಿ ಫ್ಲೂ ಬಂದಾಗಲೂ ಸತ್ತವರ ಸಂಕ್ಯೆ ಜೋರಾಗಿಯೇ ಇದೆ ಅಂತ ಭಯ ಪಡುವ ಅಗತ್ಯವಿಲ್ಲ, ಯಾಕೆಮದರೆ ಈ ಎಲ್ಲಾ ಪ್ರಕರಣಗಲಲ್ಲೂ ಸೋಂಕಿತರ ಸಂಖ್ಯೆ ಸತ್ತವರಿಗಿಂತಲೂ ನೂರು-ನೂರೈವತ್ತು ಪಟ್ಟು ಹೆಚ್ಚಿತ್ತು.

ಸ್ವೈನ್ ಫ್ಲೂ ಮಾನವ ನಿರ್ಮಿತವೇ? ಹಾಗೊಮದು ಪ್ರಶ್ನೆ ಈಗ ಮನುಕುಲದ ಮುಂದೆ ಧುತ್ತನೆ ಬಂದು ಎದುರು ನಿಂತಿದೆ. ಅಮೆರಿಕಾ ಮತ್ತು ಇನ್ನೂ ಹಲವಾರು ದೇಶಗಳು, ಅನೇಕ ಭಯೋತ್ಪಾದನಾ ಸಂಸ್ಥೆಗಳೂ ವಿಧ್ವಂಸ ಸೃಷ್ಟಿಸಲು ಬಯಲಾಜಿಕಲ್ ವಾರ್ಫೇರ್ನಲ್ಲಿ ಅನೇಕ ಸಂಶೋಧನೆಗಳನ್ನು ನಡೆಸುತ್ತಿರುವುದು ವಿದಿತವೇ ಸರಿ. ಇಲ್ಲೊಂದು ಆಘಾತಕಾರಿ ಸುದ್ದಿಯಿದೆ ನೋಡಿ, ಮನುಕುಲ ಇತಿಹಾಸದಲ್ಲೇ ಅತ್ಯಂತ ವಿನಾಶಕಾರೀ ಫ್ಲೂ ಎನಿಸಿರುವ 1918ರ ಸ್ಪಾನಿಷ್ ಫ್ಲೂವನ್ನು ಟ್ರಿಗರ್ ಮಾಡಿದ ಆ ವೈರಾಣು ಯಾವುದೆಂಬುದು ಬಹುಕಾಲ ಮಾನವನಿಗೆ ಮಿಸ್ಟರಿಯೇ ಆಗಿತ್ತು. ಆದರೆ ಅಮೆರಿಕಾದ ವಿಜ್ಞಾನಿಗಳು ಸ್ಪಾನಿಷ್ ಫ್ಲೂನಿಂದಾಗಿ ಸತ್ತ ವ್ಯಕ್ತಿಯೊಬ್ಬಳ ದೇಹ ಭಾಗಗಳಿಂದ ಅದನ್ನು ಐಸೋಲೇಟ್ ಮಾಡಿ ಅದನ್ನು ಪುನಸೃಷ್ಟಿಸುವ ಸಾಹಸಕ್ಕೆ ಕೈಹಾಕಿ ಭಾಗಶಃ ಯಶಸ್ವಿಯಾಗಿದ್ದಾರೆ. ಅದಕ್ಕೂ ಇದಕ್ಕೂ ಏನು ಸಂಬಂಧ ಅಂದಿರಾ? ಇಲ್ಲಿದೆ ನೋಡಿ ಬಾಂಬು - ಈಗಿನ ಎಚ್1ಎನ್1 ವೈರಾಣುವೂ ಸ್ಪಾನಿಷ್ ಫ್ಲೂನ ವೈರಾಣುವನ್ನು ತುಂಬಾ ಹೋಲುತ್ತದೆ. ಆದರೆ ಇದು ಅದರ ಅತ್ಯಂತ ಕಳಪೆ ರೂಪ ಎಂದು ಹೇಳಲಾಗುತ್ತಿದೆ. ಸದ್ಯ ಇದು ಆ ಮಟ್ಟದಲ್ಲಿ ಮರಕವಲ್ಲ. ಇನ್ನೊಂದು ಆರೋಪವೂ ಕೇಳಿ ಬರುತ್ತಿದೆ ಅದು ಈ ಸ್ವೈನ್ ಫ್ಲೂಗಿರುವುದು ಒಂದೇ ಔಷಧ - ಟಾಮಿಫ್ಲೂ. ಈ ಔಷಧವನ್ನು ತಯಾರಿಸುತ್ತಿರುವ ಕಂಪೆನಿಯ ಚರಿತ್ರೆಯೇನೂ ಹೇಳಿಕೊಳ್ಳವಂತಿಲ್ಲ ಬಿಡಿ. ಈಗ ಈ ಕಂಪೆನಿಯವರು ತಮ್ಮ ಮಾತ್ರೆಗಳ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಅವರೇ ಈ ವೈರಾಣುವನ್ನು ಪಸರಿಸುತ್ತಿದ್ದಾರೆ ಎಂಬುದು ಆರೋಪ. ಇದರಲ್ಲಿ ಸತ್ಯವೆಷ್ಟೋ, ಮಿಥ್ಯವೆಷ್ಟೋ? ಯಾರೂ ಹೇಲಲಾರರು. ಆದರೆ ಇಂಥ ಆರೋಪಗಳಿರುವುದು ಸುಳ್ಳಲ್ಲ. ಇದರ ಉಗಮಕ್ಕೆ ಮನುಷ್ಯ ಕಾರಣನೋ ಅಲ್ಲವೋ ತಿಳಿದಿಲ್ಲವಾದರೂ ಇದರ ಹರಡುವಿಕೆಗಂತೂ ಮನುಷ್ಯನೇ ಕಾರಣ! ಇಂದು ಜಗತ್ತು ಅತ್ಯಂತ ಕಿರಿದಾಗುತ್ತಾ ಸಾಗಿದೆ. ಜನರ ಓಡಾಟಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ಮೊದಲಿಗೆ ಈ ಹಂದಿ ಜ್ವರ ಮೂಲ ಮೆಕ್ಸಿಕೋ ನಗರವನ್ನು ಬಿಟ್ಟು ಕದಲಿದ್ದೇ ವಿಮಾನಗಳ ಮೂಲಕ. ಭರತಕ್ಕೂ ಇದು ಎಂಟ್ರಿ ಪಡೆದದ್ದು ಅಲ್ಲಿಂದಲೇ.

ಆಸ್ಟ್ರೇಲಿಯಾದ ರೀಸಿಸ್ಟ್ ದಾಳಿಗಳು - ಒಂದು ಒಳನೋಟ

ಸರಿಸುಮಾರು ಎರಡ್ಮೂರು ತಿಂಗಳುಗಳಿಂದ ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ರೇಸಿಸ್ಟ್ ದಾಳಿಗಳ ಸುದ್ದಿ ಬರುತ್ತಲೇ ಇವೆ. ಅಲ್ಲಿ ಕಳೆದ ಆರು ತಿಂಗಳುಗಳ ಅವಧಿಯಲ್ಲಿ, ಇಂತಹ 75 ಭಾರತೀಯರ ಮೇಲಿನ ಹಲ್ಲೆ ಪ್ರಕರಣಗಳು ನಡೆದಿವೆ. ಇನ್ನೂ ನಡೆಯುತ್ತಲೇ ಇವೆ. ಇದೇನೇ ಇದ್ದರೂ ಆಸ್ಟ್ರೇಲಿಯಾ ದೇಶವೇ ರೇಸಿಸ್ಟ್ ಅಲ್ಲ. ಹಾಗಂತ ನಾವು ಹೇಳಲೂಬಾರದು. ಇದು ಅಲ್ಲಿನ ಕೆಲವು ಕಿಡಿಗೇಡಿಗಳ ಕೆಲಸ. ಆದರೆ ಅಲ್ಲಿನ ಸರ್ಕಾರದ ತಪ್ಪಿರುವುದು ಇದನ್ನು ಗುರುತಿಸಿ, ಕ್ರಮ ಕೈಗೊಳ್ಳದೇ ಇರುವುದರಲ್ಲಿ. ಅಲ್ಲಿನ ಸರ್ಕಾರ ಈ ದಾಳಿಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಪರಿಗಣಿಸಿದರೂ ಅದನ್ನವರು ತೋರಿಸ ಬಯಸುತ್ತಿಲ್ಲ. ಆಸ್ಟ್ರೇಲಿಯಾದ ಪ್ರಧಾನಿ ಇನ್ನು ರೇಸಿಸ್ಟ್ ದಾಳಿಗಳೆಂದು ಒಪ್ಪಿಕೊಳ್ಳ ಬಯಸುತ್ತಿಲ್ಲ. ಅವರ ಪ್ರಕಾರ ಇದೊಂದು ಸ್ಟ್ರೀಟ್ ಕ್ರೈಮ್ ಅಷ್ಟೆ. ಅದನ್ನು ಪೋಲೀಸರು ನೋಡಿಕೊಳ್ಳುತ್ತಾರೆ. ಅಲ್ಲಿನ ಮೀಡಿಯಾ ಕೂಡ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವರಾರಿಗೂ ಇದೊಂದು ದೊಡ್ಡ ವಿಷಯವಾಗುವುದು ಬೇಕಿಲ್ಲ. ಒಂದೊಮ್ಮೆ ಹಾಗಾದರೆ, ಅವರ ಶಿಕ್ಷಣೋದ್ಯಮಕ್ಕೆ ಹೊಡೆತ ಬೀಳುತ್ತದೆಂಬ ದಿಗಿಲವರಿಗೆ.

ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ರೇಸಿಸ್ಟ್ ದಾಳಿಗಳ ಕುರಿತಾಗಿ ನನಗೆ ದಕ್ಕಿದ ಒಳನೋಟವನ್ನು ಇಲ್ಲಿ ಪ್ರಸ್ತುತಪಡಿಸಿದ್ದೇನೆ. ರೇಸಿಸಮ್ ಎಂದರೆ, ಒಬ್ಬ ಮನುಷ್ಯನನ್ನು ಆತನ ಜನಾಂಗ, ಕುಲ, ಮೈಬಣ್ಣವನ್ನಾಧರಿಸಿ ತುಚ್ಛವಾಗಿ ಕಾಣುವುದು. ಮಾನವ ಇತಿಹಾಸ, ದೇಶ ಮತ್ತು ಜನಾಂಗಗಳು ತಮ್ಮ ಸ್ವಹಿತಾಸಕ್ತಿಗಾಗಿ, ಮತ್ತೊಬ್ಬರ ಮೇಲೆ ಸವಾರಿ ಮಾಡಿದುದೇ ಆಗಿದೆ. ವಸಾಹತುಶಾಹಿಯ ತಳಹದಿಯೇ ಇದಲ್ಲವೇ? ಬಿಳಿಯ ತೊಗಲಿನ ಜನ ತಮ್ಮನ್ನು ತಾವು ಕಪ್ಪು ಚರ್ಮ ಉಳ್ಳವರಿಗಿಂತಲೂ, ಉತ್ತಮರೆಂದೂ, ಕಪ್ಪು ಚರ್ಮದವರು ಅಧಮರೆಂದೂ, ಅನಾಗರೀಕರೆಂದೂ, ತಮ್ಮನ್ನು ತಾವು ಆಳಿಕೊಳ್ಳಲು ಅಸಮರ್ಥರೆಂದೂ ಭಾವಿಸಿ ಅವರನ್ನು ನಾಗರೀಕಗೊಳಿಸುವ ನೆಪದಲ್ಲಿ, ತೃತೀಯ ಜಗತ್ತಿನಾದ್ಯಂತ ತಮ್ಮ ವಸಾಹತುಗಳನ್ನು ಸ್ಥಾಪಿಸತೊಡಗಿದ್ದು, ಮತ್ತು ನಂತರದ ಕಾಲಘಟ್ಟದಲ್ಲಿ, ಈ ವಸಾಹತು ದೇಶಗಳಲೆಲ್ಲಾ ಸ್ವತಂತ್ರ್ಯ ಹೋರಾಟಗಳು ನಡೆದು ಆ ದೇಶಗಳು ಬಿಳಿಯರ ಸವಾರಿಯಿಂದ ಮುಕ್ತರಾದದ್ದು ಇತ್ತೀಚಿನ ಇತಹಾಸ. ಆದರೆ ದುರ್ದೈವವೆಂದರೆ, ಎಲ್ಲಾ ವಸಾಹತುಗಳ ವಿಮುಕ್ತಿಯ ನಂತರವೂ ಕೂಡ, ಅಭಿವೃದ್ಧಿ ಹೊಂದಿದ ಬಿಳಿಯರ ಪ್ರಥಮ ಜಗತ್ತು ಮತ್ತು ಅಭಿವೃದ್ಧಿ ಕಾಣದ ಭಾಗಶಃ ಕರಿಯರ ತೃತೀಯ ಜಗತ್ತುಗಳಂತೆ ಈ ವಿಶ್ವ ಅರ್ಧಕ್ಕೆ ಅರ್ಧ ಭಾಗವಾಗಿ ಹೋಯಿತು. ಇತ್ತೀಚೆಗೆ ತೃತೀಯ ಜಗತ್ತಿನ ದೇಶಗಳು ಕಾಣುತ್ತಿರುವ ಪ್ರಗತಿಯಿಂದ ಈ ಗೆರೆಗಳು ಅಳಿಸಿಹೋಗುತ್ತಿದೆಯಾದರೂ, ಅಭಿವೃದ್ಧಿ ಹೊಂದಿದವರೆಂದು, ನಾಗರೀಕರೆಂದೂ ಬೀಗುವ ಬಿಳಿಯರ ಮನಃಸ್ಥಿತಿ ಇನ್ನೂ ಬದಲಾಗಿಲ್ಲ. ಹೀಗೆ ಬಿಳಿಯರು ಕರಿಯರನ್ನು ತುಚ್ಛವಾಗಿ ಕಾಣುವುದನ್ನು ರೇಸಿಸಮ್ ಎನ್ನುತ್ತಾರೆ. ತಮ್ಮನ್ನು ತಾವು ನಾಗರೀಕರೆಂದು ಕರೆದುಕೊಳ್ಳುವ ಬಿಳಿಯರು ಈ ಅನಾಗರೀಕ ಪದ್ಧತಿಯನ್ನು ರೂಢಿಸಕೊಂಡು ಬಂದಿದ್ದಾರೆ. ದಕ್ಷಿಣಾಫ್ರಿಕಾಗೆ ಸ್ವತಂತ್ರ್ಯ ಬರುವುದರೊಂದಿಗೆ, ಜಗತ್ತಿನಲ್ಲಿ ರೇಸಿಸಮ್ ಅನ್ನುವುದು ಕೊನೆಗೊಂಡಿತು ಎಂದು ಹೇಳಲಾಗುತ್ತಿದೆಯಾದರೂ, subtle ಆಗಿ ಅದು ಜಾರಿಯಲ್ಲಿದ್ದೇ ಇದೆ.

ಅಮೆರಿಕಾ, ಬ್ರಿಟನ್, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ದಕ್ಷಣಾಫ್ರಿಕಾ ಈ ಎಲ್ಲಾ ತಥಾಕಥಿತ ಮುಂದುವರೆದ ದೇಶಗಳಲ್ಲಿಯೂ ಇದು ಇಂದಿಗೂ ಮುಂದುವರೆದಿದೆ. ಇನ್ನು ಇದೇ ಮೂಸೆಯಲ್ಲಿ ನಾವು ಆಸ್ಟ್ರೇಲಿಯಾವನ್ನು ಪರಿಗಣಿಸಿದರೆ, ಅಲ್ಲೂ ಇದೇ ಕಥೆ. ನಮಗೆಲ್ಲರಿಗೂ ಕಾಣಿಸುವುದೂ, ಅನುಭವಕ್ಕೆ ಬಂದಿರುವ ಆಸ್ಟ್ರೇಲಿಯನ್ನರ ಇಂತಹ ಮನೋಭಾವವೆಂದರೆ ಕ್ರಿಕೆಟ್ನಲ್ಲಿ. ಇದು ನಮಗೆಲ್ಲರಿಗೂ ತಿಳಿದಿರುವುದೇ. ಅವರು ಏನನ್ನು ಬೇಕಾದರೂ ಸಹಿಸುತ್ತಾರಾದರೂ, ಅವರು ನಮಗೆ ಮಾಡಿದುದನ್ನು ಅವರಿಗೆ ಅದೇ ರೀತಿಯಲ್ಲಿ ಮರಳಿಸುವುದನ್ನು ಮಾತ್ರ ಅವರು ಸಹಿಸಲಾರರು. ಉದಾಹರಣೆಗೆ ಇತ್ತೀಚಿನ ಸೈಮಂಡ್ಸ್-ಹರ್ಭಜನ್ ಸಿಂಗ್ ಗಲಾಟೆಯನ್ನೇ ತೆಗೆದುಕೊಳ್ಳಬಹುದು. ಇದು ಅವರ ಜಾತ್ಯಹಂಕಾರಕ್ಕೆ ಒಂದು ಸ್ಪಷ್ಟ ನಿದರ್ಶನ. ಹಾಗೆ ನೋಡಿದರೆ ಆಸ್ಟ್ರೇಲಿಯಾದ ಇತಿಹಾಸವೇ ರೇಸಿಸ್ಟ್ ದಬ್ಬಾಳಿಕೆಯ ಇತಿಹಾಸ. ಆಸ್ಟರೇಲಿಯಾದ ಮೂಲನಿವಾಸಿಗಳು ಈ ಬಿಳಿಯರಲ್ಲ. ಮೂಲವಾಗಿ ಆಸ್ಟ್ರೇಲಿಯಾ ಕರಿಯ ಬುಡಕಟ್ಟಿನವರ ದೇಶ. ಅವರನ್ನು ಅಬಾರಿಜಿನ್ಸ್ ಎನ್ನುತ್ತಾರೆ. ಬಿಳಿಯರು ಅಮೆರಿಕಾಗೆ ಹೋಗಿ ನೆಲಸಿದಂತೆ ಇಲ್ಲಿಗೂ ಬಂದು ನೆಲಸಿ ಇಲ್ಲಿ ಅಬಾರಿಜಿನ್ಸ್ ಬುಡಕಟ್ಟಿನವರ ಮೇಲೆ ಸವಾರಿ ಮಾಡಿ, ಇದು ತಮ್ಮದೇ ನೆಲವೆಂದು ಸಾರಿ ಹೇಳಿದರು. ಇಂದು ಅತ್ಯಂತ ಚಿಕ್ಕ ಮೈನಾರಿಟಿ ಆಗಿರುವ ಈ ಅಬಾರಿಜಿನ್ಸ್ಗೆ ಇಂದಿಗೂ ಆಸ್ಟ್ರೇಲಿಯಾದಲ್ಲಿ ಸಮಾನ ಅವಕಾಶಗಳಿಲ್ಲ. ಇದು ಅವರ ಇತಿಹಾಸ ಮತ್ತು ವರ್ತಮಾನವೂ ಆಗಿದೆ.ರೇಸಿಸಮ್ ಅನ್ನು ಖಂಡಿಸಿ ವಿಶ್ವಸಂಸ್ಥೆಯೂ ಸೇರಿ ಅನೇಕ ಸಂಸ್ಥೆಗಳಲ್ಲಿ, ದೇಶಗಳಲ್ಲಿ ಠರಾವುಗಳು ಪಾಸಾಗಿವೆ. ರೇಸಿಸಮ್ ಇಂದು out of fashion. ಬಹಿರಂಗವಾಗಿ ಅದನ್ನು ಪಾಲಿಸ ಹೊರಟರೆ ಸಮಾಜದ ಮತ್ತು ವಿಶ್ವಸಮುದಾಯದ ನಿಂದನೆಗೆ ನೀವು ಗುರಿಯಾಗಬೇಕಾಗುತ್ತದೆ. ನಿಮ್ಮನ್ನು ಅನಾಗರೀಕರೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಬಹಿರಂಗವಾಗಿ ಇಂದು ರೇಸಿಸಮ್ ಅನ್ನುವುದು ಎಲ್ಲಿಯೂ ಇಲ್ಲ. ಆದರೆ, subtle ಆಗಿ ಇದು ಜಾರಿಯಲ್ಲಿದ್ದೇ ಇದೆ. ಹಲವಾರು ಅಂತರಾಷ್ಟ್ರೀಯ ವಿವಾದಗಳಲ್ಲಿ ಬಿಳಿಯರೇ ಸರಿ ಎಂದು ವಾದ ಮಾಡುವುದರಿಂದ ಹಿಡಿದು, ಸರ್ಕಾರದವರೆಗೂ ಇದನ್ನು ನಾವು ಕಾಣಬಹುದು. ಕರಿಯ ಒಬಾಮಾ ಅಮೆರಿಕಾದ ಅಧ್ಯಕ್ಷನಾಗಿರುವುದು ನಿಜವಾದರೂ, ಬಿಳಿಯರ ಆ ರೇಸಿಸ್ಟ್ ಮನೋಧರ್ಮ ಇನ್ನೂ ಬದಲಾಗಿಲ್ಲ.
ಈ ಎಲ್ಲಾ ದಾಳಿಯ ಪ್ರಕರಣಗಳಲ್ಲಿಯೂ ಕೆಲಸ ಮಾಡುತ್ತಿರುವುದು ಇದೇ ಮನೋಭಾವ. ಈ ದಾಳಿಗಳಿಗೆ ಬರಿಯ ರೇಸಿಸಮ್ ಕಾರಣವಲ್ಲ, ಬದಲಿಗೆ ಇದೊಂದು ಜಟಿಲ ಸಮಸ್ಯೆ. ಇದಕ್ಕೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಕಾರಣಗಳಿವೆ. ಅಸಲಿಗೆ ಭಾರತೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಆಸ್ಟ್ರೇಲಿಯಾಕ್ಕೆ ಯಾಕೆ ಹೋಗುತ್ತಾರೆ? ಇದಕ್ಕೆ ಮುಖ್ಯ ಕಾರಣ ನಮ್ಮವರ ಫಾರಿನ್ ಮೋಹ. ಉನ್ನತ ವ್ಯಾಸಂಗ ಫಾರಿನ್ನಲ್ಲಿ ಮಾಡಿದರೇನೆ ಅದಕ್ಕೆ ಬೆಲೆ ಎಂಬ ಭಾವನೆ. ಅಲ್ಲಿ ಏನೇ ಓದಲಿ ಬಂದ ಮೇಲೆ ಫಾರಿನ್ ರಿಟರ್ನ್ಡ್ ಎಂದು ಹೇಳಿಕೊಂಡರೆ ನಮ್ಮ ಸಮಾಜದಲ್ಲಿ ಅವರಿಗೆ ಸಿಗುವ ಬೆಲೆಯೇ ಬೇರೆ. ಇದು ನಮ್ಮಲ್ಲಿರುವ ಕೀಳರಿಮೆಯ ಅಥವಾ ಬಿಳಿಯದನ್ನೆಲ್ಲವನ್ನೂ ನಾವಿಂದಿಗೂ ಉತ್ತಮವೆಂದು ಭಾವಿಸುವುದರ ಸಂಕೇತವಾ? ಇಂದು ಆಸ್ಟ್ರೇಲಿಯಾದಲ್ಲಿ ಸುಮಾರು 4-5 ಲಕ್ಷ ವಿದೇಶೀ ವಿದ್ಯಾರ್ಥಿಗಳಿದ್ದರೆ, ಅದರಲ್ಲಿ ಭಾರತೀಯರ ಸಂಖ್ಯೆ, ಸುಮಾರು 2 ಲಕ್ಷ. ಯಾಕೆ ಭಾರತೀಯರು ಹೀಗೆ ಆಸ್ಟ್ರೇಲಿಯನ್ ವಿಶ್ವವಿದ್ಯಾಲಯಗಳನ್ನು ಮುತ್ತಿಕೊಳ್ಳುತ್ತಿದ್ದಾರೆ?
ಆಸ್ಟ್ರೇಲಿಯಾ ಅಸಲಿಗೆ ಒಂದು ಮರುಭೂಮಿ. ಅಲ್ಲಿ ಅಂತಹ ಹೇಳಿಕೊಳ್ಳುವಂತಹ ಯಾವುದೇ ಉದ್ಯಮವಿಲ್ಲ. ಅವರ ಅರ್ಥವ್ಯವಸ್ಥೆ ನಿಂತಿರುವುದೇ ಪ್ರವಾಸೋದ್ಯಮ ಮತ್ತು ಶಿಕ್ಷಣದ ಮೇಲೆ. ಅಲ್ಲಿ ಶಿಕ್ಷಣ ಎನ್ನುವುದು ಒಂದು ರಾಷ್ಟ್ರೀಯ ಉದ್ಯಮ. ದರಗಳು ಕೊಂಚ ದುಬಾರಿಯಾದರೂ ಆಸ್ಟ್ರೇಲಿಯಾದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಸಾಧಾರಣವಾಗಿ ಉನ್ನತ ವ್ಯಾಸಂಗಕ್ಕೆ ಎಲ್ಲರೂ ಅಮೆರಿಕಾ, ಇಂಗ್ಲೆಂಡ್ಗೆ ಹೋಗುತ್ತಾರಲ್ಲವೇ? ಅದಲ್ಲವೇ favoured destinations? ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿಲ್ಲವೇ ಇಲ್ಲವಲ್ಲ? ಮತ್ಯಾಕೆ ಅಷ್ಟು ಮಂದಿ ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾದ ತೀರ ತಾಕುತ್ತಿದ್ದಾರೆ? ಉನ್ನತ ವ್ಯಾಸಂಗಕ್ಕೆ ಇಂದಿಗೂ ಅಮೆರಿಕಾ, ಇಂಗ್ಲೆಂಡ್ಗಳೇ favoured destinationಗಳು, no doubt. ಆದರೆ ಆಸ್ಟ್ರೇಲಿಯಾದಲ್ಲಿ ಸಿಗುವಷ್ಟು ತರಾವರಿಯ ಕೋರ್ಸ್ಗಳು ನಿಮಗೆಲ್ಲಿಯೂ ಸಿಗುವುದಿಲ್ಲ. ಅಲ್ಲಿ ಕ್ಷೌರ ಮಾಡುವುದರಿಂದ ಹಿಡಿದು ಬ್ಯೂಟಿಷಿಯನ್ ಕೋರ್ಸ್, ಪಕ್ಷಿ ವೀಕ್ಷಣೆಯ ಆರ್ನಿಥಾಲಜಿ , ಮರೈನ್ ಇಂಜಿನೀರಿಂಗ್, ಹಾವುಗಳ ಸ್ಟಡಿ ಹೆಪ್ಟಾಲಜಿ, ರೋಬಾಟಿಕ್ ಇಂಜಿನೀರಿಂಗ್ವರೆಗೂ ತರಾವರಿ ವಿಷಯಗಳ ಕೋರ್ಸ್ಗಳು ಲಭ್ಯವಿದೆ. ಈ ಸಬ್ಜೆಕ್ಟುಗಳು ಇಲ್ಲಿನ ಹಲವರಿಗೆ ಗೋತ್ತೇ ಇಲ್ಲ. ಅಲ್ಲಿಗೆ ಇವುಗಳ ಕುರಿತ ಕೋರ್ಸ್ಗಳು ಇಲ್ಲಿ ಇರುತ್ತದೆಯೇ? ಭಾರತೀಯರು ಇಂತಹ ಚಿತ್ರವಿಚಿತ್ರ ಸಬ್ಜೆಕ್ಟುಗಳ ಕೋರ್ಸ್ಗಳು ಇಲ್ಲಿ ಸಿಗದೇ ಇದ್ದಾಗ ಆಸ್ಟ್ರೇಲಿಯಾದ ತೀರ ತಾಕುತ್ತಾರೆ. ನನ್ನ ಗೆಳೆಯನೊಬ್ಬನಿಗೆ ರೋಬೋಟ್ಗಳು ಮತ್ತು ಅವುಗಳ ತಯಾರಿಯಲ್ಲಿ ಎಲ್ಲಿಲ್ಲದ ಆಸಕ್ತಿ. ಆತ ಪಿಯುಸಿ ಆದ ಮೇಲೆ ರೋಬೋಟಿಕ್ ಇಂಜಿನೀರಿಂಗ್ ಮಾಡಲು ಇಚ್ಛಿಸಿದ. ಆದರೆ ಆ ಸಬ್ಜೆಕ್ಟಿನಲ್ಲಿ ಇಂಜಿನೀರಿಂಗ್ ಕೋರ್ಸ್ ಇಡೀ ಭಾರತದಲ್ಲೆಲ್ಲೂ ಸಿಗಲಿಲ್ಲ. ಸಿಕ್ಕಿದ್ದು ಆಸ್ಟ್ರೇಲಿಯಾದಲ್ಲಿ. ಈಗ ಆತ ಆಸ್ಟ್ರೇಲಿಯಾದಲ್ಲಿ ರೋಬೋಟಿಕ್ ಇಂಜಿನೀರಿಂಗ್ ಓದುತ್ತಿದ್ದಾನೆ. ಆಸ್ಟ್ರೇಲಿಯಾದ ಓದು ಆಕರ್ಷಕವಾಗಲು ಇದು ಮುಖ್ಯ ಕಾರಣ. ಇನ್ನೊಂದು ಕಾರಣವೆಂದರೆ, ಅಲ್ಲಿ ಓದುತ್ತಿದ್ದರೆ, ಅಮೆರಿಕಾ ಮತ್ತು ಇಂಗ್ಲೆಂಡ್ಗಳಿಗೆ ಸುಲಭವಾಗಿ ವೀಸಾ ಸಿಗುತ್ತದೆ. ಹೀಗಾಗಿ ಅಮೆರಿಕಾಗೆ ಹೋಗಲು ಅವಕಾಶ ಸಿದಿದ್ದವರು ಆಸ್ಟ್ರೇಲಿಯಾಕ್ಕೆ ಹೋಗುತ್ತಾರೆ. ಹಾಗಾಗಿ ದುಬಾರಿಯಾದರೂ ಭಾರತೀಯರು ಆಸ್ಟ್ರೇಲಿಯಾಕ್ಕೆ ಹೋಗಿ ಶಿಕ್ಷಣ ಪಡೆಯುತ್ತಾರೆ.

ಹಾಗೆ ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡುವವರು ಸಾಧಾರಣವಾಗಿಯೇ ಭಾರತದ ಧನವಂತರ ಮಕ್ಕಳಾಗಿರುತ್ತಾರೆ. ಇವರದು ಅಲ್ಲಿಯೂ luxury ಜೀವನವೇ. ಇನ್ನು ಅಷ್ಟೇನೂ ಸ್ಥಿತಿವಂತರಲ್ಲದವರು, ಅಲ್ಲಿನ ಪೆಟ್ರೊಲ್ ಬಂಕ್ಗಳಲ್ಲೋ, ದಿನಸಿ ಅಂಗಡಿಗಳಲ್ಲೋ, ಅಥವಾ ಟ್ಯಾಕ್ಸಿ ಡ್ರೈವರ್ಗಳಾಗೋ ಕೆಲಸ ಹಿಡಿಯುತ್ತಾರೆ. ಇದೇ ಕೆಲಸ ಇಲ್ಲಿ ಮಾಡಲು ಹಿಂಜರಿಯುವವರು ಅಲ್ಲಿ ನಿಸ್ಸಂಕೋಚವಾಗಿ ಮಾಡುತ್ತಾರೆ. ಇನ್ನೊಂದೆಡೆ, ಆಸ್ಟ್ರೇಲಿಯಾದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ರೆಸೆಷನ್ ಅದನ್ನು ಇನ್ನಿಲ್ಲದಂತೆ ಹೊಡೆದುರುಳಿಸಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಅದರ ಫಲವಾಗಿ ಸಮಾಜದಲ್ಲಿ ಅಸಮಾಧಾನ, ಅನ್ನುವುದು ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಿದೆ. ಅವರ frustration ಅನ್ನು ಹೊರಹಾಕುವುದಕ್ಕೆ ಒಂದು ventಗಾಗಿ ಅವರು ಹುಡುಕಾಡುತ್ತಿರುತ್ತಾರೆ. ಅದು ಸಹಜ ಮಾನವ ಸೈಕಾಲಜಿ. ಹೀಗೆ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿಯಲ್ಲಿಯೇ ಅವರು ಭಾರತೀಯ ವಿದ್ಯಾರ್ಥಿಗಳು ನಡೆಸುತ್ತಿರುವ ಜೀವನವನ್ನು ನೋಡುತ್ತಾರೆ. ಅವರಿಗದು ನೆಮ್ಮದಿಯ ಜೀವನವೆನಿಸುತ್ತದೆ. ಇನ್ನು ಕೆಲಸಕ್ಕೆ ಹೋಗುವವರನ್ನು ನೋಡಿದರಂತೂ, ಅವರ ಕೆಲಸವನ್ನು ಇವರು ಎಲ್ಲಿಂದಲೋ ಬಂದು ದೋಚಿಕೊಳ್ಳುತ್ತಿದ್ದಾರೆಂಬ ಭಾವನೆ ಮೂಡುತ್ತದೆ. ಈ ಭಾವನೆ ಅಸಮಾಧಾನ, ಹಗೆಯ ರೂಪ ಪಡೆಯ ತೊಡಗುತ್ತದೆ. ಇನ್ನು ಜಗತ್ತಿನಾದ್ಯಂತ ಭಾರತೀಯರು ಹೊರಗುತ್ತಿಗೆ ಮೂಲಕ ಅಥವಾ ಪ್ರತ್ಯಕ್ಷವಾಗಿ ಬಂದು ತಮ್ಮ ದೇಶದ ಯುವಕರ ಕೆಲಸವನ್ನು ಕಸಿದುಕೊಳ್ಳುತ್ತಿದ್ದಾರೆಂಬ ಭಾವನೆ ಇಂದು ಒಬಾಮಾನ ಬಾಯಿಯಲ್ಲೂ ಬರುವಷ್ಟು ಸಾರ್ವತ್ರಿಕವಾಗಿದೆ. ಹಾಗಾಗಿ ಈ ಜನರಿಗೆ ತಮ್ಮ ಸಮಸ್ಯೆಗಳಿಗೆಲ್ಲಾ ಈ ಭಾರತೀಯರೇ ಕಾರಣವೆಂದು ಅನಿಸಲಾರಂಭಿಸುತ್ತದೆ. ತಾವು ಬಿಳಿಯರು, ತಾವು ಪ್ರಗತಿ ಹೊಂದಿದವರೆಂದೂ, ಉತ್ತಮರೆಂದೂ ತಲೆಗೆ ತುಂಬಿಸಿ ಕೊಂಡಿರುತ್ತಾರೆ. ಈ ಮನೋಭಾವದಿಂದಿರುವವರಿಗೆ ಬದಲಾದ ಪರಿಸ್ಥಿತಿಯಲ್ಲಿ ಒಂದು , inferiority-complex ಕಾಡುತ್ತಿರುತ್ತದೆ. ಅದನ್ನವರು ಅರಗಿಸಿಕೊಳ್ಳಲಾರರು, ಸಹಿಸಲಾರರು. ಆಗ ಅವರು ಅವರ frustration ಅನ್ನು ಭಾರತೀಯರ ಮೇಲೆ ಹಲ್ಲೆ ಮಾಡುವ ಮೂಲಕ ವ್ಯಕ್ತಗೊಳಿಸಿಕೊಳ್ಳುತ್ತಾರೆ. ಆದರೆ ಆ ಸಂದರ್ಭದಲ್ಲಿ ಇದಲ್ಲ ವ್ಯಕ್ತವಾಗುವುದು, ಬದಲಿಗೆ ಅವರ ರೇಸಿಸ್ಟ್ ಮನೋಧರ್ಮ ವ್ಯಕ್ತವಾಗುತ್ತದೆ. ಕರಿಯನೆಂದೂ, ಪಾಕಿಯೆಂದೂ ಜರಿಯುತ್ತಾರೆ, ಹೊಡೆಯುತ್ತಾರೆ. ಇದೊಂದು ರೀತಿ ಮಹಾರಾಷ್ಟ್ರದ ರಾಜ್ ಠಾಕ್ರೆ ಬಿಹಾರಿಗಳ ಮೇಲೆ ಕೂಗಾಡಿದಂತೆ. ಹೀಗೆ ಹಲವಾರು ಕಾರಣಗಳಿಂದ ಮೂಟೆಕಟ್ಟಿಕೊಂಡ ಭಾರತೀಯರೆಡಗಿನ ಅಸಮಾಧಾನ ಮೂಟೆಯೊಡೆದಾಗ ಅವರ ರೇಸಿಸ್ಟ್ ಮನೋಭಾವ ತಾಂಡವವಾಡುತ್ತದೆ. ರಾಮಕೃಷ್ಣಪರಮಹಂಸರು ಒಂದು ಕಡೆ ಹೇಳಿದ ಹಾಗೆ ನೆನಪು, ದುಡ್ಡು ಬಂದಾಗ ಮನುಷ್ಯ ಬದಲಾಗುವುದಿಲ್ಲ, ಬದಲಿಗೆ ಆತನ ಮುಖವಾಡ ಕಳಚಿ ಬೀಳುತ್ತದೆಂದು. ಇಲ್ಲಿ ನಡೆಯುತ್ತಿರುವುದೂ ಅದೇ.
ಈ ಹೊಸ ಯುಗದಲ್ಲಿ, ಇಂತಹ ರೇಸಿಸ್ಟ್ ಮನೋಧರ್ಮ ಕೆಲಸಕ್ಕೆ ಬರುವುದಿಲ್ಲ. ಇಂದಿನ ಪರಸ್ಪರ ಅವಲಂಬನೆಯ ಯುಗದಲ್ಲಿ, ಒಂದು ದೇಶ ಅಥವಾ ಒಂದು ಗುಂಪನ್ನು ಇನ್ನೊಬ್ಬರ ಸವಾರಿ ಮಾಡಲು ಅವಕಾಶ ಕೊಡುವ, ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿಕಟ್ಟುವ ಯಾವುದೇ ವಿಶ್ವವ್ಯವಸ್ಥೆ ಕುಸಿದು ಬೀಳುವುದು ಖಚಿತ. ನಮ್ಮ ಸಮಸ್ಯೆಗಳನ್ನು ನಾವು ಜೊತೆಯಾಗಿ ಬಗೆಹರಿಸಬೇಕು, ಪ್ರಗತಿಯೆನ್ನುವುದನ್ನು ಸಮಾನವಾಗಿ ಹಂಚಿ ತಿನ್ನಬೇಕು. ಆದರೆ ಮುಂದುವರೆದ ದೇಶಗಳಿಗೆ ಈ ಮನೋಭಾವವಿದೆಯೇ? ಅದಂತೂ ಪ್ರಶ್ನಾರ್ಥಕ.

ವಿದೇಶಾಂಗವೆಂಬ ಸೋಮಾರಿ ಕತ್ತೆ!


ಸರಿಸುಮಾರು ಎರಡ್ಮೂರು ತಿಂಗಳುಗಳಿಂದ ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ರೇಸಿಸ್ಟ್ ದಾಳಿಗಳ ಸುದ್ದಿ ಬರುತ್ತಲೇ ಇವೆ. ಅಲ್ಲಿ ಕಳೆದ ಆರು ತಿಂಗಳುಗಳ ಅವಧಿಯಲ್ಲಿ, ಇಂತಹ 75 ಭಾರತೀಯರ ಮೇಲಿನ ಹಲ್ಲೆ
ಪ್ರಕರಣಗಳು ನಡೆದಿವೆ. ಇನ್ನೂ ನಡೆಯುತ್ತಲೇ ಇವೆ. ಇದೇನೇ ಇದ್ದರೂ ಆಸ್ಟ್ರೇಲಿಯಾ ದೇಶವೇ ರೇಸಿಸ್ಟ್ ಅಲ್ಲ. ಹಾಗಂತ ನಾವು ಹೇಳಲೂಬಾರದು. ಇದು ಅಲ್ಲಿನ ಕೆಲವು ಕಿಡಿಗೇಡಿಗಳ ಕೆಲಸ. ಆದರೆ ಅಲ್ಲಿನ ಸರ್ಕಾರದ ತಪ್ಪಿರುವುದು ಇದನ್ನು ಗುರುತಿಸಿ, ಕ್ರಮ ಕೈಗೊಳ್ಳದೇ ಇರುವುದರಲ್ಲಿ. ಭಾರತ ಈ ವಿಷಯವನ್ನು
ಗಂಭೀರವಾಗಿಯೇ ತೆಗೆದುಕೊಂಡಿದೆಯಾದರೂ,
ರಿಜಲ್ಟುಗಳೇನೂ ಇಲ್ಲ. ನಮ್ಮ ಸರ್ಕಾರ ಇಲ್ಲಿಂದ ಪುಂಖಾನುಪುಂಖ ಹೇಳಿಕೆಗಳನ್ನು ನೀಡುತ್ತಿದೆಯಾದರೂ ಅಲ್ಲಿ ಆಸ್ಟ್ರೇಲಿಯಾದಲ್ಲಿ ಅವು ಮಾರ್ದನಿಸುತ್ತಲೇ ಇಲ್ಲ. ಒಟ್ಟಾರೆಯಾಗಿ ಅಲ್ಲಿನ ಭಾರತೀಯ ವಿದ್ಯಾರ್ಥಿ ಸಮೂಹ ಭಾರತ ಸರ್ಕಾರದ ಪ್ರತಿಕ್ರಿಯೆಯಿಂದ ತೃಪ್ತರಾಗಿಲ್ಲ. ಅವರಲ್ಲಿ ಒಂದು frustration ಮನೆಮಾಡಿದೆ.

ಹೀಗಿರುವಾಗ ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿಗಳು ಶುರುವಾದ ಸುಮಾರು ಮೂರು ತಿಂಗಳುಗಳಿಗೆ, ನಮ್ಮ ವಿದೇಶಾಂಗ ಸಚಿವರು ಅಲ್ಲಿಗೆ ಐದು ದಿನಗಳ ಪ್ರವಾಸ ಕೈಗೊಂಡು ಹಿಂತಿರುಗಿದ್ದಾರೆ. ಇರಲಿ better late than never. ನಮ್ಮ ಕೃಷ್ಣರವರು ಈಗ ಅಲ್ಲಿಗೆ ಹೋಗಿ ಮಾಡುವುದಾದರೂ ಏನಿತ್ತು? ಬಹಳಷ್ಟಿತ್ತು. ರಾಜತಾಂತ್ರಿಕ ಕೆಲಸ-ಒತ್ತಡ-ಕಾರ್ಯಕ್ರಮಗಳಲ್ಲದೆ, ಇವೆಲ್ಲಕ್ಕಿಂತಲೂ ಮಿಗಿಲಾದ ಜವಾಬ್ದಾರಿಯೊಂದು ಕೃಷ್ಣರ ಹೆಗಲ ಮೇಲಿತ್ತು. ಅದು ಅಲ್ಲಿನ ಭಾರತೀಯ ವಿದ್ಯಾರ್ಥಿ ಸಮೂಹದ frustration ಅನ್ನು ಹೋಗಲಾಡಿಸುವುದು. ಅದಕ್ಕಿರುವುದು ಒಂದೇ ದಾರಿ - ಅವರ ಎಲ್ಲ ಸಮಸ್ಯೆಗಳನ್ನು ಕೂತು ಕಿವಿಗೊಟ್ಟು ಆಲಿಸುವುದು. ಅವರ ಸಮಸ್ಯೆಗಳನ್ನು ಆಲಿಸಲೂ ಒಬ್ಬ ಭಾರತೀಯ ಹಿರಿಯನಿಲ್ಲ ಅಲ್ಲಿ. ಎಸ್ಸೆಂ.ಕೃಷ್ಣ ಒಬ್ಬ ಮನೆಹಿರಿಯನಂತೆ ಅವರಿಗೆ ಸಾಂತ್ವನ, ಧೈರ್ಯ ಹೇಳಬೇಕಿತ್ತು, ಅವರ ಕೈಲಾದ ಮಟ್ಟಿಗೆ ಅದನ್ನು ನಿರ್ವಹಿಸಿದ್ದಾರೆ ಕೂಡ. ಅಲ್ಲಿನ ಭಾರತೀಯ ವಿದ್ಯಾರ್ಥಿ ಸಮೂಹ ಕಳೆದೆರಡ್ಮೂರು ತಿಂಗಳುಗಳಿಂದ ಅನುಭವಿಸಿದ ತಬ್ಬಲಿತನಕ್ಕೆ ಉತ್ತರಿಸಬೇಕಿತ್ತು ಕೃಷ್ಣ. ಆದರೆ ಇದು ನಡೆಯಲೇ ಇಲ್ಲ ಬಿಡಿ. ಕೃಷ್ಣರ ಭೇಟಿ-ಮಾತುಕತೆಗಳು ಆಸ್ಟ್ರೇಲಿಯಾದ ಭಾರತೀಯರೊಂದಿಗೆ ಆತ್ಮೀಯವಾಗಿಯೂ, ಸಾಂತ್ವನಪೂರಕವಾಗಿಯೂ ಇರಬೇಕಿತ್ತು. ಆದರೆ ಅಲ್ಲಿಯೂ ತಮ್ಮ ಯೂರೋಪಿಯನ್, ಹೈಫೈ ರಾಜ-ಗಜ ಗಾಂಭೀರ್ಯವನ್ನು ಬಿಟ್ಟುಕೊಡದ ಕೃಷ್ಣ ಬಿಗುಮಾನದಿಂದಿದ್ದು ತಿರುಗಿ ಮರಳಿದ್ದಾರೆ ಅಷ್ಟೆ! ಆಸ್ಟ್ರೇಲಿಯಾದ ಭಾರತೀಯ ವಿದ್ಯಾರ್ಥಿ ಸಮೂಹ ಸ್ಪಷ್ಟವಾಗಿ ಹತ್ತು ಬೇಡಿಕೆಗಳನ್ನು ನಮ್ಮ ಸರ್ಕಾರ ಮುಂದಿಟ್ಟಿದ್ದರು. ಅದೆಲ್ಲವೂ ಕಿವುಡನ ಮುಂದೆ ಕಿನ್ನರಿ ಬಾರಿಸಿದಂತಾಯಿತು.


ಮೊನ್ನೆ ಉತ್ತರ ಕೊರಿಯಾಗೆ ಧಿಢೀರ್ ಭೇಟಿ ಕೊಟ್ಟರು ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್! ಹೌದು ಹೋಗಿದ್ದು ಬಿಲ್ ಕ್ಲಿಂಟನ್ನೇ, ಉತ್ತರ ಕೊರಿಯಾಗೇ ಸ್ವಾಮಿ! ಅಮೆರಿಕಾ ಮತ್ತು ಉತ್ತರ ಕೊರಿಯಾದ ನಡುವಿನ ಸಂಬಂಧಗಳ ಹಿನ್ನೆಲೆ-ಮುನ್ನೆಲೆಗಳು ತಿಳಿದಿರುವ ಯಾರಿಗೇ ಆದರೂ ಇದು ಆಶ್ಚರ್ಯ ತರುವ ವಿಚಾರವೇ ಆಗಿತ್ತು. ಅಸಲಿಗೆ ಇದ್ದಕ್ಕಿದ್ದಂತೆ ಕ್ಲಿಂಟನ್ ಉತ್ತರ ಕೊರಿಯಾಗೆ ಹೋಗಿದ್ದಾದರೂ ಯಾಕೆ? ಅದಕ್ಕೊಂದು ಕಥೆಯಿದೆ. ಲೌರಾ ಲಿಂಗ್ ಎಂಬ ಮೂವತ್ತೆರಡು ವರ್ಷದ ಮತ್ತು ಯುನ ಲೀ ಎಂಬ ಮೂವತ್ತಾರು ವರ್ಷದ ಇಬ್ಬರು ಮಹಿಳಾ ಅಮೆರಿಕನ್ ಪತ್ರಕರ್ತರನ್ನು ಉತ್ತರ ಕೊರಿಯಾದ ಸರ್ಕಾರ ಬಂಧಿಸಿತ್ತು. ಅವರ ಮೇಲಿದ್ದ ಆರೋಪ ದೇಶದೊಳಕ್ಕೆ ಅಕ್ರಮ ನುಸುಳುವಿಕೆ. ಅಸಲು ವಿಷಯವೇ ಬೇರೆಯಿತ್ತು. ಈ ಇಬ್ಬರು ಪತ್ರಕರ್ತರು ಉತ್ತರ ಕೊರಿಯಾದ ರೆಫ್ಯೂಜಿಗಳ ಕುರಿತಾಗಿ ಸಾಕ್ಷಿ ಚಿತ್ರವೊಂದನ್ನು ತಯಾರಿಸುತ್ತಿದ್ದರು. ಇದರಿಂದ ರೇಗಿ ಹೋದ ಉತ್ತರ ಕೊರಿಯಾ ಸರ್ವಾಧಿಕಾರಿ ಸರ್ಕಾರ ಇವರನ್ನು ನ್ಯಾಯಾಲಯದ ಕಟೆಕಟೆಗೆ ತಂದು ನಿಲ್ಲಿಸಿತು. ಇವರನ್ನು ತಪ್ಪಿತಸ್ಥರೆಂದು ಘೋಷಿಸಿದ ನ್ಯಾಯಾಲಯವು 12 ವರ್ಷಗಳ ಕಠಿಣ ಸೆಜೆಯನ್ನ ವಿಧಿಸಿಬಿಟ್ಟತು. ಅಮೆರಿಕಾದ ಸರ್ಕಾರ ಕನುಲಿ ಕೂತಿತು. ಹೇಗಾದರೂ ಮಾಡಿ ತನ್ನ ನಾಗರೀಕರನ್ನು ರಕ್ಷಿಸಲೇಬೇಕೆಂದು ಪಣ ತೊಟ್ಟಂತೆ ಕೆಲಸ ಶುರುವಿಟ್ಟುಕೊಂಡಿತು. ಆದರೆ ಅಲ್ಲೊಂದು ಸಮಸ್ಯೆಯಿತ್ತು ಅಮೆರಿಕಾ ಮತ್ತು ಉತ್ತರ ಕೊರಿಯಾಗಳ ನಡುವೆ ರಾಜತಾಂತ್ರಿಕ ಸಂಬಂದಗಳೇ ಇರಲಿಲ್ಲ. ಹಾಗಾಗಿ ಅಲ್ಲಿಗೆ ಸಂಧಾನಕ್ಕಾಗಿ ಅಮೆರಿಕಾದ ರಾಜತಾಂತ್ರಿಕ ಅಧಿಕಾರಿಗಳು ಹೋಗುವಂತಿರಲಿಲ್ಲ. ಅಮೆರಿಕಾ ಕೈಚೆಲ್ಲಲಿಲ್ಲ. ಹಿತ್ತಲ ಬಾಗಿಲ ಮೂಲಕ ಸಂಧಾನಗಳನ್ನು ಶುರುವಿಟ್ಟುಕೊಂಡಿತು. ಕಡೆಗೆ ಎಲ್ಲವೂ ನಿರ್ಧಾರಿತವಾದ ಮೇಲೆ ಅವರನ್ನು ಬಿಡಿಸಿಕೊಂಡು ಮರಳಿ ಮಾತೃಭೂಮಿಗೆ ಕರೆತರಲು ಆಮೆರಿಕಾದಿಂದ ಯಾರಾದರೂ ಒಬ್ಬರು ಹೋಗಬೇಕಿತ್ತು. ಈ ಕೆಲಸಕ್ಕಾಗಿ ಒಬಾಮಾ ನಿಯೋಜಿಸಿದ್ದು, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನನ್ನು! ಅಮೆರಿಕಾ ತನ್ನ ಪ್ರಜೆಗಳ ಕುರಿತು ತೆಗೆದುಕೊಳ್ಳುವ ಕೇರ್ ಅಂತಹುದು. ಬಿಲ್ ಕ್ಲಿಂಟನ್ ಹೋಗಿ, ಉತ್ತರ ಕೊರಿಯಾದ ಅಧ್ಯಕ್ಷನೊಂದಿಗೆ ಮಾತುಕತೆ ನಡೆಸಿ ಆ ಇಬ್ಬರು ಪತ್ರಕರ್ತೆಯರಿಗೂ ಕ್ಷಮಾಪಣೆ ಕೊಡಿಸಿ, ಅವರನ್ನು ಹೊರತರಿಸಿದರು. ತಕ್ಷಣ ಕ್ಲಿಂಟನ್ ಆಗಮಿಸಿದ್ದ ಫ್ಲೈಟಿನಲ್ಲೇ ಅವರನ್ನು ಅಮೆರಿಕಾಗೆ ಕೊಂಡೊಯ್ಯಲಾಯಿತು. ಕ್ಲಿಂಟನ್ರನ್ನು ನೋಡಿದ ಕೂಡಲೆ ಆ ಪತ್ರಕರ್ತೆಯರ ರಿಯಾಕ್ಷನ್ ಅನ್ನು ನೋಡಬೇಕಿತ್ತು ನೀವು. ಅವರು ಜೈಲಿನಲ್ಲಿ ಅನುಭವಿಸಿದ ದಿಗುಲು, ಒಂಟಿತನ, ತಬ್ಬಲಿತನ್ಗಳೆಲ್ಲವನೂ ದೂರ ಮಾಡಿಬಿಟ್ಟ ಕ್ಲಿಂಟನ್ನನ್ನು ನೋಡಿ ಅವರು ಭಾವಪರವಶರಾದರು. ಆ ಕ್ಷಣ ಅವರು ಕ್ಲಿಂಟನ್ನನ್ನು ಒಬ್ಬ ಸೇವಿಯರ್ ಅಥವಾ ತಂದೆಯ ಸ್ತಾನದಲ್ಲಿಟ್ಟು ನೋಡುತ್ತಿದ್ದರು!

ಇಲ್ಲಿ ಅಮೆರಿಕಾ ಅದರ ಇಬ್ಬರು ಪ್ರಜೆಗಳು ಶತ್ರು ದೇಶವೊಂದರಲ್ಲಿ ತೊಂದರೆಗೆ ಸಿಲುಕಿಕೊಂಡಾಗ ಅದು respond ಮಾಡಿದ ರೀತಿಯನ್ನು ಗಮನಿಸಿ. ಅದೊಂದು paternal gesture. ಅದು ಅಮೆರಿಕಕ್ಕೆ ತನ್ನ ಪ್ರಜೆಗಳ ಕುರಿತಿರುವ ಕಾಳಜಿಯನ್ನು ತೋರಿಸುತ್ತದೆ. ಅಮೆರಿಕಾ ಅನೇಕ ಸಂದರ್ಭಗಳಲ್ಲಿ ಇಂತಹ ಕಾಳಜಿಯನ್ನು ಪ್ರದರ್ಶಿಸಿದೆ. ಯಾವುದೇ ದೇಶದ ಯಾವುದೇ ಮೂಲೆಯಲ್ಲಿ ಅಮೆರಿಕನ್ ಪ್ರಜೆಯೊಬ್ಬನ ಕೊಲೆಯೋ ಮತ್ತೊಂದೋ ಆದರೆ, ಅವರು ಸುಮ್ಮನಿರುವುದಿಲ್ಲ ಆ ಪ್ರಕರಣದ ಸ್ವತಂತ್ರ್ಯ ತನಿಖೆಯನ್ನು FBI ಕೈಗೆತ್ತಿಕೊಳ್ಳುತ್ತದೆ. ಇನ್ನು ಇಸ್ರೇಲ್ ಕೂಡ ಇಂತಹ ಕಾಳಜಿಗೆ ಹೆಸರುವಾಸಿ. 1976ರಲ್ಲಿ ಫ್ರಾನ್ಸ್ನ ವಿಮಾನವೊಂದನ್ನು ಅಪಹರಿಸಿ ಉಗಾಂಡಾಗೆ ಕೊಂಡೊಯ್ಯಲಾಗಿತ್ತು. ಅದರಲ್ಲಿ ಇಇಸ್ರೇಲಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂಬ ಕಾರಣಕ್ಕೆ ಇಸ್ರೇಲ್ ಉಗಾಂಡಾಗೆ ತೆರಳಿ ಕಮ್ಯಾಂಡೋ ಕಾರ್ಯಾಚರಣೆ ನಡೆಸಿ ಆ ವಿಮಾನವನ್ನು ರಕ್ಷಿಸಿತ್ತು. ಇದೇ ಎಂಟೆಬೆ ಆಪರೇಷನ್ ಎಂದು ಹೆಸರಾಯಿತು. ಅಷ್ಟ್ಯಾಕೆ ಮೊನ್ನೆಯ ಮುಂಬಿಯಿ ನರಮೇಧದಲ್ಲಿ ಅಮೆರಿಕನ್ನರು, ಇಸ್ರೇಲೀಯರನ್ನು ಟಾರ್ಗೆಟ್ ಮಾಡಿ ಕೊಲ್ಲಲಾಗಿತ್ತು. ಅಮೆರಿಕನ್ ಮತ್ತು ಇಸ್ರೇಲೀ ಅಧಿಕಾರಿಗಳು ಈ ನರಮೇಧದ ಸ್ವತಂತ್ರ್ಯ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಅವರ ತನಿಖೆಯು ಭಾರತಕ್ಕೆ ಅನೇಕ ರೀತಿಯಲ್ಲಿ ಸಹಾಯ ಮಾಡಿದೆ. ಅದ್ಸರಿ ಭಾರತ ಹಾಗೂ ಭಾರತೀಯರ ವಿಷಯದಲ್ಲೂ ಹೀಗಾಗುತ್ತಿದೆಯೇ? ಪ್ರಶ್ನೆ ಕೇಳಿದವರು ಗುಗ್ಗುಗಳು! ಆ ನಮ್ಮ ಸೌತ್ ಬ್ಲಾಕ್ ಇದೆಯಲ್ಲ ಅದೊಂದು ಸೋಮಾರಿ ಕತ್ತೆ! ಅದನ್ನು ನಿದ್ದೆಯಿಂದ ಎಚ್ಚರಿಸುವುದು ಅಷ್ಟು ಸುಲಭವಲ್ಲ. ಭಾರತೀಯರನೇಕರು ಅನೇಕ ದೇಶಗಳಲ್ಲಿ ತೊಂದರೆಗಳಿಗೆ ಸಿಲುಕಿಕೊಂಡದ್ದಿದೆ, ಆದರೆ ಈ ಕತ್ತೆ ಮಾತ್ರ ನಿದ್ದೆಯಿಂದೆಚ್ಚೆತ್ತದ್ದು ತೀರ ವಿರಳ. ಕೆಲವು ತಿಂಗಳ ಹಿಂದೆ ಭಾರತ ಮೂಲದ ಹಡಗನ್ನು ಸೋಮಾಲಿಯಾ ತೀರದಲ್ಲಿ ಪೈರೇಟ್ಸ್ ಹೈಜಾಕ್ ಮಾಡಿದ್ದರು. ಅದರಲ್ಲಿ 19 ಜನ ಭಾರತೀಯರು ಸಿಲುಕಿಕೊಂಡಿದ್ದರು. ಇತ್ತ ಕ್ಯಾಪ್ಟನ್ನ ಪತ್ನಿ ಭಾರತ ಸರ್ಕಾರ ತನಗೆ ತನ್ನ ಪತಿಯನ್ನು ಬಿಡಿಸಿ ತರುವಲ್ಲಿ ಸಹಾಯ ಮಾಡಬೇಕೆಂದು ಅಂಗಲಾಚುತ್ತಾ ದೆಹಲಿಯೆಲ್ಲಾ ಮೂರು ರೌಂಡು ಹೊಡೆದುಬಿಟ್ಟರು, ಆದರೂ ಅವರು ಸಂಬಂಧಿತ ಅಧಿಕಾರಿ, ಮಂತ್ರಿಗಳನ್ನು ಭೇಟಿಯಾಗಿರಲಿಲ್ಲ. ಅವರು ಸೀದಾ ತಮ್ಮ ಗೋಳನ್ನು ತೋಡಿಕೊಂಡದ್ದು ಮೀಡಿಯಾಗೆ. ಇದು ದೊಡ್ಡ ಸುದ್ದಿಯಾಯಿತು, ಎಲ್ಲರೂ ಅವರನ್ನು ಸಂದರ್ಶಿಸುವವರೇ. ಇದೆಲ್ಲಾ ಆದರೂ ಭಾರತ ಸರ್ಕಾರ ತನ್ನ ಫಸ್ಟ್ ಮೂವ್ ಮಾಡಲು ವಾರದ ಮೇಲೆ ತೆಗೆದುಕೊಂಡಿತ್ತು. ಕೊನೆಗೆ ಆ ಷಿಪ್ನಲ್ಲಿ ಸಿಲುಕಿಕೊಂಡವರೆಲ್ಲಾ ಸೇಫ್ ಆಗಿ ಮನೆಗೆ ಮರಳಲು ಎರಡು ತಿಂಗಳುಗಳೇ ಬೇಕಾಯಿತು. ವಿದೇಶಾಂಗ ಇಲಾಖೆಯಲ್ಲಿರುವಷ್ಟು ರೇಡ್ ಟೇಪ್ ಬಹುಶಃ ಭಾರತದ ಯಾವುದೇ ಇಲಾಖೆ-ಕಛೇರಿಯಲ್ಲಿರುವುದಿಲ್ಲ. ರೆಡ್ ಟೇಪ್ ಅವಾರ್ಡ್ ಅಂತೇನಾದರೂ ಇದ್ದರೆ ಅದು ಅದಕ್ಕೇ ಸೇರಬೇಕು! ಒಬ್ಬರೋ ಇಬ್ಬರೋ ಸಮಸ್ಯೆಯಲ್ಲಿ ಸಿಲುಕಿಕೊಂಡರೆ ಕದಲುವಂತಹದ್ದಲ್ಲ ಈ ಕತ್ತೆ. ಹಾಗೆ ಸಿಲುಕಿಕೊಂಡು ಒದ್ದಾಡುತ್ತಿರುವವರು ಅದೆಷ್ಟೋ ಮಂದಿ. 115 ಕೋಟಿ ಭಾರತದಲ್ಲಿ ಒಬ್ಬರು, ಅದಕ್ಕೆ ನಾನು ಇದ್ದೇಳುವುದಾ? ಛೇ, ಛೇ..! ಅನ್ನುವಂತಿರುತ್ತದೆ ಅದರ ವರ್ತನೆ. ಅದಕ್ಕೆ ಡ್ರಾಮಾ ಬೇಕು, ಕ್ರೈಸಿಸ್ ಬೇಕು. ಹೋದ ಬಾರಿ ಸೌತ್ ಬ್ಲಾಕ್ ಧಢಾರನೆ ಎದ್ದು ಕೆಲಸ ಮಾಡಿ ತನ್ನ ಮಾನವೀಯ ಮುಖವನ್ನು ತೋರಿಸಿದ್ದು ಯಾವಾಗ ಅಂತ ನಾವು ಹುಡುಕುತ್ತಾ ಹೋದರೆ, ನಾವು ಕಂದಹಾರ್ನಲ್ಲಿ ತೇಲುತ್ತೇವೆ. ಹೌದು ಅದೇ ಕಡೆ. ಆಮೇಲಿಂದು ನನ್ನ ಗಮನಕ್ಕಂತೂ ಬಂದಿಲ್ಲ.
ಒಂದು ದಶಕದ ಹಿಂದಿನ ಮಾತು, ಶತಮಾನದ ಕೊನೆಯ ಕ್ಷಣಗಳು ಭಾರತದ ಮಟ್ಟಿಗೆ ತಲ್ಲಣದವಾಗಿದ್ದವು. 168 ಜನ ಪ್ರಯಾಣಿಕರನ್ನು ಹೊತ್ತ ಇಂಡಿಯನ್ ಏರ್ಲೈನ್ಸ್ನ ಐಸಿ 814 ವಿಮಾನವನ್ನು ಉಗ್ರರು ಅಪಹರಿಸಿ ಕಂದಹಾರಕ್ಕೊಯ್ದು ಇಟ್ಟಿದ್ದರು . ಅವತ್ತಿಗೆ ನಮ್ಮ ಸರ್ಕಾರ ಅಲ್ಲಿನ ತಾಲೀಬಾನಿ ಸರ್ಕಾರದೊಂದಿಗೆ ರಾಜತಾಂತ್ರಿಕ ಸಂಬಂಧಗಳಿರಲಿ, ಆ ಸರ್ಕಾರವನ್ನು ಅಫಘಾನಿಸ್ತಾನದ ಅಧಿಕೃತ ಸರ್ಕಾರವೆಂದೇ ಗುರುತಿಸಿರಲಿಲ್ಲ. ತಕ್ಷಣವೇ ಎಚ್ಚೆತ್ತ ನಮ್ಮ ಸರ್ಕಾರ ಅಪಹರಣಕಾರರೊಂದಿಗೆ ಮಾತುಕತೆಗಿಳಿಯಿತು. ಫಲಪ್ರದವಾಗಿ ಮುಗಿದ ಮಾತುಕತೆಯಲ್ಲಿ ಅವರು ಎಲ್ಲ ಪ್ರಯಾಣಿಕರನ್ನು ಬಿಡುಗಡೆಗೊಳಿಸಬೇಕಾಗಿಯೂ ಭಾರತದ ಸಕಾರವು 3 ಉಗ್ರರನ್ನು ಬಿಟ್ಟುಬಿಡಬೇಕಾಗಿಯೂ ಒಪ್ಪಂದವಾಯಿತು. ಈ ಉಗ್ರರನ್ನು ಅವರಿಗೊಪ್ಪಿಸಿ ನಮ್ಮ ಪ್ರಯಾಣಿಕರನ್ನು ಸೇಫ್ ಆಗಿ ತಿರುಗಿ ಭಾರತಕ್ಕೆ ಕರೆತರಲು ಭಾರತದಿಂದ ನಿಯೋಗವೊಂದು ಹೊರಡಬೇಕಿತ್ತು. ಅದರ ನಾಯಕತ್ವವನ್ನು ವಹಿಸಿಕೊಂಡದ್ದು ಅಂದಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್!

ಈ ನಿರ್ಣಯ ತೀರ ವಿವಾದಾಸ್ಪದವೇ ಆಗಿರಬಹುದು. ಮೂವರು ಉಗ್ರರನ್ನು ಬಿಟ್ಟುಬರಲು, ವಿದೇಶಾಂಗ ಸಚಿವರೇ ತೆರಳುವುದು ಭಾರತಕ್ಕೆ ಅವಮಾನವೇ. ಆದರೆ ನೀವು ಆ ವಿಮಾನದಲ್ಲಿದ್ದ ನತದೃಷ್ಟರಲ್ಲೊಬ್ಬರಾದ ಯು.ಬಿ.ಭಟ್ ಅವರು ಬರೆದ `ಟೆರರ್ ಆನ್ ಬೋರ್ಡ್' ಪುಸ್ತಕ ಓದಬೇಕು. ಅದರಲ್ಲಿ ಅವರು ಸರ್ಕಾರ ಜಸ್ವಂತ್ ಸಿಂಗರನ್ನು ಕಂದಹಾರಕ್ಕೆ ಕಳಿಸಿಕೊಡುವ ನಿರ್ಣಯವನ್ನು ಸರ್ಕಾರದ paternal gesture ಎಂದು ಬಣ್ಣಿಸುತ್ತಾರೆ. ಅಂದು ಎಲ್ಲ ಪ್ರಯಾಣಿಕರ ಬಿಡುಗಡೆಯಾದ ನಂತರ ಜಸ್ವಂತ್ ಅವರೆಲ್ಲರೊಡಗೂಡಿ ಒಂದೇ ವಿಮಾನದಲ್ಲಿ ದೆಹಲಿಗೆ ಮರಳುತ್ತಾರೆ. ಸಹಸ್ರಮಾನದ ಕಡೆಯ ಕ್ಷಣಗಳು ಆಗಸದಲ್ಲಿ ಕಳೆದು ಹೋಗುತ್ತವೆ. ಅಲ್ಲಿ ಕೆಲವರು ಜಸ್ವಂತರಲ್ಲಿ ಸರ್ಕಾರದ ವಿರುದ್ಧ ತಮಗಿರುವ ಅಸಮಾಧಾನವನ್ನು ತೋಡಿಕೊಂಡರು, ಕೆಲವರು ಸ್ಫೋಠಗೊಂಡು ಬೈದರು, ಮತ್ತೆ ಕೆಲವರು ಹಂಗಿಸಿದರು, ಉಳಿದವರನೇಕರು ತಮ್ಮ ಕಥೆ ಹೇಳಿಕೊಳ್ಳತ್ತಾ ಕಣ್ಣೀರಾದರು. ಜಸ್ವಂತ್ ಸಿಂಗ್ ಮನೆಹಿರಿಯನಂತೆ ಎಲ್ಲವನ್ನೂ ಕಿವಿಗೊಟ್ಟು ಆಲಿಸಿದರು. ಅವರು ಆ ಎಂಟು ದಿನಗಳಿಂದ ಅನುಭವಿಸಿದ ಅಸಹಾಯಕತೆ, ತಬ್ಬಲಿತನಗಳಿಗೆಲ್ಲಾ ಜಸ್ವಂತ್ ಅಂದು ಉತ್ತರವಾಗಿದ್ದರು. ದೆಹಲಿಗೆ ಬಂದಿಳಿಯುವ ಹೊತ್ತಿಗೆ ಎಲ್ಲರ ಕಣ್ಣುಗಳೂ ತೇವಗೊಂಡಿದ್ದವು. ಅವರೆಲ್ಲರ frustrationನ ಅಭಿವ್ಯಕ್ತಿಗೆ ಅಂದು ಜಸ್ವಂತ್ ವೇದಿಕೆಯಾಗಿದ್ದರು. ಇದು ರಾಜತಾಂತ್ರಿಕ ಜಯವೇನಲ್ಲ, ಬದಲಿಗೆ ನಮ್ಮ ಪ್ರಜೆಗಳು ಅನುಭವಿಸಿದ ತಬ್ಬಲಿತನವನ್ನು ಹೋಗಲಾಡಿಸುವಂತಹ, ನಮ್ಮನ್ನು ರಕ್ಷಿಸಲು ಒಬ್ಬರಿದ್ದಾರೆಂಬ ಬೆಚ್ಚನೆಯ ಭಾವನೆ ಮೂಡಿಸುವ ಒಂದು paternal gesture ಅಷ್ಟೆ.

ಯಾವುದೇ ದೇಶ ತನ್ನ ಪ್ರಜೆಗಳು ವಿಶ್ವದ ಯಾವುದೇ ಮೂಲೆಯಲ್ಲಿ ತೊಂದರೆಯಲ್ಲಿದ್ದರೂ ಅವರ ನೆರವಿಗೆ ಧಾವಿಸಬೇಕು. ಅದು ಅದರ obligation. ಏನಂತೀರಿ? ಜೀವನದ ಹೊಸ ದಿಗಂತಗಳನ್ನರಸಿ, ಮಾತೃಭೂಮಿಯ ತೊರೆದು ದೇಶವಲ್ಲದ ದೇಶ, ಭಾಷೆ ಬಾರದ ಸಾಗರದಾಚೆಯ ದೂರದೂರುಗಳಿಗೆ ಹೋಗಿ ನೆಲಸಿರುತ್ತಾರವರು. ಅವರು ತಮ್ಮ ನೆಲದ ಪ್ರತಿಯೊಂದರ ಕುರಿತೂ ಭಾವಪರವಶರಾಗಿರುತ್ತಾರೆ. ಅದಕ್ಕೇ ನೀವು ನಮ್ಮ `ಸಂಸ್ಕೃತಿಯ ಆಡಂಬರದ ಆಚರಣೆಯನ್ನು' ಇಲ್ಲಿಗಿಂತ ಹೊರದೇಶಗಳಲ್ಲೇ ಹೆಚ್ಚಾಗಿ ಕಾಣಬಹುದಾಗಿದೆ. ಈ ಅನಿವಾಸಿಗಳಿಗೆ ಬೇರು ಕಿತ್ತ ಅನುಭವವಾಗುತ್ತಿರುತ್ತದೆ. ಅವರು ಒಂದು ರೀತಿಯ ಇಬ್ಬಂದೀತನದಿಂದಲೂ, ತಬ್ಬಲೀತನದಿಂದಲೂ ಬಳಲುತ್ತಿರುತ್ತಾರೆ. ಇದನ್ನು ಯಾರೂ ಬಹಿರಂಗವಾಗಿ ಗುರುತಿಸುವುದಿಲ್ಲವಾದರೂ ಇದು `ಸಂಸ್ಕೃತಿಯ ಆಡಂಬರದ ಆಚರಣೆ' ಅಂತ ನಾನೇನು ಕರೆದೆ ಅದರಲ್ಲಿ ಅಭಿವ್ಯಕ್ತಗೊಳ್ಳುತ್ತಿರುತ್ತದೆ. ಸಾಮಾನ್ಯವಾಗಿ ನೀವು ಗಮನಿಸಿ, ಅನಿವಾಸಿಗಳು ನಮ್ಮ ಸರ್ಕಾರಗಳಿಂದ ಇಲ್ಲಿನವರಿಗಿಂತಲೂ ಹೆಚ್ಚಿನದನ್ನು ನಿರೀಕ್ಷಿಸುತ್ತಿರುತ್ತಾರೆ. ಇಲ್ಲಿನವರಿಗಿಂತಲೂ ಅವರೇ ನಮ್ಮ ರಾಜಕಾರಣಿಗಳನ್ನು ಹೆಚ್ಚು ಜರಿಯುತ್ತಿರುತ್ತಾರೆ. ಇದು ಅವರ frustration ಅನ್ನು ತೊರಿಸುತ್ತದೆ. ಅವರು ತಮ್ಮನ್ನು ರಕ್ಷಿಸಲು ಒಬ್ಬರಿದ್ದಾರೆಂಬ ಬೆಚ್ಚನೆಯ ಭಾವನೆಯನ್ನು ಅಪೇಕ್ಷಿಸುತ್ತಿರುತ್ತಾರೆ. ನಮ್ಮ ವ್ಯವಸ್ಥೆ ಆ ಭರವಸೆಯನ್ನು ಮೂಡಿಸದಿದ್ದಾಗ frustrate ಆಗುತ್ತಾರೆ. ಇದರಲ್ಲಿ ಎರಡು ಬಗೆಗಳು - ಒಂದು, ಇಲ್ಲಿನ ವ್ಯವಸ್ಥೆಯನ್ನು ಹೊರದೇಶಗಳ ವ್ಯವಸ್ಥೆಗಳೊಂದಿಗೆ ತಾಳೆ ಹಾಕಿ ನೋಡಿ, ಹತಾಶರಾಗಿ ಕೂಗಾಗುಡುವುದು. ಇದು ಸಾಮಾನ್ಯವಾಗಿಬಿಟ್ಟಿದೆ ಬಿಡಿ. ಇನ್ನು ಎರಡನೆಯದು, ಅದು ಇದಕ್ಕಿಂತಲೂ ಗಂಭೀರ. ಇಲ್ಲಿಂದ ಹೋದವರು, ಆ ನಾಡಿನಲ್ಲಿ ಏನೋ ಸಮಸ್ಯೆಯಲ್ಲಿ ಸಿಲುಕಿಕೊಳ್ಳತ್ತಾರೆ. ಎಷ್ಟೇ ಆಗಲೀ ಪರಾಯಿ ದೇಶ, ಸುತ್ತಲೂ ಮನೆಯವರಿರುವುದಿಲ್ಲ, ಹಿರಯರಿರುವುದಿಲ್ಲ, ಆ ಸಮಸ್ಯೆಯ ಸುಳಿಯಲ್ಲಿ ಒಬ್ಬಂಟಿಗ! ಎಂತಹ ಗಟ್ಟಿಗನಾದರೂ ಬೆವೆತು ಹೋಗುತ್ತಾನೆ, ತನ್ನನ್ನು ಈ ಸಮಸ್ಯೆಯಿಂದ ಹೊರಹಾಕಬಲ್ಲವನಿಗೆ ಮನಸ್ಸು ದುರ್ಬೀನು ಹಿಡಿದಿರುತ್ತದೆ. ಅದರಲ್ಲೂ ಕಾನೂನು, ಕ್ರೈಮ್ ಸಂಬಂಧಿ ಸಮಸ್ಯೆಯಾದರೆ ತಕ್ಷಣ ನೆನಪಿಗೆ ಬರುವುದೇ ಸರ್ಕಾರ! ಅಂತಹ ಕಷ್ಟಕರ ಸಂದರ್ಭದಲ್ಲಿರುವವರು ಸರ್ಕಾರವನ್ನು ಕೇರ್ ಟೇಕರ್ನ ಪಾತ್ರದಲ್ಲಿ ನೋಡಬಯುಸುತ್ತಾರೆ. ಸ್ವದೇಶದ ಸರ್ಕಾರ ತಂದೆಯ ಸ್ಥಾನ ಪಡೆದಿರುತ್ತದೆ. ತಂದೆ ತನ್ನ ಮಗನನ್ನು ಸಮಸ್ಯೆಯಿಂದ ಪಾರು ಮಾಡಲು ಹೇಗೆ ತನ್ನೆಲ್ಲಾ resources ಗಳನ್ನು ವ್ಯಯಿಸಿ ಕಡೆಯ ತನಕ ಹೋರಾಡುತ್ತಾನೋ ಅಂತಹುದನ್ನು ಅವರು ನಮ್ಮ ಸರ್ಕಾರದಿಂದ ನಿರೀಕ್ಷಿಸುತ್ತಿರುತ್ತಾರೆ. ಇದೊಂದು ಸಾಮಾನ್ಯ ಮಾನವ ಸೈಕಾಲಜಿ ಅಷ್ಟೆ. ಸರ್ಕಾರಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಸಬೇಕಾಗುತ್ತದೆ. ಅದು ಅದರ obligation ಕೂಡ ಆಗಿರುತ್ತದೆ.

Proudly powered by Blogger
Theme: Esquire by Matthew Buchanan.
Converted by LiteThemes.com.